ತುಮಕೂರು: ಒಳಮೀಸಲಾತಿ ಇಲ್ಲದೆ ರಾಜ್ಯದಲ್ಲಿ ೫೬೪೩೨ ಹುದ್ದೆಗಳ ತುಂಬಲು ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು, ವಿಶ್ವವಿದ್ಯಾಲಯಗಳನ್ನು ಒಂದು ಘಟಕವಾಗಿ ಪರಿಗಣಿಸಿ ನೇಮಕಾತಿ ಕೈಬಿಡಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಆರ್.ಪಿ.ಐ ಕರ್ನಾಟಕ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು. ಕರ್ನಾಟಕದಲಿತ ಸಂಘರ್ಷ ಸಮಿತಿ ಡಾ.ಎನ್.ಮೂರ್ತಿ ಬಣದವ ತಿಯಿಂದ ಜಿಲ್ಲಾಧ್ಯಕ್ಷರಾದ ಪಿ.ಎನ್.ರಾಮಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ, ಸರಕಾರ ಒಳಮೀಸಲಾತಿ ಹೊರತಾಗಿ ಶೇ೧೫ರ ಮೀಸಲಾತಿ ಅಡಿಯಲ್ಲಿ ೫೬೪೩೨ ಹುದ್ದೆಗಳನ್ನು ತುಂಬಲು ಮುಂದಾಗಬಾರದು. ಇದರಿಂದ ಮಾದಿಗ ಸಮುದಾಯಕ್ಕೆ ಬಾರಿಅನ್ಯಾಯ ವಾಗಲಿದೆ. ಸರಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಡಿಎಸ್ಎಸ್ ಡಾ.ಎನ್.ಮೂರ್ತಿ ಬಣದ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕರ್ನಾಟಕ ರಾಜ್ಯ ಸರಕಾರ ಸುಪ್ರೀಕೋರ್ಟಿನ ತೀರ್ಪಿನ ಅನ್ವಯ ನಿ.ನ್ಯಾಯ ಮೂರ್ತಿ ನಾಗ ಮೋಹನ್ದಾಸ್ ಆಯೋಗ ರಚಿಸಿ ವರದಿ ಪಡೆದು. ತಾರೀಖು : ೨೫/೦೫/೨೦೨೫ ರಂದು ಸಚಿವ ಸಂಪುಟ…
Author: News Desk Benkiyabale
ತುಮಕೂರು: ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಮಧುಗಿರಿ ಮತ್ತು ಪಾವಗಡ ಕ್ಷೇತ್ರಗಳಿಗೆ ಹೈಕೋರ್ಟ್ ಆದೇಶದ ಮೇರೆಗೆ ಮರು ಮತ ಎಣಿಗೆ ನಡೆದು ಇಬ್ಬರು ನೂತನ ನಿರ್ದೇಶಕರುಗಳು ಆಯ್ಕೆಯಾಗಿದ್ದಾರೆ. ತುಮಕೂರು ಹಾಲು ಒಕ್ಕೂಟಕ್ಕೆ ೨೦೨೪ರ ನವೆಂಬರ್ ೧೦ ರಂದು ಚುನಾವಣೆ ನಡೆದಿತ್ತು. ಬಳಿಕ ಎರಡು ತಿಂಗಳ ನಂತರ ಮತ ಎಣಿಕೆಯೂ ನಡೆದಿತ್ತು. ಆ ಸಂದರ್ಭದಲ್ಲಿ ಪಾವಗಡ ಕ್ಷೇತ್ರದಿಂದ ಚಂದ್ರಶೇಖರರೆಡ್ಡಿ ಮತ್ತು ಮಧುಗಿರಿ ಕ್ಷೇತ್ರದಿಂದ ಬಿ. ನಾಗೇಶ್ ಬಾಬು ಆಯ್ಕೆಯಾಗಿದ್ದರು. ಇವರುಗಳ ಆಯ್ಕೆಯನ್ನು ಪ್ರಶ್ನಿಸಿ ಮಧುಗಿರಿ ಕ್ಷೇತ್ರದಿಂದ ಪರಾಭವಗೊಂಡಿದ್ದ ಕೊಂಡವಾಡಿ ಚಂದ್ರಶೇ ಖರ್ ಹಾಗೂ ಪಾವಗಡ ಕ್ಷೇತ್ರದಿಂದ ಚನ್ನಮಲ್ಲ ಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ದಾಖ ಲಾಗಿದ್ದ ರಿಟ್ ಅಫೀಲು ಅರ್ಜಿಯ ವಿಚಾರಣೆ ನಡೆದು ತುಮಕೂರು ಹಾಲು ಒಕ್ಕೂಟದ ಆಡಳಿತ ಮಂಡಳಿಯ ಮಧುಗಿರಿ ಮತ್ತು ಪಾವಗಡ ಕ್ಷೇತ್ರಗಳ ನಿರ್ದೇಶಕರ ಸ್ಥಾನದ ಮರು ಮತ ಎಣಿಕೆ ನಡೆಸುವಂತೆ ಆದೇಶ ನೀಡಿತ್ತು. ತುಮಕೂರು ಹಾಲು ಒಕ್ಕೂಟದ ಚುನಾವಣಾ…
ತುಮಕೂರು: ಇಂದಿನಿ0ದ ರಾಷ್ಟ್ರಾದ್ಯಂತ ಕ್ಷಯ ಮುಕ್ತ ಭಾರತ ಅಭಿಯಾನದಡಿ ೧೦೦ ದಿನಗಳ ಕಾಲ ಸಕ್ರಿಯವಾಗಿ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಮಂಗಳವಾರ ಬೆಳಿಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ೬೮೨ ಹೆಚ್ಚಿನ ಕ್ಷಯರೋಗದ ಅಪಾಯದ ಅಂಚಿನಲ್ಲಿರುವ ಹಳ್ಳಿಗಳನ್ನು ಗುರುತಿಸಿದ್ದು, ೯,೭೩,೪೭೧ ಜನಸಂ ಖ್ಯೆಯನ್ನು ಹೊಂದಿದೆ. ಆ ಹಳ್ಳಿಗಳಲ್ಲಿ ಸಂಪೂರ್ಣವಾಗಿ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಮತ್ತು ಜಿಲ್ಲೆಯಾದ್ಯಂತ ಡಯಾಬಿಟಿಸ್, ರಕ್ತದೊ ತ್ತಡ, ಹಳೆಯ ಕ್ಷಯರೋಗಿಗಳು, ದೀರ್ಘಾವದಿ ಖಾಯಿಲೆಯಿಂದ ಬಳಲುತ್ತಿರುವವರಿಗೂ ತಪಾಸಣೆಗೆ ಒಳಪಡಿಸಲಾಗುವುದು ಹಾಗೂ ಜಿಲ್ಲೆ ಯಾದ್ಯಂತ ಕ್ಷಯರೋಗದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ವಿಶ್ವ ಕ್ಷಯರೋಗ ದಿನದ ಅಂಗವಾಗಿ ಇಂದು ತುಮಕೂರಿನ ಸರ್ಕಾರಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ಮತ್ತು ಮಾರುಕಟ್ಟೆಗಳಲ್ಲಿ ಕರಪತ್ರ ಹಂಚುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಎಲ್ಲಾ ತಾಲ್ಲೂಕು, ಪ್ರಾ…
ತುಮಕೂರು: ಯುವ ಉತ್ಸಾಹಿ ಪಶುವೈದ್ಯ ಡಾ.ಸುಮೀಕ್ಷಾ ರೆಡ್ಡಿ ಅವರು ಸಾವು, ಪಶುವೈದ್ಯರಿಗೆ ಒಂದು ಪಾಠವಾಗಿದ್ದು,ಸರಕಾರ ಮತ್ತು ಅರಣ್ಯ ಇಲಾಖೆ ಇನ್ನೂ ಮುಂದಾದರೂ ವನ್ಯಜೀವಿಗಳ ಚಿಕಿತ್ಸೆಗೆ ನಿಯೋಜನೆಯಾಗುವ ವೈದ್ಯರ ರಕ್ಷಣೆಗೆ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಿ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಹೆಚ್.ಎಂ.ಶಿವಪ್ರಸಾದ್ ಒತ್ತಾಯಿಸಿದ್ದಾರೆ. ನಗರದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ತರಬೇತಿ ಸಭಾಂಗಣದಲ್ಲಿ ಇತ್ತೀಚಗೆ ಶಿವಮೊಗ್ಗದ ತಾವರೆಕೊಪ್ಪದ ಲಯನ್ ಸಫಾರಿ ವನ್ಯಧಾಮದಲ್ಲಿ ಚಿಕಿತ್ಸೆ ನೀಡುವ ವೇಳೆ ನೀರಾನೆ(ಹಿಪ್ಪೋಪೊಟೋಮಸ್)ದಾಳಿಗೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸಿ, ಸಾವಿಗೀಡಾದ ತರಬೇತಿ ವೈದ್ಯೆ ಡಾ.ಸುಮೀಕ್ಷಾ ರೆಡ್ಡಿ ಅವರ ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡು, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದ ಅವರು, ಸರಕಾರ ಹಾಗೂ ಅರಣ್ಯ ಇಲಾಖೆಯ ಮೇಲೆ ವನ್ಯ ಜೀವಿ ಚಿಕಿತ್ಸೆಗೆ ನಿಯೋಜನೆಗೊಳ್ಳುವ ಪಶುವೈದ್ಯರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಡ ತರುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಪಶುವೈದ್ಯರು, ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುವ ಅಗತ್ಯವಿದೆ.ನಿಮ್ಮೊಂದಿಗೆ ನಾವು ಸಹ…
ತುಮಕೂರು: ಸ್ತನ ಕ್ಯಾನ್ಸರ್ ಎಂಬುದು ಸ್ತನ ಜೀವಕೋಶಗಳಲ್ಲಾಗುವ ಅನಿಯಂತ್ರಿತ ಬೆಳವಣಿಗೆ ಯಾಗಿದ್ದು, ಆರಂಭಿಕ ಪತ್ತೆ ಹಾಗೂ ಸೂಕ್ತ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು ಎಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಅಂತರಾಷ್ಟ್ರೀಯ ಖ್ಯಾತಿಯ ಸ್ತನ ಕ್ಯಾನ್ಸರ್ ತಜ್ಞೆ ಡಾ. ಜಯಂತಿ ಅವರು ಅಭಿಪ್ರಾ ಯಪಟ್ಟರು. ತುಮಕೂರಿನ ಚಿಕ್ಕಪೇಟೆಯ ಸುಪ್ರಸಿದ್ಧ ವೈದಿಕ ವಿದ್ವಾಂಸರಾಗಿದ್ದ ದಿವಂಗತ ಸಭಾಮುದ್ರೆ ಶಾಮಣ್ಣರವರ ಮೊಮ್ಮಗಳಾದ ಡಾ. ಜಯಂತಿ ಅವರು ತುಮಕೂರಿನ ಎಂ.ಜಿ.ರಸ್ತೆಯ ಮಹಿಳಾ ಸಮಾಜದಲ್ಲಿ ಮಹಿಳಾ ಸಮಾಜ ಟ್ರಸ್ಟ್ ವತಿಯಿಂದ ಮಾರ್ಚ್ ೨೩ ರಂದು ಏರ್ಪಟ್ಟಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾ ಚರಣೆಯನ್ನು ಉದ್ಘಾಟಿಸಿ, ‘ಸ್ತನ ಕ್ಯಾನ್ಸರ್ ಬಗ್ಗೆ ಮುಂಜಾಗ್ರತೆ ಹಾಗೂ ವೈದ್ಯಕೀಯ ಸಲಹೆಗಳು’ ಕುರಿತು ಮಾತನಾಡುತ್ತಿದ್ದರು. ಕಂಕುಳು ಅಥವಾ ಸ್ತನದ ಭಾಗದಲ್ಲಿ ನೋವಿಲ್ಲದ ಊತ, ಗಡ್ಡೆ ಬೆಳೆಯುವುದು, ಸ್ರನದ ಆಕಾರ, ಗಾತ್ರದಲ್ಲಿ ಗಮನಾರ್ಹ ವ್ಯತ್ಯಾಸ, ನಿಪ್ಪಲ್ನಲ್ಲಿ ದ್ರವರೂಪದ ಸ್ರಾವ, ಊತ, ಸ್ತನ ಅಥವಾ ತೊಟ್ಟಿನಲ್ಲಿ ನೋವು, ಚರ್ಮದ ಬದಲಾವಣೆ ಸ್ತನ ಕ್ಯಾನ್ಸರ್ನ ಮುಖ್ಯ ಲಕ್ಷಣಗಳಾಗಿವೆ. ಅನುವಂಶಿಕತೆ, ಮಿತಿಮೀರಿದ ತೂಕ, ಬೊಜ್ಜು, ವ್ಯಾಯಾಮರಹಿತ…
ತುಮಕೂರು: ಕನ್ನಡ ಸಾಹಿತ್ಯದ ಸಾವಿರಾರು ವರ್ಷಗಳ ಪರಂಪರೆಯಲ್ಲಿ ೧೨ನೇ ಶತಮಾನದ ಶರಣ ಶರಣೆಯರು ನುಡಿದ ವಚನಗಳು, ಕೇವಲ ನಾಲಿಗೆಯಿಂದ ಹೊರಬಂದ ಪದಗಳಲ್ಲ, ಕೇವಲ ಶಬ್ಧಗಳಲ್ಲ, ಜೀವನದಲ್ಲಿ ಕಂಡು0ಡ, ಸಾಂಸಾರಿಕ ಬದುಕಿನೊಂದಿಗೆ ಅನುಭವಿಸಿ ಪಕ್ವಗೊಂಡು ಹೊರಬಂದ ಅಂತರAಗದ ಅಮೃತ ಬಿಂದುಗಳು ಎಂದು ನಿವೃತ್ತ ಉಪನ್ಯಾಸಕರು, ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿಯ ಯೋಗತಜ್ಞರೂ ಆದ ಶರಣ ಸೋಮಶೇಖರ ಶೀಲವಂತಣ್ಣನವರು ಅಭಿಪ್ರಾಯಪಟ್ಟರು. ಅವರು ತುಮಕೂರು ಜಿಲ್ಲಾ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕದಳಿ ಮಹಿಳಾ ವೇದಿಕೆ, ಎಸ್.ಎಸ್.ಪುರಂನ ಎಸ್.ಪಿ.ವೈ.ಎಸ್.ಎಸ್. ಗ್ಲೋಬಲ್ ಪೀಸ್ ಸಭಾಂಗಣದಲ್ಲಿ ನಡೆದ ಜಿ.ಗವಿಸಿದ್ದಯ್ಯನವರ ನೂತನ ದತ್ತಿ, ಲಿಂ. ಎನ್.ಎಸ್.ಮಾಲಿಸಿ, ಲಿಂ. ಅಡವಮ್ಮ, ಲಿಂ. ಗುರುವಯ್ಯ ಸಂಸ್ಮರಣಾ ದತ್ತಿ ಪ್ರಯುಕ್ತ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಸಂಸ್ಮರಣೆಯ ೭೦ನೆಯ ಮಾಸಿಕ ಶರಣ ಚಿಂತನ ಗೋಷ್ಠಿ, ವಚನ ಗಾಯನ ಕಾರ್ಯಕ್ರಮದಲ್ಲಿ `ಶರಣರ ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು” ಎಂಬ ವಿಷಯವಾಗಿ ಮಾತನಾಡುತ್ತಾ, ಅಂದಿನ ಶರಣರು ಆಡಂಬ ರದಿಂದ ದೂರವಿದ್ದವರು. ಸಾಂಸಾರಿಕ ಕಷ್ಟ,…
ತುಮಕೂರು: ವಿಜ್ಞಾನದ ಜೊತೆ ಸಾಹಿತ್ಯಿಕ ಮನೋಭಾವ ನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಒಬ್ಬ ಉತ್ತಮ ವಿಜ್ಞಾನ ವಿದ್ಯಾರ್ಥಿ ಯಾಗಬೇಕಾದರೆ ಸಾಹಿತ್ಯದ ಅರಿವಿರುವುದು ಅತ್ಯಗತ್ಯ ಎಂದು ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್ ಆರ್.ಆರ್. ಇನ್ಸಿ÷್ಟಟ್ಯೂಷನ್ ನಿರ್ದೇಶಕರಾದ ಪ್ರೊಫೆಸರ್ ಗುರುರಾಜ್ ಎಸ್. ತಿಳಿಸಿದರು. ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಐಕ್ಯೂಎಸ್ಸಿ ಮತ್ತು ಇಂಗ್ಲಿಷ್ ವಿಭಾಗದ ಸಹಯೋಗದಲ್ಲಿ ಮಾ. ೨೪ ಮಂಗಳವಾ ರದಂದು ಹಮ್ಮಿಕೊಂಡಿದ್ದ “ಸಾಹಿತ್ಯ ಮತ್ತು ವೈಜ್ಞಾನಿಕ ಪ್ರಜ್ಞೆ” ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊ ಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನದ ಎಂಟನೇ ಮೂಲಭೂತ ಕರ್ತವ್ಯವಾದ ವೈಜ್ಞಾನಿಕ ಮನೋಭಾವನೆ ಮತ್ತು ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ೧೯೨೮ರಲ್ಲಿ ಸಿ.ವಿ. ರಾಮನ್ ಅವರು ನೊಬೆಲ್ ಪ್ರಶಸ್ತಿ ಪಡೆದ ನಂತರ, ಕಳೆದ ನೂರು ವರ್ಷಗಳಲ್ಲಿ ಮತ್ತೊಬ್ಬರು ಆ ಸಾಧನೆ ಮಾಡಲು ಸಾಧ್ಯವಾಗದಿರಲು ನಮ್ಮಲ್ಲಿರುವ ವೈಜ್ಞಾನಿಕ ಜ್ಞಾನದ ಮೂಲ ಕೊರತೆಯೇ…
ತುಮಕೂರು: ನಗರದ ಟೌನ್ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಬಳಿ, ಶ್ರೀಲಕ್ಷಿö್ಮದೇವಿ ಟ್ರಸ್ಟ್(ರಿ), ಜಯಪುರ ಬಡಾವಣೆಯ ನಾಗರಿಕರು ಮಾ.೨೫ ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನಡೆಯುವ ನ್ಯಾ.ನಾಗಮೋಹನ್ ದಾಸ್ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಯುವ ವಕೀಲರು ಹಾಗೂ ಛಲವಾದಿ ಮಹಾಸಭಾ ರಾಜ್ಯ ಸಂಘಟನಾ ಸಂಚಾಲಕರಾದ ಟಿ.ಆರ್.ನಾಗೇಶ್ ಅವರ ನೇತೃತ್ವದಲ್ಲಿ ಜಯಪುರ ಬಡಾವಣೆಯ ಯುವ ಕರು ಪರಸ್ವರ ಕೈ ಹಿಡಿದು,ಸರಕಾರದ ನಡೆಯನ್ನು ಖಂಡಿಸಿ, ನ್ಯಾ.ನಾಗಮೋಹನ್ದಾಸ್ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ, ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ವಕೀಲರಾದ ಟಿ.ಆರ್. ನಾಗೇಶ್, ನ್ಯಾ.ನಾಗಮೋಹನ್ದಾಸ್ ನೀಡಿರುವ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು, ದೋಷಪೂರಿಕ ಮತ್ತು ಪಕ್ಷ ಪಾತದಿಂದ ಕೂಡಿದೆ.ಗೊಂದಲ ಬಗೆಹರಿಸುವ ಬದಲು, ಹೊಲಯ ಸಮುದಾಯದ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆಯುವ ಪ್ರಯತ್ನವನ್ನು ಮಾಡಿದೆ.ಒಳಮೀಸಲಾತಿಯೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗಬೇಕಾದರೆ ಮೀಸಲಾತಿಯ ಪ್ರಮಾಣ ಹೆಚ್ಚಾಗಬೇಕು.ಸರಕಾರ ಕೇವಲ ೧ ಜಾತಿಯ ಒತ್ತಡಕ್ಕೆ ಮಣಿದು ಶೇ೧೫ರ ಮೀಸಲಾತಿಯಲ್ಲಿಯೇ ಒಳಮೀಸಲಾತಿ ಜಾರಿಗೊಳಿಸಲು…
ತುಮಕೂರು: ಇಂದಿನ ಕನ್ನಡ ಸಾಹಿತ್ಯ ವಲಯದಲ್ಲಿ ಅಸಹನೆ ವರ್ಗ ತಾರತಮ್ಯ ಅಸೂಯೆ ಗುಂಪುಗಾರಿಕೆ ಅಧಿಕಾರದ ಓಲೈಸುವಿಕೆ ರಾಜಕಾರಣ ಪ್ರಶಸ್ತಿ ಪುರಸ್ಕಾರದ ವಾಂಛೆ ಇಂದಿನ ಸಾಹಿತ್ಯವಲಯದ ವಾತಾವರಣವನ್ನು ಅಸಹನೀಯಗೊಳಿಸಿವೆ ಸಾಹಿತ್ಯವಲಯ ಎಡಪಂಥ, ಬಲಪಂಥ ಎಂದು ಎರಡು ವಿಭಿನ್ನ ವರ್ಗಗಳಲ್ಲಿ ಗುರುತಿಸಿ ಕೊಂಡಿದೆ ಒಬ್ಬ ಬರಹಗಾರ ಈ ಯಾವುದಾದರೂ ಗುಂಪಿನೊ ಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ತನ್ನದೇ ಆದ ಐಡೆಂಟಿಟಿ ಹೊಂದಲು ಸಾಧ್ಯ ಎನ್ನುವ ವಾತಾವರಣ ಸಾಹಿತ್ಯ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ ಎಂದು ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಅಭಿಪ್ರಾಯಪಟ್ಟರು. ಅವರು ನಗರದ ಶ್ರೀ ಸಿದ್ಧಗಂಗಾ ಬಿಇಡಿ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಪ್ರೊ. ಬಿ. ವೀರಭದ್ರಯ್ಯ ಮಂಗಳಮ್ಮ ಮತ್ತು ವಿಶ್ವಸ್ತ ದತ್ತಿ ಉಪನ್ಯಾಸದಲ್ಲಿ ಇಂದಿನ ಸಾಹಿತ್ಯವಲಯ ಕುರಿತು ಮಾತನಾಡಿದರು. ಪ್ರತಿ ಗುಂಪಿಗೂ ಬರೆಯಲು ಅವರದೇ ಆದ ಅಜೆಂಡಾಗಳಿವೆ ಅಂಥದ್ದೊ0ದು ಸ್ಥಾಪಿತ ಅಜೆಂಡಾದ ಚೌಕಟ್ಟಿನಲ್ಲೇ ಬರೆಯ ಬೇಕಾದ ಅನಿವಾರ್ಯತೆ ಬರಹಗಾರನದು. ಒಂದು ಗುಂಪಿನ ಬರಹಗಾರನ ವಿರುದ್ಧ ಇನ್ನೊಂದು ಗುಂಪಿನವರು ಕತ್ತಿಮಸೆಯುತ್ತಾರೆ. ಇಂತಹ ವಾತಾವರಣದಲ್ಲಿ ಪರಭಾಷೆಗಳ…
ತುರುವೇಕೆರೆ: ತಾಲೂಕಿನ ಬಿ.ಸಿ.ಕಾವಲ್ ರ್ವೆ ನಂ 1 ರಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿರುವ ಅಧಿಕಾರಿಗಳು ಹಾಗೂ ಭೂ ಮಾಫಿಯಾ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರ್ನಾಟಕ ದಲಿತ ಸಂರ್ಷ ಸಮಿತಿ (ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿ ಬಾಣಸಂದ್ರ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನರ್ಮಿಸಿ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಕೈಗೊಂಡರು. ರ್ನಾಟಕ ದಲಿತ ಸಂರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ತಾಲೂಕಿನ ದಂಡಿನಶಿವರ ಹೋಬಳಿ ಬಿ.ಸಿ. ಕಾವಲ್ ರ್ವೆ ನಂ 1 ರಲ್ಲಿ ಹಲವು ದಶಕಗಳಿಂದ ಸ್ಥಳೀಯ ರೈತರು ತಾತ, ಮುತ್ತಾತಂದಿರ ಕಾಲದಿಂದ ಉಳುಮೆ ಮಾಡಿಕೊಂಡು, ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ರ್ಕಾರದಿಂದ ಸಾಗುವಳಿ ಚೀಟಿ ಪಡೆದಿದ್ದಾರೆ. ಆದರೂ ಕೆಲವು…











