Author: News Desk Benkiyabale

ತುಮಕೂರು :        ತುಮಕೂರು ಜಿಲ್ಲಾ ಅಸಂಘಟಿತ ಕಾರ್ಮಿಕರ ಹೋರಟ ಸಮಿತಿ ಸಿ.ಐ.ಟಿಯು ವತಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದರು ರಾಷ್ಟ್ರೀಯ ಬೇಡಿಕೆ ದಿನ ಹಾಗೂ ಮುಷ್ಕರದ ನೋಟೀಸ್ ನೀಡುವ ಚಳುವಳಿ ಅಂಗವಾಗಿ ಪ್ರತಿಭಟಿಸಲಾಯಿತು.       ಚಳುವಳಿಯನ್ನು ಉದ್ದೇಶಿಸಿ ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಮಾತಾನಾಡಿ ಹೆಚ್ಚಿನ ಶ್ರೀಮಂತರು ಸರ್ಕಾರಕ್ಕೆ ತೆರಿಗೆ ವಂಚಿಸಲು ತಂತ್ರ ರೂಪಿಸುತ್ತಾರೆ ಆದರೆ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡಪಾಯಿ ಕಾರ್ಮಿಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರತಿ ಕ್ಷಣವು ಸರ್ಕಾರಕ್ಕೆ ತೆರಿಗೆಯನ್ನು ತುಂಬುತ್ತಾರೆ. ಆದರೆ ಇಂತಹ ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕ ಕಾಯ್ದೆಯಡಿ ದುಡಿಸಿ ಅವರಿಗೆ ನೀಡಬೇಕಾದ ಸವಲತ್ತುಗಳನ್ನು ನೀಡದೆ ವಂಚಿಸಲಾಗುತ್ತಿದೆ. ಆದ್ದರಿಂದ ಕಾರ್ಮಿಕ ವಿರೋಧಿ ಗುತ್ತಿಪದ್ದತಿ ರದ್ದು ಮಾಡಿ ಸಾಮಾಜಿಕ ಭದ್ರತಾ ಯೋಜನೆ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.       ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಸಿ.ಐ.ಟಿಯುನ ಉಪಾಧ್ಯಕ್ಷ ಬಿ.ಉಮೇಶ್ ಮಾತನಾಡಿ ಕೋವಿಡ್-19ರ ಸೊಂಕಿನ ದಾಳಿಯಿಂದ ಅಸಂಘಟಿತರ ಬದುಕು…

Read More

ಮಧುಗಿರಿ:         ಕೊರೊನಾ ಮಹಾಮಾರಿಯ ಹೊಡೆತಕ್ಕೆ ರಾಟೆ ಆಡಿಸುವವರ ಬದುಕು ಅಕ್ಷರಸಃ ನಲುಗಿ ಹೋಗಿದ್ದು, ಇತ್ತ ರಾಟೆಯೂ ಆರಂಭವಾಗದೆ, ಅತ್ತ ತಮ್ಮ ಸ್ವಂತ ಊರುಗಳಿಗೂ ಹೋಗಲು ಸಾಧ್ಯವಾಗದೆ ಸುಮಾರು 35 ಕಾರ್ಮಿಕರು 8 ಕ್ಕೂ ಹೆಚ್ಚು ಮಕ್ಕಳೊಂದಿಗೆ ರಾಟೆ ಸ್ಥಳದಲ್ಲೇ ಷೆಡ್ ನಿರ್ಮಿಸಿಕೊಂಡು ಜೀವನ ನಿರ್ವಹಣೆಗೆ ತತ್ತರಿಸುತ್ತಿದ್ದಾರೆ. ಜಾತ್ರೆಗೆಂದು ಬಂದವರ ಬದುಕು ತತ್ತರ:        ಪ್ರತೀ ವರ್ಷ ನಡೆಯುವ ಶ್ರೀ ದಂಡಿನ ಮಾರಮ್ಮ ಜಾತ್ರೆಯಲ್ಲಿ ರಾಟೆಯೇ ಭಕ್ತಾದಿಗಳಿಗೆ ಬಹು ದೊಡ್ಡ ಮನೋರಂಜನೆ. ಈ ಬಾರಿಯೂ ಎಂದಿನಂತೆ ಮಾರ್ಚ್ ತಿಂಗಳಲ್ಲಿ ಆರಂಭವಾದ ಜಾತ್ರೆಯಲ್ಲಿ ರಾಟೆ ಆಡಿಸಿದಲ್ಲಿ ನಾಲ್ಕು ಕಾಸು ನೋಡಬಹುದು ಎಂದು ರಾಜ್ಯದ ವಿವಿಧ ಊರುಗಳಿಂದ ಬಂದಿರುವ ಸುಮಾರು 35 ಕಾರ್ಮಿಕರಿಗೆ ಈ ಬಾರಿ ಕರೋನಾ ಬಹು ದೊಡ್ಡ ಹೊಡೆತ ನೀಡಿದ್ದು, ಜಾತ್ರೆ ಆರಂಭವಾದ 3 ದಿನಗಳಿಗೇ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ರಾಟೆ ನಿಲ್ಲಿಸಬೇಕಾಯಿತು. ಇದರಿಂದ ಕಾರ್ಮಿಕರ ಬದುಕು ಅಕ್ಷರಶಃ ನಲುಗಿ ಹೋಗಿದ್ದು, ಸುಮಾರು 8…

Read More

ಕೊರಟಗೆರೆ :        ಕೊರೊನ ಮಹಾಮಾರಿ ಮೊದಲು ನಗರ ಪ್ರದೇಶಗಳಲ್ಲಿ ಹೆಚ್ಚು ಕಾಣಿಸಿಕೊಂಡಿತ್ತು. ಈಗ ಗ್ರಾಮೀಣ ಭಾಗಕ್ಕೂ ಹರಡಿದೆ. ಹಳ್ಳಿಗಳಲ್ಲಿ ಸಾರ್ವಜನಿಕರು ಮಾಸ್ಕ್‍ಗಳನ್ನ ಧರಿಸದೇ ನಿರ್ಲಕ್ಷ್ಯ ಮಾಡುತ್ತಿರುವ ಕಾರಣಕ್ಕೆ ರೋಗ ಹರಡುತ್ತಿದೆ ಎಂದು ಹೊಳವನಹಳ್ಳಿ ಆಸ್ಪತ್ರೆಯ ವೈದ್ಯಡಾ.ಗಣೇಶ್ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಗ್ರಾಮದ ನಾಡಕಚೇರಿಗೆ ಬರುವ ಸಾರ್ವಜನಿಕರಿಗೆ ಕರೋನದ ಬಗ್ಗೆ ಜಾಗೃತಿ ಮೂಡಿಸಿ ಹಾಗೂ ತಪಾಸಣೆ ನಡೆಸಿ ಮಾತನಾಡಿದರು.       ಗ್ರಾಮೀಣ ಭಾಗದ ಮುಗ್ಧ ಜನರಿಗೆ ಕರೋನದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಪಂ, ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿಗಳು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳ ಜತೆ ಅನೇಕ ಇಲಾಖೆಗಳು ಸಹಕಾರ ನೀಡುತ್ತಿದ್ದು, ಸಾರ್ವಜನಿಕರು ನಿರ್ಲಕ್ಷ ಮಾಡದೆ ಪ್ರತಿಯೊಬ್ಬರು ಮಾಸ್ಕ್, ಸ್ಯಾನಿಟೈಸರ್ ಹಾಗೂ ಒಂದು ಗಂಟೆಗೊಮ್ಮೆ ಕೈ ತೊಳೆದು ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು ಎಂದರು.       ಹೊಳವನಹಳ್ಳಿ ನಾಡಕಚೇರಿಗೆ ಬರುವ ಸುಮಾರು 80 ಜನರಿಗೆ ತಪಾಸಣೆ ಮಾಡಲಾಗಿದೆ. ಈ…

Read More

ತುಮಕೂರು :        ಸಿರಾ ಉಪಚುನಾವಣೆಯ ಸಮರ ಅಂತ್ಯಗೊಂಡಿದ್ದು, ಅತಿರಥಮಹಾರಥರೆಲ್ಲಾ ರಾಜಕೀಯವಾಗಿ ಭೂಗತವಾಗಿದ್ದಾರೆ. ನೆಲೆಯೇ ಇಲ್ಲದಿದ್ದ ಬಿಜೆಪಿ ಶಿರಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರುವ ಮೂಲಕ ಕೇಸರಿ ಪತಾಕೆ ಹಾರಿಸಿದ್ದೇವೆ ಎಂಬ ಹೆಮ್ಮೆಯಲ್ಲಿದೆ.       ಈ ಕ್ಷೇತ್ರದಲ್ಲಿ 10 ನೇ ಬಾರಿ ಸ್ಪರ್ಧೆಗಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ರಾಜಕೀಯ ಚತುರತೆಯುಳ್ಳವರು, ಬಹಳಷ್ಟು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅಧಿಕಾರದ ಗದ್ದುಗೆ ಏರಿ ಸೋಲಿನ ರುಚಿ ಕಂಡು ತನ್ನ ಅಧಿಪತ್ಯದ ಹಿಡಿತ ಸಾಧಿಸಿದ್ದ ಹಿರಿಯ ಮುತ್ಸದ್ಧಿ ಟಿ.ಬಿ.ಜಯಚಂದ್ರ ಗೆಲುವಿನ ಸನಿಹದಲ್ಲಿದ್ದೇವೆ ಎಂಬ ಭ್ರಮೆಯಲ್ಲಿ ತೊಡಗಿದ್ದರು. ಆದರೆ, ಜಯಚಂದ್ರರವರ ಸೋಲು ಪೂರ್ವ ನಿಯೋಜಿತ ಎನ್ನುವ ರೀತಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರ ವರ್ತನೆಗಳು ಕಂಡುಬಂದದ್ದು ಚುನಾವಣೆಯ ಹಿಂದೆಯೇ ಗೋಚರವಾಗಿತ್ತಾದರೂ ಇದನ್ನು ಯಾರು ಗಣನೆಗೆ ತೆಗೆದುಕೊಳ್ಳಲಿಲ್ಲ.       ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಮತ್ತು ಮುನ್ನಡೆಯಲ್ಲಿದ್ದ ಕೆಲವು ನಾಯಕರು ಆತ್ಮಸಾಕ್ಷಿಯಾಗಿ ಜಯಚಂದ್ರ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವು ಎಂದು ಭಾವಿಸಿ ಚುನಾವಣೆಯನ್ನು…

Read More

 ತುಮಕೂರು:       ಶಿರಾ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆಯು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಮತ ಎಣಿಕೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.       ಇದಕ್ಕೂ ಮುನ್ನ ಬೆಳಿಗ್ಗೆ 7-30 ಗಂಟೆಗೆ ಚುನಾವಣೆ ವೀಕ್ಷಕರು ಹಾಗೂ ಅಭ್ಯರ್ಥಿಗಳು/ ರಾಜಕೀಯ ಪಕ್ಷಗಳ ಏಜೆಂಟರುಗಳ ಸಮಕ್ಷಮದಲ್ಲಿ ಮತ ಯಂತ್ರಗಳನ್ನು ಇರಿಸಿರುವ ಭದ್ರತಾ ಕೊಠಡಿಗಳನ್ನು ತೆರೆಯಲಾಗುವುದು.       ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿಂದು ನಡೆಯುವ ಚುನಾವಣಾ ಮತ ಎಣಿಕೆಯ ಅಂತಿಮ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಹಾಗೂ ಚುನಾವಣಾಧಿಕಾರಿ ಡಾ: ಕೆ. ನಂದಿನಿದೇವಿ ಪರಿಶೀಲಿಸಿದರು.       ಬೆಳಿಗ್ಗೆ 8 ಗಂಟೆಗೆ ಚುನಾವಣಾ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, 8 ಗಂಟೆಗೆ ಅಂಚೆ ಮತಪತ್ರ ಹಾಗೂ ಸರ್ವೀಸ್ ವೋಟ್‍ಗಳ ಎಣಿಕೆ ಆರಂಭವಾಗಲಿದೆ. 8-30ರಿಂದ ಇವಿಎಂ ಮತಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ. ಮತ ಯಂತ್ರಗಳ(ಇವಿಎಂ)…

Read More

ಮಧುಗಿರಿ:      ನಡುರಾತ್ರಿ ಕೊಟ್ಟಿಗೆಗೆ ಬೆಂಕಿಬಿದ್ದು, 2 ಜಾನುವಾರುಗಳು ಸಜೀವ ದಹನವಾಗಿರುವ ಘಟನೆ ತಾಲೂಕಿನ ವೀರಣ್ಣನ ತಾಂಡದಲ್ಲಿ ನಡೆದಿದ್ದು, ವಿಮೆ ಮಾಡಿಸದ ರೈತ ನಷ್ಟದಿಂದ ಕಂಗಾಲಾಗಿದ್ದಾನೆ.       ತಾಲೂಕಿನ ವೀರಣ್ಣನತಾಂಡದ ಹನು ಮಂತರಾಯಪ್ಪ ಎಂಬುವವರಿಗೆ ಸೇರಿದ ಮಿಶ್ರತಳಿ ಹಸು ಹಾಗೂ ಎತ್ತು ಬೆಂಕಿಗೆ ಆಹುತಿಯಾಗಿದ್ದು, ಸುಟ್ಟು ಕರಕಲಾಗಿವೆ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ. ಆದರೆ ರಾಸುಗಳಿಗೆ ವಿಮೆ ಮಾಡಿಸಿದ ಕಾರಣ ಹೆಚ್ಚಿನ ಪರಿಹಾರ ಸಿಗುವುದಿಲ್ಲ. ಆದ್ದರಿಂದ ತಾಲೂಕಿನಲ್ಲಿನ ಹೈನುಗಾರರು ತಮ್ಮ ರಾಸುಗಳಿಗೆ ಶೀಘ್ರವಾಗಿ ವಿಮೆ ಮಾಡಿಸಬೇಕು ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ನಾಗಭೂಷಣ್ ತಿಳಿಸಿದ್ದಾರೆ.       ತಾಲೂಕಿನಲ್ಲಿ ಈಗಾಗಲೇ 2019-20 ನೇ ಸಾಲಿನಲ್ಲಿ 154 ಡೇರಿಗಳಿಂದ 9700 ಜಾನುವಾರುಗಳಿಗೆ ವಿಮೆ ಮಾಡಿದ್ದು, 2020-21 ನೇ ಸಾಲಿನಲ್ಲಿ 63 ಡೇರಿಗಳಿಂದ 6 ಸಾವಿರ ರಾಸುಗಳಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ.ಜಾತಿ, ಪ.ಪಂಗಡದ ರೈತರಿಗೆ ಉಚಿತವಾಗಿ ವಿಮೆ ಮಾಡಿಸಬಹುದಾಗಿದ್ದು, ನೇರವಾಗಿ ಡೇರಿ ಕಾರ್ಯದರ್ಶಿಗಳನ್ನು ಸಂಪರ್ಕಿಸಿ…

Read More

ತುಮಕೂರು:        ಶಿರಾ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆಯು ನಾಳೆ((ನ.10) ನಡೆಯಲಿದ್ದು, ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಚುನಾವಣಾಧಿಕಾರಿ ಡಾ:ಕೆ.ನಂದಿನಿ ದೇವಿ ತಿಳಿಸಿದ್ದಾರೆ.       ನಗರದ ಪಾಲಿಟೆಕ್ನಿಕ್ ಕಾಲೇಜಿನ ಚುನಾವಣಾ ಮತ ಎಣಿಕೆ ನಡೆಸಲು ಆಗುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ನವೆಂಬರ್ 10ರಂದು ಬೆಳಿಗ್ಗೆ 8 ಗಂಟೆಗೆ ಚುನಾವಣಾ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಮತ ಎಣಿಕೆ ಯಂತ್ರಗಳ ಮತ ಎಣಿಕೆಗೆ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಒಬ್ಬ ಎಣಿಕೆ ಸೂಪರ್‍ವೈಸರ್, ಒಬ್ಬ ಎಣಿಕೆ ಸಹಾಯಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್‍ನ್ನು ನೇಮಕ ಮಾಡಲಾಗಿದೆ. ಅಂಚೆ ಮತಯಂತ್ರ ಹಾಗೂ ಸರ್ವೀಸ್ ವೋಟ್‍ಗಳ ಎಣಿಕೆಯು 4 ಟೇಬಲ್‍ಗಳಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.       ಸುಮಾರು 24 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಟೇಬಲ್‍ಗೆ ಒಬ್ಬ ಅಭ್ಯರ್ಥಿಗೆ ಒಬ್ಬ ಏಜೆಂಟ್‍ನಂತೆ ಹಾಜರಿರಲು ಅವಕಾಶ…

Read More

ತುಮಕೂರು :        ತುಮಕೂರು ನಗರದ ಬಿ.ಎಚ್.ರಸ್ತೆಯಲ್ಲಿ ತೋಟಗಾರಿಕೆ ಇಲಾಖೆ ಎದುರು ಭಾರತೀಯ ಭೋವಿ ಪರಿಷತ್(ಓ.ಸಿ.ಸಿ.ಐ) ತುಮಕೂರು ಜಿಲ್ಲಾ ಕಛೇರಿಯನ್ನು ಮಾಜಿ ಸಚಿವರು, ಭಾರತೀಯ ಭೋವಿ ಪರಿಷತ್‍ನ ರಾಷ್ಟ್ರೀಯ ಗೌರವಾಧ್ಯಕ್ಷರು, ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗು ಕೋರ್ ಕಮಿಟಿ ಸದಸ್ಯರು, ಶಾಸಕರಾದ ಶ್ರೀ ಅರವಿಂದ ಲಿಂಬಾವಳಿ ರವರು ಉದ್ಘಾಟಿಸಿದರು.       ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿರುವ ಸಮಾಜದ ಜನಸಂಖ್ಯೆ, ಅವರ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸಂಘಟನೆ ಶ್ರಮಿಸಬೇಕು ಎಂದರು. ಭೋವಿ ಸಮಾಜ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿದ್ದು. ಕಲ್ಲು ಕೆಲಸ, ಕಟ್ಟಡ ಕಟ್ಟುವ ಅನೇಕ ಕುಲಕಸುಬುಗಳನ್ನೆ ನಂಬಿರುವ ಶ್ರಮಿಕರೇ ಹೆಚ್ಚಾಗಿರುವ ಸಮಾಜ ಭೋವಿ ಸಮಾಜ ಎಂದರು. ಕಲ್ಲು ಗಣಿಗಾರಿಕೆಯಲ್ಲಿ ಕುಲಕಸುಬನ್ನೆ ನಂಬಿರುವ ಭೋವಿ ಸಮಾಜಕ್ಕೆ ಕಲ್ಲುಗಣಿಗಾರಿಕೆಯಲ್ಲಿ ಮೀಸಲಾತಿ ನೀಡಬೇಕೆಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ದಿವ್ಯಾಸಾನಿಧ್ಯ ವಹಿಸಿ ಮಾತನೀಡದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ…

Read More

ಕೊರಟಗೆರೆ :       ಸ್ನೇಹಿತರ ಜೊತೆ ಆಟವಾಡುತ್ತ ಈಜಾಡಲು ಅಕ್ಕಿರಾಂಪುರ ಕೆರೆಗೆ ತೆರಳಿದ ಯುವಕರಿಬ್ಬರು ಕೊರಟಗೆರೆ ಪಿಡ್ಲ್ಯೂಡಿ ಇಲಾಖೆಯ ಗುತ್ತಿಗೆದಾರ ಕೆರೆಏರಿ ಕಾಮಗಾರಿಗೆ ಪರವಾನಗಿ ಇಲ್ಲದೇ ತೆಗೆದಿರುವ 60 ಅಡಿ ಆಳದ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.        ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರದ ಕೆರೆಯಲ್ಲಿ ಹೊಸಹಳ್ಳಿ ಗ್ರಾಮದ ರಮೇಶನ ಮಗನಾದ ಸತೀಶ(15) ಮತ್ತು ಹನುಮಂತರಾಯಪ್ಪನ ಮಗನಾದ ನಂದನ ಕುಮಾರ್(16) ಈಜಾಡಲು ಬರದೆ ಕೆರೆಯಲ್ಲಿನ ಆಳವಾದ ಗುಂಡಿಯಲ್ಲಿ ಮುಳುಗಿ ಮೃತಪಟ್ಟ ದುರ್ಧೈವಿ ಆಗಿದ್ದಾರೆ.       ಹೊಸಹಳ್ಳಿ ಗ್ರಾಮದ ಸತೀಶ, ನಂದನ, ಆಕಾಶ್, ಸಂತೋಷ, ಮಧುಸೂದನ ಎಂಬ ಐದು ಜನ ಯುವಕರು ಈಜಾಡಲು ತೆರಳಿದ್ದಾರೆ. ಸತೀಶ ಆಳವಾದ ನೀರಿನಲ್ಲಿ ಈಜಾಡಲು ಹೋಗಿ ಮುಳುಗಿರುವ ವೇಳೆ ಕಾಪಾಡಲು ಪ್ರಯತ್ನಿಸಿ ನಂದನ ಕೂಡ ದಡದಿಂದ ಜಾರಿ ಮುಳುಗಿದ್ದಾನೆ. ಇಬ್ಬರ ಕೈಹಿಡಿಯಲು ತೆರಳುತ್ತಿದ್ದ ಸಂತೋಷನನ್ನು ಆಕಾಶ್ ಹಿಂದಕ್ಕೆ ಎಳೆದು ತಮ್ಮನ ಪ್ರಾಣವನ್ನು ರಕ್ಷಣೆ…

Read More

ಮಧುಗಿರಿ :          ಕುಂಚಿಟಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ಕುಂಚಿಟಿಗ ಜನಾಂಗವನ್ನು ಓಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಹನುಮಂತನಾಥಸ್ವಾಮಿ ನೇತೃತ್ವದಲ್ಲಿ ರಾಜ್ಯ ಕುಂಚಿಟಿಗ ಸಂಘದ ಪದಾಧಿಕಾರಿಗಳು ಹಾಗೂ ಶಿವಮೊಗ್ಗ, ಮೈಸೂರು, ತುಮಕೂರು ಸಂಘದ ಪದಾಧಿಕಾರಿಗಳು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರನ್ನು ಬೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.        ರಾಜ್ಯದಲ್ಲಿ ಸುಮಾರು 25 ಲಕ್ಷ ಕುಂಚಿಟಿಗ ಜನಾಂಗವಿದ್ದು, ತುಮಕೂರು ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ರಾಮನಗರ, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ 18 ವಿಧಾನ ಸಭಾ ಕ್ಷೇತ್ರಗಳಲ್ಲಿ ಕುಂಚಿಟಿಗ ಜನಾಂಗ ಪ್ರಭಲ್ಯ ಹೊಂದಿದ್ದು, ಕೆಲವು ವಿಧಾನ ಸಭಾ ಕ್ಷೇತ್ರಗಳಲ್ಲಿ ಕುಂಚಿಟಿಗ ಜನಾಂಗದ ಮತಗಳು ನಿರ್ಣಾಯಕ ಮತಗಳಾಗಿವೆ ಆದರೆ ರಾಜಕೀಯ ಪಕ್ಷಗಳು ಸಮಾಜವನ್ನು ಚುನಾವಣಾ ಸಮಯದಲ್ಲಿ ಓಟ್ ಬ್ಯಾಂಕಿಗೋಸ್ಕರ ಬಳಸಿಕೊಳ್ಳುತ್ತಿದ್ದೆ ಮತ್ತು ಚುನಾವಣಾ ಸಮಯದಲ್ಲಿ ಮಾತ್ರ ನೆನಪಿಗೆ ಬರುತ್ತದೆ. ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಹಿಂದುಳಿದ…

Read More