Author: News Desk Benkiyabale

ಮಧುಗಿರಿ:       ಪಟ್ಟಣಕ್ಕೆ ಕುಡಿಯುವ ನೀರೋದಗಿಸುವ ಸಿದ್ದಾಪುರ ಕೆರೆಯಲ್ಲಿ ಸಂಗ್ರಹವಾಗಿರುವ ಹೇಮಾವತಿ ನೀರು ಜಲ ಸಂಗ್ರಹ ಕೇಂದ್ರದಿಂದ ಬೆಸ್ಕಾಂ ಮುಂಭಾಗವಿರುವ ಓವರ್ ಟ್ಯಾಂಕ್ಗೆ ಸರಬರಾಜಾಗುವ ಹೇಮಾವತಿ ನೀರು ಚರಂಡಿ ಪಾಲಾಗುತ್ತಿದ್ದು ಈ ಬಗ್ಗೆ ಪುರಸಭೆ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ.       ಲಕ್ಷಾಂತರ ರೂ ಬೆಸ್ಕಾಂ ಕಚೇರಿಗೆ ಹಣ ಕಟ್ಟಿ ಈ ನೀರನ್ನು ಬಳ್ಳಾಪುರ ಪಂಪ್ ಹೌಸ್ ನಿಂದ ಮಧುಗಿರಿ ಸಿದ್ದಾಪುರ ಕೆರೆಗೆ ಪೈಪ್ಲೈನ್ ಮೂಲಕ ನೀರು ಹರಿಸಲಾಗುತ್ತಿದೆ.       ಮಧುಗಿರಿಯ ಸಿದ್ದಾಪುರ ಗೇಟ್ ಬಳಿ ಇರುವ ಕುರುಬರ ಸಂಘದ ಹಾಸ್ಟೆಲ್ ಸಮೀಪ ಪೈಪ್ ಒಡೆದು ಹೋಗಿ ನೀರು ಚರಂಡಿ ಪಾಲಾಗುತ್ತಿದೆ.        ಈ ಬಗ್ಗೆ ದುರಸ್ತಿ ಮಾಡುವಂತೆ ಸಿದ್ದಾಪುರ ಗೇಟ್ ಹಾಗೂ ಮಧುಗಿರಿ ನಾಗರಿಕರು ಪುರಸಭೆಗೆ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲವೆಂದು ನಾಗರಿಕರ ಆರೋಪವಾಗಿದೆ.

Read More

ಕೊರಟಗೆರೆ:       ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮದ ಜೊತೆ ಕೊರಟಗೆರೆ ಕ್ಷೇತ್ರದ ರೈತರ ಅನುಕೂಲಕ್ಕಾಗಿ ಅಂತರ್ಜಲ ಅಭಿವೃದ್ಧಿಗೆ ಹತ್ತಾರು ಕೆರೆಗಳ ಪುನಶ್ಚೇತನ ಮತ್ತು ನಿರಾಶ್ರಿತ ಬಡಜನತೆಗೆ ಆಶ್ರಯ ನೀಡುತ್ತಿರುವ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿಯ ವಿರುದ್ಧ ಸುಳ್ಳುಸುದ್ದಿ ಬಿತ್ತರ ಮಾಡಲಾಗಿದೆ ಎಂದು ಆರೋ ಭಕ್ತಾಧಿವೃಂಧ ಪ್ರತಿಭಟನೆ ನಡೆಸಿದರು.       ಕೊರಟಗೆರೆ ಅಖಿಲ ಭಾರತ ವೀರಶೈವ ಮಹಾಸಭಾ ಘಟಕ ಮತ್ತು ನೂರಾರು ಜನ ಭಕ್ತವೃಂಧದಿಂದ ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜು ಮತ್ತು ಮಧುಗಿರಿ ಡಿವೈಎಸ್ಪಿ ಪ್ರವೀಣ್‍ಗೆ ಮನವಿ ಸಲ್ಲಿಸಿದ ನಂತರ ತುಮಕೂರು ಸ್ಥಳೀಯ ಮಾಸಿಕ ಪತ್ರಿಕೆಯ ಸಂಪಾದಕ ಮತ್ತು ಕೊರಟಗೆರೆ ವರದಿಗಾರನ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.       ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ಕೊರಟಗೆರೆ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ ಯುವ ತಪಸ್ವಿ ಸಿದ್ದರಬೆಟ್ಟ ಶ್ರೀಗಳು ಕೊರಟಗೆರೆ ಕ್ಷೇತ್ರದ ಭಕ್ತರ ಪಾಲಿನ ನೆಚ್ಚಿನ ಸ್ವಾಮೀಜಿ. ಸ್ವಾಮೀಜಿಯ ಬಗ್ಗೆ ಪಾಕ್ಷಿಕ…

Read More

ತುಮಕೂರು:       ಕಾಂಗ್ರೆಸ್ ನಾಯಕರಾದ ಜಮೀರ್, ಇಬ್ರಾಹಿಂ ಮತ್ತು ಹ್ಯಾರೀಸ್‍ರಂತವರು ದೇಶ ವಿಭಜನೆಗೆ ಕೆಲಸ ಮಾಡುತ್ತಿದ್ದಾರೆ ಇವರನು ನಾಗರೀಕರ ರೂಪದಲ್ಲಿರುವ ಇವರನ್ನು ಕೂಡಲೇ ಬಂಧಿಸಬೇಕು ಎಂದು ಆರೋಪಿಸಿದರು.       ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು ಪತ್ರ ಬರೆದಿರುವ ಕಾಂಗ್ರೆಸ್ ಮುಖಂಡರಾದ ಸಿ.ಎಂ.ಇಬ್ರಾಹಿಂ, ಜಮೀರ್ ಅಹಮದ್ ಮತ್ತು ಹ್ಯಾರೀಸ್ ಅವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಬಂಧಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊಗಡು ಶಿವಣ್ಣರವರು “ಜಮೀರ್, ಇಬ್ರಾಹಿಂ ಮತ್ತು ಹ್ಯಾರೀಸ್ ದೇಶ ವಿಭಜನೆಯ ಕೆಲಸಕ್ಕೆ ಮುಂದಾಗಿದ್ದಾರೆ. ಇಂತವರು ದೇಶಕ್ಕೆ ಅಪಾಯಕಾರಿಗಳಾಗಿದ್ದಾರೆ. ಇವರು ನಾಗರೀಕತೆಯ ರೂಪದಲ್ಲಿರುವ ಟೆರರಿಸ್ಟ್‍ಗಳು, ದೇಶದ್ರೋಹಿಗಳು. 70 ವರ್ಷಗಳಿಂದ ನಮ್ಮ ಸರ್ಕಾರಗಳು ನೀಡಿದ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಂಡು ದೇಶಕ್ಕೆ ಕಂಟಕವಾಗಿದ್ದಾರೆ’’ ಎಂದರು.       ಈ ತಬ್ಲಿಘಿಗಳು ಕೆಟ್ಟ ಸಂತಾನ. ಇವರನ್ನು ದೇಶದಿಂದ ಹೊರಹಾಕಬೇಕು. ಕೊರೊನ ಸಂದರ್ಭದಲ್ಲಿ…

Read More

ಕೊರಟಗೆರೆ:       ಅನೈತಿಕ ಸಂಬಂಧದ ದ್ವೇಷದ ಶಂಕೆಯಿಂದ ಕಾರು ಚಾಲಕನ ಹೊಟ್ಟೆ ಮತ್ತು ಹೃದಯ ಭಾಗಕ್ಕೆ 9 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.       ತಾಲೂಕಿನ ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲೇಶಪುರ ಗ್ರಾಮದ ಲೇ.ಹನುಮಂತರಾಯಪ್ಪನ ಮಗ ಗಿರೀಶ್ ಎಂಬಾತನೇ ಕೊಲೆಯಾದ ದುರ್ದೈವಿ. ಸೋಮವಾರ ಮಧ್ಯರಾತ್ರಿ ಮಲ್ಲೇಶಪುರದ ನಟರಾಜು ಮತ್ತು ಗಿರೀಶ್ ನಡುವೆ ಮುಖಾಮುಖಿ ಜಗಳ ನಡೆದಿದೆ.       ಕೊಲೆಯಾದ ಗಿರೀಶ್ ಮೂಲತಃ ಮಲ್ಲೇಶಪುರ ವಾಸಿ. ಪ್ರಸ್ತುತ ಬೆಂಗಳೂರು ನಗರದಲ್ಲಿ ಕಾರು ಚಾಲಕ. ಕೊರೊನಾ ಲಾಕ್‍ಡೌನ್ ಹಿನ್ನಲೆ ಸ್ವಗ್ರಾಮಕ್ಕೆ ಕಳೆದ 20ದಿನದ ಹಿಂದೆ ಆಗಮಿಸಿದ್ದಾನೆ. ಕೊಲೆ ಆರೋಪಿ ಪತ್ತೆಗಾಗಿ ತುಮಕೂರು ಶ್ವಾನದಳ ತಂಡ ಆಗಮಿಸಿ ಪರಿಶೀಲನೆ ತಪಾಸಣೆ ನಡೆಸಿದ್ದಾರೆ.       ಕೊಲೆಯಾದ ಸ್ಥಳಕ್ಕೆ ತುಮ ಕೂರು ಎಸ್ಪಿ ಡಾ.ಕೆ.ವಂಶಿಕೃಷ್ಣ, ಮಧುಗಿರಿ ಡಿವೈಎಸ್ಪಿ ಪ್ರವೀಣ್, ಕೊರಟಗೆರೆ ಸಿಪಿಐ ನದಾಫ್, ಪಿಎಸೈ ಮುತ್ತುರಾಜು…

Read More

ತುಮಕೂರು:       ತುಮಕೂರು ಜಿಲ್ಲೆ ಕಲ್ಪತರು ನಾಡಲ್ಲಿ ಕೊರೋನಾ ರಣಕೇಕೆ ಆಕುತ್ತಿದ್ದು, ಬುಧವಾರ 4 ಕೊರೋನಾ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಜನರನ್ನು ಭಯಭೀತರನ್ನಾಗಿ ಮಾಡಿದೆ.       ಇದೀಗ ಬಂದಿರುವ 4 ಸೋಂಕಿತರ ಪೈಕಿ ಇಬ್ಬರು ಮಹಿಳೆಯರು ಇಬ್ಬರು ಮಕ್ಕಳು ಎಂದು ತಿಳಿದುಬಂದಿದ್ದು, ತುರುವೇಕೆರೆ ತಾಲೂಕಿನ ಮಲ್ಲಘಟ್ಟ ಮೂಲದವರಲ್ಲಿ 3 ಸೋಂಕಿತರು. ಕೊರಟಗೆರೆ ಮೂಲದವರಲ್ಲಿ ಒಬ್ಬರು ಸೋಂಕಿತರು ಎಂದು ತಿಳಿದುಬಂದಿದ್ದು, ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಮುಂಬೈ ಸೋಂಕು ತಗುಲಿರುವ ವಿಷಯ ತಿಳಿದುಬಂದಿದೆ.       ಬುಧವಾರ ವರದಿ ಬಂದಿರುವ ಎಲ್ಲರೂ ಬಹಳಷ್ಟು ವರ್ಷಗಳಿಂದ ಮುಂಬೈನಲ್ಲಿ ವಾಸವಾಗಿದ್ದವರು. ಮುಂಬೈನಿಂದ ಕಾರಿನಲ್ಲಿ ಬಂದ 6 ಜನರಲ್ಲಿ ನಾಲ್ವರಿಗೆ ಕೋವಿಡ್-19 ಪಾಸಿಟೀವ್ ಪತ್ತೆಯಾಗಿದೆ. ಕಾರಿನಲ್ಲಿ ಆಗಮಿಸಿದ 6 ಜನರನ್ನ ಕ್ವಾರೆಂಟೈನ್ ಮಾಡಿ ತಪಾಸಣೆಗೆ ಒಳಪಡಿಸಲಾಗಿತ್ತು. ತಪಾಸಣೆ ವೇಳೆ 4 ಜನರಲ್ಲಿ ಸೋಂಕು ದೃಢಪಟ್ಟಿದೆ. ಉಳಿದ ಇಬ್ಬರು ಕ್ವಾರೆಂಟೈನ್‍ನಲ್ಲಿ ಇರುತ್ತಾರೆ.       ಸೋಂಕಿತರಾದ 4 ಜನರನ್ನು ತುಮಕೂರು ಜಿಲ್ಲೆ…

Read More

ಮಧುಗಿರಿ :       ಕರೋನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಪ್ರಥಮ ಬಾರಿಗೆ ಮಂಗಳವಾರ ದಂದು ಮಧುಗಿರಿ ಕೆ.ಎಸ್. ಆರ್. ಟಿ.ಸಿ .ಡಿಪೊನಿಂದ ಎಂಟು ಬಸ್ಸುಗಳು ಸಂಚರಿಸಿದೆ.         ಈ ಪೈಕಿ ಬೆಂಗಳೂರಿಗೆ ನಾಲ್ಕು, ತುಮಕೂರಿಗೆ ಮೂರು ಹಾಗೂ ಪಾವಗಡಕ್ಕೆ ಒಂದು ಬಸ್ ಸಂಚಾರ ಬೆಳೆಸಿದವು. ಪ್ರಯಾಣಿಕರಿಲ್ಲದೆ ಭಣಗುಡುತ್ತಿದ್ದ ಬಸ್ ನಿಲ್ದಾಣದಲ್ಲಿ ಆಶಾ ಕಾರ್ಯಕರ್ತರು, ಕೆ ಎಸ್ ಆರ್ ಟಿಸಿ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಸಹಕಾರದೊಂದಿಗೆ ಸ್ಕ್ರೀನ್ ಟೆಸ್ಟಿಂಗ್ ಮತ್ತು ಸ್ಯಾನಿ ಟೈಸಿಂಗ್ ಮಾಡಿ ಪ್ರಯಾಣಿಕರನ್ನು ಮಾಸ್ಕ್ ಇದ್ದವರಿಗೆ ಮಾತ್ರ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿತ್ತು.       ಮಧುಗಿರಿ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣವನ್ನು ಪ್ರಸ್ತುತ ಒನ್ವೇ ಮಾಡಿದ್ದು ಮುಖ್ಯದ್ವಾರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಸಾಲುಗಟ್ಟಿ ಪ್ರಯಾಣಿಕರು ಬರುವ ರೀತಿ ವ್ಯವಸ್ಥೆ ಮಾಡಲಾಗಿದೆ. ಬೇರೆ ಊರುಗಳಿಂದ ಆಗಮಿಸುವಂತಹ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ಇಳಿದು ಬಸ್ ನಿಲ್ದಾಣದಿಂದ ಹೊರ ಬರುವ…

Read More

ಚಿಕ್ಕನಾಯಕನಹಳ್ಳಿ:        ಅಟಲ್‍ಭೂಜಲ್ , ಜಲಾಮೃತ ಹಾಗೂ ಜಲಜೀವನ್ ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತರುವ ಮೂಲಕ ರೈತಸ್ನೇಹಿ ಜಲಪೂರಣ, ಹಳ್ಳಿಗಳಲ್ಲಿ ಮನೆಮನೆಗೆ ಕೊಳಾಯಿ ನೀರು ಹಾಗೂ ಅಂತರ್ಜಲ ಅಭಿವೃದ್ಧಿಯಂತಹ ದೂರದೃಷ್ಠಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಬೇಕಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.       ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೇಂದ್ರಸರ್ಕಾರದ ವಿವಿಧ ಜಲಾಧಾರಿತ ಯೋಜನೆಗಳ ಅನುಷ್ಠಾನದ ಕುರಿತಾದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ ಕೇಂದ್ರ ಸರ್ಕಾರ ಅಟಲ್ ಭೂಜಲ್ ಯೋಜನೆ ಜಾರಿಗೆ ತಂದಿದ್ದು ಇಡೀ ದೇಶದಲ್ಲಿ ನಮ್ಮ ಜಿಲ್ಲೆಯನ್ನುÉ ಪ್ರಥಮವಾಗಿ ಆಯ್ಕೆ ಮಾಡಿಕೊಂಡಿದೆ. ನಾವು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಪ್ರತಿ ಹಂತದ ವರದಿಯನ್ನು ಕೇಂದ್ರಕ್ಕೆ ನೀಡಬೇಕಿದೆ, ಇದಕ್ಕಾಗಿ ಸಾವಿರಕೋಟಿ. ಅನುದಾನ ಇರಿಸಿದೆ.       ಜಿಲೆಯಲ್ಲಿ ಅಂತರ್ಜಲ ಉಳಿಸಿ ಹಾಗೂ ಬೆಳೆಸುವ ನಿಟ್ಟಿನಲ್ಲಿ ಇಂದು ಸಾಂಪ್ರದಾಯಿಕ ಬೆಳೆಗಳನ್ನೆ ಅವಲಂಬಿಸಬೇಕೆ ಎಂಬ ಬಗ್ಗೆ ಆಲೋಚನೆ ಮಾಡಬೇಕಿದೆ, ಹೆಚ್ಚು ನೀರು ಬಯಸುವ ಬೆಳೆಯ ಬದಲಿಗೆ…

Read More

ತುಮಕೂರು:       ತುಮಕೂರು ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದು, ನಾನ್ ಕೋವಿಡ್ ಸೇವೆಯನ್ನು ಇಲ್ಲಿಯವರೆಗೂ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿಕಿತ್ಸೆಗಾಗಿ ರೆಫರ್ ಮಾಡಲಾಗುತ್ತಿತ್ತು.       ಮೇ 20ರಿಂದ ಜಿಲ್ಲಾಸ್ಪತ್ರೆಯಲ್ಲಿಯೇ ನಾನ್ ಕೋವಿಡ್ ಸೇವೆಗಳನ್ನು ಮತ್ತು ಸಾರ್ವಜನಿಕ ರೋಗಿಗಳ ಹಿತದೃಷ್ಟಿಯಿಂದ ಪುನಾರಾರಂಭಿಸಲಾಗಿದೆ.       ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಟಿ.ಎ. ವೀರಭದ್ರಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ತುಮಕೂರು:       ಹೊರ ರಾಜ್ಯಗಳಿಂದ 439 ಜಿಲ್ಲೆಗೆ ಆಗಮಿಸಿದ್ದು, ಅವರನ್ನು ವಸತಿ ಶಾಲೆ, ಹೋಟೆಲ್‍ಗಳಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಈಗಾಗಲೇ ಗಂಟಲು ದ್ರಾವ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಕೆಲವರ ವರದಿ ನೆಗೆಟಿವ್ ಬಂದಿವೆ. ಇನ್ನು ಕೆಲವು ಮಾದರಿಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ಈವರೆಗೂ 4 ಕೋವಿಡ್-19 ಸಕ್ರಿಯ ಪ್ರಕರಣಗಳಿದ್ದು, ಶೀಘ್ರವಾಗಿ ಗುಣಮುಖರಾಗಲು ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಮ್ಮೆ ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು. ನೆಗೆಟಿವ್ ಬಂದಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದರು.       ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಲಾಕ್‍ಡೌನ್ ಸಡಿಲಿಕೆಯಾಗಿದ್ದು, ಜಿಲ್ಲೆಯಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಖಾಸಗಿ ವಾಹನಗಳ ಮಾಡಲು ಅನುಮತಿ ನೀಡಲಾಗಿದೆ. ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತರ್ ಜಿಲ್ಲೆಗೆ ಪ್ರಯಾಣಿಸಲು ಯಾವುದೇ ಪಾಸ್ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.       ಜಿಲ್ಲೆಯಲ್ಲಿ ಸಂಜೆ 7…

Read More

ಮಧುಗಿರಿ:       ಪಟ್ಟಣದ ಮಿನಿ ವಿಧಾನಸೌಧದ ಪಕ್ಕದಲ್ಲಿರುವ “ಗುರುಭವನ’ದ ಆವರಣ ಅನೈರ್ಮಲ್ಯದ ಜೊತೆಗೆ ಅನೈತಿಕ ಚಟುವಟಿಕೆಗಳ ತಾಣವಾಗಿದ್ದನ್ನು ಮನಗಂಡು ಈ ಆವರಣದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಅರಿತ ತಹಸೀಲ್ದಾರ್ ಡಾ. ಜಿ. ವಿಶ್ವನಾಥ್ ರವರು ಸ್ವಚ್ಛತಾ ಕಾರ್ಯ ಹಾಗೂ ಶ್ರಮದಾನಕ್ಕೆ ಸ್ವತಃ ಮುಂದಾಗಿ ಸಮಾಜಕ್ಕೆ ಮಾದರಿಯಾದರು.       ಈ ಆವರಣದ ತುಂಬಾ ಬಿಯರ್ ಬಾಟಲುಗಳು, ಮದ್ಯದ ಪ್ಯಾಕೆಟ್ ಗಳು, ಬೀಡಿ- ಸಿಗರೇಟಿನ ತುಂಡುಗಳು, ಅನೈತಿಕ ಚಟುವಟಿಕೆ ಬಳಸುವ ವಸ್ತುಗಳು ತುಂಬಿ ತುಳುಕಾಡುತ್ತಿದ್ದವು. ಗುರುಭವನದ ಹಿಂಭಾಗದ ಖಾಲಿ ಸ್ಥಳದಲ್ಲಿ ಕಸ ಕಡ್ಡಿಗಳು ತುಂಬಿಕೊಂಡಿದ್ದ ಲ್ಲದೆ, ಟ್ರಾನ್ಸ್ ಫಾರ್ಮರ್ ಗೆ ಬಳ್ಳಿಗಳು ಎತ್ತರಕ್ಕೆ ಬೆಳೆದು ವಿಷ ಜಂತುಗಳ ವಾಸ ಸ್ಥಳವಾಗಿ ಮಾರ್ಪಟ್ಟಿತ್ತು. ಜೊತೆಗೆ ಬಯಲು ಶೌಚಾಲಯವಾಗಿ ಪರಿವರ್ತನೆಗೊಂಡಿತ್ತು. ಈ ಬಗ್ಗೆ ಲಾಕ್ ಡೌನ್ ಸಂದರ್ಭದಲ್ಲಿ ಅನಿರೀಕ್ಷಿತ ಭೇಟಿ ನೀಡಿದ್ದ ತಹಶಿಲ್ದಾರರು ಗುರುಭವನದ ಆವರಣ ಅಪವಿತ್ರವಾಗಿರುವುದನ್ನು ಪವಿತ್ರಗೊಳಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಿದರು.       ತಹಸೀಲ್ದಾರ್…

Read More