Author: News Desk Benkiyabale

ತುಮಕೂರು ಎಐಸಿಸಿ ನಾಯಕರಾದ ಶ್ರೀ ರಾಹುಲ್ ಗಾಂಧಿಯವರು ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆಯು ಅಕ್ಟೋಬರ್-08 ರಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರಕ್ಕೆ ಆಗಮಿಸಲಿದ್ದು, ಈ ನಿಮಿತ್ತ ಅಕ್ಟೋಬರ್-08 ರಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಮುಖಂಡರು ಕಾರ್ಯಕರ್ತರು ಈ ಯಾತ್ರೆಯಲ್ಲಿ ಪಾಲ್ಗೊಂಡು ಶ್ರೀ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಈ ಹಿನ್ನೆಲೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ರಫೀಕ್ ಅಹ್ಮದ್ ರವರು ಮಹಾನಗರ ಪಾಲಿಕೆ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ತುಮಕೂರು ನಗರದಿಂದ ಈ ಯಾತ್ರೆಗೆ ತೆರಳುವ ಎಲ್ಲಾ ಕಾರ್ಯಕರ್ತರಿಗೆ ವಾಹನ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿ, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಡಾ.ರಫೀಕ್ ಅಹ್ಮದ್ ಮನವಿ ಮಾಡಿದರು. ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀಮತಿ ಪ್ರಭಾವತಿ, ಸದಸ್ಯರಾದ ಸೈಯದ್ ನಯಾಜ್, ಕುಮಾರ್.ಜೆ, ಶ್ರೀಮತಿ ರೂಪಶ್ರೀ ಶೆಟ್ಟಳಯ್ಯ, ಮುಜೀದಾ ಖಾನಂ, ನೂರುನ್ನಿಸಾ ಬಾನು, ನಾಸಿರಾ ಬಾನು, ಷಕೀಲ್ ಅಹ್ಮದ್, ಇನಾಯತ್ ಉಲ್ಲಾ ಖಾನ್,…

Read More

ಗುಬ್ಬಿ ಗುಬ್ಬಿ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರು ಕಾಣೆಯಾಗಿದ್ದು, ಸುಮಾರು 8 ತಿಂಗಳುಗಳಿಂದ ಯಾವುದೇ ಅಭಿವೃದ್ದಿ ಕಾರ್ಯವು ಹಾಗೂ ಬಂದಂತಹ ಹಣವು ಹಿಂತಿರುಗಿ ಹೋಗುವಂತಾಗಿರುವುದು ಗುಬ್ಬಿ ಪಟ್ಟಣದ ಜನತೆಯ ದುರಾದೃಷ್ಠವೇ ಸರಿ. ಪಟ್ಟಣ ಪಂಚಾಯ್ತಿಯ ಚುನಾವಣೆ ನಡೆದು ಹೆಚ್ಚಿನ ಸದಸ್ಯರನ್ನು ಜೆ.ಡಿ.ಎಸ್ ಹೊಂದಿದರೂ ಸಹ ಮೀಸಲಾತಿಯಿಂದಾಗಿ ಕೇವಲ ಕೆಲವೇ ಸದಸ್ಯರನ್ನು ಹೊಂದಂತಹ ಬಿ.ಜೆ.ಪಿ ಸದಸ್ಯ ಅಣ್ಣಪ್ಪಸ್ವಾಮಿ ಪಟ್ಟಣ ಪಂಚಾಯ್ತಿಯ ಅಧ್ಯಕ್ಷಗಾದೆಗೆ ಏರಿದ್ದು ತಾನು ಅಧಿಕಾರ ಸ್ವೀಕರಿಸಿದ ನಂತರ ಮೂರು ತಿಂಗಳು ಯಾವುದೇ ಸಭೆಗಳಲ್ಲಿ ಯಾವುದೇ ಕಾರ್ಯಗಳು ಕಾರ್ಯಗತವಾಗದೇ ಕೇವಲ ನಾಮಕಾವಸ್ಥೆಯ ಅಧ್ಯಕ್ಷನಾಗಿ ಉಳಿದಿರುವುದು ವಿಪರ್ಯಾಸವೇ ಸರಿ. ಮೊನ್ನೆ ನಡೆದಂತಹ ಪೌರಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿದ್ದಂತಹ ತಾಲ್ಲೂಕಿನ ಶಾಸಕ ಎಸ್.ಆರ್.ಶ್ರೀನಿವಾಸ್‍ರವರು ಅಧ್ಯಕ್ಷನಿಗೆ ಯಾವ ಖಾಯಿಲೆ ಇದೆಯೋ ಅಥವಾ ಯಾವ ನರ್ಸಿಂಗ್ ಹೋಂಗೆ ಸೇರಿದ್ದಾರೋ ಒಂದು ತಿಳಿಯದಂತಾಗಿದೆ. ನಾನು ಕಷ್ಟಪಟ್ಟು ಪಟ್ಟಣದ ಅಭಿವೃದ್ದಿಗೆ ತಂದಂತಹ ಹಣವು ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಪಟ್ಟಣ ಪಂಚಾಯ್ತಿಯ ಸದಸ್ಯರ ಅನುಮೋದನೆಗೆ ಅಧ್ಯಕ್ಷರೇ ಇಲ್ಲದ ಕಾರಣ ಅನುಮೋದನೆ ಕಷ್ಟವಾಗಿದ್ದು ಇದನ್ನು ಅರಿತು…

Read More

ತುಮಕೂರು ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿ ಹಾಗೂ ಜಾಗೃತಿ ಮಾಡಿಸುವ ದೃಷ್ಠಿಯಿಂದ ಹಿಂದುಳಿದ ವರ್ಗಗಳ ಜಾಗೃತಿ ಸಂಯೋಜಕ ಸಮಾವೇಶ ಕಲ್ಬುರ್ಗಿಯಲ್ಲಿ ಅಕ್ಟೋಬರ್ 30 ರಂಉ ಬಿಜೆಪಿ ಹಿಂದುಳಿದ ವರ್ಗದವರ ಬೃಹತ್ ಸಮಾವೇಶವನ್ನು ಆಯೋಜಿಸಿದೆ. ಈ ರಾಜ್ಯ ಜಾಗೃತಿ ಸಮಾವೇಶದ ಸಂಬಂಧ ಪೂರ್ವಭಾವಿ ಸಭೆ ಅಕ್ಟೋಬರ್ 3ರ ಸೋಮವಾರ ಬೆಳಿಗ್ಗೆ 8.30ಕ್ಕೆ ಘಂಟೆಗೆ ತುಮಕೂರಿನ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲ್ಲಿ ಒಬಿಸಿ ಜಿಲ್ಲಾಧ್ಯಕ್ಷ ಆಯರಹಳ್ಳಿ ಶಂಕರಪ್ಪನವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿಗಳಾ ಗೋಕುಲ್ ಮಂಜುನಾಥ್ ಮತ್ತು ಕೆ.ವೇದಮೂರ್ತಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಬಿಸಿ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಶಾಸಕರಾದ ತಿಪ್ಪಾರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಗಣೇಶ್ ಹುಳ್ವೇಕರ್, ರಾಜ್ಯ ಒಬಿಸಿ ಪ್ರಧಾನ ಕಾರ್ಯದರ್ಶಿ ಸುರೇಶ್‍ಬಾಬು, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷೀನಾರಾಯಣ ಮತ್ತು ಡಾ||ಎಂ.ಆರ್.ಹುಲಿನಾಯ್ಕರ್, ರಾಜ್ಯ ನಿಗಮ ಮಂಡಳಿ ಅಧ್ಯಕ್ಷ ನರೇಶ್ ಕುಮಾರ್ ಮುಂತಾದ ಪ್ರಮುಖರು ಭಾಗವಹಿಸಲಿದ್ದಾರೆ.

Read More

ತುಮಕೂರು ಇಲ್ಲಿನ ಅಶೋಕ ನಗರದ 4ನೇ ಕ್ರಾಸ್‍ನಲ್ಲಿರುವ ಚಂದ್ರಶೇಖರ್ ಆಜಾದ್ ಪಾರ್ಕ್‍ನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅ. 2 ರಂದು ಬೆಳಿಗ್ಗೆ 10ಕ್ಕೆ ಏರ್ಪಡಿಸಲಾಗಿದೆ. ಅಶೋಕ ನಗರ ನಾಗರಿಕ ಹಿತರಕ್ಷಣಾ ಸಮಿತಿ, ರೋಟರಿ ತುಮಕೂರು ಸೆಂಟ್ರಲ್, ಇನ್ನರ್ ವ್ಹೀಲ್ ಕ್ಲಬ್ ಆಫ್ ತುಮಕೂರು ಸೆಂಟ್ರಲ್, ಸಿದ್ದಗಂಗಾ ವೈದ್ಯಕೀಯ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ, ವಿನಾಯಕ ದಂತ ಚಿಕಿತ್ಸಾಲಯ, ಚರಕ ಆಯುರ್ವೇದ ಪಂಚಕರ್ಮ ಚಿಕಿತ್ಸಾಲಯ, ಸಮೃದ್ಧಿ ನೇತ್ರಾಲಯ ಮತ್ತು ಚರ್ಮಾಲಯದ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಏರ್ಪಡಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಜ್ಯೋತಿಗಣೇಶ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಅಶೋಕ ನಗರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಂ.ಕೆ. ವೆಂಕಟಸ್ವಾಮಿ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾನೂನು ಸೇವೆಗಳ ಪ್ರಾಧಿಕಾರದ ಗೌರವ ಕಾರ್ಯದರ್ಶಿ ನೂರುನ್ನಿಸ್ಸಾ, ಸಿದ್ದಗಂಗಾ ಆಸ್ಪತ್ರೆಯ ಡಾ. ಎಸ್. ಪರಮೇಶ್, ಪಾಲಿಕೆ ಸದಸ್ಯ ಮಲ್ಲಿಕಾರ್ಜುನಯ್ಯ, ರೋಟರಿ ತುಮಕೂರು ಸೆಂಟ್ರಲ್ ಅಧ್ಯಕ್ಷೆ ಪ್ರಮೀಳ ಶಿವಕುಮಾರ್, ಇನ್ನರ್ ವ್ಹೀಲ್…

Read More

ತುರುವೇಕೆರೆ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಹಲವು ಪರೀಕ್ಷೆ ಮಾಡಲು ಸಾರ್ವಜನಿಕರಿಂದ ಲಂಚ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋ ದಾಖಲೆ ಸಿಡಿ ಸಹಿತ ಪೋಲೀಸ್ ಅದೀಕ್ಷಕ ಲೋಕಾಯುಕ್ತ ರಾಮರೆಡ್ಡಿಯವರಿಗೆ ಸೋಮವಾರ ದೂರು ನೀಡಿದ್ಧಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಲೋಕಾಯುಕ್ತ ಸಾರ್ವಜನಿಕರ ಕುಂದು ಕೊರತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಮಾಜಿಕ ಕಾರ್ಯಕರ್ತರ ವೇದಿಕೆ ತಾಲೂಕು ಅಧ್ಯಕ್ಷ ಮೋಹನ್ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಬ್ರಷ್ಟಚಾರ ಲಂಚಗುಳಿತನ ಹೆಚ್ಛಾಗಿದೆ. ಹೆರಿಗೆ ಡಾಕ್ಟರ್‍ಗಳು ಸಿಜೇರಿಯನ್ ಮಾಡಲು ಸುಮಾರು 10 ಸಾವಿರ ಹಣ ಪಡೆಯುತ್ತಿದ್ದಾರೆ. ಇದಲ್ಲದೇ ಸರ್ಕಾರಿ ಆಸ್ಪತ್ರೆ ಡಾಕ್ಟರ್ ಗಳು ಪಟ್ಟಣದಲ್ಲಿ ಸ್ವಂತ ಕ್ಲೀನಿಕ್ ಗಳನ್ನು ಮಾಡಿಕೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳನ್ನು ನಮ್ಮ ಕ್ಲೀನಿಕ್ ಗೆ ಬರಮಾಡಿಕೊಂಡು ಹಲವು ಕೆಲವು ಪರೀಕ್ಷೆಯ ನೆಪದಲ್ಲಿ ಸಾವಿರಾರು ರೂಗಳನ್ನು ಪೀಕುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಬಡ ರೋಗಿಗಳನ್ನು ಕೈಯಿಂದ ಮುಟ್ಟಿ…

Read More

ತುಮಕೂರು ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಅಗ್ನಿಶಾಮಕ ದಳದ ವತಿಯಿಂದ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಬೆಂಕಿ ನಂದಿಸುವ ಪ್ರಾತ್ಯಕ್ಷತೆಯನ್ನು ವೈದ್ಯಕೀಯ ಕಾಲೇಜಿನ ಕ್ಯಾಂಪಸ್‍ನಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ಧಾರ್ಥ ವೈದ್ಯಕೀಯ ಸಿಬ್ಬಂದಿಗೆ ಅಗ್ನಿಶಾಮಕ ದಳದ ವತಿಯಿಂದ ಅಗ್ನಿ ಅವಘಡಗಳ ನಿಯಂತ್ರಣದ ಬಗ್ಗೆ ಅನೇಕ ಪ್ರಮುಖ ಮಾಹಿತಿಗಳನ್ನು ಪ್ರಾತ್ಯಕ್ಷತೆ ನಡೆಸುವ ಮೂಲಕ ತಿಳಿಸಿಕೊಡಲಾಯಿತು. ಅಗ್ನಿಶಾಮಕ ದಳವನ್ನು ಹೇಗೆ ಸಂಪರ್ಕಿಸಬೇಕು. ಬೆಂಕಿಯಂತಹ ಅವಘಡಗಳು ನಡೆದ ಸಂದರ್ಭದಲ್ಲಿ ಬೆಂಕಿಯನ್ನು ನಂದಿಸಲು ಬಳಸುವ ವಿವಿಧ ವಿಧಾನಗಳನ್ನು ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಪ್ರಾತ್ಯಕ್ಷತೆಯನ್ನು ಮಾಡುವುದರ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ತೋರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ನಿಶಾಮಕದ ದಳದ ಅಧಿಕಾರಿ ಮಹಾಲಿಂಗಪ್ಪ ಲಂಗೋಟಿ ಮಾತನಾಡಿ, ಆಸ್ಪತ್ರೆಗಳಲ್ಲಿ ಬೆಂಕಿ ಅವಘಡ ಉಂಟಾದಾಗ ಹಲವು ರೀತಿಯ ರಕ್ಷಣಾ ವಿಧಾನಗಳು ಇವೆ. ಆಸ್ಪತ್ರೆಗಳಲ್ಲಿ ಬೆಂಕಿ ಅವಘಡಗಳು ನಡೆದಾಗ ಅಗ್ನಿಶಾಮಕ ನಿಯಂತ್ರಣದ ಉಪಕರಣಗಳನ್ನು ಬಳಸಿಕೊಂಡು ಹೇಗೆ ಬೆಂಕಿ ಅವಘಡಗಳು ನಿಯಂತ್ರಿಸಬಹುದು ಎಂಬುದನ್ನು ಸಿಬ್ಬಂದಿ ವರ್ಗದವರ…

Read More

ತುಮಕೂರು ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕ್ರೀಯಾಶೀಲವಾದ ಆರೋಗ್ಯ ಜೀವನ ನಡೆಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಕರೆ ನೀಡಿದರು. ಇವರು ಇಂದು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪ್ರಧಾನಿ ನರೇಂದ್ರಮೋದಿರವರ 72ನೇ ವರ್ಷದ ಹುಟ್ಟುಹಬ್ಬದ ಸೇವಾ ಪಾಕ್ಷಿಕ ಕಾರ್ಯಕ್ರಮ ಆಯೋಜಿಸಿದ ಸಂಧರ್ಭದಲ್ಲಿ ಪತ್ರಕರ್ತರು, ಪತ್ರಿಕಾ ವಿತರಕರು, ಕೇಬರ್ ಆಪರೇಟರ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಾಗರೀಕ ಬಂಧುಗಳು ಮತ್ತು ವೃತ್ತಿಪರರು ತಮ್ಮ ದಿನನಿತ್ಯದಲ್ಲಿ ಆರೋಗ್ಯ, ಸುರಕ್ಷೆಗೆ ಆದ್ಯ ಗಮನ ಹರಿಸಿ ತಮ್ಮ ಕಾಯಕದಲ್ಲಿ ಕೀಯಾಶೀಲರಾಗಿ ಕಾರ್ಯನಿರ್ವಹಿಸಬೇಕೆಂದು ವಿನಂತಿಸಿದರು. ಈ ಆರೋಗ್ಯ ಶಿಬಿರದಲ್ಲಿ ತುಮಕೂರಿನ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋದನಾ ಆಸ್ಪತ್ರೆಯಿಂದ ತಜ್ಞ ವೈದ್ಯರ ತಂಡದಿಂದ ರಕ್ತ ಪರೀಕ್ಷೆ, ಸಿಬಿಸಿ ವಿಥ್ ಇಎಸ್‍ಆರ್, ರಕ್ತ ಗುಂಪಿನ ಪರೀಕ್ಷೆ, ಸೀರಮ್ ಕ್ರಿಯೇಟಿನೈನ್, ಲಿವರ್ ಫಂಕ್ಷನ್ ಪರೀಕ್ಷೆ, ಲಿಪಿಡ್ ಪ್ರೊಫೈಲ್, ಎಇಸಿ, ಹೆಚ್‍ಸಿಎ, ಮೂತ್ರ ಪರೀಕ್ಷೆ, ಕಣ್ಣಿನ ಸ್ಕ್ರೀನಿಂಗ್,…

Read More

ತುಮಕೂರು ತುಮಕೂರು ಜಿಲ್ಲೆ ತಿಪಟೂರು ತಾಲೂಕು ಗ್ಯಾರಘಟ್ಟ ಗ್ರಾಮದ ಪುರಾತನ ಮೆಟ್ಟಿಲು ಬಾವಿ(ಕಲ್ಯಾಣಿ)ಯನ್ನು ಸ್ವಚ್ಛತಾ ಹೀ ಸೇವಾ (ಎಸ್‍ಎಚ್‍ಎಸ್) ಆಂದೋಲನ ಕಾರ್ಯಕ್ರಮದಡಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಗತವೈಭವದ ಸ್ಪರ್ಶ ನೀಡಲಾಗಿದೆ. ಸುಮಾರು 120 ವರ್ಷಗಳ ಹಳೆಯದಾದ ಈ ಮೆಟ್ಟಿಲು ಬಾವಿಯು ನೀರಿಲ್ಲದೆ ಕಸದ ರಾಶಿ ತುಂಬಿಕೊಂಡು ಮುಳ್ಳುಗಿಡ-ಗಂಟೆ ಬೆಳೆದು ಮುಚ್ಚಿ ಹೋಗಿತ್ತು. ನಿರ್ವಹಣೆಯಿಲ್ಲದೆ ನೀರಿನ ಸೆಲೆ ಬತ್ತಿಹೋಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾದ್ಯಂತ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2ರವರೆಗೆ ಹಮ್ಮಿಕೊಂಡಿರುವ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಗ್ರಾಮಸ್ಥರ ಸಹಕಾರದಲ್ಲಿ ಗ್ಯಾರಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 45 ಮಂದಿ ಒಗ್ಗೂಡಿ ಒಂದೇ ದಿನದಲ್ಲಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಮೂಲಕ ಹಾಳಾದ ಮೆಟ್ಟಿಲು ಬಾವಿಗೆ ಪುನರ್‍ಜೀವ ನೀಡಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಸಭೆಯ ಮೂಲಕ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಗ್ರಾಮೀಣ ನೀರು ಸರಬರಾಜು…

Read More

ತುಮಕೂರು ಕನ್ನಡ ಸಮ್ಮೇಳನಗಳು ಕೇವಲ ಮೆರವಣಿಗೆ, ಉತ್ಸವಗಳಿಗೆ ಸಿಮೀತವಾದರೆ ಸಾಲದು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕನ್ನಡವನ್ನು ಅನ್ನದ ಭಾಷೆಯಾಗಿ ರೂಪಿಸುವ ನಿಟ್ಟಿನಲ್ಲಿ ಕನ್ನಡಿಗರ ಮುಂದಿರುವ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಚಿಂತನೆ ನಡೆಸುವ ಅಗತ್ಯವಿದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ. ನಗರದ ಶ್ರೀಸಿದ್ದಗಂಗಾ ಮಠದ ಶ್ರೀಚನ್ನಬಸವೇಶ್ವರ್ ವಸ್ತು ಪ್ರದರ್ಶನದ ಆವರಣದಲ್ಲಿ ಹಮ್ಮಿಕೊಂಡಿದ್ದ ತುಮಕೂರು ತಾಲೂಕು ಕಸಾಪ 6ನೇ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಗಡಿನಾಡು ಸೇರಿದಂತೆ ರಾಜ್ಯದ ಹಲವು ಕಡೆ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಬೆಳಗಾವಿ,ಕಾಸರಗೋಡಿನ ವಿಚಾರವಾಗಿ ರಾಜ್ಯಗಳ ನಡುವೆ ತಿಕ್ಕಾಟವಿದೆ.ಕನ್ನಡ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಹಾಗೂ ಕಾಸರಗೋಡು ಮತ್ತು ಬೆಳಗಾವಿಯ ಆಸ್ಮಿತೆಯ ಕುರಿಂತಂತೆಯೂ ನಾವೆಲ್ಲರೂ ದ್ವನಿ ಎತ್ತಬೇಕಾಗಿದೆ ಎಂದರು. ಕರ್ನಾಟಕ ಸರಕಾರ ಕಾಸರಗೋಡು ಭಾಗದಲ್ಲಿ ಕನ್ನಡವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೈಯಾರ ಕೀಯಣ್ಣರೈ,ತಾಯಿ ಜಯದೇವಿ ಲಿಂಗಾಡೆ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ ನೀಡುತ್ತಾ ಬಂದಿದೆ.ರಾಜ್ಯದ 19 ಜಿಲ್ಲೆಗಳ, 63 ತಾಲೂಕುಗಳ 988 ಹಳ್ಳಿಗಳು ಗಡಿ ಪ್ರದೇಶದಲ್ಲಿ…

Read More

ತುಮಕೂರು ಜಿಲ್ಲೆಯ  ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿಗಳ ಸಮ್ಮುಖದಲ್ಲಿ ಪಿಡಿಓಗಳ ದರ್ಪದ ವರ್ತನೆ ಬಗ್ಗೆ ಜನಪ್ರತಿನಿಧಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಅನೇಕ ಜನಪ್ರತಿನಿಧಿಗಳಿಂದ ಪಿಡಿಓ ಗಳ ವರ್ತನೆ ಕುರಿತು ತೀವ್ರ ಚರ್ಚೆಗಳು ನಡೆದಿವೆ. ಪಿ.ಡಿ.ಓ.ಗಳು ಇ.ಒ.ಗಳನ್ನ ಕಂಟ್ರೋಲ್ ಮಾಡ್ತಿದ್ದಾರೆ. ಇ.ಒ.ಗಳು ಮಾತನಾಡುವುದಿಲ್ಲ, ಪಿಡಿಓ ಗಳು ಹೇಳಿದಂತೆ ಇಒಗಳು ಕುಣಿತಾರೆ ಎಂದು ತುರುವೇಕೆರೆ ಶಾಸಕ ಮಾಸಾಲ ಜಯರಾಂ ಆರೋಪ ಮಾಡಿದರು. ಅದಕ್ಕೆ ಧ್ವನಿಗೂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೆಲ ಪಿಡಿಒ ಗಳು ಬಹಳ ಆ ರೀತಿ ಮಾಡ್ತಾರೆ. ಪಂಚಾಯ್ತಿ ಅಧ್ಯಕ್ಷರು ರಿಸರ್ವೇಷನ್ ನಲ್ಲಿ ಬಂದ್ರೆ ಅವರನ್ನ ಕೇಳೋರೆ ಗತಿ ಇಲ್ಲ. ಅಧ್ಯಕ್ಷರು ಬೆಲ್ ಮಾಡಿದಾಗ ಪಿಡಿಓ ಅಧ್ಯಕ್ಷರ ಚೇಂಬರ್ ಗೆ ಹೋಗ್ಬೇಕೋ ಬೇಡ್ವೋ ಅನ್ನೋದ್ರ ಬಗ್ಗೆ ಅವರವರಲ್ಲೇ ಚರ್ಚೆಯಿರುತ್ತೆ. ನಾನ್ಯಾಕೆ ಹೋಗ್ಬೇಕು ಅಂತ ಪಿಡಿಓ  ಕರೆದರೂ ಪಿಡಿಓ ಬರಲ್ಲ ಅಂತೇಳಿ ಒಬ್ಬ ಎಸ್ಸಿ ಗ್ರಾ.ಪಂ. ಅಧ್ಯಕ್ಷೆ ನನ್ನಲ್ಲಿ ಅಳಲು ತೋಡಿಕೊಂಡ್ರು. ಮೊದಲು ನಾನೇ…

Read More