Author: News Desk Benkiyabale

ಹುಳಿಯಾರು:       ಪಟ್ಟಣ ಪಂಚಾಯ್ತಿಯ ನಿರ್ಲಕ್ಷ್ಯದಿಂದಾಗಿ ಹುಳಿಯಾರಿನ ಶಂಕರಾಪುರ ಬಡಾವಣೆಯಲ್ಲಿ ಕಳೆದೆರಡು ತಿಂಗಳಿನಿಂದ ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.       ಶಂಕರಾಪುರ ಬಡಾವಣೆಗೆ ಸಿಹಿ ಮತ್ತು ಉಪ್ಪು ನೀರು ಸರಬರಾಜಿವಿನ ಎರಡು ವ್ಯವಸ್ಥೆಯಿತ್ತು. ಇದರಲ್ಲಿ ಸಿಹಿನೀರು ಸರಬರಾಜು ಮಾಡುವ ಪೈಪ್‍ನಲ್ಲಿ ಅಕ್ರಮವಾಗಿ ನಲ್ಲಿಗಳನ್ನು ಹಾಕಿಕೊಂಡ ಪಡಿಣಾಮ ಬ್ರಾಹ್ಮಣರ ಬೀದಿಗೆ ಹನಿ ನೀರು ಬಾರದಾಗಿದೆ. ಇನ್ನು ಉಪ್ಪು ನೀರು ಸರಬರಾಜು ಮಾಡುವ ಪೈಪ್ ಇತ್ತೀಚೆಗೆ ಸಿಸಿ ರಸ್ತೆ ಮಾಡುವಾಗ ಹೊಡೆದಿದೆ. ಇದನ್ನು ಸರಿಪಡಿಸದ ಪರಿಣಾಮ ಇಡೀ ಶಂಕರಾಪುರ ಬಡಾವಣೆಗೆ ಉಪ್ಪು ನೀರು ಬಾರದೆ ನೀರಿನ ತಾತ್ವರ ಆರಂಭವಾಗಿದೆ.        ಇಲ್ಲಿನ ನಿವಾಸಿಗಳಲ್ಲಿ ಶೇ.80 ರಷ್ಟು ಕೂಲಿಕಾರ್ಮಿಕರಾಗಿದ್ದು ಕೊರೊನಾದಿಂದಾಗಿ ಕೂಲಿನಾಲಿ ಸಿಗದೆ ಸಂಸಾರ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂಕಷ್ಟದಲ್ಲಿ ದುಡ್ಡು ಕೊಟ್ಟು ನೀರು ಖರೀಧಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ.        ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್‍ಗೆ ಎಷ್ಟು ಬಾರಿ ಮನವಿ…

Read More

ತುಮಕೂರು:      ವಾದ್ಯಗಾರರ ಸಂಘ ತನ್ನ ವೃತ್ತಿಯಲ್ಲಿ ತೊಡಗಿರುವ ಕುಲಕಸುಬುದಾರರು, ಅಶಕ್ತರನ್ನು ಗುರುತಿಸಿ ಅವರಿಗೆ ಸಹಕಾರಿಯಾಗುವಂತೆ ಹಟ್ಟಿಲಕ್ಕಮ್ಮ ದೇವಿ ಪ್ರಧಾನ ಅರ್ಚಕರಾದ ಗೋಪಾಲಸ್ವಾಮಿ ಅವರು ಹೇಳಿದರು.       ನಗರದ ಗೋಕುಲ ಬಡಾವಣೆಯಲ್ಲಿ ಗುರುವಾರ ನಡೆದ ಜಿಲ್ಲಾ ರಂಗಭೂಮಿ ವಾದ್ಯಗಾರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಜಿಲ್ಲಾ ರಂಗಭೂಮಿ ವಾದ್ಯಗಾರರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘವು ಹೆಚ್ಚಿನ ಚಟುವಟಿಕೆಗೆ ಒತ್ತು ನೀಡಿ, ಅಶಕ್ತರು, ನೊಂದವರಿಗೆ ಧ್ವನಿಯಾಗಲಿ ಎಂದು ಹೇಳುತ್ತ ಸಂಘಕ್ಕೆ ಶುಭ ಹಾರೈಸಿದರು.       ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾದ ಡಿ.ಶಿವಮಹದೇವಯ್ಯ ಅವರು ಮಾತನಾಡುತ್ತ, ಜಿಲ್ಲಾ ರಂಗಭೂಮಿ ಕಲಾವಿದರ ಬಳಕ, ಜಿಲ್ಲಾ ರಂಗಭೂಮಿ ವಾದ್ಯಗಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳುತ್ತ, ವಾದ್ಯಗಾರರ ಸಂಘ ಜಿಲ್ಲೆಯ ಎಲ್ಲ ವಾದ್ಯಗಾರರನ್ನು ಒಗ್ಗೂಡಿಸಿ, ಜಿಲ್ಲೆಯಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಲಿ ಎಂದು ಹೇಳಿದರು.      …

Read More

ಮಧುಗಿರಿ:       ಇಲ್ಲಿನ ಪುರಸಭಾ ಆವರಣದಲ್ಲಿರುವ ಈಜುಕೊಳ ಪಕ್ಕದಲ್ಲಿದ್ದ ಕೊಠಡಿಯಲ್ಲಿ ಪ್ಲಾಸ್ಟಿಕ್ ಮತ್ತು ರಟ್ಟುಗಳನ್ನು ತುಂಬಿದ ರೂಂನಲ್ಲಿ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಭಸ್ಮವಾಗಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.       ಈ ಅಗ್ನಿ ದುರಂತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಮುಖ್ಯಾಧಿಕಾರಿ ಅಮರನಾರಾಯಣ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿದ್ದರಿಂದ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.       ವಾರಕ್ಕೊಮ್ಮೆ ಈ ತ್ಯಾಜ್ಯವನ್ನು ಖರೀದಿ ಮಾಡಿಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು. ವಿಲೇವಾರಿ ಮಾಡಬೇಕಾದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

Read More

ಗುಬ್ಬಿ:       ಅಂಗನವಾಡಿ ಕೇಂದ್ರಗಳ ದುರಸ್ಥಿ ಮತ್ತು ಎಲೆಕ್ಟ್ರಿಕ್ ಕೆಲಸದ ಪಟ್ಟಿ ಸಿದ್ಧಪಡಿಸಿದ ಶಿಶು ಅಭಿವೃದ್ಧಿ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಸದಸ್ಯರನ್ನೇ ನಿರ್ಲಕ್ಷ್ಯಿಸಿ ತಯಾರಾದ ಕಾಮಗಾರಿಗಳ ಪಟ್ಟಿಯನ್ನು ಅನುಮೋದನೆಗೆ ತಂದಿರುವುದು ಸರಿಯಲ್ಲ. ನಮ್ಮಗಳ ಗಮನಕ್ಕೆ ಬಾರದ ಈ ಗುತ್ತಿಗೆ ಮತ್ತು ಕಾಮಗಾರಿ ಪಟ್ಟಿ ರದ್ದುಪಡಿಸಿ ಮರುಪಟ್ಟಿ ತಯಾರಿಸಬೇಕು ಎಂದು ತಾಪಂ ಸದಸ್ಯೆ ಮಮತಾ ಯೋಗೀಶ್ ಆಗ್ರಹಿಸಿದರು.       ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಅಂಗನವಾಡಿ ಕೇಂದ್ರಗಳ ಕೆಲಸದ ಪಟ್ಟಿ ಅನುಮೋದನೆಗೆ ಬಂದ ಸಂದರ್ಭದಲ್ಲಿ ಗರಂ ಆದ ಸದಸ್ಯೆ ಮಮತಾ ಈ ಕೆಲಸಗಳನ್ನು ಕಮೀಷನ್‍ಗೆ ಮಾರಾಟ ಮಾಡಿದಂತೆ ಕಾಣುತ್ತಿದೆ. ಚುನಾಯಿತ ಪ್ರತಿನಿಧಿಗಳಾದ ನಮ್ಮ ಗಮನಕ್ಕೆ ಬಾರದೆ ನಮ್ಮ ವ್ಯಾಪ್ತಿಯಲ್ಲಿ ಗುರುತಿಸಲಾದ ಕೆಲಸಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಅಧಿಕಾರಿಗಳು ಕೇವಲ ಅನುಮೋದನೆಗೆ ಪಟ್ಟಿ ಹಿಡಿದು ಸಭೆಗೆ ಬರುವ ಮುನ್ನಾ ನಮಗೆ ಈ ಕೆಲಸಗಳ ಬಗ್ಗೆ ಮಾಹಿತಿ ನೀಡದಿರಲು ನಿಖರ ಕಾರಣ ನೀಡಬೇಕು ಎಂದು ಒತ್ತಾಯಿಸಿದರು.…

Read More

ಮಧುಗಿರಿ:      ಈ ಬಾರಿ ಹಲವು ಕಡೆ ಉತ್ತಮ ಮಳೆಯಾಗುತ್ತಿದ್ದು, ರೈತರ ಬದುಕು ಹಸನಾಗುವುದಲ್ಲದೆ ಶ್ರೀ ನಂಜುಂಡೇಶ್ವರನ ಕೃಪೆಯಿಂದ ನಾಡು ಸುಭಿಕ್ಷವಾಗಲಿ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.       ತಾಲೂಕಿನ ಕಸಬಾ ಸಿದ್ದಾಪುರದ 510 ವರ್ಷದ ಐತಿಹಾಸಿಕ ಶ್ರೀ ನಂಜುಂಡೇಶ್ವರ ದೇಗುಲದ ಜೀರ್ಣೋದ್ಧಾರ ಹಾಗೂ ದೇವತಾ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉತ್ತಮ ಮಳೆಯ ಕಾರಣ ರೈತರು ಈ ಬಾರಿ ಶೇ.90 ರಷ್ಟು ವ್ಯವಸಾಯ ಕೈಗೊಂಡಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಕೂಡ ರೈತರ ನೆರವಿಗೆ ಧಾವಿಸಬೇಕು. ದೇಗುಲ ಅಭಿವೃದ್ಧಿಗೆ ಹೆಚ್ಚುವರಿಯಾಗಿ ತನ್ನ ಅನುದಾನದಲ್ಲಿ 3 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು.       ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ದೈವದ ಕುರುಹನ್ನು ಪ್ರಜ್ವಲಿಸುವಂತೆ ಮಾಡಿದರೆ ಧರ್ಮ ಉಳಿದು ಲೋಕ ಕಲ್ಯಾಣವಾಗಲಿದೆ. ಶಿಥಿಲವಾಗಿದ್ದ ಈ ದೇಗುಲದ ಜೀರ್ಣೋದ್ಧಾರಕ್ಕೆ ಸಹಕರಿಸಿದ ಸದ್ಬಕ್ತರಿಗೆಲ್ಲ ಒಳಿತಾಗಲಿ ಎಂದರು.       ಎಲೆರಾಂಪುರದ ಕುಂಚಿಟಿಗ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ…

Read More

ತುಮಕೂರು :       ಜಿಲ್ಲೆಯಲ್ಲಿ 266 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5017 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 110, ಪಾವಗಡ-16, ಕುಣಿಗಲ್-5, ಮಧುಗಿರಿ-09, ತುರುವೇಕೆರೆ-11, ಶಿರಾ-16, ತಿಪಟೂರು-29, ಗುಬ್ಬಿ-24, ಚಿಕ್ಕನಾಯಕನಹಳ್ಳಿ-32 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 266 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.        ಜಿಲ್ಲಾಸ್ಪತ್ರೆಯಿಂದ 174 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 3626 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1240 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 151 ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More

ತುಮಕೂರು :      ಜಿಲ್ಲೆಯಲ್ಲಿ 194 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4751 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 91, ಪಾವಗಡ-07, ಕುಣಿಗಲ್-15, ಮಧುಗಿರಿ-06, ತುರುವೇಕೆರೆ-22, ಶಿರಾ-07, ತಿಪಟೂರು-13, ಗುಬ್ಬಿ-06, ಚಿಕ್ಕನಾಯಕನಹಳ್ಳಿ-20 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 194 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.        ಜಿಲ್ಲಾಸ್ಪತ್ರೆಯಿಂದ 99 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 3452 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1151 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 147 ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More

ತುಮಕೂರು:        ತಾಲೂಕಿನ ಊರ್ಡಿಗೆರೆ ಹೋಬಳಿ ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾದಿಗಳ ಪಾದರಕ್ಷೆಗಳನ್ನು ಕಾಯುವ ಹಕ್ಕು ಭಾದ್ಯತೆಯನ್ನು ಪಡೆಯುವ ಬಗ್ಗೆ ಆಗಸ್ಟ್ 29ರಂದು ಬೆಳಿಗ್ಗೆ 11-30 ಗಂಟೆಗೆ ದೇವಾಲಯದ ಆವರಣದಲ್ಲಿ ಹರಾಜು (2020ರ ಸೆಪ್ಟೆಂಬರ್ 1ರಿಂದ 2021ರ ಫೆಬ್ರುವರಿ 28ರವರೆಗಿನ ಆರು ತಿಂಗಳ ಅವಧಿಗೆ)ನಡೆಸಲಾಗುವುದು.       ಶ್ರೀ ಕ್ಷೇತ್ರದಲ್ಲಿ 2 ದೇವಾಲಯಗಳಿದ್ದು, ಸದರಿ ದೇವಾಲಯಗಳ ಹತ್ತಿರ ಇರುವ ಪಾದರಕ್ಷೆ ಕಾಯುವ ಹರಾಜನ್ನು ಪ್ರತ್ಯೇಕವಾಗಿ ಕೂಗಬೇಕು. ಈ ಬಾರಿ ಶ್ರೀ ಯೋಗ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಬಳಿ ಇರುವ ಪಾದರಕ್ಷೆ ಕಾಯುವ ಹರಾಜನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಮೀಸಲಿಡಲಾಗಿದೆ. ಹರಾಜು ಹಕ್ಕಿನ ಗುತ್ತಿಗೆ ಪಡೆಯಲಿಚ್ಛಿಸುವವರು 5000 ರೂ.ಗಳ ಮುಂಗಡ ಠೇವಣಿ ಇಡಬೇಕು.       ಹರಾಜಿನಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಸಂಪೂರ್ಣ ವಿಳಾಸದ ದಾಖಲೆ, ಫೋಟೊ, ಐಡಿ ದಾಖಲೆ(ಆಧಾರ್ ಕಾರ್ಡ್, ಚುನಾವಣೆ ಕಾರ್ಡ್, ಆಹಾರ ಪಡಿತರ ಚೀಟಿ, ಇತ್ಯಾದಿ)ಯ ಛಾಯಾ…

Read More

ತುಮಕೂರು:       ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಉಪಯುಕ್ತವಾಗುವಂತಹ ತಂತ್ರಜ್ಞಾನದ ನೆರವನ್ನು ಕೋವಿಡ್-19ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೀಡುತ್ತಿರುವುದು ಉತ್ತಮ ಬೆಳವಣಿಗೆ, ಮಕ್ಕಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ತಿಳಿಸಿದರು.       ನಗರದ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯಲ್ಲಿ ಸ್ವಾದ ಫೌಂಡೇಶನ್ ಮತ್ತು ದೀಕ್ಷಾ ಸಂಸ್ಥೆ ಸಹಯೋಗದಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಿ ಮಾತನಾಡಿದ ಅವರು, ಹಳ್ಳಿ ಪ್ರದೇಶ ಮಕ್ಕಳು ಹಾಗೂ ನಗರ ಪ್ರದೇಶದ ಮಕ್ಕಳ ನಡುವಿನ ತಂತ್ರಜ್ಞಾನದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಡಿಜಿಟಲ್ ಇಂಡಿಯಾದಂತಹ ಕಾರ್ಯಕ್ರಮವನ್ನು ರೂಪಿಸಿದ್ದು, ಆನ್‍ಲೈನ್ ಕೋಚಿಂಗ್ ಸೇರಿದಂತೆ ಎಲ್ಲರಿಗೂ ಮಾಹಿತಿ ಮುಕ್ತವಾಗಿ ದೊರಕುವಂತಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಮಕ್ಕಳು ಟ್ಯಾಬ್ಲೆಟ್ ಅನ್ನು ಮನರಂಜನೆಗೆ ಬಳಸದೇ ಜ್ಞಾನವನ್ನು ವೃದ್ಧಿಸಿಕೊಳ್ಳಲು ಬಳಸಬೇಕು ಎಂದು ಹೇಳಿದರು.        ಕೋವಿಡ್-19 ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ ನಿಲ್ಲಬಾರದು ಎನ್ನುವ ಉದ್ದೇಶದಿಂದ ತಂತ್ರಜ್ಞಾನದ ಬಳಕೆ ಹೆಚ್ಚಳವಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯನ್ನು…

Read More

ತುಮಕೂರು:        ಚುನಾಯಿತ ಪ್ರತಿನಿಧಿ ಯೊಬ್ಬರಿಗೆ ಕಂದಾಯಾಧಿಕಾರಿ ಅವರ ಸದಸ್ಯ ಸ್ಥಾನದ ಅಧಿಕಾರವನ್ನೇ ಸೂಪರ್ ಸೀಡ್ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿ ದರ್ಪ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.      ಸಾಮಾನ್ಯವಾಗಿ ಕಂದಾಯಾಧಿಕಾರಿ ಹುದ್ದೆಯಲ್ಲಿರುವ ಜಗದೀಶ್‍ರವರು ಮೂಲತಃ ಕಂದಾಯಾಧಿಕಾರಿಯ ಹುದ್ದೆಯವರಲ್ಲ. ವ್ಯವಸ್ಥಾಪಕರ ಬಡ್ತಿ ಪಡೆದ ನಂತರ ಕಂದಾಯಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ವ್ಯಾಪ್ತಿ ಮೀರಿ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರನ್ನು ಬೆದರಿಸಿ ಕಿರುಕುಳ ನೀಡುತ್ತಿದ್ದದ್ದು ಸರ್ವೇ ಸಾಮಾನ್ಯವಾಗಿತ್ತು. ಕಾನೂನು ನಿಯಮಾನುಸಾರ ಆಗಬೇಕಿದ್ದ ಕೆಲಸಗಳಿಗೆ ಹಲವು ಕಾನೂನಿನ ತೊಡಕಿನ ನೆಪವೊಡ್ಡಿ ಹಣಕ್ಕಾಗಿ ಸರ್ಕಾರಿ ಕೆಲಸಗಳನ್ನು ವಿಳಂಬ ಮಾಡಿ ಹಣವನ್ನು ಪಡೆಯುತ್ತಿದ್ದರು ಎಂಬ ಆಪಾದನೆ ಹೆಚ್ಚಾಗಿತ್ತು. ಆದರೆ ತಾನು ಎಲ್ಲಾ ತಿಳಿದಿದ್ದೇನೆ ಎಂಬ ಮೇದಾವಿತನದಿಂದ ಸಾಮಾನ್ಯ ರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಈತ ಇದೀಗ ಪಾಲಿಕೆಯ ಸದಸ್ಯರೊಂದಿಗೆ ಅದೇ ರೀತಿ ಧರ್ಪ ತೋರಿ ಸಿಲುಕಿ ಹಾಕಿಕೊಂಡಿದ್ದಾರೆ.       ತುಮಕೂರು ಮಹಾನಗರಪಾಲಿಕೆಯಲ್ಲಿ ಕಂದಾಯಾಧಿಕಾರಿ ಕಾರ್ಪೋರೇಟ್ ಒಬ್ಬರಿಗೆ ನಿಮ್ಮ ಅಧಿಕಾರವನ್ನು ಸೂಪರ್‍ಸೀಡ್ ಮಾಡುತ್ತೇನೆ…

Read More