ತುಮಕೂರು: ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ವಿಶೇಷ ಮಹತ್ವವಿದೆ. ದೇವಸ್ಥಾನಗಳಲ್ಲಿ ಮನುಷ್ಯ ಶಾಂತಿ, ನೆಮ್ಮದಿ ಪಡೆಯಬಹುದಾಗಿದೆ. ನಮ್ಮ ಇತಿಹಾಸ ಪ್ರಸಿದ್ಧ ದೇವಸ್ಥಾನಗಳನ್ನು ರಕ್ಷಿಸಿ ಜೀಣೋದ್ಧಾರ ಮಾಡಬೇಕು ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ನಗರದ ಸಮೀಪದ ಗೂಳೂರಿನ ಉಮಾಮಹೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸ್ವಾಮೀಜಿ ಅಲ್ಲಿ ಪೂಜೆ ಸಲ್ಲಿಸಿ ಭಕ್ತರಿಂದ ಪಾದಪೂಜೆ ಸ್ವೀಕರಿಸಿ ಮಾತನಾಡಿ, ಒಂದು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದಿನ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೇಷ್ಠ ಕೆತ್ತನೆಯ ಅಪರೂಪದ ಮೂರ್ತಿಗಳನ್ನು ಕಾಣಬಹುದು. ಗೂಳೂರಿನ ಗಣಪತಿ, ಕೈದಾಳದ ಚೆನ್ನಕೇಶವ ದೇವಸ್ಥಾನಗಳನ್ನು ಒಳಗೊಂಡ ಪ್ರಸಿದ್ಧ ಕ್ಷೇತ್ರ ಇದು. ಇಲ್ಲಿನ ಮಠ ಬೇಲಿಮಠಕ್ಕೆ ಸೇರಿದ್ದಾಗಿ ಹೇಳಲಾಗಿದೆ. ಗದ್ದಿಗೆಗಳು ಮಠದ ಪರಂಪರೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು. ನಮ್ಮ ಪೂರ್ವಜನರು ನಿರ್ಮಿಸಿರುವ ದೇವಸ್ಥಾನಗಳು ಅಳಿದುಹೋಗದಂತೆ ನಾವು ರಕ್ಷಣೆ ಮಾಡಬೇಕು. ಶಿಥಿಲಗೊಂಡ ದೇವಸ್ಥಾನವನ್ನು ಜೀಣೋದ್ಧಾರ ಮಾಡಿ, ಅಗತ್ಯ ಅಭಿವೃದ್ಧಿ ಕೆಲಸ ಮಾಡಲು ಉದ್ಯಮಿಗಳಾದ ಸ್ಫೂರ್ತಿ ಚಿದಾನಂದ್ ಹಾಗೂ ಕೃಷ್ಣಪ್ಪ ಅವರು ಆಸಕ್ತರಾಗಿರುವುದು ಶ್ಲಾಘನೀಯ. ಇತರ ಭಕ್ತರೂ ಈ…
Author: News Desk Benkiyabale
ತುಮಕೂರು: ಜಿಲ್ಲೆಯಲ್ಲಿ ೪೮೩೫ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಬೆಳೆಯುತ್ತಿದ್ದು, ಸಂಬ0ಧಿಸಿದ ರೈತರೊಂದಿಗೆ ಹತ್ತಿ ಬೀಜ ಮಾರಾಟ ಕಂಪನಿಗಳು ಆಗಸ್ಟ್ ೩ರೊಳಗೆ ಒಡಂಬಡಿಕೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ರೈತರು ಹಾಗೂ ಹತ್ತಿ ಬೀಜ ಮಾರಾಟ ಕಂಪನಿಗಳ ಏಜೆಂಟರೊ0ದಿಗೆ ಸಭೆ ನಡೆಸಿದ ಅವರು, ಶಿರಾ, ಮಧುಗಿರಿ, ಪಾವಗಡ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕೆಲವು ಖಾಸಗಿ ಬೀಜ ಮಾರಾಟ ಸಂಸ್ಥೆಗಳು ಹತ್ತಿ ಬೀಜಗಳನ್ನು ರೈತರಿಗೆ ನೀಡಿ ಕಾನೂನು ಬಾಹಿರವಾಗಿ ಬೀಜೋತ್ಪಾದನೆಯನ್ನು ಮಾಡಿಕೊಂಡು ಹಣ ನೀಡದೆ ರೈತರಿಗೆ ವಂಚಿಸಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಹತ್ತಿ ಬೀಜ ಮಾರಾಟ ಸಂಸ್ಥೆಗಳು ರೈತರೊಂದಿಗೆ ಕಡ್ಡಾಯವಾಗಿ ಒಪ್ಪಂದ ಮಾಡಿಕೊಳ್ಳಬೇಕೆಂದು ಅವರು ಬೀಜ ಕಂಪನಿಗಳಿಗೆ ಸೂಚಿಸಿದರು. ಬೀಜ ಮಾರಾಟ ಕಂಪನಿಗಳು ಹತ್ತಿ ಬೆಳೆಗಾರರಿಗೆ ಒಡಂಬಡಿಕೆಯAತೆ ನೇರ ಬ್ಯಾಂಕ್ ಖಾತೆಗೆ ಹಣ ಪಾವತಿಸಬೇಕು. ಅಲ್ಲದೆ ರೈತರಿಂದ ಹತ್ತಿ ಬೀಜ ಖರೀದಿಸಿದ ನಂತರ ಬೀಜ ಅಧಿನಿಯಮದನ್ವಯ ೩ ತಿಂಗಳ ಅವಧಿಯಲ್ಲೇ ಜಿಓಟಿ ಪರೀಕ್ಷೆಗೆ…
ತುಮಕೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ-೨೦೨೫ನ್ನು ವಿರೋಧಿಸಿ, ಮಸೂದೆಯನ್ನು ಹಿಂಪಡೆಯುವ0ತೆ ಆಗ್ರಹಿಸಿ ಶುಕ್ರವಾರ ನಗರದ ಬಾರ್ಲೈನ್ ರಸ್ತೆಯಲ್ಲಿರುವ ಮೆಕ್ಕಾ ಮಸೀದಿ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ತುಮಕೂರು ನಗರದ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು. ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯ ನಂತರ ಮೆಕ್ಕಾ ಮಸೀದಿಯ ಮುತ್ತುವಲ್ಲಿಯವರ ನೇತೃತೃದಲ್ಲಿ ನೂರಾರು ಮುಸ್ಲಿಂ ಭಾಂಧವರು ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸುವ ಮೂಲಕ ಕೇಂದ್ರ ಸರಕಾರ ಜಾರಿಗೆ ತಂದಿರುವ, ಮುಸ್ಲಿಂ ಭಾಂಧವರಿಗೆ ಕಂಟಕವಾದ ವಕ್ಪ್ ಮಸೂಧೆಯನ್ನು ಹಿಂಪಡೆಯಬೇಕೆAದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ತಾಜುದ್ದೀನ್ ಷರೀಫ್, ಕರ್ನಾಟಕ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ನ ನಿರ್ದೇಶನದಂತೆ ರಾಜ್ಯದ ಪ್ರತಿ ಹಳ್ಳಿಗಳಲ್ಲಿಯೂ ಶುಕ್ರವಾರದ ನಮಾಜ ನಂತರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆ ಮುಸ್ಲಿಂ ವಿರೋಧಿ ಎನ್ನುವುದರ ಜೊತೆಗೆ, ಸಂವಿಧಾನ ವಿರೋಧಿಯೂ ಆಗಿದೆ.ಭಾರತೀಯ ಸಂವಿಧಾನದಲ್ಲಿಯೇ ಅವರವರ ಧರ್ಮ ಪಾಲನೆಗೆ ಅವಕಾಶವಿದೆ. ಅದು ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌಧ್ದ, ಪಾರ್ಸಿ…
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ೨೨ಕೆರೆಗಳಿಗೆ ಮಂಜೂರಾಗಿರುವ ಹೇಮಾವತಿ ಕುಡಿಯುವ ನೀರಿನ ಯೋಜನೆಗೆ ಚಾನಲ್ನ ರಕ್ಷಣೆಗಾಗಿ ಕಟ್ ಆಂಡ್ ಕವರ್ ಮಾಡಲು ಅಗತ್ಯವಿರುವಂತಹ ೧೫೦ಕೋಟಿ ಅನುದಾನವನ್ನು ನೀಡುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಕೇಂದ್ರ ಸಚಿವ ವಿ.ಸೋಮಣ್ಣನವರಲ್ಲಿ ಮನವಿ ಮಾಡಿದರು. ತಾಲ್ಲೂಕಿನ ಬಿ.ಪಾಳ್ಯದ ಶ್ರೀಸಿದ್ದರಾಮೇಶ್ವರ ವಾಕ್ಮತ್ತು ಶ್ರವಣದೋಷ ಮಕ್ಕಳವಸತಿ ಶಾಲೆಗೆ ಗುರುವಾರ ಬೇಟಿನೀಡಿದ ಕೇಂದ್ರಸಚಿವ ವಿ.ಸೋಮಣ್ಣ ಇವರನ್ನು ಬೇಟಿ ಮಾಡಿದ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡುವಂತೆ ಹಾಗೂ ಅಗತ್ಯವಿರುವಂತಹ ಅನುದಾನವನ್ನು ನೀಡುವ ಮೂಲಕ ಸಹಕಾರ ನೀಡುವಂತೆ ಹಾಗೂ ಇನ್ನು ಅಭಿವೃದ್ದಿ ಕಾರ್ಯಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರ ಮನವಿಯನ್ನು ಆಲಿಸಿದ ಕೇಂದ್ರ ಸಚಿವ ವಿ. ಸೋಮಣ್ಣ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಭಿವೃದ್ದಿಗೆ ಅಗತ್ಯವಿರುವಂತಹ ನೆರವನ್ನು ನೀಡುವುದಾಗಿ ಭರವಸೆ ನೀಡಿದ ಅವರು ಈ ವಿಕಲಚೇತನರ ವಸತಿ ಶಾಲೆಯ ಸರ್ವತೋಮುಖ ಅಭಿವೃದ್ದಿ ಮೂಲಭೂತ ಸೌಲಭ್ಯಗಳಿಗೆ ೫೦ಲಕ್ಷ ಅನುದಾನವನ್ನು ನೀಡುವುದಾಗಿ ತಿಳಿಸಿದ ಅವರು . ತೆಂಗು ಹಾಗೂ ಅಡಿಕೆಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜೆಯಡಿ…
ತುಮಕೂರು: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಕುಂದು ಕೊರತೆ ಸಭೆಗಳನ್ನು ಕಡ್ಡಾ ಯವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಹಶೀಲ್ದಾರ್ಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ೨೦೨೫ನೇ ವರ್ಷದ ೨ನೇ ತ್ರೆöÊಮಾಸಿಕ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ತಾಲ್ಲೂಕು ಮಟ್ಟದಲ್ಲಿ ಈ ಸಭೆಗಳನ್ನು ನಿರಂತರವಾಗಿ ನಡೆಸುವುದು ಕಡ್ಡಾಯವಾಗಿದ್ದು, ಸಮಸ್ಯೆಗಳನ್ನು ತಹಶೀಲ್ದಾರ್ಗಳ ಹಂತದಲ್ಲಿಯೇ ಬಗೆಹರಿಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಇದುವರೆಗೆ ಎಸ್ಸಿ/ಎಸ್ಟಿ ಸಮು ದಾಯಕ್ಕೆ ಸಂಬ0ಧಿಸಿದ0ತೆ ೪೦೩ ದೌರ್ಜನ್ಯ ಮತ್ತು ೨೦ ಪೋಕ್ಸೋ ಪ್ರಕರಣಗಳು ಬಾಕಿಯಿದ್ದು, ಇವುಗಳನ್ನು ಶೀಘ್ರದಲ್ಲಿ ಇತ್ಯ ರ್ಥಪಡಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೋಕ್ಸೋ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು. ಈಗಾಗಲೇ ೩೩೦…
ತುಮಕೂರು: ಜಿಲ್ಲೆಯ ಜನರ ಜೀವನಾಡಿ ಯಾಗಿರುವ ಹೇಮಾವತಿ ನೀರನ್ನು ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮೂಲಕ ಕೊಂಡೊಯ್ಯುವ ಯೋಜನೆ ಅವೈಜ್ಞಾನಿಕವಾಗಿದೆ. ಈ ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿ ಸಬೇಕೆಂಬ ನಮ್ಮ ಒತ್ತಾಯಕ್ಕೆ ಸರ್ಕಾರ ಸಕಾರಾ ತ್ಮಕವಾಗಿ ಸ್ಪಂದಿಸಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಇಂದಿಲ್ಲಿ ತಿಳಿಸಿದರು. ತುಮಕೂರು ಜಿಲ್ಲೆಯ ಪಾಲಿನ ಹೇಮಾವತಿ ನೀರಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕುಣಿಗಲ್ ಪಾಲಿನ ೩.೦೪ ಟಿಎಂಸಿ ನೀರನ್ನು ಗುರುತ್ವಾಕರ್ಷಣೆ ಮೂಲಕ ಕೊಂಡೊಯ್ಯಲು ನಮ್ಮ ಅಭ್ಯಂತರವಿಲ್ಲ. ಆ ದರೆ ಪೈಪ್ಲೈನ್ ಮೂಲಕ ಅವೈಜ್ಞಾನಿಕವಾಗಿ ಕೊಂಡೊಯ್ಯಬಾರದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಯಿತು. ನಮ್ಮಗಳ ಬೇಡಿಕೆ ಸಂಬAಧವೂ ನೀರಾವರಿ ಸಚಿವರು ಸಕಾರಾತ್ಮಕ ಸ್ಪಂದಿಸಿದ್ದಾರೆ ಎಂದರು. ನಮ್ಮ ಭಾಗದ ರೈತರು…
ಚಿಕ್ಕನಾಯಕನಹಳ್ಳಿ: ಸಹಕಾರ ನಾಯಕತ್ವದ ಹೆಜ್ಜೆಯ ನಡೆಯನ್ನು ಇನ್ನರ್ ವಿಲ್ ಸಂಸ್ಥೆ ನೀಡಿತು ಈ ಮೂಲಕ ಪರಸ್ಪರ ಸೇವಾ ಸಹಕಾರ ನೀಡುವ ಮೂಲಕ ಮನಸುಗಳ ಸಮ್ಮಿಲನ ಕೇಂದ್ರವಾಗಿದೆ ಎಂದು ಇನ್ನರ್ವಿಲ್ ಸಂಸ್ಥೆಯ ಅಧ್ಯಕ್ಷ ಭವಾನಿ ಜಯರಾಮ್ ಹೇಳಿದರು ರೋಟರಿ ಬಾಲಭವನದ ಕನ್ವೆನ್ಷನ್ ಹಾಲ್ ನಲ್ಲಿ ಇನ್ನರ್ವಿಲ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ನೂತನ ಅಧ್ಯಕ್ಷರ ಪದಾಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಈ ಸಂಸ್ಥೆ ಸುಮಾರು ೪೪ ವರ್ಷಗಳನ್ನು ದಾಟಿದ್ದು ನಿರಂತರ ಸೇವೆಗಳನ್ನು ಮಾಡುವ ಮೂಲಕ ರೋಟರಿ ಸಂಸ್ಥೆಯ ಸಹಭಾಗತ್ವ ಸಂಸ್ಥೆಯಾಗಿ ನಿರಂತರವಾಗಿದ್ದು ಹಿರಿಯರ ಮಾರ್ಗದರ್ಶನದಲ್ಲಿ ನನ್ನ ಅವಧಿಯಲ್ಲಿ ಸಾಕಷ್ಟು ಜನಪರ ಸೇವಾ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿರಲು ನನ್ನ ಸಹಪಾಠಿಗಳ ಸಹಕಾರತ್ವವೇ ಕಾರಣವಾಗಿದೆ ಎಂದರು ಸAಘದ ಕಾರ್ಯದರ್ಶಿ ಶ್ರೀ ಲಕ್ಷ್ಮಿ ಮಾತನಾ ಡುತ್ತಾ ಸೇವಾ ಯೋಜನೆಯ ವರದಿಯನ್ನು ನೀಡಿದರು. ನೂತನ ಸಂಘದ ಅಧ್ಯಕ್ಷರಾಗಿ ಶಶಿಕಲಾ ಜೈದೇವ್ ಅಧಿಕಾರ ಸ್ವೀಕರಿಸಿ ಮಾತನಾಡುತ್ತಾ ನಮ್ಮ ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದ್ದು ಎಲ್ಲರ ಸೇವೆ ಸಹಕಾರ ಪಡೆಯುವ ಮೂಲಕ…
ಶಿರಾ: ಪ್ರಪ0ಚದಲ್ಲಿ ಹಿರಿಯ ನಾಗರೀಕರ ಸಂತತಿ ಹೆಚ್ಚಾಗುತ್ತಿದೆ ನಮ್ಮ ಭಾರತ ದೇಶ ಒಂದರಲ್ಲೇ ೨೨ ಕೋಟಿ ಹಿರಿಯ ನಾಗರೀಕರಿದ್ದಾರೆ, ಆದರೆ ಅವರಲ್ಲಿ ಎರಡು ಕೋಟಿ ಜನಕ್ಕೆ ಮಾತ್ರ ನಿವೃತ್ತಿ ವೇತನ ಬರುತ್ತಿದೆ. ನಮ್ಮ ರಾಜ್ಯದಲ್ಲಿರುವ ಹಿರಿಯ ನಾಗರಿಕರ ಆರೋಗ್ಯ, ಭದ್ರತೆ , ಕಾನೂನು ಸೌಲಭ್ಯ ಹಾಗೂ ಇತರೆ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಮೂರುವರೆ ವರ್ಷದ ಕೆಳಗೆ ವಯಾ ವಿಕಾಸ್ ಸಂಸ್ಥೆ ಪ್ರಾರಂಭಿಸಲಾಯಿತು. ನೀವೆಲ್ಲರೂ ಈ ಸಂಸ್ಥೆಯ ಸದಸ್ಯತ್ವ ಪಡೆದುಕೊಳ್ಳಿ ಎಂದು ವಯಾ ವಿಕಾಸ್ ಸಂಸ್ಥೆಯ ಮುಖ್ಯ ಸಲಹೆಗಾರ ಎಚ್. ಶ್ರೀನಿವಾಸ್ ಹಿರಿಯ ನಾಗರಿಕರಿಗೆ ಕರೆ ನೀಡಿದರು. ಗುರುವಾರದಂದು ಶಿರಾ ನಗರದ ನಿವೃತ್ತಿ ನೌಕರರ ಭವನದಲ್ಲಿ ವಯಾ ವಿಕಾಸ್ ಸಂಸ್ಥೆ, ಡಿಮನ್ಸಿಯಾ ಇಂಡಿಯಾ ಅಲಿಯನ್ಸ್ ಹಾಗೂ ಶಿರಾ ತಾಲೂಕಿನ ನೌಕರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಆಯುಷ್ಮಾನ್ ಹೆಲ್ತ್ ಕಾರ್ಡ್ ವಿತರಣೆ ಹಾಗೂ ಸ್ಪರ್ಶ ಹಾಸ್ಪಿಟಲ್ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಂತ ಈಗಾಗಲೇ ಒಂದು ಲಕ್ಷದ ಇಪ್ಪತ್ತೆöÊದು…
ತುಮಕೂರು: ಶ್ರೀ ಸಿದ್ಧಾರ್ಥ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆಯೋಜಿಸಿರುವಂತಹ ಕ್ಯಾಂಪಸ್ ನೇಮಕಾತಿ ಡ್ರೆöÊವ್ ಎಂಬ ಉದ್ಯೋಗ ಮೇಳವನ್ನು ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಳ್ಳಬೇಕು, ಸಿಕ್ಕ ಅವಕಾಶವನ್ನು ಸದುಪ ಯೋಗಪಡಿಸಿಕೊಳ್ಳಿ ಎಂದು ಶ್ರೀ ಸಿದ್ಧಾರ್ಥ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಟಿ. ಗೋವಿಂದರಾಜು ತಿಳಿಸಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿ ದ್ಯಾಲಯದ ಆವರಣದಲ್ಲಿನ ಎಸ್ಎಸ್ಐಟಿಐ ಕೇಂದ್ರದಲ್ಲಿ ಆಯೋಜಿಸಿದ್ದಂತಹ ಕ್ಯಾಂಪಸ್ ನೇಮಕಾತಿ ಡ್ರೆöÊವ್ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿಯು ಕ್ಯಾಂಪಸ್ ನೇಮಕಾತಿ ಡ್ರೆöÊವ್ ನಲ್ಲಿ ಭಾಗವಹಿಸಿ ಉದ್ಯೋಗವನ್ನು ಪಡೆದು ಕೊಂಡು ಉತ್ತಮವಾದ ವೃತ್ತಿ ಜೀವನವನ್ನು ನಿಮ್ಮದಾಗಿಸಿಕೊಳ್ಳಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಉದ್ಯೋಗವನ್ನು ಪಡೆದುಕೊಳ್ಳಬೇಕು ಎನ್ನುವುದೇ ಈ ಕ್ಯಾಂಪಸ್ ನೇಮಕಾತಿ ಡ್ರೆöÊವ್ನ ಉದ್ದೇಶ. ಪ್ರತಿಯೊಬ್ಬ ವಿದ್ಯಾರ್ಥಿಯು ಉದ್ಯೋಗವನ್ನು ಪಡೆದುಕೊಂಡರೆ ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಂತಾಗುತ್ತದೆ ಎಂದು ಹೇಳಿದರು. ನಂತರ ಮಾತನಾಡಿದ ನ್ಯಾಶ್ ಇಂಡಸ್ಟಿçÃಸ್ ಕಂಪನಿಯ ಶ್ರೀನಿವಾಸ್, ಪ್ರಗತಿ ಎಚ್.ಆರ್ ಸರ್ವೀಸಸ್ ಕಂಪನಿಯ ವೆಂಕಟೇಶ್, ಹಾಗೂ ವಾಹಿನಿ ಪೈಪ್ಸ್ ಪ್ರೆöÊವೇಟ್ ಲಿಮಿಟೆಡ್ ಕಂಪನಿಯ ಗೋವಿಂದರಾಜು…
ಹುಳಿಯಾರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆಂಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಾದುಹೋಗಲಿರುವ ಭಾರತಮಾಲಾ ಪರಿಯೋಜನೆಯಡಿ ೪-ಪ ಥಗಳ ಪ್ರವೇಶ-ನಿಯಂತ್ರಿತ ಗ್ರೀನ್ಫೀಲ್ಡ್ ಹೆದ್ದಾರಿ ಯೋಜನೆ (ಇಸಿ-೨೦) ಕುರಿತು ಇಂದು ಸಂಸದರಾದ ವಿ. ಸೋಮಣ್ಣನವರು ಕೆಂಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಹೊನ್ನಪ್ಪ ಅವರು ಸಂಸದರಿಗೆ ಮನವಿಯೊಂದನ್ನು ಸಲ್ಲಿಸಿದರು. ಈ ಹೆದ್ದಾರಿಯು ಹಾಸನ, ಹುಳಿಯಾರು ಮತ್ತು ಹಿರಿಯೂರುಗಳನ್ನು ಸಂಪರ್ಕಿಸಲಿದೆ. ಮನವಿಯ ಪ್ರಕಾರ, ಹೊಸ ರಾಷ್ಟಿçÃಯ ಹೆದ್ದಾರಿ (ಇಸಿ-೨೦) ಕೆಂಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಲಕ ಹಾದು ಹೋಗುತ್ತಿದ್ದು, ಸುಮಾರು ೪೦ ರೈತರ ಜಮೀನುಗಳು ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಆದರೆ, ರಾಷ್ಟಿçÃಯ ಹೆದ್ದಾರಿ ಅಧಿಕಾರಿಗಳು ರೈತರಿಗೆ ಯಾವುದೇ ರೀತಿಯ ಜಮೀನು ಗುರುತಿಸುವಿಕೆ ಮಾಹಿತಿ ನೀಡಿಲ್ಲ. ಭೂ ಸ್ವಾಧೀನಪಡಿಸಿಕೊಳ್ಳಲು ನಾಲ್ಕು ವರ್ಷಗಳ ಹಿಂದೇ ನೋಟೀಸ್ ನೀಡಿದ್ದು ಬಿಟ್ಟರೆ ಮತ್ತೇನು ಪ್ರಗತಿಯಾಯಾಗಿಲ್ಲ. ಗೂಗಲ್ ನಕ್ಷೆಯಲ್ಲಿ ರಸ್ತೆ ಮಾರ್ಗವನ್ನು ಸೃಷ್ಟಿಸಿದ್ದು ಹೊರತುಪಡಿಸಿದರೆ, ಇದುವರೆಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಸರಿಯಾದ ಗಡಿ ಗುರುತಿಸದೆ ಸರ್ವೆ ನಂಬರ್ಗಳಿಗೆ…











