ಗುಬ್ಬಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನಾದ್ಯಂತ ವಿತರಣೆಯಾದ ಸಮವಸ್ತ್ರಗಳು ಸರಿಯಾದ ಗುಣಮಟ್ಟವಿಲ್ಲದೆ ಹೆಣ್ಣುಮಕ್ಕಳಿಗೆ ನೀಡಿರುವ ಸಮವಸ್ತ್ರದಲ್ಲಿ ಮಕ್ಕಳ ದೇಹವು ಕಾಣುವಂತಾಗಿದ್ದು ಇದನ್ನು ಕಂಡು ಕಾಣದಂತಿರುವ ಬಿ.ಇ.ಓ ಸೋಮಶೇಖರ್ರವರ ಪಾಲು ಎಷ್ಟು ? ತಾಲ್ಲೂಕಿನಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸಮವಸ್ತ್ರವನ್ನು 1-2, 3-4, 5-7, 8-10ನೇತರಗತಿ ವಿದ್ಯಾರ್ಥಿಗಳಿಗೆ ಒಂದೊಂದು ಅಳತೆಯ ಸಮವಸ್ತ್ರವನ್ನು ಸರ್ಕಾರವು ನೀಡುತ್ತಿದ್ದು ಶಾಲೆ ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಓದುವಂತಹ ಮಕ್ಕಳಿಗೆ ಸಮವಸ್ತ್ರವಿಲ್ಲದೆ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಶಾಲೆಗೆ ಬರುತ್ತಿದ್ದರು. ಇದ್ದಕ್ಕಿದ ಹಾಗೆ ಸರ್ಕಾರವು ಸಮವಸ್ತ್ರವನ್ನು ತಾಲ್ಲೂಕಿನಾದ್ಯಂತ ಇರುವ ಶಾಲೆಯ ಒಟ್ಟು ಹೆಣ್ಣುಮಕ್ಕಳ ಸಂಖ್ಯೆ 10017 ಹಾಗೂ ಗಂಡು ಮಕ್ಕಳ ಸಂಖ್ಯೆ 10023 ಇದ್ದು, ಈ ಮಕ್ಕಳಿಗೆ ಸಮವಸ್ತ್ರವನ್ನು ನೀಡಿದ್ದು ಈ ಸಮವಸ್ತ್ರವನ್ನು ಧರಿಸಲು ವಿದ್ಯಾರ್ಥಿನಿಯರು ಹಿಂಜರಿಯುತ್ತಿರುವುದಕ್ಕೆ ಮುಖ್ಯ ಕಾರಣ ಕಳಪೆ ಗುಣಮಟ್ಟದ ಸಮವಸ್ತ್ರ. ಈ ರೀತಿಯ ಗುಣಮಟ್ಟವಿಲ್ಲದ ಸಮವಸ್ತ್ರ ನೀಡಿರುವುದು ಯಾವ ಪುರಷಾರ್ಥಕ್ಕಾಗಿ ನಿಮ್ಮ ಮಕ್ಕಳಿಗೂ ಇದೇ ರೀತಿಯ ಬಟ್ಟೆಯನ್ನು ತೊಡಿಸುತ್ತಿರಾ ಎಂದು ಪೋಷಕರು…
Author: News Desk Benkiyabale
ತುರುವೇಕೆರೆ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಐಕ್ಯತಾ ಯಾತ್ರೆ ಪ್ರಾರಂಭಿಸಿದ್ದು, ಪಾದಯಾತ್ರೆ ಮುಖಾಂತರ ಅಕ್ಟೋಬರ್ 9 ರಂದು ತುರುವೇಕೆರೆ ತಾಲ್ಲೂಕಿನಿಂದ ತುಮಕೂರು ಜಿಲ್ಲೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸಿ ಅವರ ಜೊತೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಭಾರತ್ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ರಾಷ್ಟ್ರಧ್ವಜ ನೀಡಿದ್ದು ಕಾಂಗ್ರೆಸ್ ಪಕ್ಷ. ಈ ಪಕ್ಷ ಉಳಿದಿರುವುದು ಕಾಂಗ್ರೆಸ್ ಕಾರ್ಯಕರ್ತರಿಂದಲೇ ಹೊರತು ಯಾವುದೇ ಮುಖಂಡರಿಂದಲ್ಲ. ಸ್ವಾತಂತ್ರ್ಯಕ್ಕಾಗಿ ಈ ರಾಷ್ಟ್ರಕ್ಕೆ ಬಿ.ಜೆ.ಪಿ. ಯವರ ಕೊಡುಗೆ ಶೂನ್ಯ. ತಾಲೂಕಿನಲ್ಲಿ ಹಲವಾರು ವಿಧಾನ ಸಭೆ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ನಾನು ಕೆ.ಪಿ.ಸಿ.ಸಿ ಅಧ್ಯಕ್ಷನಾಗಿ ಯಾರಿಗೂ ಟಿಕೆಟ್ ನೀಡುವ ಭರವಸೆ ನೀಡುವುದಿಲ್ಲ. ಮೊದಲು ಪಕ್ಷ ಸಂಘಟಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ನಂತರ ತಾನೇ ತಾನಾಗಿ ಎಲ್ಲಾ ಆಕಾಂಕ್ಷಿಗಳಿಗೂ ಒಂದಲ್ಲ ಒಂದು ಅಧಿಕಾರ…
ತುಮಕೂರು ರೈತ ಕುಟುಂಬದ ಎಲ್ಲಾ ಮಕ್ಕಳು ಇತರೆ ಯಾವುದೇ ವಿದ್ಯಾರ್ಥಿವೇತನ ಪಡೆಯುತ್ತಿದ್ದರೂ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಪಡೆಯಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಪ್ರಸಕ್ತ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿಸುವ ಉದ್ದೇಶದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರು ಮತ್ತು ಎಲ್ಲಾ ತಾಲ್ಲೂಕು ಶಿಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳವರೆಗೆ ಪ್ರವೇಶ ಪಡೆದಿರುವ ರಾಜ್ಯದ ರೈತರ ಎಲ್ಲ ಮಕ್ಕಳ ಖಾತೆಗಳಿಗೆ 2021-22ನೇ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ನೇರ ನಗದು ವರ್ಗಾವಣೆ (ಆiಡಿeಛಿಣ ಃeಟಿeಜಿiಣ ಖಿಡಿಚಿಟಿsಜಿeಡಿ- ಆಃಖಿ) ಮೂಲಕ 2 ಸಾವಿರದಿಂದ 11 ಸಾವಿರ ರೂ.ಗಳವರೆಗೆ ವಾರ್ಷಿಕ ಶಿಷ್ಯವೇತನದ ರೂಪದಲ್ಲಿ ಪಾವತಿಸಲಾಗುತ್ತಿದೆ ಎಂದರು. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಡಿ 8 ರಿಂದ…
ತುಮಕೂರು ಎಡಿಪಿಐಯನ್ನು ಸಿಲುಕಿಸಲು ಎನ್.ಐ.ಎ ನಡೆಸಿರುವ ಸರ್ಕಾರಿ ಪ್ರಾಯೋಜಿತ ದಾಳಿಯ ವಿರುದ್ಧ ಪ್ರತಿಭಟನೆ. ನೆಟ್ಟಾರು ಹತ್ಯೆ ಪ್ರಕರಣ ಮತ್ತು ವಿವಿಧ ಸುಳ್ಳು ಪ್ರಕರಣಗಳನ್ನು ನೆಪವಾಗಿಟ್ಟುಕೊಂಡು ಬಿಜೆಪಿ ಸರ್ಕಾರ ಎಸ್ಡಿಪಿಐ ವಿರುದ್ಧ ಷಡ್ಯಂತರ ರೂಪಿಸುತ್ತಿದೆ. ಎಸ್ಡಿಪಿಐ ಸಂಬಂಧಿತ ಕಾರ್ಯಕರ್ತರ ಮತ್ತು ಕಚೇರಿಗಳ ಮೇಲೆ ದಾಳಿ ಮಾಡುತ್ತಿದೆ. ನಿನ್ನೆ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪಂಗಿಪೇಟೆ ಅವರ ಮನೆಯ ಮೇಲಿನ ದಾಳಿಯೂ ಕೂಡ ಇದರ ಮುಂದುವರಿದ ಭಾಗವೇ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಆರೋಪಿಸಿದೆ. ಇದು ಕೇವಲ ರಾಜಕೀಯ ದ್ವೇಷವಲ್ಲದೆ ಮತ್ತೇನು ಅಲ್ಲ ಇವು ಸರ್ಕಾರಿ ಪ್ರಾಯೋಜಿತ ಸೇಡಿನ ದಾಳಿಗಳಾಗಿದ್ದು ಹೇಗಾದರೂ ಮಾಡಿ ಜನಪರ ಧ್ವನಿಯಾಗಿ ಜನ ವಿರೋಧಿ ಸರ್ಕಾರದ ನೀತಿಗಳನ್ನು ವಿರೋಧಿಸುವ ಎಸ್ಡಿಪಿಐ ಪಕ್ಷವನ್ನು ದುರ್ಬಲಗೊಳಿಸುವ ಅಥವಾ ಸುಳ್ಳು ಪ್ರಕರಣಗಳ ಮೂಲಕ ಸಿಲುಕಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ಅದು ತನ್ನ ಪತ್ರಿಕಾ ಬಿಡುಗಡೆಯಲ್ಲಿ ಹೇಳಿದೆ. ಒಂದೆಡೆ ಪ್ರವೀಣ್ ನೆಟ್ಟಾರು ಹತ್ಯ ವಿಚಾರವಾಗಿ ಸರ್ಕಾರ ಸೇಡಿನ ಕುತಂತ್ರದ ಸಂಚು ರೂಪಿಸುತ್ತಿದ್ದರೆ,…
ತುಮಕೂರು ಬದುಕಿನ ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ. ಶಿಕ್ಷಣದಿಂದ ಬದುಕು ಕಟ್ಟಲು ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಪರ ನಿರ್ದೆಶಕರಾದ ವಿ.ಪಾತರಾಜ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು. ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ವಾರ್ಷಿಕೋತ್ಸವ, ಸಾಂಸ್ಕøತಿಕ ಚಟುವಟಿಕೆಗಳ ಸಮರೋಪ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭದಲ್ಲಿ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳು ಜಾತಿ ಮೀರಿದ ಸಮಾಜ ಕಟ್ಟಬೇಕು-ವ್ಯಕ್ತಿತ್ವ ಮೀರಿ ಬದುಕಬೇಕು. ಅಂದಾಗ ಮಾತ್ರ ಸತ್ತಮೇಲು ಬದುಕಲು ಸಾಧ್ಯವಾಗುತ್ತದೆ ಎಂದ ಅವರು, ಗುರಿ ಇಟ್ಟು ಸಾಧಿಸಿದಾಗ ಮಾತ್ರ ಸತ್ತಮೇಲು ಬದುಕಲು ಸಾಧ್ಯವಾಗುತ್ತದೆ. ಜೀವನದಲ್ಲಿ ಗುರಿ ಇಟ್ಟು ಅದಕ್ಕೆ ಪೂರಕವಾದ ಶಿಕ್ಷಣ ಪಡೆದು ಯಶಸ್ಸಿನಡೆಗೆ ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮನಸ್ಸಿನ ಕೊಳೆಯನ್ನು ಚೆಲ್ಲಿ, ನಿರ್ಮಲದಿಂದ ಇದ್ದಾಗ ಮಾತ್ರ ಸಮಾಜದಲ್ಲಿನ ಸಮಸ್ಯೆಗಳನ್ನು ಅರಿತುಕೊಳ್ಳಲು ಮತ್ತು ಸಾಧನೆ ಮಾಡಲು ಸಾಧ್ಯ. ಪೌರಾಣಿಕ ಪ್ರಾತಗಳಾದ ಕರ್ಣ, ಸತ್ಯ ಹರಿಶ್ಚಂದ್ರ,…
ತುಮಕೂರು ಸೋಲು ಅವಮಾನವಲ್ಲ. ಸೋಲಿನಿಂದಲೇ ಗೆಲುವಿನ ಸೋಪಾನ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ವಿದ್ಯಾರ್ಥಿಗಳಿರಲಿ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿರಲಿ, ಸೋಲನ್ನು ಸವಾಲಾಗಿ ಸ್ವೀಕರಿಸಿದಾಗ ಖಂಡಿತ ಮುಂದೆ ಯಶಸ್ಸು ಸಿಗಲಿದೆ ಎಂದು ಶ್ರೀ ಸಿದ್ಧಾರ್ಥ ಮಹಾ ವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರು, ಖ್ಯಾತ ಮನೋವೈದ್ಯರಾದ ಡಾ.ಎಂ.ಟಿ.ಸತ್ಯನಾರಾಯಣ ವಿಶ್ಲೇಷಿಸಿದರು. ವರದಕ್ಷಿಣೆ ವಿರೋಧಿ ವೇದಿಕೆ, ತುಮಕೂರು ನಗರ ಸಾಂತ್ವನ ಕೇಂದ್ರ, ವಾಸವಿ ವಿದ್ಯಾಪೀಠ ಇವರ ಸಂಯುಕ್ತಾಶ್ರಯದಲ್ಲಿ ಎಸ್.ಐ.ಟಿ. ಬಡಾವಣೆಯಲ್ಲಿರುವ ವಾಸವಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಮನೋವೈದ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಸಮಸ್ಯೆಗಳು ಎಲ್ಲರಿಗೂ ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳ ಆಗರವೇ ತುಂಬಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಇಂತಹ ವಿಷಯಗಳತ್ತ ಗಮನ ಹರಿಸಬಾರದು. ಓದು ಮುಗಿಯುವ ತನಕ ಬೇರೆ ಚಟುವಟಿಕೆಗಳತ್ತ ಓಗೂಡಬಾರದು. ಒಂದು ವೇಳೆ ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದರೂ ಸಹ ಅದೇ ಅಂತಿಮವಲ್ಲ. ಬದುಕಿನಲ್ಲಿ ಸಾಧಿಸುವುದು ಬಹಳಷ್ಟಿದೆ. ಹೋರಾಟದ ಮನೋಭಾವ ಮುಖ್ಯವಾಗಬೇಕು. ಎಲ್ಲದನ್ನೂ ಇಷ್ಟಪಟ್ಟು ಸ್ವೀಕರಿಸಿದರೆ ಕಷ್ಟವಾಗಲಾರದು ಎಂದವರು…
ಕೊರಟಗೆರೆ ನಾಡ ಪ್ರಭು ಕೆಂಪೇಗೌಡರು ಬೆಂಗಳೂರು ನಗರವನ್ನು ಅಚ್ಚುಕಟ್ಟಾಗಿ ಮತ್ತು ಮುಂದಾಲೋಚನೆಯಾಗಿ ನಿರ್ಮಾಣ ಮಾಡಿ ರಾಜ್ಯದ ಆರ್ಥಿಕತೆಗೆ ಶಕ್ತಿ ನೀಡಿ ದೇಶಕ್ಕೆ ಮತ್ತು ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ ತಿಳಿಸಿದರು. ತಾಲ್ಲೂಕಿನ ಕೋಳಾಲದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಹಾಗೂ ಡಾ. ಜಿ. ಪರಮೇಶ್ವರ ಅವರ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಂಪೇಗೌಡರು ಒಂದು ಜನಾಂಗಕ್ಕೆ ಸೀಮಿತವಾದ ಮಹಾನ್ ವ್ಯಕ್ತಿಯಲ್ಲ. ಅವರ ಶ್ರಮ ಮತ್ತು ಕರ್ತವ್ಯ ನಿಷ್ಟೆಯಿಂದ ಎಲ್ಲಾ ವರ್ಗದ ಜನರು ನೆಮ್ಮದಿಯಾಗಿ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳುವಂತಾಗಿದೆ. ಇಂದಿನ ತಂತ್ರಜ್ಞಾನವನ್ನು ಕೆಂಪೇಗೌಡರು ಅಂದೇ ಆಲೋಚಿಸಿ ಜನರ ವಾಣಿಜ್ಯ ವ್ಯವಹಾರಗಳಿಗೆ ವಿವಿಧ ಪೇಟೆಗಳನ್ನು ಕೃಷಿಕರಿಗೆ ಮಾರುಕಟ್ಟೆಗಳನ್ನು ಜನವಸತಿಕೇಂದ್ರಳನ್ನು ನಿರ್ಮಿಸಿದರು. ಇದರೊಂದಿಗೆ ಹಲವು ಕೆರೆಕಟ್ಟೆಗಳು, ನಾಲೆಗಳನ್ನು ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಿ, ಸದೃಢ ಬೆಂಗಳೂರನ್ನು ರಚಿಸಿದರು. ಅಂತಹ ಮಹಾನ್ ವ್ಯಕ್ತಿಯ ಶ್ರಮದಿಂದ ಬೆಂಗಳೂರಿನಲ್ಲಿ ಪ್ರಪಂಚದ ಎಲ್ಲಾ ಐಟಿ, ಬಿಟಿ…
ತುಮಕೂರು ರಾಜ್ಯ ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಮುಂದುವರೆದಿದ್ದರೆ ಅದಕ್ಕೆ ಕರ್ನಾಟಕದಲ್ಲಿರುವ ವೀರಶೈವ ಲಿಂಗಾಯಿತ ಮಠ ಮಾನ್ಯಗಳ ಕೊಡುಗೆ ಆಪಾರವಾಗಿದೆ ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ನಗರದ ಎಸ್.ಐ.ಟಿ.ಯ ಬಿರ್ಲಾ ಸಭಾಂಗಣದಲ್ಲಿಂದು ವೀರಶೈವ, ಲಿಂಗಾಯಿತ ಸೇವಾ ಸಮಿತಿವತಿಯಿಂದ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು,ವೀರಶೈವ ಮತ್ತು ಲಿಂಗಾಯಿತ ಸಮಾಜದ ಇತಿಹಾಸ ಮತ್ತು ಪರಂಪರೆ ಬಹಳ ದೊಡ್ಡದಾಗಿದೆ.ವೀರಕ್ತ ಮತ್ತು ರಾಜಾಶ್ರಯದ ಮಠಗಳು,ಜಾತಿ, ಧಮದ ಭೇಧ ಮಾಡದೆ ಎಲ್ಲಾ ಮಕ್ಕಳಿಗೂ ಊಟ, ವಸತಿಯೊಂದಿಗೆ ಶಿಕ್ಷಣ ನೀಡುವ ಮೂಲಕ ಪ್ರಪಂಚ ಮೂಲೆ ಮೂಲೆಗಳಲ್ಲಿಯೂ ಭಾರತೀಯರು ದೊರೆಯುವಂತೆ ಮಾಡಿದ್ದಾರೆ ಎಂದರು. ನಮ್ಮ ಸಮಾಜದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ.ಆದರೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆದರೆ ಹೆಚ್ಚಿನದನ್ನು ಸಾಧಿಸಬಹುದು ಎಂದರು. 21ನೇ ಶತಮಾನ ಭಾರತೀಯರ ಯುಗ. ಏಕೆಂದರೆ ದೇಶದಲ್ಲಿ ಅತ್ಯಂತ ಸಶಕ್ತ ಯುವಜನತೆ ಇದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಂತಹ ಕಾರ್ಯಕ್ರಮಗಳು…
ತುಮಕೂರು ಗ್ರಾಮಾಂತರ ಹೆಬ್ಬೂರು ಗ್ರಾಮದಲ್ಲಿ ಮೊದಲನೇ ವರ್ಷದ ಹಿಂದೂ ಘನಪುರಿ ಗಣೇಶೋತ್ಸವದ ವಿಸರ್ಜನಾ ಕಾರ್ಯಕ್ರಮವನ್ನು ಹೆಬ್ಬೂರಿನ ಪ್ರಮುಖ ರಾಜ ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮುಖಾಂತರ ಸ್ವಾಮಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ ಸುಮಾರು 16 ಜಾನಪದ ಕಲಾತಂಡಗಳ ವಾದ್ಯಗೋಷ್ಠಿಯೊಂದಿಗೆ ಹಾಗೂ ಸಿಡಿಮದ್ದುಗಳ ಪಟಾಕಿಗಳ ಶಬ್ದ ಜೈಂಕಾರಗಳಿಂದ ಕೂಡಿದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹೆಬ್ಬೂರಿನ ದೊಡ್ಡಕೆರೆಗೆ ಗಣಪನನ್ನು ವಿಸರ್ಜಿಸಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ಸುರೇಶ್ ಗೌಡ ಮಾತನಾಡಿ ಹಿಂದೂ ಸಮಾಜದಲ್ಲಿ ಕೋಟ್ಯಂತರ ದೇವರುಗಳಿದ್ದು, ಅದರಲ್ಲಿ ಮೊದಲ ಸ್ಥಾನ ಗಣಪನಿಗೆ ನೀಡುವ ನಾವು ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬವನ್ನು ಇನ್ನು ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ನೆರವೇರಿಸಲಾಗುವುದು ಎಂದು ತಿಳಿಸಿದರು.ಈ ಗಣೇಶೋತ್ಸವ ಕಾರ್ಯಕ್ರಮದ ಪ್ರಾರಂಬ ದಿಂದ ಹಲವಾರು ರೀತಿಯ ಗ್ರಾಮೀಣ ಕ್ರೀಡಾಕೂಟದಲ್ಲಿ ಹಿರಿಯ ಮತ್ತು ಕಿರಿಯರೆಲ್ಲರೂ ಭಾಗವಹಿಸಿ ಕಾರ್ಯಕ್ರಮ ದ ಮೆರುಗನ್ನು ಹೆಚ್ಚಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ವಿಜೇತ ರಾದ ಎಲ್ಲರಿಗೂ ಬಹುಮಾನ ನೀಡಿದರು. ವಿಸರ್ಜನ ಮಹೋತ್ಸವದ ಕಾರ್ಯಕ್ರಮದಲ್ಲಿ ಸಮಿತಿ…
ತುಮಕೂರು ಒಕ್ಕಲಿಗ ಸಮುದಾಯದ ಅಸ್ಥಿತ್ವಕ್ಕೆ ಧಕ್ಕೆಯಾಗುವಂತಹ ಪ್ರಕ್ರಿಯೆಗಳು ನಡೆದಾಗ ದ್ವನಿ ಎತ್ತುವ ಕೆಲಸವನ್ನು ಇಂದು ಮಾಡುತ್ತಿದ್ದು, ಮುಂದೆಯೂ ಮಾಡಲಿದ್ದೇವೆ ಎಂದು ಪಟ್ಟನಾಯಕನಹಳ್ಳಿಯ ಶ್ರೀನಂಜಾವಧೂತ ಸ್ವಾಮೀಜಿಗಳು ತಿಳಿಸಿದ್ದಾರೆ. ನಗರದ ಕುಂಚಟಿಗ ಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಸಮಿತಿ, ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ(ರಿ), ತುಮಕೂರು ಜಿಲ್ಲೆಯ ಸಮಸ್ತ ಒಕ್ಕಲಿಗರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಕೆಂಪೇಗೌಡರ 512ನೇ ಜನ್ಮ ಜಯಂತಿ ಹಾಗೂ ಪ್ರತಿಭಾಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ದ್ವನಿ ಇಲ್ಲದೆ ಈ ಸಮಾಜ ಸಾಯುವಂತಾಗಬಾರದು. ಹಾಗಾಗಿ ನಾವೆಲ್ಲರೂ ಎಚ್ಚೆತ್ತು ಕೊಳ್ಳಬೇಕಿದೆ ಎಂದರು. ಸಮಾಜ ಒಡೆಯುವಂತಹ ಕೆಲಸಗಳು ಬಹಳಷ್ಟು ನಡೆಯುತ್ತಿವೆ.ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯವನ್ನು,ಉಪಪಂಗಡಗಳ ಹೆಸರಿನಲ್ಲಿ ಒಡೆಯವ ವ್ಯವಸ್ಥಿತ ಕೆಲಸ ನಡೆಯುತ್ತಿದೆ.ಒಕ್ಕಲಿಗ ಎಂಬುದು ಒಂದು ಆಲದ ಮರವಿದ್ದಂತೆ,ಈ ಮರದ ಅಡಿಯಲ್ಲಿ ಎಲ್ಲಾ ಉಪಪಂಗಡಗಳು ಒಗ್ಗೂಡಿದರೆ ಹೆಚ್ಚು ಬಲಶಾಲಿ ಯಾಗಲು ಸಾಧ್ಯ.ಸಾಧ್ಯವಾದರೆ ಸಮುದಾಯಕ್ಕೆ ಸಹಾಯ ಮಾಡಿ,ಆದರೆ ಎಂದಿಗೂ ಸಮುದಾಯ ಒಡೆಯುವವರಿಗೆ ಸಹಾಯ ಮಾಡಬೇಡಿ ಎಂದು…











