ತುಮಕೂರು: ನಾಯಿ ಅತ್ಯಂತ ವಿಶ್ವಾಸಾರ್ಹ ಪ್ರಾಣಿ, ಹಾಗೆಂದ ಮಾತ್ರಕ್ಕೆ ಅದು ಕಡಿದಾಗ ನಿರ್ಲಕ್ಷ್ಯವಹಿಸುವುದು ಬೇಡ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ(ರಿ) ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಕು ಪ್ರಾಣಿಗಳಿಗೆ ಉಚಿತ ರೇಬಿಸ್ ವಿರುದ್ಧ ಲಸಿಕೆ ಹಾಕುವುದು ಮತ್ತು ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡುತಿದ್ದ ಅವರು, ಸಾಕಿದ ನಾಯಿಗಳಿಗಿಂತಲೂ ಬೀದಿ ನಾಯಿಗಳಿಂದ ಹೆಚ್ಚು ತೊಂದರೆಯಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು. ಮನುಷ್ಯ ತನ್ನ ಒತ್ತಡದ ಜೀವನವನ್ನು ಕೊಂಚ ಹಗುರಾಗಿಸಿಕೊಳ್ಳಲು ನಾಯಿಯಂತಹ ಸಾಕು ಪ್ರಾಣಿಗಳು ಸಹಕಾರಿ, ಜೊತೆಗೆ ಇವುಗಳಿಂದ ಮನುಷ್ಯನಿಗೆ ರಕ್ಷಣೆಯೂ…
Author: News Desk Benkiyabale
ಮಧುಗಿರಿ: ಪಟ್ಟಣದಲ್ಲಿ ಇತ್ತೀಚೆಗೆ ಬೊಲೇರೋ ವಾಹನ ಅಡ್ಡಗಟ್ಟಿ ನಗದು, ಮೊಬೈಲ್ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಧುಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಟ್ಟಣದ ಕೆ.ಆರ್ ಬಡಾವಣೆಯ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಸಮೀಪ ನಿವಾಸಿ ಕಾರು ಚಾಲಕ ರಾಕೇಶ್ (26), ಗೌರಿಬಿದನೂರು ರಸ್ತೆಯ ಸಮೀಪದ ನಿವಾಸಿ ಉಪೇಂದ್ರ (22) ಮತ್ತು ಕರಡಿಪುರ ನಿವಾಸಿ ಭರತ್ (22) ಬಂದಿತ ಆರೋಪಿಗಳು. ಘಟನೆಯ ವಿವರ: ಸೆ. 24 ರಂದು ಪಾವಗಡ ತಾಲೂಕಿನ ಕಡಮಲಕುಂಟೆ ಗ್ರಾಮದ ಅಮರನಾಥ ಎಂಬುವವರ ಬೊಲೆರೋ ವಾಹನವನ್ನು ಮಧುಗಿರಿಯ ಅವಲಕ್ಕಿ ಮಿಲ್ ಸಮೀಪ ವಾಹನದಲ್ಲಿ ಬಂದು ಅಡ್ಡಗಟ್ಟಿದ ಆರೋಪಿಗಳು ವಾಹನ ಅಡ್ಡಗಟ್ಟಿ ಅಮರನಾಥರವರನ್ನು ಥಳಿಸಿ 10 ಸಾವಿರ ನಗದು ಮತ್ತು ಮೊಬೈಲ್ ಕಸಿದು ಪರಾರಿಯಾಗಿದ್ದರು. ಇದರ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಬೀರವಾಗಿ ಪರಿಗಣಿಸಿದ ಪೊಲೀಸ್…
ಮಧುಗಿರಿ: ರೈತಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮಧುಗಿರಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಪಟ್ಟಣದಲ್ಲಿರುವ ಖಾಸಗಿ ಬಸ್ ನವರು ಬೆಂಬಲ ಸೂಚಿಸಿದ್ದು ಯಾವುದೇ ಬಸ್ಸುಗಳು ಸಂಚಾರ ನಡೆಸಿಲ್ಲ. ಕೆ ಎಸ್ ಆರ್ ಟಿಸಿ ಬಸ್ಸುಗಳು ಮಾತ್ರ ಸಂಚಾರ ನಡೆಸಿದವು. ಆಟೋ ಚಾಲಕರು, ಅಂಗಡಿ ಮುಗ್ಗಟ್ಟುಗಳು, ಎಪಿಎಂಸಿ ವರ್ತಕರು, ಹಮಾಲರು,ಬೀದಿ ಬದಿ ವ್ಯಾಪಾರಿಗಳು , ಡಿಎಸ್ ಎಸ್,ಮಧುಗಿರಿ ಬ್ಲಾಕ್ ಕಾಂಗ್ರೆಸ್ ನವರು, ವಕೀಲರ ಸಂಘದವರು, ಹಾಗೂ ಕನ್ನಡ ಪರ ಹಲವು ಸಂಘಟನೆಗಳು ಬೆಂಬಲ ನೀಡಿ ಪಟ್ಟಣದ ಟೌನ್ ಹಾಲ್ ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಟಿವಿವಿ ವೃತ್ತ,ನೃಪತುಂಗ ವೃತ್ತ,ಮಿನಿ ವಿಧಾನಸೌದ ರಸ್ತೆ,ಡಬಲ್ ರೋಡ್ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ,ಅಂಬೇಡ್ಕರ್ ಪುತ್ಥಳಿ ಗೆ ಮಾಲಾರ್ಪಣೆ ಮಾಡಿ ದಂಡೂರ ಬಾಗಿಲು ರಸ್ತೆ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿ ಪ್ರತಿಭಟನಾ ಭಾಷಣ ನಡೆಸಿದರು. ಅಗತ್ಯ ವಸ್ತುಗಳಾದ ಹಣ್ಣು ತರಕಾರಿ ಹಾಲು…
ತುಮಕೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಭಾನುವಾರ ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿವೇಶನ ಮುಗಿದ ಬಳಿಕ ತಮ್ಮ ಸ್ವಾಬ್ ಟೆಸ್ಟ್ ಮಾಡಿಸಿದ್ದರು. ಭಾನುವಾರ ಸಂಜೆ ಬಂದ ವರದಿಯಲ್ಲಿ ಸಚಿವರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ಹಳೆ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿವರಿಗೆ ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಆರೋಗ್ಯ ಕುರಿತಂತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.
ತುಮಕೂರು: ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತ, ಕಾರ್ಮಿಕ, ದಲಿತ ಮತ್ತು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ತುಮಕೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ಬಂದ್ಗೆ ಬೆಂಬಲ ವ್ಯಕ್ತಪಡಿಸಿದರು. ನೂರಾರು ಪ್ರತಿಭಟನಾಕಾರರು ಟೌನ್ಹಾಲ್ನಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಸಲು ಮುಂದಾಗುತ್ತಿದ್ದಂತೆ ಪೊಲೀಸರು ತಡೆದರು. ಆಗ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಬೈಕ್ ರ್ಯಾಲಿ ನಡೆಸಿಯೇ ತೀರುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಾಗ ಕೆಲವರನ್ನು ವಾಹನಕ್ಕೆ ತುಂಬಿ ಬಂಧಿಸಿ ಬಿಡುಗಡೆ ಮಾಡಲಾಯಿತು. ಬೈಕ್ ರ್ಯಾಲಿಗೆ ಅನುಮತಿ ಕೊಡದಿದ್ದರಿಂದ ಪ್ರತಿಭಟನಾಕಾರರು ನಗರದಲ್ಲಿ ಮೆರವಣಿಗೆ ನಡೆಸಿದರು. ನಂತರ ಟೌನ್ಹಾಲ್ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಉಳುವವನಿಗೆ ಭೂ ಒಡೆತನ ನೀಡಿದ್ದ…
ಚಿಕ್ಕನಾಯಕನಹಳ್ಳಿ: ಬಗರ್ಹುಕುಂ ಸಾಗುವಳಿಮಾಡಿಕೊಂಡು ಬಂದಿದ್ದ ಬಡರೈತರ ಜಮೀನಿಗೆ ನನ್ನದೆಂದು ಬಲಿತ ರೈತನೊಬ್ಬ ಜೆಸಿಬಿ ಬಳಸಿ ಮೂರುಮಂದಿ ರೈತರು ಬೆಳೆಸಿದ್ದ ಬೆಳೆಯನ್ನು ನಾಶಪಡಿಸಿದ ಘಟನೆ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಅಜ್ಜೇನಹಳ್ಳಿಬಳಿ ನಡೆದಿದೆ. ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಅಜ್ಜೇನಹಳ್ಳಿ ಸಾಸಲು ನಡುವೆಯ ಜಮೀನಿನಲ್ಲಿ ಕಳೆದ 35-40ವರ್ಷದಿಂದ ಬಗರ್ಹುಕುಂ ಜಮೀನನ್ನು ಸಾಗುವಳಿ ಮಾಡಿಕೊಂಡು ಬಂದಿದ್ದ ರೈತರಾದ ಕಲ್ಲಪ್ಪನವರ ಮಗ ಪುಟ್ಟಯ್ಯ, ಕೃಷ್ಣಪ್ಪ ಹಾಗೂ ಭಜಂತ್ರಿ ವರ್ಗಕ್ಕೆ ಸೇರಿದ ಶಶಿಕಲಾ ಎಂಬ ಮೂವರ ಜಮೀನನ್ನು ಕಬಳಿಸುವ ಉದ್ದೇಶದಂತೆ ಎ.ಎಂ.ಲಿಂಗರಾಜು ಎಂಬುವನು ಜೆಸಿಬಿ ಮೂಲಕ ಬೆಳೆದುನಿಂತ ಹುರುಳಿ, ರಾಗಿ ಬೆಳೆಯನ್ನು ನಾಶಮಾಡಿದ್ದಾನೆ. ಇದರ ಜೊತೆಗೆ ತನ್ನದಲ್ಲದ ಬೇರೆ ಸರ್ವೆ ನಂಬರ್ಗಳಿಗೆ ಸೇರಿದ ಬದುಗಳನ್ನು ಸಹ ದೌರ್ಜನ್ಯದಿಂದ ಜೆಸಿಬಿ ಬಳಸಿ ಒತ್ತುವರಿ ಮಾಡಿದ್ದಾನೆ. ನಾನೂ ಸಹ ಖರಾಬು ಜಮೀನಿನಲ್ಲಿ ಸಾಗುವಳಿಮಾಡಿ ಐದುಎಕರೆಗೆ ಟಿಟಿ ಕಟ್ಟಿದ್ದೇನೆ ಎಂದು ಈ ಹಿಂದೆ ಸರ್ವೇಮಾಡಿ ಹಾಕಲಾಗಿದ ಹಳೆಯ ಬಾಂದ್ಕಲ್ಲುಗಳನ್ನು ಕಿತ್ತು ಅವನಿಗೆ ಬೇಕಾದಕಡೆ ನೆಟ್ಟಿದ್ದಾನೆ. ಎಂದು…
ಮಧುಗಿರಿ: ರಾಜ್ಯದಲ್ಲಿ ತಲೆದೋರಿರುವ ಯೂರಿಯಾ ಹಾಗೂ ರಸಗೊಬ್ಬರದ ಸಮಸ್ಯೆಯನ್ನು ನಿವಾರಣೆ ಮಾಡಬೇಕೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ರಾಷ್ಟ್ರೀಯ ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ ಮನವಿ ಮಾಡಿದ್ದಾರೆ . ಅವರು ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ರೈತರು ಇಟ್ಟಿರುವ ಬೆಳೆಗಳಿಗೆ ಯೂರಿಯಾ ಹಾಗೂ ರಸಗೊಬ್ಬರ ಕೊರತೆ ಕಂಡು ಬರುತ್ತಿರುವುದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕ್ರಿಬ್ಕೋಗೆ ಅಗತ್ಯವಿರುವ 15 ಸಾವಿರ ಟನ್ ಯೂರಿಯಾ ಮತ್ತು ರಸಗೊಬ್ಬರ ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡರವರು ರಾಜ್ಯಕ್ಕೆ ಅಗತ್ಯವಿರುವ ರಸ ಗೊಬ್ಬರವನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ರೈತರ ಬೆಳೆಗಳಿಗೆ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದ್ದು, ಮನವಿಗೆ ಸಕಾರಾತ್ಮಕವಾಗಿ…
ಹುಳಿಯಾರು: 19 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಹುಳಿ ಯಾರು ಅಣೇಕಟ್ಟೆ ರಸ್ತೆ ಕಾಮಗಾರಿಯು ತೀರ ಕಳಪೆಯಿಂದ ಕೂಡಿದ್ದು ಅತ್ತ ಡಾಂಬಾರ್ ಹಾಕಿಕೊಂಡು ಹೋಗುತ್ತಿದ್ದರೆ ಇತ್ತ ಕಿತ್ತೋಗುತ್ತಿದೆ ಎಂದು ಆರೋಪಿಸಿ ಸಾರ್ವ ಜನಿಕರು ಸಿಡಿದೆ ದ್ದು ಗುತ್ತಿಗೆದಾರನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಹುಳಿಯಾರಿನಲ್ಲಿ ಶುಕ್ರವಾರ ನಡೆಯಿತು. ಹುಳಿಯಾರು ಅಣೇಕಟ್ಟೆ ರಸ್ತೆಯನ್ನು ಮೇಲ್ದರ್ಜೆಗೇರಿಸಿ 19 ಕೋಟಿ ರೂ. ವೆಚ್ಚದಲ್ಲಿ ಡಾಂಬಾರಿಕರಣ ಮಾಡಲಾಗುತ್ತಿದೆ. ಆದರೆ ಹಳೆಯ ಡಾಂಬಾರ್ ಕೀಳದೆ ಅದರ ಮೇಲೆಯೇ ಹೊಸ ಡಾಂಬಾರ್ ಹಾಕಲಾಗುತ್ತಿದೆ. ಪರಿಣಾಮ ಡಾಂಬಾರ್ ಹಾಕಿದ ಮರುಕ್ಷಣವೇ ಜಲ್ಲಿ ಕಲ್ಲುಗಳು ಮೇಲೇಳುತ್ತಿದೆಯಲ್ಲದೆ ರಸ್ತೆಯ ಅಂಚಿನಲ್ಲಿ ಕಿತ್ತೋಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿತ್ತು. ಹಾಲಿ ರಸ್ತೆಯನ್ನು ಎರಡೂ ಕಡೆಯಲ್ಲೂ 1 ಮೀಟರ್ ಅಗಲೀಕರಣ ಸಹ ಮಾಡಬೇಕಿದೆಯಾದರೂ ಕೆಲವೆಡೆ ಅಗಲೀಕರಿಸಿ ಕೆಲವೆಡೆ ಕೈ ಬಿಟ್ಟಿದ್ದಾರೆ. ಅಲ್ಲದೆ ಹುಳಿಯಾರು ಪಟ್ಟಣದಲ್ಲಿ ತೀರ ಕಳಪೆಯ ಚರಂಡಿ ಕಾಮಗಾರಿ ಮಾಡಿದ್ದು ಕ್ಯೂರಿಂಗ್ ಮಾಡದೆ…
ಕೊರಟಗೆರೆ: ಗ್ರಾಮೀಣ ಪ್ರದೇಶದ ಬಡಜನತೆ ಮತ್ತು ರೈತಾಪಿವರ್ಗ ತುರ್ತು ಕೆಲಸಗಳೇ ಇಲ್ಲಿ ವಿಳಂಬ. ಮಧ್ಯವರ್ತಿ ದಳ್ಳಾಳಿಗಳ ಹಾವಳಿಯಿಂದ ತುಂಬಿ ತುಳುಕುತ್ತೀದೆ ಹೊಳವನಹಳ್ಳಿ ನಾಡಕಚೇರಿ.. ರ್ಯಾಂಕಿಂಗ್ನಲ್ಲಿ ಕಲ್ಪತರು ನಾಡಿಗೆ ಪ್ರಥಮ ಸ್ಥಾನದಲ್ಲಿದ್ದ ನಾಡಕಚೇರಿ ಈಗ 10 ಸ್ಥಾನಕ್ಕೆ ಇಳಿದಿದೆ. ತುಮಕೂರು ಜಿಲ್ಲಾಧಿಕಾರಿ ಮತ್ತು ಕೊರಟಗೆರೆ ತಹಶೀಲ್ದಾರ್ ನಾಡಕಚೇರಿಗೆ ತುರ್ತು ಸರ್ಜರಿ ಮಾಡಬೇಕಾದ ಅನಿವಾರ್ಯತೆ ಇದೆ. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದ ನಾಡಕಚೇರಿ ಉಪತಹಶೀಲ್ದಾರ್ ಶಿವಕುಮಾರ್ ಕಾಲಘಟ್ಟದಲ್ಲಿ ತುಮಕೂರು ಜಿಲ್ಲೆಗೆ ಸತತ ಎರಡು ವರ್ಷಗಳ ಕಾಲ ಪ್ರಥಮ ಸ್ಥಾನದಲ್ಲಿದ್ದ ನಾಡಕಚೇರಿ ಖಾಯಂ ಉಪತಹಸೀಲ್ದಾರ್ ಇಲ್ಲದೇ ಈಗ 10ನೇ ಸ್ಥಾನಕ್ಕೆ ತಲುಪಿದ್ದು ಪ್ರತಿನಿತ್ಯ ಸಮಸ್ಯೆಗಳ ಆಗರವಾಗಿ ಬಡಜನತೆ ಮತ್ತು ರೈತಾಪಿವರ್ಗದ ಕೆಲಸ ಕಾರ್ಯಗಳು ಸಕಾಲದಲ್ಲಿ ನಡೆಯದೇ ವಿಳಂಬವಾಗಿದೆ. ಹೊಳವನಹಳ್ಳಿ ನಾಡಕಚೇರಿ ವ್ಯಾಪ್ತಿಯ 8ಗ್ರಾಪಂಯಲ್ಲಿ ಕಂದಾಯ ಮತ್ತು ಮಜರೆ ಸೇರಿ 48 ಗ್ರಾಮಗಳಿವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಮಾಡಿದಂತೆ 43ಯೋಜನೆಗಳ ಮಾಹಿತಿಯೇ…
ಹುಳಿಯಾರು : ಹುಳಿಯಾರು ಸಮೀಪದ ಗೋಪಾಲಪುರದ ಗ್ರಾಮದ ಬಳಿ ಚಿರತೆಯೊಂದು ಆಗಾಗ ಕುರಿಗಳ ಮೇಲೆ ದಾಳಿ ನಡೆಸುತ್ತಿರುವುದು ಈ ಭಾಗದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಚಿರತೆಯನ್ನು ಸೆರೆ ಹಿಡಿಯುಲು ಅರಣ್ಯ ಇಲಾಖೆ ಮುಂದಾಗುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಗೋಪಾಲಪುರದ ಈಶ್ವರನಗುಡಿ ಬಳಿಯ ಕೆರ ಹತ್ತಿರದ ಗದ್ದೆ ಬಯಲಿನಲ್ಲಿ ನರುಗಲ್ಲು ಗೊಲ್ಲರಹಟ್ಟಿ, ಗೋಪಾಲಪುರ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಕುರಿಗಾರರು ತಮ್ಮ ನೂರಾರು ಕುರಿಗಳನ್ನು ಮೇಯಿಸಲು ಬರುತ್ತಾರೆ. ಸುಮಾರು ವರ್ಷಗಳಿಂದ ನೆಮ್ಮದಿಯಿಂದ ಕುರಿ ಮೇಯಿಸುತ್ತಿದ್ದ ಕುರಿಗಾರರಿಗೆ ಹದಿನೈದಿಪ್ಪತ್ತು ದಿನಗಳಿಂದ ಚಿರತೆಯೊಂದು ಆಗಾಗಾ ಪ್ರತ್ಯಕ್ಷವಾಗಿ ನೆಮ್ಮದಿ ಕೆಡಿಸಿದೆ. ಈಗಾಗಲೇ ಹತ್ತನ್ನೆರಡು ಕುರಿಗಳನ್ನು ಚಿರತೆ ಕಡಿದಿದ್ದು ಕುರಿಗಾರರ ಹೆದರಿಸಿ ಓಡಿಸಿದ ಪರಿಣಾಮ ಕುರಿಗಳು ಪ್ರಾಣಾಪಾಯದಿಂದ ಪಾರಾಗಿವೆ. ಪರಿಣಾಮ ಈ ಗದ್ದೆ ಬಯಲಿಗೆ ಕುರಿ ಮೇಯಿಸಲು ಬರಲು ಕುರಿಗಾರರು ಹೆದರುತ್ತಿದ್ದಾರೆ. ಚಿರತೆ ಇಲ್ಲೇ ಓಡಾಡಿಕೊಂಡಿರುವುದರಿಂದ ರಾತ್ರಿ ಸಮಯದಲ್ಲಿ ಜನ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಗದ್ದೆ…