ತುಮಕೂರು: ದೇಶದ ಆರ್ಥಿಕ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಹೆಚ್ಚು ಉತ್ತೇಜನ ನೀಡಲು ಪ್ರಾರಂಭವಾದಗಿನಿAದ ಸಾರ್ವಜನಿಕ ಉದ್ದಿಮೆಗಳು, ಸಾರ್ವಜನಿಕ ಆಸ್ತಿಗಳ ಮೇಲೆ ಪಕ್ಷಬೇದವಿಲ್ಲದೆ ಆಡಳಿತ ನಡೆಸಿದವರು ಹೊಸ ರೀತಿಯ ಮೊಳೆಗಳನ್ನು ಹೊಡೆಯಲು ಪ್ರಾರಂಭವಾಗಿದೆ. ೧೯೮೩ರಲ್ಲಿ ಗ್ಯಾಟ್ ಒಪ್ಪಂದ, ಡೆಂಕಲ್ ಒಪ್ಪಂದಕ್ಕೆ ಸಹಿ ಹಾಕಿದಾಗ ಆರಂಭವಾದ ಖಾಸಗೀಕರಣ, ಜಾಗತೀಕರಣ, ಉದಾರೀಕರಣದಂತಹ ಅತಂಕರಣಗಳಿಲ್ಲದೆ ಕರಣಗಳು ಪ್ರಾರಂಭವಾಗಿ ಉದ್ಯೋಗ, ಸಾಮಾಜಿಕ ಭದ್ರತೆಗಳನ್ನು ಕಿತ್ತುಕೊಳ್ಳುವ ಕೆಲಸಗಳು ನಡೆಯುತ್ತಿವೆ. ಈ ನೀತಿಗಳ ವಿರುದ್ದ ಕಾರ್ಮಿಕ ಸಂಘಗಳು ನಿರಂತರವಾಗಿ ಸಾಮಾಜಿಕ ಭದ್ರತೆಗಾಗಿ ಹೋರಾಟಗಳನ್ನು ನಡೆಸುತ್ತಿವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ, ರಂಗಕರ್ಮಿ, ನಟ ಬಿ. ಸುರೇಶ್ ಅಭಿಪ್ರಯಪಟ್ಟರು. ಅವರು ವಿಶ್ವಕಾರ್ಮಿಕರ ದಿನಾಚರಣೆಯ (ಮೇ ದಿನಾಚರಣೆ) ಅಂಗವಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಿಐಟಿಯು ತುಮಕೂರು ನಗರದ ಟೌನ್ಹಾಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಪ್ರಸ್ತುತ ಕಾರ್ಮಿಕರನ್ನು ನಿಶಸ್ತçಗೊಳಿಸುವುದರ ವಿರುದ್ಧ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ಮುಂದುವರುದು ದಿನಕ್ಕೆ ೧೬ ರಿಂದ ೧೮ ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದ ಬಂಡವಾಳಗಾರರ ವ್ಯವಸ್ಥೆಯ…
Author: News Desk Benkiyabale
ನಗರದ ಎಸ್.ಎಸ್.ಪುರಂ ಮಾರುತಿ ವಿದ್ಯಾಕೇಂದ್ರದಲ್ಲಿ ಅಧ್ಯಯನ ಮಾಡು ತ್ತಿದ್ದ ಹರಿಪ್ರಿಯಾ ಡಿ. ಇವರು ಈ ಬಾರಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೯೫.೩೬ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಪತ್ರಕರ್ತ ಟಿ.ಇ.ಧ್ರವಕುಮಾರ್ ಮತ್ತು ಲಕ್ಷಿö್ಮ ದಂಪತಿಯ ಮಗಳಾಗಿದ್ದು, ಇವರು ಕನ್ನಡದಲ್ಲಿ ೧೧೯, ಇಂಗ್ಲೀಷ್ ನಲ್ಲಿ ೧೦೦, ಹಿಂದಿ ೯೯, ಗಣಿತ ೯೬, ವಿಜ್ಞಾನ ೯೪ ಹಾಗೂ ಸಮಾಜ ವಿಜ್ಞಾನದಲ್ಲಿ ೮೮ ಅಂಕ ಪಡೆಯುವ ಮೂಲಕ ೬೨೫ಕ್ಕೆ ೫೯೬ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ತುಮಕೂರು: ಅಖಿಲ ಭಾರತ ದಲಿತಾ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಮೇ ೧ ಕಾರ್ಮಿಕರ ದಿನಾಚರಣೆಯನ್ನು ಜಿಲ್ಲಾ ಕಛೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಮಿಕರ ಕಾರ್ಯಕ್ಷಮತೆಯನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ಪ್ರಪಂಚದಾದ್ಯAತ ಕಾರ್ಮಿಕರು ವಿವಿಧ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಣೆ ಮಾಡುತ್ತಾ, ತಮ್ಮದೇ ಆದ ಕೊಡುಗೆಗಳನ್ನು ಈ ಭೂಮಿಗೆ ನೀಡುತ್ತಿದ್ದಾರೆ, ಆದರೆ ಕಾರ್ಮಿಕ ವರ್ಗವನ್ನು ಈ ಜಗತ್ತು ನೋಡುವ ದೃಷ್ಠಿಯೇ ಬೇರೆ, ಸಂಬಳ-ವೇತನ ಪಡೆದು ಕೆಲಸ ನಿರ್ವಹಣೆ ಮಾಡುವ ಪ್ರತಿಯೊಬ್ಬರೂ ಸಹ ಕಾರ್ಮಿಕರೇ ಎಂಬುದು ನನ್ನ ಭಾವನೆ, ಏಕೆಂದರೆ ಕಾರ್ಮಿಕ ಮಾಡುವ ಕೆಲಸ ಕಾರ್ಯಗಳು ವಿಭಿನ್ನವಾಗಿರುತ್ತವೆ, ಅವರವರ ಕಾರ್ಯಕ್ಷಮತೆ, ಬುದ್ಧಿಕ್ಷಮತೆ, ಬಲದ ಆಧಾರದ ಮೇಲೆ ಕಾರ್ಮಿಕರು ತಮ್ಮ ಕೆಲಸಗಳನ್ನು ನಿರ್ವಹಿಸುತ್ತಾರೆ, ಕಾರ್ಮಿಕರಲ್ಲದ ಭೂಮಿಯನ್ನು ಊಹಿಸಿಕೊಳ್ಳಲು ಅಸಾಧ್ಯವೆಂಬುದು ನನ್ನ ಭಾವನೆ ಎಂದು ತಿಳಿಸಿದರು. ನಂತರ ಕಾರ್ಮಿಕ ಘಟಕದ ಅಧ್ಯಕ್ಷರಾದ ಟೈಲರ್ ಜಗದೀಶ್ ಮಾತನಾಡುತ್ತಾ ಕಾರ್ಮಿಕರಿಗೆ ತಮ್ಮ ಇಂತಿಷ್ಟ…
ತುಮಕೂರು: ನಗರದ ಜನಪರ-ಚಳವಳಿಗಳ ಕೇಂದ್ರ ಕಛೇರಿ’ಯಲ್ಲಿ ಕಾರ್ಮಿಕ ಚಳವಳಿಯ ಸಂಗಾತಿಗಳು ಮತ್ತು ರಂಗಾಭ್ಯಾಸಿಗಳು ಬಸವ-ಜಯಂತಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸಿಐಟಿಯು, ಸಿಪಿಐ(ಎಂ) ಹಾಗೂ ಬಯಲ-ಕರ್ನಾಟಕದ ಸೃಜನಶೀಲ ಕಲಾವಿದರ ಒಕ್ಕೂಟವಾದ ಬಯಲು ಸೀಮೆ ಕಂಪನಿ-ತುಮಕೂರು, ಹಿರಿ-ಕಿರಿಯ ರಂಗಾ ಭ್ಯಾಸಿಗಳು, ಕಾರ್ಮಿಕ ಹಾಗೂ ಜನಪರ ಚಳವಳಿಗಳ ಸಂಗಾತಿಗಳು ಉಪಸ್ಥಿತರಿದ್ದರು. ಬಸವಣ್ಣನವರ ಡೆಮಾಕ್ರಟಿಕ್-ಸೊಸೈಟಿಯ ಆಶಯಗಳನ್ನು ಕುರಿತು ವಿಸ್ತಾರವಾಗಿ ಮಾತನಾಡಿದ ರಂಗ-ನಿರ್ದೇಶಕ ನಟರಾಜ್ ಹೊನ್ನವಳ್ಳಿ, ಶೋಷ ಣೆ, ತಾರತಮ್ಯ, ಅಸಮಾನತೆ ಮತ್ತು ವೃತ್ತಿ-ಆ ಧಾರಿತ ಜಾತಿಗಳ ಅಸ್ತಿತ್ವವನ್ನು ಬಲವಾಗಿ ವಿವೇಚಿಸಿ ಶ್ರಮಣ ಧಾರೆಗಳನ್ನು ಗುರ್ತಿಸಿ ನಿರೂಪಿಸ ಬಯ ಸಿದ್ದವರು. ಕುಲದ ಮೂಲ ನೆಲೆಗಳವರೆಗೂ ಪ್ರಭಾವಿಸುವಷ್ಟು ಪ್ರಭಾವಶಾಲಿಯಾಗಿದ್ದ ಉತ್ತರ-ಭಾರತೀಯ ವೈದಿಕ ಧರ್ಮಾಚರಣೆಗಳನ್ನು ಕನ್ನಡಿ ಗರು ನಿರಾಕರಿಸಬೇಕಾದ ನಿರ್ವಸಾಹತೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದವರು. ಈಕ್ವಾಲಿಟಿ ಮತ್ತು ಡೆಮಾಕ್ರಸಿಯನ್ನು ಬಲವಾಗಿ ಪ್ರತಿಪಾದಿಸಿದ ಬಸವಣ್ಣನವರು ಇವನಾರವ-ಇವನಾರವ ಎಂದು ಮನುಷ್ಯಕುಲಂ-ತಾನೊAದೆ ವಲಂ ಎಂಬುದನ್ನು ಸ್ಪಷ್ಟ ನಿರ್ವಚಿಸಬಲ್ಲವರಾಗಿದ್ದರು. ಆ ನೆಲೆಯಿಂದಲೇ ಕಲ್ಯಾಣದ ಪರಿಕಲ್ಪನೆಯನ್ನು ಹರವಿದರು. ಸಿಐಟಿಯು-ತುಮಕೂರಿನ ಸುಬ್ರಹ್ಮಣ್ಯ ಮಾತ ನಾಡಿ, ನಮ್ಮ ಕಲ್ಯಾಣ-ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರನ್ನು…
ಮಧುಗಿರಿ: ಜಾತಿ ಗಣತಿಯ ನಮೂನೆಯ ಕಾಲಂ೬೧ ರಲ್ಲಿ ಮಾದಿಗ ಸಮುದಾಯದವರೆಂದು ನಮೂ ದಿಸುವಂತೆ ಮಾಜಿ.ಜಿ.ಪಂ ಸದಸ್ಯ ಹೆಚ್ ಡಿ ಕೃಷ್ಣಪ್ಪ ಕರೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಜಿಲ್ಲಾ ಮಾದಿಗ ಪದವೀಧರರ ವೇದಿಕೆ ಹಾಗೂ ಒಳ ಮೀಸಲಾತಿ ತಾಲೂಕು ಹೋರಾಟ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ ೧೦೧ಜಾತಿಗಳ ಪೈಕಿ ಒಳಮಿಸಲಾತಿ ವರ್ಗಿಕರಣದ ಸಮೀಕ್ಷೆಗೆ ಬರುವಂತಹ ಅಧಿಕಾರಿಗಳ ಬಳಿ ನಮ್ಮ ಸಮು ದಾಯದವರು ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿ ದ್ರಾವಿಡ ಇತ್ಯಾದಿ ಜಾತಿ ಸೂಚಕವಲ್ಲದ ಪದಗಳನ್ನು ಬರೆಸಬಾರದೆಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಗೋಪಾಲಯ್ಯ ಮಾತನಾಡಿ ಮಾದಿಗ ಸಂಬAಧಿತ ಜಾತಿಗಳು ಸರ್ಕಾರದ ಪ್ರತಿನಿಧಿಗಳು ಜಾತಿ ಸಮೀಕ್ಷೆಗೆ ಬರುತ್ತಿದ್ದು ತಪ್ಪದೆ ಆಯಾ ಗ್ರಾಮದಲ್ಲಿರುವ ವಿದ್ಯಾರ್ಥಿಗಳು ,ಯುವಕರು,ಸಂಘಟನೆಯ ಮುಖಂಡರುಗಳು ಗ್ರಾಮದ ಯಾವುದೇ ಕುಟುಂಬ ಈ ಜಾತಿ ಸಮೀಕ್ಷೆಯಿಂದ ಹೊರ ಗುಳಿಯದಂತೆ ಎಚ್ಚರ ವಹಿಸ ಬೇಕೆಂದರು. ಮಾಜಿ ತಾ.ಪಂ ಸದಸ್ಯ ಸೊಸೈಟಿ ರಾಮಣ್ಣ ಮಾತನಾಡಿ ಒಳ ಮೀಸಲಾತಿಯು…
ತುಮಕೂರು: ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅವರ ೫೦ನೇ ಹುಟ್ಟು ಹಬ್ಬವನ್ನು ಟೌನ್ ಹಾಲ್ನಲ್ಲಿರುವ ಶಾಸಕರ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆಯ ಜೊತೆಗೆ ಹಲವು ಸವಲತ್ತು ಹಾಗು ಸಲಕರಣೆಗಳನ್ನು ವಿತರಿಸುವ ಮೂಲಕ ಜೋತಿ ಗಣೇಶ್ ಅಭಿಮಾನಿ ಬಳಗದವತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜೋತಿಗಣೇಶ್ ಅಭಿಮಾನಿ ಬಳಗದ ಭಾರತದ ಸೈನಿಕರ ಕಲ್ಯಾಣ ನಿಧಿಗೆ ನೀಡಿದ ಒಂದು ಲಕ್ಷ ರೂಗಳ ಚೆಕ್ ವಿತರಿಸಿ ಹಾಗೂ ಶಾಸಕರಿಗೆ ಅಭಿನಂದಿಸಿ ಮಾತನಾಡಿದ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಶಾಸಕರಾಗಿರುವ ಜೋತಿಗಣೇಶ್ ಒರ್ವ ಅಪರೂಪದ ರಾಜಕಾರಣಿ. ಜನಸಾಮಾನ್ಯರ ಪರವಾಗಿ ಸದಾ ತುಡಿಯುವ ವ್ಯಕ್ತಿತ್ವ ಹೊಂದಿದ್ದಾರೆ.ಇವರ ತಂದೆ ಜಿ.ಎಸ್.ಬಸವರಾಜು ಅವರು ಐದು ಬಾರಿ ಸಂಸದರಾಗಿ ಜನಾನುರಾಗಿಯಾಗಿದ್ದಾರೆ.ಇವರು ಎರಡು ಬಾರಿ ವಿಧಾನಸಭಾ ಸದಸ್ಯರಾಗಿ ಜನಮನ್ನಣೆ ಗಳಿಸಿದ್ದಾರೆ.ನಿನ್ನೆ ದಿನ ನಾನು ಸಂಸತ್ತಿನಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಮೊಟ್ಟ ಮೊದಲ ಬಾರಿಗೆ ಆಚರಿಸುವ ಮೂಲಕ ತುಮಕೂರು ಜಿಲ್ಲೆಯ ಜನರ ಆಶಯವನ್ನು ಈಡೇರಿಸಿದ್ದೇನೆ.ಇದುವರೆಗೂ ಯಾರು ಸಹ ಬಸವ ಜಯಂತಿಯನ್ನು ಮಾಡಿರಲಿಲ್ಲ.ಹೊಸ ಸಂಸತ್…
ತುಮಕೂರು: ದೇಶದಲ್ಲಿ ಜಾತಿ ಗಣತಿ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಹಾಗಾಗಿ ರಾಜ್ಯ ಸರ್ಕಾರದ ಜಾತಿ ಗಣತಿಗೆ ಬೆಲೆ ಇಲ್ಲ. ಈ ಜಾತಿ ಗಣತಿ ವರದಿ ತನ್ನಿಂದ ತಾನಾಗಿಯೇ ನಿಷ್ಕಿçÃಯವಾಗುತ್ತದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು. ರಾಜ್ಯ ಸರ್ಕಾರ ನಡೆಸಿರುವ ಜಾತಿ ಗಣತಿಗೆ ಯಾವುದೇ ಕಿಮ್ಮತ್ತಿಲ್ಲ. ಹಾಗಾಗಿ ಈ ಸರ್ಕಾರದ ಜಾತಿ ಗಣತಿ ಹೊರಟು ಹೋಗಿದೆ. ದೇಶದ ಜಾತಿ ಗಣತಿಯನ್ನು ಕೇಂದ್ರ ಸರ್ಕಾರವೇ ಮಾಡಲಿದೆ ಎಂದು ಅವರು ತಿಳಿಸಿದರು. ನಗರದಲ್ಲಿ ಶಾಸಕ ಜ್ಯೋತಿಗಣೇಶ್ ರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ದೇಶ, ಒಂದು ಚುನಾವಣೆ, ಮಹಿಳಾ ಮೀಸಲಾತಿ ಬಿಲ್, ಜಾತಿ ಗಣತಿ ಇವೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿಯ ಚಿಂತನೆ. ರಾಜ್ಯ ಸರ್ಕಾರ ವಿನಾ ಕಾರಣ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದು ಉತ್ತಮ ಎಂದರು. ಪ್ರಧಾನಿ ನರೇಂದ್ರ ಮೋದಿಯವರು…
ಹುಳಿಯಾರು: ಕ್ರಾಂತಿಕಾರಿ ವಿಚಾರದ ವ್ಯಕ್ತಿಯಾದ ಬಸವಣ್ಣನವರು ಜಗತ್ತಿನಲ್ಲಿ ಸಮಾನತೆಯನ್ನು ಸ್ಥಾಪಿಸಲು ಶ್ರಮಿಸಿದ ಶಕ್ತಿ ಹಾಗೂ ಲಿಂಗ ತಾರತಮ್ಯವನ್ನು ವಿರೋಧಿಸಿದ ಮೊದಲ ವ್ಯಕ್ತಿಯಾಗಿ ಜಗತ್ತಿಗೇ ಜ್ಯೋತಿಯಾದವರು ಎಂದು ತಿಮ್ಲಾಪುರ ಗ್ರಾಪಂ ಸದಸ್ಯ ನಂದಿಹಳ್ಳಿ ದೇವರಾಜು ತಿಳಿಸಿದರು. ಹುಳಿಯಾರು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್À ಅಸೋಸಿಯೇಷನ್ ವತಿಯಿಂದ ಬುಧವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸುಮಾರು ೮೦೦ ವರ್ಷಗಳ ಹಿಂದೆ ಸಮಾಜದಲ್ಲಿ ಅಸಮಾನತೆ ತಾಂಡವಾಡುತ್ತಿದ್ದಾಗ ಅದನ್ನು ತೊಡೆದುಹಾಕಲು ಅವಿರತವಾಗಿ ಶ್ರಮಿಸಿದವರು. ತಮ್ಮ ತತ್ವ, ವಚನಗಳ ಮೂಲಕ ಉತ್ತಮ ಸಂದೇಶವನ್ನು ಸಮಾಜಕ್ಕೆ ನಿರಂತರವಾಗಿ ನೀಡಿದರು. ಅವುಗಳನ್ನು ನಾವು ನಿಜಜೀವನದಲ್ಲಿ ಅಳವಡಿಸಿಕೊಂಡರೆ ಬಸವಣ್ಣನವರು ಕಂಡ ಸುಂದರ ಸಮಾಜ ನಿರ್ಮಿಸಬಹುದು ಎಂದರು. ಜಯಕರ್ನಾಟಕ ಸಂಘಟನೆಯ ಮೋಹನ್ಕುಮಾರ್ ರೈ ಮಾತನಾಡಿ ಬಸವ ಜಯಂತಿಯAದು ಮಾತ್ರ ಬಸವಣ್ಣನವರನ್ನು ನೆನಪಿಸಿ ಕೊಂಡರೆ ಸಾಲದು. ನಿತ್ಯ ಬದುಕಿನಲ್ಲಿ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಕಾಯಕದಲ್ಲಿಯೆ ಭಗವಂತನನ್ನು ಕಾಣುವ ಗುಣವನ್ನು ನಾವು ಬೆಳೆಸಿ ಕೊಳ್ಳಲು ಪ್ರಯತ್ನಿಸಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ…
ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮ ಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ವಿಶ್ವಗುರು ಬಸವಣ್ಣನವರ ೮೯೨ನೇ ಜಯಂತಿ ಹಾಗೂ ಪ್ರೊ. ಬಿ ಕೃಷ್ಣಪ್ಪನವರ ೨೨ನೇ ಸ್ಮರಣೆಯ ಅಂಗವಾಗಿ ಕಾಯಕ ಚಳುವಳಿ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಸ್ಲಂ ಭವನದಲ್ಲಿ ಆಯೋ ಜಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸಮಾಜದಲ್ಲಿ ವಿವಿಧ ಸ್ಥರಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತು ಕಾಯಕ ಜೀವಿಗಳು ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿದರು. ವಿಶೇಷ ಉಪನ್ಯಾಸ ನೀಡಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ಬಿ.ಉಮೇಶ್ ಮಾತನಾಡಿ, ಬಸವಣ್ಣನವರ ಕಾಯಕ ಸಿದ್ದಾಂತ ಭಾರತದ ಆರ್ಥಿಕ ಚಲನೆಗೆ ಕಾರಣವಾಗಿದೆ ಜನರ ಭಾಷೆಯಲ್ಲಿ ವಚನಗಳ ರಚನೆ ಮಾಡಿ ಕರ್ಮ ಸಿದ್ದಾಂತದ ಬದಲಾಗಿ ಕಾಯಕ ಸಿದ್ದಾಂತವನ್ನು ಬಸವಣ್ಣನವರು ಚಾಲನೆಗೆ ತಂದರು ಈ ಮೂಲಕ ಶ್ರಮ ಸಂಸ್ಕೃತಿಯ ಪರಿಕಲ್ಪನೆ ಕಾಯಕ ಮತ್ತು ದಾಸೋಹಕ್ಕೆ ಪೂರಕವಾಗಿಸಿತ್ತು. ಅಂದು ಸ್ಥಿತಿ ಪ್ರಜ್ಞೆ ಇದ್ದಂತಹ ಸಮಾಜದಲ್ಲಿ ಪ್ರೀತಿ, ತಾಳ್ಮೆ ಲಿಂಗ ಸಮಾನತೆ ಸಂವೇಧನೆ ಸಾಮಾನ್ಯ ಜನರಲ್ಲಿ…
ತುಮಕೂರು: ೦೩ ವರ್ಷಗಳ ನಂತರ ನಡೆಯುತ್ತಿರುವ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿ ಯಾರು ಹೋಬಳಿ ಕೆಂಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸ ವ ಇದು ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿ ಮಹಾ ರಥೋತ್ಸವ ಜರುಗಿತು. ಬಸವ ಜಯಂತಿ ಹಿನ್ನೆಲೆ ಚನ್ನಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು,ಇಂದು ಮುಂಜಾನೆ ಮಹದೇವಮ್ಮ , ಚನ್ನಬಸವಯ್ಯ ದಂಪತಿಗಳು ರಥಕ್ಕೆ ಪುಣ್ಯಾಹ ಕಾರ್ಯ ನಡೆಸಿ ಕಳಸ ಸ್ಥಾಪಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಸ್ವಾಮಿಯನ್ನು ಬಸವನ ಉತ್ಸವ ಹಾಗೂ ಧ್ವಜದ ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರೆತಂದು,ರAಗುರAಗಿನ ಬಾವುಟ,ಎಳನೀರ ಗೊಂಚಲು,ಬಾಳೆಗೊನೆ,ಕೊಬ್ಬರಿಹಾರ ಸೇರಿದಂತೆ ವಿವಿಧ ಮಾದರಿಯ ಹೂ,ಹಾರಗಳಿಂದ ಶೃಂಗರಿಸಿದ್ದ ರಥಕ್ಕೆ ಚನ್ನಬಸವೇಶ್ವರ ಸ್ವಾಮಿ ತೋರಿಸಿ ಗ್ರಾಮಸ್ಥರು ಜಯ ಘೋಷ ಹಾಕಿ ರಥವನ್ನು ಹಿಡಿದು ಅದ್ದೂರಿಯಾಗಿ ಸಂಭ್ರಮಿಸಿದರು. ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದವರು,ರಥದ ಗಾಲಿಗೆ ಕಾಯಿ ಹೊಡೆದು ಪೂಜೆ ಸಲ್ಲಿಸಿದರು. ಜಾತ್ರೆಗೆ ಆಗಮಿಸಿದ್ದ ಭಕ್ತಾಧಿಗಳಿಗೆ ಪಾನಕ,ಪನಿವಾರ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.











