ತುಮಕೂರು:

ತುರುವೇಕೆರೆ ತಾಲ್ಲೂಕು ಮಾಯಸಂದ್ರದಲ್ಲಿ ಮಾದರಿ
ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ
ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ರಾಜ್ಯಸಭಾ ಸದಸ್ಯರಾದ ಬಳಿಕ ತುಮಕೂರು ಜಿಲ್ಲೆಯನ್ನು ನೋಡಲ್
ಜಿಲ್ಲೆಯನ್ನಾಗಿಸಿಕೊಂಡಿರುವ ಜಗ್ಗೇಶ್ ಅವರು ನಗರದ ಜಿಲ್ಲಾಧಿಕಾರಿಗಳ
ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಾಗೂ ಅಪರ ಜಿಲ್ಲಾಧಿಕಾರಿ
ಚನ್ನಬಸಪ್ಪ ಅವರೊಂದಿಗೆ ತುರುವೇಕೆರೆ ತಾಲ್ಲೂಕಿನಲ್ಲಿ ಸರ್ಕಾರಿ
ಶಾಲೆಗಳನ್ನು ಮಾದರಿ ಶಾಲೆಯನ್ನಾಗಿಸುವ ಸಂಬಂಧ ಚರ್ಚೆ ನಡೆಸಿದರು.
ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯಗಳ್ನಾಗಿಸಿದರೆ ಗ್ರಾಮೀಣ ಪ್ರದೇಶದ
ಮಕ್ಕಳು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾಗಲಿದೆ. ಹಾಗಾಗಿ
ಮಾಯಸಂದ್ರ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವ ಕುರಿತು
ಚರ್ಚೆ ನಡೆಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು
ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಹಾಗೆಯೇ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆಯೂ ಸಹ
ಚರ್ಚಿಸಲಾಗಿದೆ. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್ ಸಹ ಸರಿಯಾಗಿ
ಕಾರ್ಯನಿರ್ವಹಿಸದಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಹಾಗಾಗಿ ಡಯಾಲಿಸಿಸ್
ಕೇಂದ್ರವನ್ನು ಸಹ ಮೇಲ್ದರ್ಜೆಗೇರಿಸಲಾಗುವುದು ಎಂದರು.
ನಾನು ರಾಜ್ಯಸಭಾ ಸದಸ್ಯನಾದ ಬಳಿಕ ಯಾವುದಾದರು ಒಂದು ಜಿಲ್ಲೆಯನ್ನು
ನೋಡಲ್ ಜಿಲ್ಲೆಯನ್ನಾಗಿ ತೆಗೆದುಕೊಳ್ಳಬೇಕಾಗಿತ್ತು. ಹಾಗಾಗಿ ನನ್ನ ತವರು
ಜಿಲ್ಲೆಯನ್ನೆ ನೋಡಲ್ ಜಿಲ್ಲೆಯನ್ನಾಗಿ ತೆಗೆದುಕೊಂಡಿದ್ದೇನೆ ಎಂದು ಅವರು
ಹೇಳಿದರು.
ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತ
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ
ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿರುವುದು ಕಾಂಗ್ರೆಸ್ ಪಕ್ಷದ
ಕಾರ್ಯಕರ್ತನೆ ಎಂಬ ಮಾಹಿತಿ ಇದೆ. ಮೊಟ್ಟೆ ಎಸೆದಿರುವ ಕಾರ್ಯಕರ್ತನೆ
ಹೇಳಿರುವಂತೆ ಆತ ಜೆಡಿಎಸ್ ಪಕ್ಷದಲ್ಲಿದ್ದು, ನಂತರ ಕಾಂಗ್ರೆಸ್ ಬಂದು, ಕೆಲ
ವಿಚಾರಧಾರೆಗಳಿಂದ ಬೇಸತ್ತು ಹೀಗೆ ಮಾಡಿದ್ದಾನೆ ಎಂಬ ಮಾಹಿತಿ ಇದೆ ಎಂದರು.
ಮುಂದಿನ ವರ್ಷ ಜೂನ್ ತಿಂಗಳ ವರೆಗೆ ಕಾಂಗ್ರೆಸ್‍ನವರು ಹೋರಾಟ
ಮಾಡುತ್ತಾರೆ. ಆ ಜಾಗ ಹಿಡಿಯಬೇಕೆಂಬ ಹುಮ್ಮಸ್ಸಿನಿಂದ ಹೋರಾಟ ಮಾಡುತ್ತಾರೆ.
ಆದರೆ ಇವರ ಹೋರಾಟಕ್ಕೆ ಯಾವುದೇ ನಿರ್ಧಿಷ್ಟ ವಿಷಯಗಳಿಲ್ಲ. ಜೂನ್ ತಿಂಗಳ
ನಂತರ ಎಲ್ಲರೂ ತಣ್ಣಗಾಗುತ್ತಾರೆ. ಅದೇಕೆ ಎಂಬುದು ರಾಜ್ಯದ ಜನತೆಗೆ ತಿಳಿದಿದೆ
ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದವರಿಗೆ ಪ್ರತಿಭಟನೆ ಅವಕಾಶ ನೀಡದೆ ವಿರೋಧ ಪಕ್ಷವನ್ನು
ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಭಟನೆಗೆ
ಅವಕಾಶ ನೀಡಿದರೆ ಅದು ಮತ್ತೊಂದು ಗಲಾಟೆಗೆ ಕಾರಣವಾಗಿ ಹೆಣ ಬಿದ್ದು
ಇನ್ನೊಂದು ರೀತಿಯಲ್ಲಿ ಶಾಂತಿಗೆ ಭಂಗವಾಗಬಾರದು ಎಂಬ ಉದ್ದೇಶದಿಂದ
ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ ಎಂದರು.
ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ಅಧಿಕಾರ ನೀಡುವ ಕುರಿತು ಹೈಕೋರ್ಟ್
ನೀಡಿರುವ ತೀರ್ಪಿನ ವಿರುದ್ಧ ಸರ್ಕಾರದ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ
ಸಲ್ಲಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ಬಗ್ಗೆ ನನಗೆ
ಸಂಪೂರ್ಣ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡ ನಂತರವಷ್ಟೆ
ಮಾತನಾಡುತ್ತೇನೆ ಎಂದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಸಂಸದ ಹಾಗೂ ನಟ
ಜಗ್ಗೇಶ್ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್. ರವಿಶಂಕರ್ ಪುಷ್ಪಗುಚ್ಛ
ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಹನುಮಂತರಾಜು,
ರುದ್ರೇಶ್, ಮಲ್ಲಸಂದ್ರ ಶಿವಣ್ಣ, ಕೊಪ್ಪಲ್ ನಾಗರಾಜು, ಪ್ರತಾಪ್ ಹಾಗೂ

(Visited 3 times, 1 visits today)