Author: News Desk Benkiyabale

ತುಮಕೂರು :        ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಬಹು ಆಯಾಮಗಳನ್ನು ಹೊಂದಿದ್ದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಯುಗವೊಂದನ್ನು ಆರಂಭಿಸಲಿದೆ. ಅದು ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಿದೆ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ತಿಳಿಸಿದರು.        ಶ್ರೀ ಸಿದ್ಧಗಂಗಾ ಸಂಜೆ ಕಾಲೇಜು ಹಾಗೂ ಆಕ್ಟ್-ಟ್ಯಾಕಲ್ ಎಜುಕೇಶನಲ್ ಸೆಂಟರ್ ಜಂಟಿಯಾಗಿ ಏರ್ಪಡಿಸಿದ್ದ `ಹೊಸ ಶಿಕ್ಷಣ ನೀತಿಯ ಸಾಧ್ಯಾಸಾಧ್ಯತೆಗಳು’ ಕುರಿತ ಎರಡು ದಿನಗಳ ವೆಬಿನಾರ್ ಅನ್ನು ಉದ್ಘಾಟಿಸಿ ಮಾತನಾಡಿದರು.       ಹೊಸ ಶಿಕ್ಷಣ ನೀತಿಯು ಆರನೇ ತರಗತಿಯಿಂದಲೇ ವಿದ್ಯಾರ್ಥಿಗಳ ಕೌಶಲವನ್ನು ಅಭಿವೃದ್ಧಿಪಡಿಸಲು ವಿಶೇಷ ಕ್ರಮಗಳನ್ನು ಸೂಚಿಸಿದೆ. ವಿದ್ಯಾರ್ಥಿ ಒಂಭತ್ತನೇ ತರಗತಿ ತಲುಪಿದಾಗಲೇ ತನಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಇದೊಂದು ಮಹತ್ವದ ಹೆಜ್ಜೆ ಎಂದರು.       ಹೊಸ ಶಿಕ್ಷಣ ನೀತಿಯು ಮೂರು ವರ್ಷದ ಪೂರ್ವ ಪ್ರಾಥಮಿಕ ಹಾಗೂ ಒಂದನೇ ಮತ್ತು ಎರಡನೇ ತರಗತಿಗಳನ್ನು ಒಟ್ಟಾಗಿ ತಳಹದಿ…

Read More

ತುಮಕೂರು:       ನಾಗರಹಾವೊಂದು ಕೊಳಕ ಮಂಡಲ ಹಾವನ್ನು ನುಂಗಿರುವ ಘಟನೆ ತಾಲ್ಲೂಕಿನ ತಿಮ್ಮಲಾಪುರದಲ್ಲಿ ನಡೆದಿದೆ.       ತಾಲ್ಲೂಕಿನ ತಿಮ್ಮಲಾಪುರದ ಲಿಂಗರಾಜು ಎಂಬುವರ ಇಟ್ಟಿಗೆ ಗೂಡಿನಲ್ಲಿದ್ದ ಸುಮಾರು 4 ವರ್ಷದ 6 ಅಡಿ ಉದ್ದದ ನಾಗರಹಾವು 4 ಅಡಿ ಉದ್ದದ ಕೊಳಕ ಮಡಲ ಹಾವನ್ನು ನುಂಗಿದೆ. ಹಾವುಗಳನ್ನು ನೋಡಿದ ಇಟ್ಟಿಗೆ ಗೂಡಿನ ಮಾಲೀಕರಾದ ಲಿಂಗರಾಜು ಉರಗ ತಜ್ಞ ಸ್ನೇಕ್ ದಿಲೀಪ್ ರವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ.       ಸ್ಥಳಕ್ಕೆ ಧಾವಿಸಿದ ಸ್ನೇಕ್ ದಿಲೀಪ್ ಹಾವನ್ನು ಹಿಡಿದು ದೇವರಾಯನದುರ್ಗದ ಕಾಡಿಗೆ ಬಿಟ್ಟಿದ್ದಾರೆ. ಸಾರ್ವಜನಿಕರು ಹಾವುಗಳನ್ನು ಕಂಡರೆ ಅವುಗಳನ್ನು ಕೊಲ್ಲದೆ ಉರಗ ತಜ್ಞ ಸ್ನೇಕ್ ದಿಲೀಪ್ ರವರಿಗೆ ಕರೆ ಮಾಡಿದರೆ ಅವರು ಹಾವುಗಳನ್ನು ಹಿಡಿದು ರಕ್ಷಿಸಿ, ಅರಣ್ಯಕ್ಕೆ ಬಿಡುವ ಕೆಲಸ ಮಾಡುತ್ತಾರೆ. ದಿಲೀಪ್ ರವರ ಮೊ:9916790692.

Read More

ತುಮಕೂರು:       ರಾಜ್ಯದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜುಗಳನ್ನು ಆರಂಭಿಸಿದ್ದು, ಇನ್ನು ಮುಂದೆ ಕೊರೊನಾ ಪಾಸ್ ಮಾಡಲು ಅವಕಾಶ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್‍ನಾರಾಯಣ ಇಂದಿಲ್ಲಿ ಸ್ಪಷ್ಟಪಡಿಸಿದರು. ಇದುವರೆವಿಗೂ ಕಾಲೇಜುಗಳಲ್ಲಿ ಆನ್‍ಲೈನ್ ತರಗತಿಗಳು ಮಾತ್ರ ನಡೆಯುತ್ತಿದ್ದವು. ಆದರೆ, ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾಲೇಜುಗಳನ್ನು ಆರಂಭಿಸಿರುವುದರಿಂದ ಆಫ್ ಲೈನ್ ತರಗತಿಗಳು ನಡೆಯುತ್ತಿವೆ. ಯಾವುದೇ ಒತ್ತಡ ಇಲ್ಲದೆ ಸ್ವ ಇಚ್ಛೆಯಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬಹುದಾಗಿದೆ ಎಂದರು. ವಿದ್ಯಾರ್ಥಿ ಜೀವನ ಕಲಿಕೆಗೆ ಮೀಸಲಾಗಿರಬೇಕು. ಹಾಗಾಗಿ ವಿದ್ಯಾರ್ಥಿಗಳು ಬೇರೆ ವಿಚಾರಗಳ ಬಗ್ಗೆ ಗಮನ ಕೊಡದೆ ಪರೀಕ್ಷೆಗಳನ್ನು ಬರೆಯುವ ನಿಟ್ಟಿನಲ್ಲಿ ಅಧ್ಯಯನಶೀಲರಾಗಬೇಕು ಎಂದು ಅವರು ಸಲಹೆ ಮಾಡಿದರು. ತುಮಕೂರು ವಿಶ್ವವಿದ್ಯಾಲಯದ ಪದವಿ ಕಾಲೇಜಿಗೆ ಭೇಟಿ ನೀಡಿ ತರಗತಿಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವಿ ಕಾಲೇಜುಗಳಲ್ಲಿ ಇದುವರೆಗೂ ಶೇ. 9 ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡು ಬರುತ್ತಿದ್ದು, ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳವಾಗುತ್ತಿದೆ. ಎಲ್ಲ ಮುಂಜಾಗ್ರತಾ ಕ್ರಮ…

Read More

ಮಧುಗಿರಿ :       ತಾಲೂಕಿನ ಪುರವಾರ ಹೋಬಳಿಯ ತಿಮಲಾಪುರಕ್ಕೆ ಇಂದು ಶಾಸಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳು, ಆದ ಡಾ. ಜಿ .ಪರಮೇಶ್ವರ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.       ಪುರವರ ಹೋಬಳಿಯ ತಿಮ್ಮಲಾಪುರ ಅಂಜನೇಯ ದೇವಸ್ಥಾನದ ಧ್ವಜ ಕಂಬ ಪೂಜಾ ಕಾರ್ಯಕ್ರಮ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ನಂತರ ಪುರವರ ಗ್ರಾಮದಲ್ಲಿ ಸಂತೆ ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮ ಮತ್ತು ಸರ್ಕಲ್ ಅಭಿವೃದ್ಧಿ ಕಾಮಗಾರಿ ಮಾಡಿ ಮಾತನಾಡಿದವರು ಪುರುವಾರ ಹೋಬಳಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಹಮ್ಮಿಕೊಂಡಿದ್ದೇವೆ. ಹಾಗೂ ರಸ್ತೆಗಳು ಹೈ ಮಾಸ್ಟ್ ಲ್ಯಾಂಪುಗಳು ಹಾಗೆ ಇಲ್ಲಿ ಕೃಷಿ ಮಾರುಕಟ್ಟೆ ಆಗಬೇಕೆಂದು ತುಂಬಾ ದಿನಗಳ ಬೇಡಿಕೆಯಾಗಿತ್ತು ಅದು ಕೂಡ ನೆರವೇರಿದ್ದು ಇಲ್ಲಿಯ ರೈತರು ತಾವು ಬೆಳೆದ ಬೆಳೆಗಳನ್ನು ಅವರೇ ಸ್ವತಹ ಮಾರುಕಟ್ಟೆಗೆ ತಂದು ಅವರೇ ಮಾರಿಕೊಂಡು ಹೋಗಬಹುದು ಎಂಬ ಬೇಡಿಕೆ ಇದ್ದು ಆದ್ದರಿಂದ ಅದು ಕೂಡ ಪೂರ್ಣಗೊಂಡಿದೆ. ಸಂಕಾಪುರ ಗ್ರಾಮದಲ್ಲಿ…

Read More

ಮಧುಗಿರಿ :       ಮಧುಗಿರಿಯನ್ನು ಕಂದಾಯ ಜಿಲ್ಲೆಯನ್ನಾಗಿ ಸರ್ಕಾರ ಘೋಷಿಸುವಂತೆ  ಕೆಪಿಸಿಸಿ ಸದಸ್ಯ ಹಾಗೂ ಜೆಎಸ್ಎಸ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಜಗದೀಶ್ ರೆಡ್ಡಿ ಆಗ್ರಹಿಸಿದರು.              ಶುಕ್ರವಾರದಂದು ಪಟ್ಟಣದ ನೃಪತುಂಗ ವೃತ್ತದ ಬಳಿಯಿರುವ ಡಾ.  ಬಿ. ಆರ್. ಅಂಬೇಡ್ಕರ್ ಆಟೊ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಖಾಸಗಿ ಬಸ್ ನಿಲ್ದಾಣದ ಮದಕರಿನಾಯಕ ವೃತ್ತದ ಬಳಿಯ ಆಟೋ ಚಾಲಕರುಗಳು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಟೋ ಚಾಲಕರಗಳಿಗೆ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದರು.       ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರವೆಂಬ ಮೂವತ್ತೊಂದನೇ ಜಿಲ್ಲೆಯನ್ನಾಗಿ ಘೋಷಿಸಲು ಮುಂದಾಗಿದ್ದು ತುಮಕೂರು ಜಿಲ್ಲೆಯು ಹತ್ತು ತಾಲ್ಲೂಕುಗಳನ್ನೊಳಗೊಂಡ ಅತಿ ದೊಡ್ಡ ಜಿಲ್ಲೆಯಾಗಿದೆ. ನಂಜುಂಡಪ್ಪ ವರದಿಯಾದರಿತ ಅತಿ ಹಿಂದುಳಿದ ತಾಲ್ಲೂಕುಗಳಾದ ಪಾವಗಡ,ಮಧುಗಿರಿ, ಕೊರಟಗೆರೆ,ಸಿರಾ, ಸ್ವಾತಂತ್ರ್ಯಪೂರ್ವದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಹೊಂದಿರುವುದು ,ಐತಿಹಾಸಿಕ ಹಿನ್ನಲೆಯುಳ್ಳ ಮತ್ತು ಈಗಾಗಲೇ ಶೈಕ್ಷಣಿಕ ಜಿಲ್ಲೆ ಯಾಗಿರುವ ಮಧುಗಿರಿಯನ್ನು ಕೇಂದ್ರಸ್ಥಾನವನ್ನಾಗಿಸಿ ಕಂದಾಯ…

Read More

ಮಧುಗಿರಿ:       ಡಿ.19ರಂದು ಲೋಕ ಅದಾಲತ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಪಲ್ಲವಿ ತಿಳಿಸಿದರು.       ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಕರಣಗಳು ಹೆಚ್ಚು ಕಾಲಾವಕಾಶ ತೆಗದು ಕೊಳ್ಳದೆ ಸೌಹಾರ್ದಯುತವಾಗಿ ಮುಗಿಯಬೇಕು ಕೊರೋನಾ ರೋಗದಿಂದ ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು ವಕೀಲರ ಮೂಲಕವಾಗಲಿ ಹಾಗೂ ವೈಯಕ್ತಿಕವಾಗಲಿ ಬಗೆಹರಿಸಿಕೊಳ್ಳಬಹುದು ಎಂದರು.       ಅಪಘಾತ, ವಿಮೆ ಮತ್ತು ಸ್ತ್ರೀ ಶಕ್ತಿ ಸಂಘದವರು ಬ್ಯಾಂಕುಗಳಿಂದ ಪಡೆದ ಸಾಲದ ಪ್ರಕರಣಗಳನ್ನು ಈ ಆದಾಲತ್ ಕಾರ್ಯಕ್ರಮದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.       ಅಧಿಕ ಹಿರಿಯ ಸಿವಿಲ್ ನ್ಯಾಯಾದೀಶರಾದ ಸಾಗರ್ ಗುರುಗೌಡ ಪಾಟೀಲ್, ಪ್ರಧಾನ ಸಿವಿಲ್ ನ್ಯಾಯಾದೀಶರಾದ ಅಬ್ದುಲ್ ರಹಿಮಾನ್ ಎ. ಮುಲ್ಲಾ ಹಾಗೂ ಅಧಿಕ ಸಿವಿಲ್ ನ್ಯಾಯಾಧೀಶರಾದ ಎಂ. ಕಾವ್ಯಶ್ರೀ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.  

Read More

 ತುಮಕೂರು :       ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ 680 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ಕ್ರೀಡಾರಂಗ ಅಭಿವೃದ್ಧಿ, ಕಾಂಪೌಂಡ್ ಗೋಡೆ, ಪ್ರವೇಶ ದ್ವಾರ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.       ನಂತರ ಮಾತನಾಡಿದ ಅವರು, ಸರ್ಕಾರಿ ಜೂನಿಯರ್ ಕಾಲೇಜು ಮೈದಾನವನ್ನು ಬೇರೆ ಉದ್ದೇಶಗಳಿಗೆ ಕೊಡದೆ ಶಾಲಾ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳುವ ಒತ್ತಾಸೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು, ಕಾಂಪೌಂಡ್ ಸುತ್ತ ಸಾರ್ವಜನಿಕರು ಕುಳಿತುಕೊಳ್ಳಲು ಸಿಮೆಂಟ್ ಕುರ್ಚಿಗಳ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ 800 ಅಡಿ ವಿಸ್ತೀರ್ಣದ ಜಾಗ ಮಾಡಿಕೊಡಲಾಗುವುದು ಎಂದು ತಿಳಿಸಿದರು.       ಯಾವುದೇ ಕಾರಣಕ್ಕೂ ಈ ಮೈದಾನವು ಬೇರೆ ಉದ್ದೇಶಗಳಿಗೆ ಬಳಕೆಯಾಗಬಾರದು. ಅದಕ್ಕೆ ಆಸ್ಪದ ನೀಡದ ರೀತಿಯಲ್ಲಿ ಮೈದಾನದ ಮುಂಭಾಗದಲ್ಲಿ ವಿಧಾನಸೌಧದ ಆವರಣ ಗೋಡೆ ಮಾದರಿಯಲ್ಲಿ ಗ್ರಿಲ್‍ನಿಂದ ಆವರಣ ಗೋಡೆ ನಿರ್ಮಿಸಿ ಯಾರೂ ಸುಲಭವಾಗಿ…

Read More

ತುಮಕೂರು :        ಕೇಂದ್ರ ಮತ್ತು ರಾಜ್ಯ ಸರಕಾರ ಜನವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಅಗತ್ಯವಸ್ತುಗಳ ಬೆಲೆ ಹೆಚ್ಚಳ ವಿರೋಧಿಸಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.       ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿ.ಪಂ.ಸದಸ್ಯ ಕೆಂಚಮಾರಯ್ಯ,ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ, ಕಳೆದ 65 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ರೂಪಿಸಿದ್ದ ಲಾಭದಾಯಕ ಸರಕಾರಿ ಸಾಮ್ಯದ ಕಂಪನಿಗಳನ್ನು ತಮ್ಮಗೆ ಇಷ್ಟ ಬಂದಷಕ್ಕೆ ಮಾರಾಟ ಮಾಡಿ,ದೇಶವನ್ನು ಅದೋಗತಿಗೆ ತಳ್ಳುತ್ತಿದ್ದಾರೆ.ಅಲ್ಲದೆ ಮೀಸಲಾತಿಯನ್ನೇ ಅಪ್ರಸ್ತುತ ಮಾಡಲು ಹೊರಟಿದೆ,ಇದು ಖಂಡಿ ನೀಯ. ಇದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದರು.       ಅಭಿವೃದ್ದಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡದೆ, ಜನರನ್ನು…

Read More

ಚಿಕ್ಕನಾಯಕನಹಳ್ಳಿ:       ಮಹಿಳೆಯ ಹೊಟ್ಟೆ ಯಲ್ಲಿದ್ದ 5.6ಕಿಲೋ ತೂಕದ ಗೆಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಮೂಲಕ ಹೊರತೆಗೆಯುವ ಮೂಲಕ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಸಾಧನೆಗೈದಿದ್ದಾರೆ.        ಪಟ್ಟಣದ ನಾಯಕರ ಬೀದಿಯ ಸೌಭಾಗ್ಯಮ್ಮ(55) ವರ್ಷದ ಮಹಿಳೆ ಗರ್ಭಕೊಶದ ಚಿಕಿತ್ಸೆಗಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಇದೇ 17 ರಂದು ದಾಖಲಾಗಿದ್ದರು. ಈಕೆಯ ಹೊಟ್ಟೆಯಲ್ಲಿ ಗೆಡ್ಡೆಯಿರುವ ಬಗ್ಗೆ ತಪಾಸಣೆಯಿಂದ ಖಾತ್ರಿಪಡಿಸಿಕೊಂಡ ಆಸ್ಪತ್ರೆಯ ವೈದ್ಯರಾದ ಡಾ. ಕುಮಾರಸ್ವಾಮಿ, ಪ್ರಸೂತಿ ಪರಿಣಿತ ಡಾ. ನಟರಾಜ್, ಅರವಳಿಕೆ ತಜ್ಞರಾದ ಡಾ. ಶಶಾಂಕ್ ಹಾಗೂ ಸಿಬ್ಬಂದಿಯವರು ಗುರುವಾರ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಹೊಟ್ಟೆಯಲ್ಲಿದ್ದ 5.6 ಕಿಲೋ ತೂಕದ ಮಾಂಸದ ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದರು. ಈ ಶಸ್ತ್ರಚಿಕಿತ್ಸೆಯಿಂದ ಮಹಿಳೆ ಅಪಾಯದಿಂದ ಪಾರಾಗಿ ಆರೋಗ್ಯವಾಗಿದ್ದಾರೆ.       ಈ ಸಂದರ್ಭದಲ್ಲಿ ಆಡಳಿತ ವೈದ್ಯರಾದ ಡಾ. ಕುಮಾರಸ್ವಾಮಿ ಮಾತನಾಡಿ ಸರ್ಕಾರಿ ಆಸ್ಪತ್ರೆಯಲ್ಲಿಯೂಸಹ ಇಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ ಎಂಬ ವಿಚಾರ ಸಾರ್ವಜನಿಕರಿಗೆ ತಿಳಿಯಬೇಕಿದೆ.       ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ…

Read More

ಚಿಕ್ಕನಾಯಕನಹಳ್ಳಿ :        ಮುಂದಿನವಾರದಲ್ಲಿ ತಾಲ್ಲೂಕಿನ ಹಲವೆಡೆ ಸುಮಾರು 20ರಿಂದ 30ಕೋಟಿರೂ.ಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗವುದೆಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.        ತಾಲ್ಲೂಕಿನ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಅಗಸರಹಳ್ಳಿ ಬಾಳನಕೆರೆ ಹಳ್ಳದ ಬಳಿ ರೂ.1ಕೋಟಿ ವೆಚ್ಚದ ಚೆಕ್‍ಡ್ಯಾಂ ಹಾಗೂ ಸೇತುವೆ ನಿರ್ಮಾಣದ ಕಾಮಗಾರಿಗೆ ಪೂಜೆಸಲ್ಲಿಸಿಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕಸಬಹೋಬಳಿ ಹೊಸಳ್ಳಿ ಗೊಲ್ಲರಹಟ್ಟಿ ನಡುವೆ 2ಕೋಟಿ ರೂ. ಅಂದಾಜಿನ ಚೆಕ್‍ಡ್ಯಾಂ ನಿರ್ಮಾಣ ಮತ್ತು ಹಂದನಕೆರೆ ಹೋಬಳಿ ಓಟಿಕೆರೆಬಳಿ 1.20ಕೋಟಿರೂ.ಗಳ ಚೆಕ್‍ಡ್ಯಾಂಗಳ ಕಾಮಗಾರಿಗಳನ್ನು ಇಂದು ಆರಂಭಿಸಲಾಗವುದೆಂದರು. ಹಲವು ಅಭಿವೃದ್ದಿ ಕೆಲಸಗಳ ಚಾಲನೆಗೆ ಇದುವರೆಗೂ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿತ್ತು.       ಮುಂದಿನ ವಾರದಲ್ಲಿ ತಾಲ್ಲೂಕಿನೆಡೆ ಸುಮಾರು 20ರಿಂದ 30 ಕೋಟಿರೂ.ಗಳ ಕಾಮಗಾರಿಗಳು ಆರಂಭಗೊಳ್ಳಲಿದೆ. ಈಗಾಗಲೇ ತಾಲ್ಲೂಕಿಗೆ ನಾಲೆಯಿಂದ ನೀರು ಹರಿದುಬರುತಿದ್ದು ಅಂತರ್ಜಲ ಸಹಜವಾಗಿ ಏರಿಕೆಯಾಗುತ್ತಿದೆ. ಇದೇ ರೀತಿ ಅವಶ್ಯವಿರುವಡೆ ಚೆಕ್‍ಡ್ಯಾಂ, ಸೇತುವೆಗಳ ನಿರ್ಮಿಸುವ ಮೂಲಕ ಅಂತರ್ಜಲ ಅಭಿವೃದ್ದಿಗೆ ಆದ್ಯತೆನೀಡಲಾಗುವುದು. ಇದರಿಂದ ಕೃಷಿ,…

Read More