ಹುಳಿಯಾರು : ಹುಳಿಯಾರು ಎಪಿಎಂಸಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಪಟ್ಟಣದಲ್ಲಿ ಕೆಟ್ಟಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣ ದುರಸ್ತಿ ಮಾಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಸೂಚನೆ ನೀಡಿದರು. ಹುಳಿಯಾರು ಎಪಿಎಂಸಿಯಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಹುಳಿಯಾರಿನ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ವರ್ಷಗಳೇ ಕಳೆದಿದ್ದರೂ ಸಹ ದುರಸ್ತಿ ಮಾಡದ ಪರಿಣಾಮ ಹೆಚ್ಚು ಹಣ ಕೊಟ್ಟು ಖಾಸಗಿಯವರಿಂದ ನೀರು ಖರೀದಿಸಿ ಕುಡಿಯುವಂತ್ತಾಗಿದೆ ಎಂದು ಸಾರ್ವಜನಿಕರು ದೂರಿದರು. ಜಿಲ್ಲಾಧಿಕಾರಿಗಳು ತಕ್ಷಣ ಪಪಂ ಮುಖ್ಯಾಧಿಕಾರಿಗಳನ್ನು ಕರೆಸಿ ದುರಸ್ತಿ ಮಾಡಿಸದೆ ನಿರ್ಲಕ್ಷ್ಯಿಸಿರುವ ಬಗ್ಗೆ ಪ್ರಶ್ನಿಸಿದರು. ಶುದ್ಧ ಕುಡಿಯುವ ನೀರಿನ ಘಟಕಗಳೆಲ್ಲವೂ ಆರ್ಡಿಪಿಆರ್ ವ್ಯಾಪ್ತಿಯಲ್ಲಿದ್ದು ನಮಗೆ ಇದೂವರೆವಿಗೂ ಹಸ್ತಾಂತರಿಸಿರುವುದಿಲ್ಲ. ಅವರು ಹಸ್ತಾಂತರಿಸಿದರೆ ದುರಸ್ತಿ ಮಾಡಿಸುವುದಾಗಿ ತಿಳಿಸಿದರು. ಅಲ್ಲದೆ 70 ಸಾವಿರಕ್ಕೂ ಹೆಚ್ಚು ಹಣ ದುರಸ್ತಿಗೆ ಬೇಕಾಗುತ್ತದೆ ನಮ್ಮಲ್ಲಿ ಕಂದಾಯ ವಸೂಲಿಯಾಗದಿರುವುದರಿಂದ…
Author: News Desk Benkiyabale
ತುಮಕೂರು : ತುಮಕೂರು ವಿಶ್ವವಿದ್ಯಾನಿಲಯದ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ 73 ವಿದ್ಯಾರ್ಥಿಗಳಿಗೆ ಒಟ್ಟು 92 ಚಿನ್ನದ ಪದಕ, ಆರು ನಗದು ಬಹುಮಾನ ಹಾಗೂ 147 ಪಿಎಚ್ಡಿ ಪದವಿ ಹಾಗೂ 3 ಡಿಲಿಟ್ ಪದವಿ ಪ್ರದಾನ ಮಾಡಲಾಯಿತು. ತುಮಕೂರು ನಗರದ ವಿಶ್ವವಿದ್ಯಾನಿಲಯದ ಶ್ರೀ ಶ್ರೀ ಶ್ರೀ ಶಿವಕುಮಾರ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಘನತೆವೆತ್ತ ರಾಜ್ಯಪಾಲ ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ವಾಜುಭಾಯಿ ವಾಲಾ ಅವರು, 73 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 147 ಪಿಎಚ್ಡಿ ಅಭ್ಯರ್ಥಿಗಳಿಗೆ ಮತ್ತು 3 ಡಿಲಿಟ್ ಪದವಿ ಪ್ರದಾನ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿನ ಕೊಡುಗೆಗಾಗಿ ಐ.ಎಸ್. ಪ್ರಸಾದ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು. ಉದಾರ ಶಿಕ್ಷಣ ಪರಿಕಲ್ಪನೆಯಲ್ಲಿ ತುಮಕೂರು ವಿವಿಗೆ ವಿಶಿಷ್ಟ ಸ್ಥಾನ: ತುಮಕೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಶಿಕ್ಷಣ ನೀತಿಯ ಉದಾರ ಶಿಕ್ಷಣ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ ಎಂದು ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಾಧಿಪತಿ, ಇಸ್ರೋ ಭಾರತ ಸರ್ಕಾರ…
ತುಮಕೂರು: ತುಮಕೂರಿನ ಶ್ರೀದೇವಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಕೀಲು ಮತ್ತು ಮೂಳೆ ವಿಭಾಗ ವೈದ್ಯರು 60 ವರ್ಷದ ವ್ಯಕ್ತಿಗೆ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಸ್ವಾವಲಂಬಿಯಾಗಿ ನಡೆದಾಡುವಂತೆ ಮಾಡಿ ದ್ದಾರೆ. ಕೊರಟಗೆರೆ ತಾಲ್ಲೂಕಿನ ಸಿಂಗಲಿಕಾಪುರ ಗ್ರಾಮದ ಅರಸಪ್ಪ (60) ವರ್ಷ ಎಂಬುವವರು ಸೊಂಟದ ಕಾಲುನೋವಿನಿಂದ ಬಳಲುತ್ತಿದ್ದರು. ಇವರ ಜೀವನ ತುಂಬ ದುಸ್ತರವಾಗಿತ್ತು. ದಿನನಿತ್ಯದ ಕೆಲಸಗಳಿಗೆ ಬೇರೆಯವರ ಸಹಾಯಯಾಚಿಸುವಂತಾಗಿತ್ತು. ಇವರಿಗೆ (ಊiಠಿ ಖeಠಿಟಚಿಛಿemeಟಿಣ) ಆಪರೇಷನ್ ಅಗತ್ಯವಾಗಿತ್ತು. ಇತರರ ಸಹಾಯದಿಂದ ನಡೆದಾಡುತ್ತಿದ್ದರು ಅಪರೇಷನ್ ಮಾಡಿದ ನಂತರ ತಾವೇ ನಡೆದಾಡುವಂತಾಗಿದ್ದಾರೆ. ಶ್ರೀದೇವಿ ಆಸ್ಪತ್ರೆ ಕೀಲು ಮತ್ತು ಮೂಳೆ ವಿಭಾಗದ ತಜ್ಞ ವೈದ್ಯರುಗಳು ಸಕಲ ಪರೀಕ್ಷೆ ಮಾಡಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದರು. ರೋಗಿಯೂ ಸಾಮಾನ್ಯ ಶಸ್ತ್ರಚಿಕಿತ್ಸೆಗೆ ಗುಣವಾಗುವುದು ಕಷ್ಟವಾಗಿರುವುದರಿಂದ ಸೊಂಟದ ಕೀಲು ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆ ಮಾಡಿ ಅತಿ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ತಾವೇ ನಡೆದಾಡುವಂತಾಗಿದ್ದಾರೆ. ಇವರು ಸುಮಾರು 10 ವರ್ಷಗಳ ಕಾಲ…
ತುಮಕೂರು: ಹಿರಿಯ ಕ್ರೀಡಾಪಟುಗಳಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಮಾರ್ಚ್ 13 ಮತ್ತು 14 ರಂದು ಬೆಂಗಳೂರಿನ ಯಲಹಂಕ ಕ್ರೀಡಾಂಗಣದಲ್ಲಿ 2 ದಿನಗಳ ರಾಜ್ಯಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ತುಮಕೂರು ಜಿಲ್ಲೆಯಿಂದ ಭಾಗವಹಿಸುವ ಹಿರಿಯ ಕ್ರೀಡಾಪಟುಗಳು ಮಾರ್ಚ್ 07ರೊಳಗೆ ಹೆಸರು ನೊಂದಾಯಿಸಲು ಎಂದು ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ನ ತುಮಕೂರು ಜಿಲ್ಲಾಧ್ಯಕ್ಷ ಧನಿಯಕುಮಾರ್ ಮನವಿ ಮಾಡಿದ್ದಾರೆ. ನಗರದ ಸಿ.ಎಸ್.ಐ ಲೇಔಟ್ನಲ್ಲಿರುವ ಅಸೋಸಿಯೇಷನ್ ಕಚೇರಿಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲು ತುಮಕೂರು ತಂಡಕ್ಕೆ ಹೆಸರು ನೊಂದಾಯಿಸುವ ಸಂಬಂಧ ಕರೆದಿದ್ದ ಪೂರ್ವಬಾವಿ ಸಭೆಯಲ್ಲಿ ಮಾಸ್ಟರ್ ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು,ತುಮಕೂರು ಮಾಸ್ಟರ್ ಗೇಮ್ಸ್ ಅಸೋಸಿಯೇಷನ್(ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ(ರಿ)ನ ಮಾನ್ಯತೆ ಪಡೆದಿದ್ದು,ಮಾರ್ಚ್ 7 ರವರೆಗೆ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ ಎಂದರು. ಕ್ರೀಡಾಕೂಟವನ್ನು ಕರ್ನಾಟಕ ರಾಜ್ಯ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ,ದ್ರಾವಿಡ್ ಪಡುಕೋಣೆ ಅಕಾಡೆಮಿ ,ಜಯಪ್ರಕಾಶ್ ನಾರಾಯಣ ಯುತ್ ಸೆಂಟರ್,ವಿದ್ಯಾನಗರ…
ಮಧುಗಿರಿ : ತಾಲೂಕಿನ ಪುರವರ ಹೋಬಳಿಯ ಹಂದ್ರಾಳು ಗ್ರಾಮದ ನಿವೃತ್ತ ಕೆ.ಎ.ಎಸ್. ಅಧಿಕಾರಿ ಹಾಗೂ ಖ್ಯಾತ ಕಥೆಗಾರ ಹಂದ್ರಾಳು ಕೇಶವರೆಡ್ಡಿ ಅವರ ತೋಟಕ್ಕೆ ಬುಧವಾರ ಮಧ್ಯಾಹ್ನ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಸುಮಾರು 35 ಲಕ್ಷ ಬೆಲೆ ಬಾಳುವ ತೋಟ ಸುಟ್ಟು ಭಸ್ಮವಾಗಿದೆ. ಒಟ್ಟು 26 ಎಕರೆಯಲ್ಲಿ 15ಎಕರೆ ಮಾವು, 5 ಎಕರೆ ಸಪೋಟ, ಉಳಿದ 6 ಎಕರೆಯಲ್ಲಿ ಮಹಾಗಣಿ, ಹೆಬ್ಬೇವು, ನೇರಳೆ, ಹಲಸು ಇತರೆ ಗಿಡಗಳನ್ನು ಬೆಳೆಸಿದ್ದೆ, ಆದರೆ ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ನನ್ನ 13 ವರ್ಷದ ಮರ-ಗಿಡಗಳು ಸುಟ್ಟು ಭಸ್ಮವಾಗಿವೆ. ಈ ಗಿಡ-ಮರಗಳನ್ನು ಬೆಳೆಸಲು ನಾನು ಸುಮಾರು 25 ಲಕ್ಷ ಸಾಲ ಮಾಡಿದ್ದೆ, ಆದರೆ ಈಗ ತೋಟ ಕೆಲ ಗಿಡಗಳು ಹೊರತುಪಡಿಸಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿ, ಸುಮಾರು 35 ಲಕ್ಷ ನಷ್ಟವಾಗಿರುವುದಕ್ಕೆ ನನ್ನ ಕೈಕಾಲುಗಳು ಕುಸಿದು ಬಿದ್ದಂತಾಗಿದೆ. ನಾನು ನಿವೃತ್ತ ಅಧಿಕಾರಿಯಾಗಿದ್ದರೂ ಕೂಡ ನನ್ನ ಜಮೀನಿನ ರಸ್ತೆಗಾಗಿ ಹಲವು…
ಹುಳಿಯಾರು : ಹುಳಿಯಾರಿನ ಎಪಿಎಂಸಿಯಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರಕ್ಕೆ ಚಿಕ್ಕನಾಯಕಹಳ್ಳಿ ತಹಸೀಲ್ದಾರ್ ಬಿ.ತೇಜಸ್ವಿನಿ ಅವರು ಬುಧವಾರ ಸಂಜೆ ದಿಡೀರ್ ಭೇಟಿ ನೀಡಿ ಖರೀದಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ರಾಗಿ ಬೆಳೆಗಾರರು ಭಾನುವಾರವೂ ಸಹ ಖರೀದಿ ಮಾಡುವಂತೆಯೂ, ಇರುವ ಕೌಂಟರ್ ಜೊತೆಗೆ ಮತ್ತೊಂದು ಕೌಂಟರ್ ತೆರೆಯುವಂತೆಯೂ ತಹಸೀಲ್ದಾರ್ ಬಳಿ ಮನವಿ ಮಾಡಿದರು. ಶಿರಾದಲ್ಲಿನ ವೇರ್ಹೌಸ್ ಲಭ್ಯತೆ ಮಾಹಿತಿ ಪಡೆದು ಹಾಗೂ ಹಮಾಲಿಗಳ ಸಹಕಾರ ಕೇಳಿ ಭಾನುವಾರವೂ ಖರೀದಿ ಜೊತೆಗೆ ನಿತ್ಯವೂ ಮತ್ತೊಂದು ಕೌಂಟರ್ ತೆರೆಯುವ ಭರವಸೆ ನೀಡಿದರು. ಹುಳಿಯಾರು ಖರೀದಿ ಕೇಂದ್ರದಲ್ಲಿ 4150 ರೈತರು ನೊಂದಣಿ ಮಾಡಿಸಿದ್ದು ಇದುವರೆವಿಗೂ 2300 ರೈತರಿಂದ 57 ಸಾವಿರ ಕ್ವಿಂಟಲ್ ರಾಗಿ ಖರೀದಿಸಲಾಗಿದೆ. ಸರ್ವರ್ ಸಮಸ್ಯೆ ಇದ್ದಾಗ ಮಾತ್ರ ಸ್ವಲ್ಪ ಖರೀದಿ ಪ್ರಕ್ರಿಯೆ ಸ್ಲೋ ಆಗುತ್ತದೆ. ಉಳಿದಂತೆ ಬಹಳ ವೇಗವಾಗಿ ಖರೀದಿ ಮಾಡಲಾಗುತ್ತಿದೆ. ನಿತ್ಯ ಐವತ್ತರವತ್ತು ರೈತರು ಬಂದರೆ…
ಚಿಕ್ಕನಾಯಕನಹಳ್ಳಿ: ಎರಡು ಹಂತದ ಲಸಿಕಾ ಅಭಿಯಾನದಲ್ಲಿ ರಾಜ್ಯದಲ್ಲಿ ತುಮಕೂರು ಜಿಲ್ಲೆ ಪ್ರಥಮಸ್ಥಾನದಲ್ಲಿದ್ದು ಮೂರನೇ ಲಸಿಕೆ ಹಂತದಲ್ಲಿಯುಸಹ ನಮಗೆ ನೀಡಿದ ಗುರಿಯನ್ನು ಸಾಧಿಸಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ ತಾವೇ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಕೇಂದ್ರ ಸರ್ಕಾರದ ತೀರ್ಮಾನದಂತೆ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ 60ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ, ಅದರಲ್ಲೂ ಬಿಪಿ. ಮದುಮೇಹ, ಹೃದಯಸಂಬಂಧಿ ಇನ್ನಿತರ ಖಾಯಿಲೆಯಿಂದ ಬಳಲುತ್ತಿರುವವರೂಸಹ ವೈದ್ಯರ ಸಲಹೆಯಂತೆ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಇದರಿಂದ ಯಾವುದೇ ತೊಂದರೆ ಇರುವುದಿಲ್ಲ, ಅಪಪ್ರಚಾರಕ್ಕೆ ಕಿವಿಕೊಡದೆ 60ವರ್ಷ ಮೇಲ್ಪಟ್ಟವರು ನೊಂದಣಿ ಮಾಡಿಸಿ ಲಸಿಕೆ ಪಡೆಯಿರಿ ಎಂದರು. ಖಾಸಗಿಯಾಗಿ ರೂ.250 ಶುಲ್ಕ ನಿಗಧಿಯಾಗಿದ್ದು ಅಲ್ಲಿಯೂಸಹ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ನಮಗೆ ಜಿಲ್ಲೆಗೆ 50 ಸಾವಿರ ಗುರಿಯಿದ್ದು ಈಗ 10 ಸಾವಿರ ವ್ಯಾಕ್ಸಿನ್ ಬಂದಿದೆ.…
ತುಮಕೂರು: ಮಗು ಹುಟ್ಟಿದ ಕೂಡಲೇ ಶ್ರವಣ ದೋಷವನ್ನು ಪತ್ತೆಹಚ್ಚುವುದು ಮುಖ್ಯವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ಶ್ರವಣದೋಷ ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ “ವಿಶ್ವ ಶ್ರವಣ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಗು ಹುಟ್ಟಿದ ಕೂಡಲೇ ಶ್ರವಣ ದೋಷವನ್ನು ಪತ್ತೆ ಹಚ್ಚಲು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ/ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಗು ತಾಯಂದಿರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮ ಅಧಿಕಾರಿ ಡಾ: ಮಹಿಮಾ ಮಾತನಾಡಿ, ಸೋಹಂ, ಬೆರಾ ಎಂಬ ಶ್ರವಣ ದೋಷ ಪತ್ತೆ ಹಚ್ಚುವ ಸಾಧನದಿಂದ ಹುಟ್ಟಿದ ಮಗುವಿನಲ್ಲಿರುವ ಶ್ರವಣ ದೋಷವನ್ನು ಪತ್ತೆ ಹಚ್ಚಬಹುದಾಗಿದೆ. ಅದೇ ರೀತಿ ಆಡಿಯೋ ಮೀಟರ್ ಬಳಸಿಕೊಂಡು ವಯಸ್ಕರು/ಹಿರಿಯರಲ್ಲಿರುವ ಶ್ರವಣ ದೋಷವನ್ನು ಪತ್ತೆಹಚ್ಚಬಹುದು. ಶ್ರವಣ ದೋಷವನ್ನು ನಿಯಂತ್ರಿಸುವಲ್ಲಿ…
ತುಮಕೂರು : ಕೃಷಿಕರು ಸಾವಯವ ಪದ್ಧತಿಯನ್ನ ಅಳವಡಿಸಿಕೊಂಡು ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಈ ಹಿಂದೆ ಸಿರಿಧಾನ್ಯಗಳು ಬಡವರ ಧಾನ್ಯಗಳಾಗಿದ್ದವು. ಆದರೆ ಇಂದು ಖಾಯಿಲೆಗಳ ಅಬ್ಬರದಿಂದ ಬಡವರ ಧಾನ್ಯಗಳು ಸಿರಿಧಾನ್ಯಗಳಾಗಿ ಮಾರ್ಪಟ್ಟಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ತಿಳಿಸಿದರು. ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಆಯೋಜಿಸಿದ್ದ ಕೃಷಿ ಭವನ ಕಟ್ಟಡದ ಉದ್ಘಾಟನೆ ಮತ್ತು ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಹಬ್ಬ ಕಾರ್ಯಕ್ರಮದಲ್ಲಿ ಕೃಷಿ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು, ಕೋವಿಡ್ ನಂತರ ಕೃಷಿ ಸುಧಾರಿಸಿದೆ. ಕೃಷಿ ಉಳಿದರೆ ರೈತರು ಉಳಿಯುತ್ತಾರೆ. ದೇಶ ಉಳಿಯುತ್ತದೆ. ಇಲ್ಲವಾದರೆ ದೇಶವೇ ನಾಶವಾಗುತ್ತದೆ. ಇಂತಹ ಮಹತ್ವವಿರುವ ಕೃಷಿ ಕಾಯಕವನ್ನು ನಾವು ಮರೆಯುತ್ತಿದೇವೆ. ಇದು ತುಂಬಾ ನೋವಿನ ಸಂಗತಿ. ರೈತರು ಕೊಡುಗೈ ದಾನಿಗಳು. ದೇಶಕ್ಕೆ ಅನ್ನವನ್ನು ಕೊಡುತ್ತಿದ್ದಾರೆ. ಆದರೆ ಬದಲಾದ ವಾತಾವರಣದ ಸಮಯದಲ್ಲಿ ಇಂದು ಕೃಷಿ ಪದ್ಧತಿಯಲ್ಲಿ ಬದಲಾವಣೆ…
ಬರಗೂರು: ಆಕಸ್ಮಿಕವಾಗಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದ ಪರಿಣಾಮ ಅದರ ಪಕ್ಕದಲ್ಲೇ ಕಟ್ಟಿ ಹಾಕಿದ್ದ ಎರಡು ಹಸುಗಳು ಸೇರಿದಂತೆ ಹುಲ್ಲು ಬಣವೆ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾದ ಕರುಣಾಜನಕ ಘಟನೆ ಶಿರಾ ತಾಲ್ಲೂಕು ಬರಗೂರು ಗ್ರಾಮದಲ್ಲಿ ಸೋಮವಾರ ಸಂಜೆ ಜರುಗಿದೆ. ಮೃತ ಹಸುಗಳ ಮಾಲಿಕ ರೈತ ಕುಮಾರ್’ಗೆ ಹೈನುಗಾರಿಕೆಯೆ ಆರ್ಥಿಕತೆಗೆ ಆಧಾರವಾಗಿತ್ತು. ಹಾಲನ್ನು ಡೈರಿಗೆ ಹಾಕಿ ಜೀವನ ಸಾಗಿಸುತ್ತಿದ್ದ ಕುಮಾರ್ ಹಸುಗಳ ಮೇವಿಗಾಗಿ ಸುಮಾರು 45 ಸಾವಿರ ವೆಚ್ಚ ಮಾಡಿ ಮೂರು ಲೋಡು ಜೋಳದ ಸೆಪ್ಪೆ ಮತ್ತು ಕಡಳೆ ಬಳ್ಳಿಯನ್ನು ಅವರ ಮನೆಯ ಪಕ್ಕದಲ್ಲೆ ಬಣವೆ ಹಾಕಿಕೊಂಡಿದ್ದರು. ಸೋಮವಾರ ಸಂಜೆ 5.30ರ ವೇಳೆಗೆ ಆಕಸ್ಮಿಕವಾಗಿ ಹುಲ್ಲು ಬಳವೆಗೆ ಬೆಂಕಿ ಹೊತ್ತಿಕೊಂಡಿದೆ. ಊರ ಹೊರ ಭಾಗದಲ್ಲಿರುವ ಹುಲ್ಲು ಬಣವೆಗೆ ಬೆಂಕಿ ಹೊತ್ತಿಕೊಂಡಿರುವುದು ಬೇಗನೆ ಜನರಿಗೆ ಗೋಚರವಾಗಿಲ್ಲ. ಬೆಂಕಿಯ ಜ್ವಾಲೆಗಳು ಹೆಚ್ಚಳವಾದ ನಂತರ ಕಂಡ ಹಲವು ಮಂದಿ ಬೆಂಕಿ ಆರಿಸಲು ಮುಂದಾಗಿದ್ದಾರೆ, ಆದರೆ ಸಾಧ್ಯವಾಗಿಲ್ಲ. …