Author: News Desk Benkiyabale

ಮಧುಗಿರಿ: ಸರ್ಕಾರ ಮತ್ತು ಅಧಿಕಾರಿಗಳು ಇರುವುದು ಬಡವರ ಪರ ಕೆಲಸ ಮಾಡಲು ಅದರಲ್ಲೂ ನಮ್ಮ ಸರ್ಕಾರದಲ್ಲಿ ತಂದಿರುವ ಅನೇಕ ಯೋಜನೆಗಳು ಬಡಜನರ ಉದ್ಧಾರಕ್ಕಾಗಿ ಬಡವರ್ಗದವರ ಏಳ್ಗೆಗಾಗಿಯೇ ಶ್ರಮಿಸಲಾಗುವುದು ಎಂದು ಮಾಜಿ ಸಚಿವ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು. ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಬುಧವಾರ ದೊಡ್ಡೇರಿ ಹೋಬಳಿಯ ಜನಸ್ಪಂದನಾ ಕಾರ್ಯಕ್ರಮ ಮತ್ತು ಕಾರ್ಯಾದೇಶ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನತೆ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯಬಾರದು ಎಂಬ ಉದ್ದೇಶ ದಿಂದ ಸರ್ಕಾರದ ವತಿಯಿಂದ ಜನಸ್ಪಂದನಾ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಕ್ಷೇತ್ರದ ಪ್ರತಿಯೊಬ್ಬರಿಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬದ್ದ. ಈ ಹಿಂದೆ ಅತೀ ಹೆಚ್ಚು ಅರ್ಜಿಗಳು ಮನೆ ಮತ್ತು ನಿವೇಶನಕ್ಕೆ ಬರುತ್ತಿದ್ದವು. ಆದರೆ ನಾನು ಶಾಸಕನಾದ ನಂತರ ಅರ್ಹ ಫಲಾನು ಭವಿಗಳಿಗೆ ನಿವೇಶನ ನೀಡುವ ಯೋಜನೆ ಜಾರಿಗೊ ಳಿಸಿದ್ದರಿಂದ ಈಗ ಕ್ಷೇತ್ರವನ್ನು ಗುಡಿಸಲು ಮುಕ್ತ ಗೊಳಿಸಲಾಗಿದೆ ಎಂದರು. ಅರ್ಹರಿಗೆ ದೊರೆಯುವ ಸೌಲಭ್ಯ ಅನರ್ಹರಿಗೆ ದೊರೆತರೆ ಅದು ಮಹಾಪಾಪ. ಉದ್ಯೋಗದ ಸ್ಕಿಲ್ ಕಲಿತರೆ…

Read More

ತುಮಕೂರು: ನಗರದ ಗಾರ್ಡನ್ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಈ ತಿಂಗಳ ೧೬ರಿಂದ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ, ಮಕರಜ್ಯೋತಿ ಮತ್ತು ಮಕರ ಸಂಕ್ರಾ0ತಿ ಪೂಜೆಗಳು ಆರಂಭವಾಗಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರಾದ ಟಿ.ಬಿ.ಶೇಖರ್ ಹೇಳಿದರು. ಈ ಸಂಬ0ಧ ಗುರುವಾರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ೧೬ರಂದು ಸಂಜೆ ೫.೩೦ಕ್ಕೆ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ ಸಂದರ್ಭದಲ್ಲಿ ಕವಿ ರಮೇಶ್ ನಂದಿಕೋಲು ರಚಿಸಿ, ಗಾಯಕ ಪೊಲೀಸ್ ರಮೇಶ್ ಧ್ವನಿ ನೀಡಿರುವ ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗಳ ಶ್ರೀ ಶಾಸ್ತ ಗಾನಾಮೃತ ಎಂಬ ಅಯ್ಯಪ್ಪ ಸ್ವಾಮಿ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ ಮಾಡಲಾಗುತ್ತದೆ ಎಂದರು. ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಂಡಲ ಪೂಜಾ ಮಹೋತ್ಸವ ಉದ್ಘಾಟನೆ ನೆರವೇರಿಸಿದರೆ ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಧ್ವನಿಸುರುಳಿ ಬಿಡುಗಡೆ ಮಾಡುವರು. ಹಿಂದೂಸ್ತಾನಿ ಗಾಯಕ ಸಿದ್ಧೇಂದ್ರಕುಮಾರ್ ಹಿರೇಮಠ್, ಅಡಿಷನಲ್ ಎಸ್ಪಿಗಳಾದ ಸಿ.ಗೋಪಾಲ್, ಪುರುಷೋತ್ತಮ್,…

Read More

ತುಮಕೂರು: ನಗರದ ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜಿನಲ್ಲಿ ೭೦ನೇ ಕನ್ನಡ ರಾಜೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ವಹಿಸಿದ್ದ ವಿ-ಟೆಕ್ ಸಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಜೆ ನಾಗಪ್ರಿಯರವರು ಕಾರ್ಯಕ್ರಮ ಕುರಿತು ಮಾತನಾಡಿ, ಕನ್ನಡ ಭಾಷಾಪ್ರೇಮ, ನಾಡಪ್ರೇಮ ಮಾತಿನಲ್ಲಿ ತಿಳಿಸುವಂತದಲ್ಲ. ಅದು ನಮ್ಮ ಮನದಿಂದ ಮೂಡಿಬರುವಂತದಾಗಬೇಕು. ಕನ್ನಡ ನಾಡು, ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಸದಾಕಾಲ ನಮ್ಮ ಮನದಲ್ಲಿ ಉಳಿಸಿಕೊಂಡಿರಬೇಕು. ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ರಂಗು ಎಲ್ಲೆಡೆ ತುಂಬಿರುವುದನ್ನು ನಾವು ಕಾಣುತ್ತೇವೆ. ಇಂದು ಇಲ್ಲಿ ಆ ರಂಗಿನೊ0ದಿಗೆ ವಿದ್ಯಾರ್ಥಿಗಳ ಶಿಸ್ತು ಒಟ್ಟುಗೂಡಿ ಮತ್ತಷ್ಟು ಸೊಗಸು ತುಂಬಿದೆ. ವಿದ್ಯಾವಾಹಿನಿ ಸಂಸ್ಥೆಯ ವಿದ್ಯಾರ್ಥಿಗಳು ಶಿಸ್ತಿಗೆ ಹೆಸರುವಾಸಿ ಎಂಬ ಮಾತನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದೀರಿ, ನಿಮ್ಮ ಬದುಕಿನುದ್ದಕ್ಕು ಶಿಸ್ತು ಬೆಳೆಸಿಕೊಂಡು ನಡೆಯಿರಿ. ಕನ್ನಡ ಭಾಷೆ ಉಳಿಸಿ, ಬೆಳೆಸುವ ಕಾರ್ಯಗಳು ನಿಮ್ಮಿಂದ ಸಾಗಲಿ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾಲೇಜಿನ ಕನ್ನಡ ವಿಭಾಗದ ಕನ್ನಡ ಕೌಸ್ತುಭ ಬಳಗದ ಅಂಗವಾಗಿ ಹಲವು ಸ್ಪರ್ಧೆಗಳನ್ನು…

Read More

ಕೊರಟಗೆರೆ: ತಾಲೂಕಿನ ಕಸಬಾ ವಿಎಸ್‌ಎಸ್‌ಎನ್ ಅಧ್ಯಕ್ಷ ವಿನಯ್‌ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಗುಂಡಿನಪಾಳ್ಯ ಜಿ.ಸಿ ರಮೇಶ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನಿಗಧಿತ ಸಮಯದಲ್ಲಿ ಪ್ರತಿ ಸ್ಪರ್ಧಿಯಾಗಿ ಯಾರು ಕೂಡ ನಾಮಪತ್ರ ಸಲ್ಲಿಸದ ಕಾರಣ ನೂತನ ಅಧ್ಯಕ್ಷರಾಗಿ ರಮೇಶ್ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿ.ಎಸ್ ಗುರುರಾಜ್ ಅಧಿಕೃತ ಘೋಷಣೆ ಮಾಡಿದರು. ವಿಎಸ್‌ಎಸ್‌ನ್ ನೂತನ ಅಧ್ಯಕ್ಷ ಜಿ.ಸಿ ರಮೇಶ್ ಮಾತನಾಡಿ, ಸರ್ವ ಸದಸ್ಯರ ಒಗ್ಗಟ್ಟಿನಿಂದ ನಾನು ನೂತನವಾಗಿ ಕಸಬಾ ವಿಎಸ್‌ಎಸ್‌ಎನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಮಾನ್ಯ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ರವರ ಆದೇಶದಂತೆ ಮಾಜಿ ಸಹಕಾರ ಸಚಿವರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ರವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತೇನೆ ಎಂದರು. ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ಅಡಳಿತ ಮಂಡಳಿಯ ಸರ್ವ ಸದಸ್ಯರ ಒಗ್ಗಟ್ಟಿನಿಂದ ರಮೇಶ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ರೈತರಿಗೆ ವಿನೂತನ ಮಾದರಿಯಲ್ಲಿ ಸಾಲ…

Read More

ತುಮಕೂರು: ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮದಿಂದ ಪರಿಸರ ಗಣಿಗಾರಿಕೆ ಪ್ರಭಾವ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆಯಡಿ ಜಿಲ್ಲೆಯ ಗಣಿಬಾಧಿತ ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ತಿಪಟೂರು ತಾಲ್ಲೂಕುಗಳಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಜಿಲ್ಲೆಯ ೯೭೭ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಆರೋಗ್ಯದ ಹಿತದೃ ಷ್ಟಿಯಿಂದ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ ಮತ್ತು ಬಹು ಪೋಷಕಾಂಶಗಳ ನ್ಯೂನತೆಯಿಂದ ಉಂಟಾಗಿರುವ ಅನಾರೋಗ್ಯಕರ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯನ್ನು ಸುಧಾರಿಸಲು ಪೌಷ್ಠಿಕ ಆಹಾರ ಒದಗಿಸಲು ಯೋಜಿಸಲಾಗಿದೆ. ಪರಿಸರ ಗಣಿಗಾರಿಕೆ ಪ್ರಭಾವ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆಯಡಿ ಜಿಲ್ಲೆಯ ೯೭೭ ಸರ್ಕಾರಿ ಶಾಲೆಗಳ ೩೭೦೪೧ ವಿದ್ಯಾರ್ಥಿಗಳಿಗೆ ವಾರದ ೫ ದಿನಗಳು ಪೂರಕ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದ್ದು, ಮಕ್ಕಳಿಗೆ ಪ್ರತಿ ಸೋಮವಾರ ಹಾಗೂ ಗುರುವಾರ ಕಡಲೇಕಾಳು ಉಸುಲಿ, ಮಂಗಳವಾರ ಹಾಗೂ ಶುಕ್ರವಾರ ಹೆಸರುಕಾಳು ಉಸುಲಿ,…

Read More

ತುಮಕೂರು: ಶಿಕ್ಷಣದಲ್ಲಿ ರಂಗಸಾಧ್ಯತೆಗಳನ್ನು ನಿರಂತರವಾಗಿ ಅನ್ವೇಷಿಸುತ್ತಿರುವ ರಂಗಾಯಣವು ಈ ಬಾರಿ ನಾಟಕೋತ್ಸವವನ್ನು ನವೆಂಬರ್ ೧೭ ರಿಂದ ೨೧ರವರೆಗೆ ತುಮಕೂರು ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸುತ್ತಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ನಾಟಕೋತ್ಸವದಲ್ಲಿ ಶ್ರೀ ಗಣೇಶ ಮಂದಾರ್ತಿಯವರ ನಿರ್ದೇಶನದ ‘ಮೈ ಫ್ಯಾಮಿಲಿ’ ನಾಟಕವನ್ನು ಪ್ರದರ್ಶಿಸಲಾಗುವುದು. ತುಮಕೂರು ನಗರ ವ್ಯಾಪ್ತಿಯ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ, ಮಕ್ಕಳ ಮಾನಸಿಕ, ದೈಹಿಕ ಸಹಜ ವಿಕಾಸಕ್ಕೆ ಪೂರಕವಾಗಿ ರಂಗಾಯಣವು ರೂಪಿಸಿರುವ ಉತ್ಸವದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ನಾಟಕದ ಪ್ರವೇಶ ದರ ಪ್ರತಿ ವಿದ್ಯಾರ್ಥಿಗೆ ೫೦ ರೂ.ಗಳನ್ನು ನಿಗದಿಪಡಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ೧೦.೩೦ ಹಾಗೂ ಮಧ್ಯಾಹ್ನ ೨ ಗಂಟೆಗೆ ನಾಟಕವನ್ನು ಪ್ರದರ್ಶಿಸಲಾಗುವುದು. ಈ ನಾಟಕದ ಕಥನವು ಮಕ್ಕಳ ನೋಟಗಳ ಮೂಲಕ ಅವರ ಲೋಕವಿನ್ಯಾಸ, ಗ್ರಹಿಕೆ, ಭಾವನೆ, ಕಲ್ಪನೆಗಳನ್ನು “ಮಕ್ಕಳು” ಎಂದು ಪ್ರತ್ಯೇಕಿಸದೆ ಒಟ್ಟಂದದಲ್ಲಿ ಹಿಡಿದಿಡಲು ಪ್ರಯತ್ನಿಸಿದೆ. ತಂತ್ರಜ್ಞಾನ ಯುಗದ ಈ…

Read More

ತುಮಕೂರು: ಒಂದು ಭಾಷೆ ಕಣ್ಮರೆಯಾಗುವುದೆಂದರೆ ಒಂದು ವಿವೇಕ ಸತ್ತಂತೆ. ಸ್ಥಳೀಯ ಭಾಷೆಗಳು ವೇಗಗತಿಯಲ್ಲಿ ನಶಿಸಿಹೋ ಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊ ಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾ ಡಿದರು. ೧೯೯೦ರ ದಶಕದ ಉದಾರೀಕರಣದ ಪರಿಣಾಮ ವಾಗಿ ಭಾರತವೂ ಜಾಗತೀಕರಣದ ಪ್ರಭಾವಕ್ಕೆ ಒಳಗಾಯಿತು. ಇಂಗ್ಲಿಷ್‌ನ ಪ್ರಬಲ ಹಿಡಿತದಿಂದಾಗಿ ಸ್ಥಳೀಯ ಭಾಷೆಗಳು ತೆರೆಮರೆಗೆ ಸರಿಯುತ್ತಿವೆ. ಹಲವು ಭಾಷೆಗಳ ಪತನಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಕನ್ನಡವನ್ನು ಉಳಿಸಿಕೊಳ್ಳುವ ಸವಾಲಿನಷ್ಟೇ ಸ್ಥಳೀಯ ಭಾಷೆಗಳನ್ನು ಉಳಿಸಿಕೊಳ್ಳುವುದೂ ದೊಡ್ಡ ಸವಾಲಾಗಿದೆ ಎಂದರು. ಕನ್ನಡಕ್ಕೆ ತನ್ನನ್ನು ತಾನು ಉಳಿಸಿಕೊಳ್ಳುವ ಮತ್ತು ಬೆಳೆಯುವ ಶಕ್ತಿಯಿದೆ. ಹಾಗೆಂದು ಕನ್ನಡಿಗರಾದ ನಾವೇ ನಮ್ಮ ಅನ್ನದ ಭಾಷೆಯ ಕುರಿತು ಅಲಕ್ಷö್ಯವನ್ನು ತಾಳಬಾರದು. ನಮ್ಮ ಭಾಷೆಯ ಜೊತೆಗೆ ಅನ್ಯಭಾಷೆಗಳನ್ನೂ ಗೌರವಿಸುವ ಸೌಜನ್ಯವನ್ನು ಬೆಳೆಸಿ ಕೊಳ್ಳೋಣ ಎಂದರು. ಕನ್ನಡಿಗರು ವಿಶಾಲಹೃದಯಿಗಳು. ಕನ್ನಡಿಗರು ದೇವರಿಗೆ ಕನ್ನಡ ಕಲಿಸಿದವರು.…

Read More

ಹುಳಿಯಾರು: ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆ ಸುರಿದ ಪರಿಣಾಮ ರೈತರು ಬಂಪರ್ ರಾಗಿ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ರಾಗಿ ತೆನೆ ಕಟ್ಟಿದ್ದು, ಕಾಳು ಬಲಿಯುವ ಹಂತದಲ್ಲಿದೆ. ಕೆಲವು ಕಡೆ ರಾಗಿ ಕಟಾವಿಗೆ ಬಂದಿದ್ದು ರೈತರಿಗೆ ಹರ್ಷ ತಂದಿದೆ. ಕಳೆದ ವರ್ಷವೂ ಸಹ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬಂಪರ್ ಬೆಳೆಯಾಗಿತ್ತು. ಪರಿಣಾಮ ಈ ವರ್ಷವೂ ಸಹ ರೈತರು ಉತ್ಸಾಹದಿಂದ ರಾಗಿ ಬಿತ್ತಿದ್ದರು. ಪರಿಣಾಮ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ತಾಲೂಕಿನ ಗುರಿ ಮೀರಿ ಬಿತ್ತನೆಯ ಪ್ರಗತಿಯಾಗಿದೆ. ಆದರೆ ಸೆಪ್ಟೆಂಬರ್ ಮಾಹೆಯಲ್ಲಿ ಒಂದೇ ಒಂದು ಹನಿ ಮಳೆ ನೀರು ಭೂ ರಮೆಯ ತಣಿಸದೆ ರೈತನಿಗೆ ಆಘಾತ ನೀಡಿತ್ತು. ತೇವಾಂಶದ ಕೊರತೆಯುಂಟಾಗಿ ಬೆಳೆ ಹಾನಿಯ ಭೀತಿ ಎದುರಾಗಿತ್ತು. ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಸಾಲ, ಸೋಲ ಮಾಡಿ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿದ್ದ ರೈತ ಚಿಂತಾಕ್ರಾ0ತರಾನ್ನಾಗಿಸಿತ್ತು. ಅದೃಷ್ಟವಶತ್ ರಾಗಿ ಕಾಳು ಕಟ್ಟುವ ಹಂತದಲ್ಲಿದ್ದ ಸಂದರ್ಭದಲ್ಲಿ ಉತ್ತಮ ಮಳೆಯಾಯಿತು. ಇಡೀ ವಾರ ತುಂತುರು ಮಳೆಯಾದ ಪರಿಣಾಮ ಒಣಗುತ್ತವೆ ಎನ್ನುತ್ತಿದ್ದ…

Read More

ತುಮಕೂರು: ಗರ್ಭಕಂಠ ಕ್ಯಾನ್ಸರ್, ಪಲ್ಸ್ ಪೋಲಿಯೋ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರೋಟರಿ ತುಮಕೂರು ಮಂಗಳವಾರ ನಗರದಲ್ಲಿ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಂಡಿತ್ತು. ಗರ್ಭ ಕಂಠದ ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಮಹಿಳೆಯರಲ್ಲಿ ಹಾಗೂ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವ ಬಿತ್ತಿ ಪತ್ರ ಪ್ರದರ್ಶಿಸಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿದರು. ಇದೇ ವೇಳೆ ಬಿಜಿಎಸ್ ವೃತ್ತದಲ್ಲಿ ರೋಟರಿ ಸಂಸ್ಥೆಯ ಕಾಮಧೇನು ಯೋಜನೆಯಡಿ ನೀಡುವ ಹಸುವನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ರೈತ ಮಹಿಳೆಗೆ ಹಸುವನ್ನು ಹಸ್ತಾಂತರ ಮಾಡಿದರು. ರೋಟರಿ ಸಂಸ್ಥೆಯ ಸಮಾಜ ಸೇವಾ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ಕ್ಯಾನ್ಸರ್‌ನಂತಹ ಕಾಯಿಲೆ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸಬೇಕು. ಆರಂಭದ ಹಂತದಲ್ಲಿ ಕಂಡುಬರುವ ಕ್ಯಾನ್ಸರ್ ಅನ್ನು ಚಿಕಿತ್ಸೆ ಮೂಲಕ ವಾಸಿ ಮಾಡಬಹುದು. ಈ ಬಗ್ಗೆ ಜನರಲ್ಲಿರುವ ಭಯ ನಿವಾರಿಸಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ರೋಟರಿಯಂತಹ ಸಂಸ್ಥೆಗಳು ತಿಳುವಳಿಕೆ ಮೂಡಿಸುತ್ತಿರುವುದು ಒಳ್ಳೆಯ ಕಾರ್ಯ…

Read More

ತುಮಕೂರು: ನಗರದ ವಾಸವಿ ಪದವಿ ಪೂರ್ವ ಕಾಲೇಜು ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ವಾಸವಿ ವಿದ್ಯಾಪೀಠದ ಅಧ್ಯಕ್ಷರಾದ ಕೆ.ಎಲ್. ಅಮರನಾರಾಯಣ್ ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸರ ಜಯಂತಿಯ ಶುಭಾಶಯ ಹೇಳಿ, ವಿದ್ಯಾರ್ಥಿಗಳು ಓದುವ ಕಡೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಯಶಸ್ಸು ಗಳಿಸಬೇಕು ಎಂದು ಕರೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಸಿ.ಆರ್. ಮೋಹನ್‌ಕುಮಾರ್ ಮಾತ ನಾಡಿ, ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಆದ್ಯ ಕರ್ತವ್ಯ. ಅದೇ ರೀತಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಸಂಸ್ಥೆಯ ಉಪಾಧ್ಯಕ್ಷರು ಜಿ ಕೃಷ್ಣಮೂರ್ತಿ ರವರು ಕನ್ನಡ ರಾಜೋತ್ಸವ ಕುರಿತು ಮಾತನಾಡಿದರು. ಸಂಸ್ಥೆಯ ಖಜಾಂಚಿ ಟಿ.ಎಸ್. ಅಶೋಕ್ ಕುಮಾರ್ ಮಾತ ನಾಡಿ, ಕೇವಲ ಅಂಕಗಳಿಗೆ ಸೀಮಿತಗೊಳ್ಳದೆ ಎಲ್ಲ ವಿಷಯ ಗಳ ಬಗ್ಗೆಯೂ ಜ್ಞಾನಾರ್ಜನೆ ಪಡೆದುಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಯ ನಿರ್ದೇಶಕರಾದ…

Read More