Author: News Desk Benkiyabale

ತುಮಕೂರು : ದೇಶದ ಪ್ರಧಾನಿ ನರೇಂದ್ರ ಮೋದಿರವರು ಹಿಂದುಳಿದ ವರ್ಗದ ಹಾಗೂ ಬಡ ವರ್ಗದವರು ಮತ್ತು ಎಲ್ಲರೂ ಪ್ರಶಂಶಿಸುವ ವ್ಯಕ್ತಿ ಆಗಿದ್ದು, ದೇಶದ ಆರ್ಥಿಕತೆ, ಭದ್ರತೆ, ಸುರಕ್ಷತೆಗೆ ಕಟಿಬದ್ಧರಾಗಿದ್ದಾರೆಂದು ಶ್ರೀ ಶೆಟ್ಟಿಹಳ್ಳಿ ಟೀ ಸ್ಟಾಲ್‍ನ ಮಾಲೀಕ ಬಿ.ಉಮೇಶ್ ಕುಮಾರ್ (ಶೆಟ್ಟಿಹಳ್ಳಿ) ಮತ್ತು ಬಾಯರ್ಸ್ ಕಾಫೀ ಸ್ಟಾಲ್‍ನ ಮಾಲೀಕ ಪಿ.ಕೃಷ್ಣಮೂರ್ತಿರವರುಗಳು ಜಂಟಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರು ಇಂದು ತುಮಕೂರಿನ ಶ್ರೀ ಬಾಲಗಂಗಾಧರ ಸ್ವಾಮೀಜಿರವರುಗಳ (ಟೌನ್ ಹಾಲ್) ವೃತ್ತದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿರವರ ಜನ್ಮ ದಿನದ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ (ಇಂದು) ನಡೆದ ಮೋದಿರವರ ಜೀವನ ಚರಿತ್ರೆಯ ಪ್ರದರ್ಶಿನಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಸನ್ಮಾನಿಸಿದ ನಂತರ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿರವರು ಬಾಲ್ಯದಲ್ಲಿ ನಮ್ಮ ಹಾಗೆ ಟೀ ಅಂಗಡಿ ನಡೆಸುತ್ತಾ, ಸಾಮಾಜಿಕ ಸೇವಾ ಚಟುವಟಿಕೆ ಮೂಲಕ ಹಂತ-ಹಂತವಾಗಿ ರಾಜಕೀಯದಲ್ಲಿ ಮೆಟ್ಟಲೇರುತ್ತಾ ಬಿಜೆಪಿ ಕಾರ್ಯಕರ್ತರಾಗಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಾಗಿ ಬಡವರು ಹಿಂದುಳಿದವರಿಗೆ ಹಲವಾರು ಯೋಜನೆಗಳಾದ ಉಜ್ವಲ, ಆಯುಷ್ಮಾನ್ ಭಾರತ್, ಪ್ರಧಾನ…

Read More

ತುಮಕೂರು ಜಲ, ಸೌರ ಮತ್ತು, ಉಷ್ಣ ವಿದ್ಯುತ್ ಸ್ಥಾವರಗಳಿಂದ ಉತ್ಪಾದಿಸುತ್ತಿರುವ ವಿದ್ಯುತ್ ಸದ್ಯದ ಪರಿಸ್ಥಿಯಲ್ಲಿ ಸಾಲುತ್ತಿಲ್ಲ. ಹೆಚ್ಚುತ್ತಿರುವ ಬೇಡಿಕೆಯನ್ನು ಸರಿದೂಗಿಸಲು ಇಂದು ಆಧುನಿಕ ತಂತ್ರಜ್ಞಾನದಿಂದ ಹೆಚ್ಚು ಉತ್ಪಾದನೆ ಮತ್ತು ಸುಧಾರಣೆ ತಂದುಕೊಳ್ಳುವ ಅಗತ್ಯವಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ಅಭಿಪ್ರಾಯಪಟ್ಟರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪಿ.ಜಿ.ಸೆಮಿನಾರ್ ಸಭಾಂಗಣದಲ್ಲಿ ಇಂದು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ‘ಎನರ್ಜಿ ಕ್ಲಬ್’ ಏರ್ಪಡಿಸಲಾಗಿದ್ದ ‘ ‘ವಿದ್ಯುತ್‍ಚಾಲಿತ ವಾಹನಗಳ ಬಳಕೆ ಮತ್ತು ಅದರ ಅನ್ವಯಿಕಗಳು’ ಕುರಿತು ನವದೆಹಲಿಯ ಎಐಸಿಟಿಇ ಪ್ರಾಯೋಜಿತ ಎರಡು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿದರು. ತಂತ್ರಜ್ಞಾನ ಬಳಕೆಯಲ್ಲಿ ಜಗತ್ತನ್ನೇ ಬದಲಾಯಿಸಿಬಿಟ್ಟಿದೆ ಸೌರ ಶಕ್ತಿ ಉತ್ಪಾದನೆ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ಉತ್ಪಾದನೆಗೆ ತಕ್ಕದಾಗಿಲ್ಲ. ಜಲ ವಿದ್ಯುತ್ ಹನ್ನೆರಡು ಸಾವಿರದಿಂದ ಹದಿನೈದು ಸಾವಿರ ಮೆಗಾ ವ್ಯಾಟ್ ಕರ್ನಾಟಕದಲ್ಲಿ ಉತ್ಪಾದಿಸಲಾಗುತ್ತೆ . ಅದರಲ್ಲಿ ಪಾವಗಡದಲ್ಲಿ 2900…

Read More

ಪಾವಗಡ ಕೋವಿಡ್ ಪಿಡುಗಿನ ನಂತರ ಯಥಾ ಪ್ರಕಾರ ಪ್ರತಿ ಎರಡು ತಿಂಗಳಿಗೊಮ್ಮೆ ಕುಷ್ಠರೋಗದಿಂದ ಮುಕ್ತರಾಗಿ ದುರದೃಷ್ಟವಶಾತ್ ಅಂಗವೈಕಲ್ಯವನ್ನು ಪಡೆದಂತಹವರಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರ ಚಿಕಿತ್ಸೆ ಹಾಗೂ ಫಿಜಿಯೋಥೆರಪಿ ಮತ್ತು ಔಷಧೋಪಚಾರಗಳನ್ನು ಕಳೆದ ಮೂರು ದಶಕಗಳಿಂದ ನೀಡುತ್ತಾ ಬಂದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕಳೆದ ವರ್ಷದಿಂದ ಮತ್ತೆ ಈ ಶಸ್ತ್ರ ಚಿಕಿತ್ಸೆಗಳು ಆರಂಭವಾಗಿದ್ದು ದೂರದ ರಾಯಚೂರು, ಗುಲ್ಬರ್ಗಾ, ಚಾಮರಾಜನಗರ, ಬಳ್ಳಾರಿ ಹಾಗೂ ಗಡಿನಾಡು ಪ್ರದೇಶವಾದ ಆಂಧ್ರಪ್ರದೇಶದಿಂದ ರೋಗಿಗಳು ಸಂಪೂರ್ಣ ಉಚಿತವಾದ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮವಾದ, ಮತ್ತೆಲ್ಲದಕ್ಕಿಂತ ಮಿಗಿಲಾಗಿ ಲಕ್ಷಾಂತರ ರೂಪಾಯಿ ವೆಚ್ಚದ ಶಸ್ತ್ರ ಚಿಕಿತ್ಸೆಗಳನ್ನು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈವರೆವಿಗೆ 584 ರೋಗಿಗಳಿಗೆ ಅವರ ಅಂಗವೈಕಲ್ಯತೆಯನ್ನು ದೂರವಾಗಿಸಿ ಸಮಾಜದಲ್ಲಿ ಎಲ್ಲರಂತೆ ಬದುಕಿ ಬಾಳುವ ಅವಕಾಶವನ್ನು ನೀಡಲಾಗುತ್ತಾ ಬರುತ್ತಿದೆ. ಕಳೆದ ವಾರವಷ್ಟೇ ಮತ್ತೊಂದು ತಂಡ ಈ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದು ಸುಮಾರು ಎರಡು ತಿಂಗಳು ಊಟೋಪಚಾರ ಹಾಗೂ ಔಷಧೋಪಚಾರ ಮತ್ತು ಫಿಜಿಯೋಥೆರಪಿ ಮುಂತಾದ ಪ್ರಕ್ರಿಯೆಗಳಿಗೆ ಒಳಗಾಗುತ್ತಾರೆ. ಇವರೊಂದಿಗೆ ಸಹಚರರೂ…

Read More

ತುಮಕೂರು ಕಳೆದ 226 ದಿನಗಳಿಂದ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಶ್ರೀವಾಲ್ಮೀಕಿ ಸಂಸ್ಥಾನ ಮಠದ ಶ್ರೀಪಸನ್ನಾನಂದ ಸ್ವಾಮೀಜಿಗಳು ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಬೇಡಿಕೆ ಈಡೇರಿಸದ ಸರಕಾರ, ಜನರ ಕಣ್ಣೊರೆಸಲು ಮಹರ್ಷಿ ವಾಲ್ಮೀಕಿ ಜಯಂತಿ ಮಾಡಲು ಹೊರಟಿರುವುದನ್ನು ಖಂಡಿಸಿ, ತುಮಕೂರು ಜಿಲ್ಲಾ ವಾಲ್ಮೀಕಿ ಸಮಾಜದ ಮುಖಂಡರು ಶುಕ್ರವಾರ ಜಿಲ್ಲಾಡಳಿತ ಕರೆದಿದ್ದ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಶುಕ್ರವಾರ ಜಿಲ್ಲಾಡಳಿತ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆದಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯ ವೇಳೆ ಶ್ರೀವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಜಿ.ಪುರುಷೋತ್ತಮ್ ಹಾಗೂ ರಾಜ್ಯ ಪದಾಧಿಕಾರಿ ಪ್ರತಾಪ್ ಮದಕರಿ ಸೇರಿದಂತೆ ಹಲವರು ಸಭೆ ಆರಂಭವಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಭೆಯಲ್ಲಿ ಪಾಲ್ಗೊಳ್ಳದೆ ಹೊರ ನಡೆದರು. ಈ ವೇಳೆ ಮಾತನಾಡಿದ ಪ್ರತಾಪ ಮದಕರಿ,ರಾಜನಹಳ್ಳಿಯ ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳು ಕಳೆದ 226ರ ದಿನಗಳಿಂದ ಹಗಲು,ರಾತ್ರಿ,ಮಳೆ,ಗಾಳಿ ಎನ್ನದೆ ವಾಲ್ಮೀಕಿ ಸಮುದಾಯಕ್ಕೆ ಶೇ7.5ರಷ್ಟು ಮೀಸಲಾತಿ ಹೆಚ್ಚಿಸಬೇಕೆಂದು ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಕಿವಿಗೊಡದ ಸರಕಾರ,ಇಂದು ವಾಲ್ಮೀಕಿ ಜಯಂತಿ ಆಚರಣೆ ಮಾಡುವ ಮೂಲಕ ಸಮುದಾಯದ…

Read More

ಬೆಂಗಳೂರು : ದಿವಂಗತ ಅನಂತಕುಮಾರ್‌ ಅವರದ್ದು ಚುಂಬಕ ವ್ಯಕ್ತಿತ್ವ. ಅವರು ನಮಗೆಲ್ಲಾ ಪ್ರೇರಣ ಶಕ್ತಿಯಾಗಿದ್ದಂತಹ ಅವರ ಭವಿಷ್ಯದ ಅಪೇಕ್ಷೆಯನ್ನು ಈಡೇರಿಸುತ್ತ ಕಂಕಣಬದ್ದರಾಗಿರಬೇಕು ಎಂದು ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. ಇಂದು ದಿವಂಗತ ಅನಂತಕುಮಾರ್‌ ಅವರ 63 ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಅನಂತ ಪ್ರೇರಣ ಕಾರ್ಯಕ್ರಮಗಳ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಂತಯಾನ ಪುಸ್ತಕದ ಮೊದಲ ಭಾಗವನ್ನು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, 1963 ಸುಮಾರು 40 ವರ್ಷಗಳ ಒಡನಾಟ ನಮ್ಮದು. ಪಿಯುಸಿ ಫಸ್ಟ್‌ ಇಯರ್‌ನಲ್ಲಿ ಇರುವಾಗ ನನ್ನ ವಿದ್ಯಾರ್ಥಿ ಪರಿಷತ್‌ಗೆ ಸೇರಿದ ಕ್ಷಣದಿಂದ ನನ್ನ ಒಡನಾಟ ಅನಂತಕುಮಾರ್‌ ಜೊತೆ ಆಗಿದೆ. ಅನಂತಕುಮಾರ್‌ ಅವರದ್ದು ಆಕರ್ಷಕ ವ್ಯಕ್ತಿತ್ವ. ಅವರ ಒಡನಾಟ ನೆನೆಪು ಮಾಡಿಕೊಳ್ಳುವುದು ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುತ್ತದೆ. ನಮಗೆಲ್ಲಾ ಪ್ರೇರಣ ಶಕ್ತಿಯಾಗಿದ್ದರು. ನಮ್ಮೆಲ್ಲರ ಜೀವನದಲ್ಲಿ ಅವರ ಅನುಭವದ ಪಾಠ ಇದೆ. ಅನಂತಯಾನ ಪುಸ್ತಕ ಲೋಕಾರ್ಪಣೆ ಮಾಡಿದ್ದೇನೆ, ಬಹಳಷ್ಟು ಪರಿಶ್ರಮ ಈ ಪುಸ್ತಕದ ಹಿಂದೆ…

Read More

ತುಮಕೂರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿ.ಐ.ಟಿ.ಯು. ಜಿಲ್ಲಾ ಸಮಿತಿಯಿಂದ ರಾಜ್ಯಾದ್ಯಂತ ನಡೆದ ಚಳುವಳಿಯ ಬಾಗವಾಗಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟಿಸಿ ಕಲ್ಯಾಣ ಮಂಡಳಿ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಛೇರಿ ಆಡಳಿತಾಧಿಕಾರಿ ಬಾಗ್ಯಮ್ಮನವರ ಮೂಲಕ ಸಲ್ಲಿಸಲಾಯಿತು. ರಾಜ್ಯದ ಕಾರ್ಮಿಕ ಸಚಿವರು ಮತ್ತು ವಸತಿ ಸಚಿವರು ಮಂಡಳಿ ಮೇಲೆ ಚುನಾವಣಾ ವರ್ಷದ ಕಾರಣ ಪ್ರಭಾವ ಬೀರಿ ನೈಜ ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆಯನ್ನು ತಪ್ಪಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನು ತಿದ್ಧುಪಡಿ ಮಾಡಿರುವುದನ್ನು ವಿರೋಧಿಸಿ ಈ ಚಳುವಳಿ ನಡೆಸಲಾಯಿತು. ಚಳುವಳಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಐದು ವರ್ಷ ತುಂಬಿದ ನೈಜ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಸಾಲ / ಸಹಾಯಧನ / ಮುಂಗಡ ಹಣ ನೀಡುಬೇಕು ಬದಲಿಗೆ ಚುನಾವಣಾ ಲಾಭಕ್ಕೆ ಬಲಿಯಾಗಬಾರದು ಮಂಡಳಿ ಹಣ ಕಾರ್ಮಿಕರ ಪರಿಶ್ರಮದಿಂದ ಬಂದಿದೆ ಬಡ್ಜ್‍ಟ್ ಮೂಲಕ ಘೋಷಿಸಿ ಕಟ್ಟಡ ಕಾರ್ಮಿಕರಲ್ಲದವರಿಗೆ ನೀಡಬೇಕು. ನಕಲಿ ಕಾರ್ಮಿಕರ ನೊಂದಣೆ ಹೆಚ್ಚಾಗುತಿದ್ದು…

Read More

ತುಮಕೂರು: ಕೊಲ್ಕಾರಿಕೆ ಜಮೀನಿನ ಹಕ್ಕಿನ ಕುರಿತು ನ್ಯಾಯಾಯದಲ್ಲಿ ಕೇಸು ವಿಚಾರಣೆ ಹಂತದಲ್ಲಿರುವಾಗ, ತುಮಕೂರು ತಹಶೀಲ್ದಾರರು,ಕೆಲವೇ ಮಂದಿಯ ಹೆಸರಿಗೆ ಪಹಣಿ ಕೂರಿಸಿ, ಉಳಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಇಂದು ತುಮಕೂರು ನಗರದ ಎನ್.ಆರ್.ಕಾಲೋನಿ ಮೂಲಪುರುಷ ಕುಳುವಾಡಿ ವಂಶಸ್ಥರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಗರದ ಎನ್.ಆರ್.ಕಾಲೋನಿಯ ಮೂಲಪುರುಷ ಕುಳುವಾಡಿ ವಂಶಸ್ಥರಾದ ರಾಮ,ಲಕ್ಕ, ಪಠಾಣ್ ಅವರುಗಳಿಗೆ ತುಮಕೂರು ಕಸಭಾ ಸರ್ವೆ ನಂಬರ್ 8ರ ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಬಾಗ 4.18 ಗುಂಟೆ ಹಾಗು ಸರ್ವೆ ನಂಬರ್ 91-92ರ ರೈಲ್ವೆ ನಿಲ್ದಾಣದ ಪಕ್ಕದಲ್ಲಿ ಸುಮಾರು 30 ಗುಂಟೆ ಜಮೀನು ಇದ್ದು, ಇಂದು ಲಕ್ಷಾಂತರ ರೂ ಬೆಲೆ ಬಾಳುತ್ತಿವೆ.ಸದರಿ ಜಮೀನಿನ ಹಕ್ಕಿಗಾಗಿ ಮೇಲಿನ ಮೂರು ಕುಟುಂಬಗಳಿಗೆ ಸೇರಿದ ಸುಮಾರು 60-70 ಜನರು ನ್ಯಾಯಾಲಯದಲ್ಲಿ ದಾವೆ ಹೂಡಿ, ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ ಎಂದರು. ಕುಳುವಾಡಿಕೆ ಆಸ್ತಿಯ ಹಕ್ಕು ಸ್ಥಾಪಿಸುವ ಸಂಬಂಧ ನ್ಯಾಯಾಲಯದಲ್ಲಿ ಕೇಸು ಇರುವಾಗಲೇ ತುಮಕೂರು ತಾಲೂಕು ತಹಶೀಲ್ದಾರರವರು ಮೂಲ ಪುರುಷರ ಕುಟುಂಬಕ್ಕೆ ಸೇರಿದ ರಾಮಚಂದ್ರ…

Read More

ತುಮಕೂರು ಸಾರ್ವಜನಿಕರು,ವಿದ್ಯಾರ್ಥಿಗಳು ಓಡಾಡುವ ರಸ್ತೆಯ ಗೋಡೆಗಳ ಮೇಲೆ ತಪ್ಪು, ತಪ್ಪಾಗಿ ಕನ್ನಡ ಪದಗಳನ್ನು ಬರೆದು, ಕನ್ನಡ ಭಾಷೆಗೆ ಅಪಮಾನ ಮಾಡಿರುವ ತುಮಕೂರು ಸ್ಮಾರ್ಟ್‍ಸಿಟಿ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಸರಕಾರಿ ಎಸ್ಸಿ,ಎಸ್ಟಿ ಮೇಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟಲ್, ಬಿ.ಸಿ.ಎಂ.ಹಾಸ್ಟಲ್ ಕಾಂಪೌಂಡ್ ಗೋಡೆಗಳ ಮೇಲೆ ವಿವಿಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮಧ್ಯಪಾನ, ಧೂಮಪಾನ,ಪರಿಸರ ಮಾಲಿನ್ಯ, ಮಹಿಳಾ ಶಿಕ್ಷಣ ಕುರಿತಂತೆ ಹಲವು ಘೋಷವಾಕ್ಯಗಳನ್ನು ಬೆರೆಸಿದ್ದು, ಅವುಗಳಲ್ಲಿ ಹಲವಾರು ತಪ್ಪುಗಳು ಕಂಡುಬಂದಿವೆ. ಸ್ಮಾರ್ಟ್‍ಸಿಟಿ ಅಧಿಕಾರಿಗಳು ಕನ್ನಡ ಉಳಿಸಿ, ಬೆಳೆಸುವ ಬದಲಾಗಿ, ಕನ್ನಡವನ್ನು ಕೊಲ್ಲುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಇಲ್ಲಿ ಕನ್ನಡಭಾಷೆಗೆ ಯಾರೇ ಅಪಮಾನ ಮಾಡಿದರು ಸಹಿಸುವುದಿಲ್ಲ.ಜಾಗೃತಿ ಸಂದೇಶಗಳನ್ನು ಬರೆಯಲು ಕನ್ನಡ ಭಾಷೆ ಗೊತ್ತಿಲ್ಲದ ಹೊರರಾಜ್ಯದ ಕೆಲಸಗಾರರಿಗೆ ಗುತ್ತಿಗೆ ನೀಡಿರುವುದೇ ಇದಕ್ಕೆ ಕಾರಣ. ಕನಿಷ್ಠ ಪಕ್ಷ ಸ್ಮಾರ್ಟಸಿಟಿ…

Read More

ತುಮಕೂರು ಬೊಜ್ಜು ಹಾಗು ಕೊಬ್ಬಿನಾಂಶ ಕರಗಿಸಲು ಸಿರಿಧಾನ್ಯ ಸಹಕಾರಿ. ಸಿರಿ ಧಾನ್ಯಗಳಲ್ಲಿ ನಮ್ಮ ದೇಹದ ಅಗತ್ಯತೆಗೆ ತಕ್ಕಂತೆ ಬೇಕಾಗಿರುವ ಪೌಷ್ಠಿಕ ಸತ್ವಗಳಾದ ತಾಮ್ರ, ಮೆಗ್ನೀಷಿಯಂ, ಪಾಸ್ಪರಸ್, ಮ್ಯಾಂಗನೀಸ್ ಮತ್ತು ಇತರ ಪೌಷ್ಟಿಕ ಸತ್ವಗಳು ಸಾಕಷ್ಟು ಲಭ್ಯವಿವೆ ಎಂದು ಡಾ|| ಸಂಜಯ್ ನಾಯಕ್ ತಿಳಿಸಿದರು. ಅವರು ಹನುಮಂತಪುರ ಬಳಿ ಇರುವ ಭಾಗ್ಯ ನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಿರಿಧಾನ್ಯ ಬಳಕೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿಗೆ ಜನರ ಬದಲಾದ ಜೀವನ ಶೈಲಿಯಿಂದ ಒಮ್ಮೆಲೇ ಕಾಡುತ್ತಿರುವ ಹೃದಯದ ಸಮಸ್ಯೆಗಳು, ಪಾಶ್ರ್ವವಾಯು, ರಕ್ತದ ಒತ್ತಡ, ಮಧುಮೇಹ ಹೀಗೆ ಹಲವು ಬಗೆಯ ದೀರ್ಘ ಕಾಲ ಕಾಡುವ ಕಾಯಿಲೆಗಳು ಜನರ ಜೀವವನ್ನು ಮತ್ತು ಜೀವನವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಹಾಗಾಗಿ ಈ ಸಂದರ್ಭದಲ್ಲಿ ಅಗಾಧವಾದ ಪೌಷ್ಟಿಕಾಂಶಗಳನ್ನು ಒಳಗೊಂಡ ಸಿರಿ ಧಾನ್ಯಗಳ ಅವಶ್ಯಕತೆ ಜನರಿಗೆ ತುಂಬಾ ಇದೆ.ಸಮತೋಲನವಾದ ಆಹಾರ ಪದ್ಧತಿಯಲ್ಲಿ ಸಿರಿ ಧಾನ್ಯಗಳು ನಮಗೆ ಆರೋಗ್ಯಕರವಾದ ಜೀವನವನ್ನು ಒದಗಿಸುತ್ತವೆ ಎಂದರು. ವಕೀಲ…

Read More

ಬೆಂಗಳೂರು ಯಾವುದೇ ಸಂಘಟನೆ ಆಗಿರಲಿ ಸರಕಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹೇಳಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಬೆಳಂಬೆಳಗ್ಗೆ ದೇಶದೆಲ್ಲೆಡೆ ವಿವಿದ ರಾಜಗಳಲ್ಲಿ ದಾಳಿ ಮಾಡಿದ್ದು,100ಕ್ಕೂ ಹೆಚ್ಚು ಪಿಎಫ್‍ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಪಕ್ಷದ ನಿಲುವು ಯಾವಾಗಲೂ ಒಂದೇ ಆಗಿದೆ. ಕಾಲ ಕಾಲಕ್ಕೆ ಪಕ್ಷದ ನಿಲುವು ಬದಲಾಗುವುದಿಲ್ಲ. ಬಜರಂಗ ದಳ, ಪಿಎಫ್ ಐ ಎಸ್ ಡಿ ಯಾವುದೇ ಸಂಘಟನೆ ಇರಲಿ ಸೂಕ್ತ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರು. ಇಂತಹ ಸಂಘಟನೆ ಬ್ಯಾನ್ ಮಾಡಿ ಎಂದು ನಾವೇ ಹೇಳಿದ್ದೇವೆ. ಅದರೆ ಸಂಘಟನೆ ಬ್ಯಾನ್ ಮಾಡಲು ಸರಕಾರವೇ ಸಿದ್ದವಿಲ್ಲ. ಎಲ್ಲಾ ಸಂಘಟನೆಗಳನ್ನನಿಷೇದ ಮಾಡಲು ನಾವು ಬೆಂಬಲ ನೀಡುತ್ತೇವೆ ಎಂದು ಎಂ.ಬಿ ಪಾಟೀಲ್ ಸಲಹೆ ನೀಡಿದರು.

Read More