ಪಾವಗಡ : ಸೋಮವಾರ ಬೆಳಗಿನ ಜಾವ ಮೂರು ಗಂಟೆಯಿಂದ ಸುರಿದ ಧಾರಕಾರ ಮಳೆಗೆ ಕೋಳಿ ಪಾರಂಗೆ ಮಳೆ ನೀರು ನುಗ್ಗಿ 5000 ಸಾವಿರ ಕೋಳಿಗಳು ಸಾವನ್ನಪ್ಪಿದ ಘಟನೆ ಪಟ್ಟಣದ ಸಮೀಪದಲ್ಲಿ ನಡೆದಿದೆ. ಪಾವಗಡ ಪಟ್ಟಣದ ಚಿನ್ನನಾಯಕನ ಹಳ್ಳಿ ರಸ್ತೆಯಲ್ಲಿರುವ ಗುರುರಾಜ್ ಕೋಳಿ ಪಾರಂಗೆ ಸೋಮವಾರ ಮುಂಜಾನೆ ವರುಣನ ಆರ್ಭಟದಿಂದ ಮಳೆ ನೀರು ನುಗ್ಗಿ 5000 ಸಾವಿರ ಕೋಳಿಗಳು ಪಾರಂನಲ್ಲಿ ಸಾವನ್ನಪ್ಪಿದ ಘಟನೆ ನಡೆದಿದ್ದು , ಕಳೆದ ಒಂದು ವಾರದಿಂದ ಮಳೆರಾಯನ ಆರ್ಭಟಕ್ಕೆ ಮಳೆ ನೀರು ನುಗ್ಗಿ ಕೋಳಿಗಳ ಸಾವಿನ ಎರಡನೇ ಘಟನೆಯಾಗಿರುತ್ತದೆ. ಕಳೆದಾ ಒಂದು ತಿಂಗಳಿನಿಂದ ತಾಲೂಕಿನಾದ್ಯಂತ ಉತ್ತಮ ಮಳೆಗಾಗುತ್ತಿದ್ದು ,ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕೋಳಿಪಾರಂಗೆ ನೀರು ನುಗುತ್ತಿದ್ದು ಮಣ್ಣು ಮಿಶ್ರಿತ ನೀರು ಪಾರಂಗೆ ಬಂದು ಸೇರಿ ಹಾಗೂ ಕೋಳಿಗಳನ್ನು ಬೇರೆಡೆ ಮಳೆಯಲ್ಲಿ ಸಾಗಿಸಲು ಸಾದ್ಯವಾಗದ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಿ ಕೋಳಿಗಳು ಸಾವನ್ನಪ್ಪಿವೆ ಎಂದು ಸ್ಥಳಿಯರು…
Author: News Desk Benkiyabale
ತುಮಕೂರು : ಹೆಲ್ತ್ ಇನ್ಸ್ಪೆಕ್ಟರ್ ಮತ್ತು ಪರಿಸರ ಇಂಜಿನಿಯರ್ ಸೂಚನೆ ಮೇರೆಗೆ ಬ್ಯಾನರ್ ಮತ್ತು ಬಂಟಿಂಗ್ ತೆರವುಗೊಳಿಸಲು ಹೋದ ಪೌರ ಕಾರ್ಮಿಕ ನರಸಿಂಹಯ್ಯ (34) ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ತುಮಕೂರು ನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಹದಿನೈದನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಟೌನ್ಹಾಲ್ ಸರ್ಕಲ್ನಲ್ಲಿ ಅಕ್ಟೋಬರ್ 10ರಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಅಧಿಕಾರಿಗಳ ಸೂಚನೆ ಮೇರೆಗೆ ಕಬ್ಬಿಣದ ಸಲಾಕೆ ತೆಗೆದುಕೊಂಡು ಬ್ಯಾನರ್ ತೆರವುಗೊಳಿಸಲು ಹೋದಾಗ ಈ ದುರಂತ ನಡೆದಿದೆ. ಮೃತನ ಸಾವಿಗೆ ಸುರಕ್ಷತಾ ಸಲಕರಣೆಗಳನ್ನು ನೀಡದೇ ಇರುವುದೇ ಕಾರಣ ಎಂದು ಪೌರಕಾರ್ಮಿಕರ ಸಂಘ ಸಿಐಟಿಯು ಆರೋಪಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಶಾಂತಿನಗರದ ವಾಸಿ ನರಸಿಂಹಯ್ಯ ಮೃತಪಟ್ಟಿರುವ ದುರ್ದೈವಿ. ಪೌರಕಾರ್ಮಿಕ ನರಸಿಂಹಯ್ಯ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಎಲ್ಲಾ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. 20 ಲಕ್ಷ ಪರಿಹಾರ, ಪತ್ನಿಗೆ ಉದ್ಯೋಗ, ಮಕ್ಕಳವಿದ್ಯಾಭ್ಯಾಸಕ್ಕೆ ನೆರವು…
ತುಮಕೂರು: ಶಾಸಕ ಡಾ.ಜಿ.ಪರಮೇಶ್ವರ್ ಒಡೆತನದ ಎಸ್ಎಸ್ಐಟಿ ಎಂಜಿನಿಯರಿಂಗ್ ಕಾಲೇಜು ಮೇಲೆ ಐಟಿ ಅಧಿಕಾರಿಗಳು ಗುರುವಾರ ಮುಂಜಾನೆ ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಒಟ್ಟು ಹನ್ನೆರೆಡು ಅಧಿಕಾರಿಗಳಿದ್ದ ತಂಡ ದಾಳಿ ನಡೆಸಿದೆ. ಕಾಂಗ್ರೆಸ್ನ ಪ್ರಭಾವಿ ಮುಖಂಡರಾಗಿರುವ ಡಾ.ಜಿ.ಪರಮೇಶ್ವರ್ ಒಡೆತನದ ತುಮಕೂರಿನ ಕುಣಿಗಲ್ ರಸ್ತೆಯ ಮರಳೂರು ದಿಣ್ಣೆಯಲ್ಲಿರುವ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು, ನೆಲಮಂಗಲದಲ್ಲಿರುವ ವೈದ್ಯಕೀ ಯ ಕಾಲೇಜು, ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸ, ಕಚೇರಿ ಹಾಗೂ ಸಹೋದರ ಒಡೆತನದ ಸಂಸ್ಥೆಗಳ ಮೇಲೂ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ಕಾಲೇಜಿನಲ್ಲಿದ್ದ ಎಲ್ಲ ಸಿಬ್ಬಂದಿಯನ್ನು ಐಟಿ ಅಧಿಕಾರಿಗಳು ಹೊರಗೆ ಕಳುಹಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಈ ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕವನ್ನು ಪಡೆಯಲಾಗುತ್ತಿತ್ತು ಎಂಬ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮುಂಜಾನೆ 5.30ಕ್ಕೆ ಆರಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು,…
ಮಧುಗಿರಿ : ಪಟ್ಟಣದ ಜನತೆಗೆ ಕುಡಿಯುವ ನೀರಿನ ದಾಹ ತೀರಿಸುತ್ತಿರುವ ಸಿದ್ದಾಪುರ ಕೆರೆಯಲ್ಲಿ ಪುರಸಭೆಯವರು ಸಕ್ಕಿಂಗ್ ಯಂತ್ರವನ್ನು ತೊಳೆದು ಹೇಮಾವತಿ ನೀರನ್ನು ಮಲಿನ ಮಾಡುತ್ತಿರುವುದು ನಿಜಕ್ಕೂ ಅಸಹ್ಯಕರ ಘಟನೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ದೇಶದೆಲ್ಲೆಡೆ ಸ್ವಚ್ಛ ಭಾರತದ ಘೋಷಣೆ ಮಂತ್ರ ಜಪಿಸುತ್ತಿದ್ದರೆ. ಪುರಸಭೆಯವರು ಮಾತ್ರ ಪಟ್ಟಣದ ಜನತೆಗೆ ಕುಡಿಯುವ ನೀರೊದಗಿಸುವ ಸಿದ್ದಾಪುರ ಕೆರೆಯಲ್ಲಿ ಸಕ್ಕಿಂಗ್ ಯಂತ್ರ ತೊಳೆಯುವ ಮೂಲಕ ಹೇಮೆಯನ್ನು ಕಲುಷಿತಗೊಳಿಸಿ ಸ್ವಚ್ಛ ಭಾರತದ ಘೋಷಣೆಗೆ ವಿರುದ್ಧ ನಿಂತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಧುಗಿರಿ ಪುರಸಭೆಗೆ ಸೇರಿದ ಸಕ್ಕಿಂಗ್ ಯಂತ್ರ ವನ್ನು ಸಿದ್ದಾಪುರ ಕೆರೆಗೆ ತಂದು ನಿಲ್ಲಿಸಿ ಆ ವಾಹನವನ್ನು ಕೆರೆಯೊಳಗೆ ತೊಳೆದು ನಿಲ್ಲಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತ ಪುರಸಭೆ ಯವರ ಘನ ಕಾರ್ಯದ ಬಗ್ಗೆ ವ್ಯಾಪಕವಾದ ಟೀಕೆಗಳಿಗೆ ಪುರಸಭಾ ಸಿಬ್ಬಂದಿವರ್ಗ ಒಳಗಾಗಿದೆ. ಮಲದ ಗುಂಡಿಗಳನ್ನು ಕ್ಲೀನ್ ಮಾಡುವ ಯಂತ್ರವನ್ನು ತೊಳೆದಿರುವುದು ಸರಿಯಲ್ಲ…
ತುಮಕೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ವಿವಿಧ ಸಂಘಟನೆಗಳ ನೂರಾರು ಮಂದಿ ಅತ್ಯಾಚಾರಿಗೆ ಈ ಕೂಡಲೇ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ಕುಮಾರ್ ಅವರಿಗೆ ಮನವಿ ಪತ್ರ ಅರ್ಪಿಸಿದರು. ಕಳೆದ ಮೂರು ದಿನಗಳ ಹಿಂದೆ ನಗರದ ಈದ್ಗಾ ಮೊಹಲ್ಲಾ ಚಾಂದಿನಿ ಚೌಕ್ನಲ್ಲಿ 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಸ್ರುಲ್ಲಾ ಖಾನ್ ಎಂಬ ಆರೋಪಿ ಅತ್ಯಾಚಾರವೆಸಗಿದ್ದು, ಈ ಘಟನೆಯಿಂದ ಸದರಿ ಬಾಲಕಿ ಮತ್ತು ಕುಟುಂಬದವರು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾರೆ. ಆದ್ದರಿಂದ ಸದರಿ ಬಾಲಕಿ ಮತ್ತು ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಆರೋಪಿಗೆ ಯಾವುದೇ ರೀತಿಯ ಕರುಣೆ, ದಯೆ ತೋರದೆ ಕಠಿಣ ಕಾನೂನು…
ಪ್ರಕೃತಿಯ ಮಡಿಲಿನ ರಮಣೀಯ ಸ್ಥಳವೊಂದು, ಬಯಲು ಪ್ರದೇಶದ ಕುರುಚಲು ಕಾಡುಗಳ ಸಮೂಹವೊಂದು, ಪ್ರಕೃತಿ ಪ್ರಿಯರಿಗೆ, ಚಾರಣಿಗರಿಗೆ, ಮನದ ನವೋಲ್ಲಾಸಕ್ಕೆ ಹೇಳಿ ಮಾಡಿಸಿದಂತಿದೆ. ಜನಪ್ರತಿನಿಧಿಗಳು ಈ ಕ್ಷೇತ್ರದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೂ ಸಾಕು ಇದು ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಹೌದು, ನಾನು ಈಗ ಹೇಳ ಹೊರಟಿರುವುದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ಪಟ್ಟಣದಿಂದ 6.ಕಿ.ಮೀ. ದೂರ ಪೂರ್ವ ದಿಕ್ಕಿಗೆ ಸಂಚರಿಸಿದರೆ ಸಾಕು, ಅಲ್ಲೇ ಅನಾವರಣಗೊಳ್ಳುವುದು ಮದಲಿಂಗನ ಗುಡ್ಡ, ಕಡೇ ಕಲ್ಲು ಗುಡ್ಡ, ಸಿಡ್ಲೇ ಗುಡ್ಡ, ಹಬ್ಬಿಗೆ ಗುಡ್ಡ, ದೇವದಾರೆ ಗುಡ್ಡ, ಹೀಗೆ ಗುಡ್ಡಗಳ ಸಮೂಹದೊಂದಿಗೆ ಹಲಸಿನ ದೊಣೆ, ಅಕ್ಕನಾರ ಹಳ್ಳ ಹೀಗೆ ಮುಂತಾದ ಅತ್ಯದ್ಬುತವಾದ ಪ್ರೇಕ್ಷಣೀಯ ಸ್ಥಳಗಳು, ಪ್ರಕೃತಿಯ ಸೊಬಗಿನ ಅನಾವರಣ, ಅರೆ ಮಲೆನಾಡು ಎಂದು ಸಾಕ್ಷಾತ್ಕರಿಸುವ ಹಸಿರ ಹೊದಿಕೆಗಳಿಂದ ಕಂಗೊಳಿಸುವ ಬೆಟ್ಟ ಗುಡ್ಡಗಳ ಸಾಲು, ಕಣ್ಣುಗಳಿಗೆ ತಂಪು, ಹಕ್ಕಿಗಳ ಗಾನದ ಇಂಪು, ಹೀಗೆ ಇರುವ ಈ ಪರಿಸರ ಪ್ರಕೃತಿ…
ತುಮಕೂರು : ರಾಜ್ಯದಲ್ಲಿರುವ ಎಲ್ಲಾ ಕೆರೆಗಳಿಗೆ ನದಿ ನೀರು ಅಲೋಕೇಷನ್ ಮಾಡಲು ಅಧ್ಯಯನ ವರದಿ ನೀಡಲು ಸಿಎಂ ಯಡಿಯೂರಪ್ಪನವರು ಆದೇಶ ನೀಡಿದ್ದಾರೆ. ಸಾಮಾಜಿಕ ನ್ಯಾಯದಡಿ ಊರಿಗೊಂದು ಕೆರೆ.. ಆ ಕೆರೆಗೆ ನದಿ ನೀರು ಎಂಬ ಹಲವಾರು ವರ್ಷಗಳ ಬೇಡಿಕೆಗೆ ಚಾಲನೆ ದೊರೆತಿದೆ ಎಂದು ತಿಳಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಎಲ್ಲಾ ವಿಧವಾದ ಜಲಸಂಗ್ರಹಾಗಾರಗಳನ್ನು ಸಂಪೂರ್ಣ ವರದಿಯೊಂದಿಗೆ ಜಲಗ್ರಾಮ ಕ್ಯಾಲೆಂಡರ್ ಸಿದ್ಧಪಡಿಸಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಮತ್ತು ತುಂಗಭದ್ರಾ ಯೋಜನೆಯಡಿ ಯಾವ ಕೆರೆಗಳಿಗೆ ನದಿ ನೀರು ಅಲೋಕೇಷನ್ ಆಗಿದೆ ಮತ್ತು ಯಾವ ಗ್ರಾಮದ ಕೆರೆಗಳಿಗೆ ಅಲೋಕೇಷನ್ ಮಾಡಲು ಎಷ್ಟು ನದಿ ನೀರು ಬೇಕು ಎಂಬ ಮಾಹಿತಿಯನ್ನು ಸಂಗ್ರಹಿಸಿ ಈ ಭಾಗದ ಕೆರೆಗಳಿಗೆ ನೀರು ಬರುವ ಸಾಧ್ಯತೆಯಿರುವ ಎತ್ತಿನಹೊಳೆ 2ನೆ ಹಂತ, ಕುಮಾರಧಾರ, ಶರಾವತಿ, ಹೇಮಾವತಿ ಪ್ರವಾಹದ ನೀರು ಸೇರಿದಂತೆ ಕಾವೇರಿ, ಕೃಷ್ಣಾ ಮತ್ತು ಪಶ್ಚಿಮಾಭಿಮುಖವಾಗಿ…
ಮಧುಗಿರಿ : ಮಕ್ಕಳ ಕಿರುಕುಳ ತಾಳಲಾರದೆ ವೃದ್ಧೆಯೊಬ್ಬಳು ಮನೆ ಬಿಟ್ಟು ಬಂದು ರಸ್ತೆಯಲ್ಲಿ ಕುಸಿದು ಬಿದ್ದಾಗ ತಕ್ಷಣ ಗ್ರಾಮಸ್ಥರು ರಕ್ಷಿಸಿದ ಮಾನವೀಯ ಘಟನೆ ನಡೆದಿದೆ. ತಾಲೂಕಿನ ಐಡಿಹಳ್ಳಿ ಗ್ರಾಮದ ಚರ್ಚ್ ಮುಂಭಾಗ ಅನಾಥ ವೃದ್ಧೆಯೊಬ್ಬಳು ತಿರುಗಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಗ್ರಾಮ ಸಮ್ಮಿಲನ ಗ್ರಾಮಭಿವೃದ್ಧಿಯ ಕಾರ್ಯದರ್ಶಿ ರಾಮಂಜೀನಯ್ಯ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ, ತಕ್ಷಣ ಭೇಟಿ ಅವರು ವೃದ್ಧೆಗೆ ಉಪಹಾರ ನೀಡಿ ಗ್ರಾಮದ ಚರ್ಚ್ವೊಂದರಲ್ಲಿ ಇರುವಂತೆ ತಿಳಿಸಿ ಶ್ರೀ ಶಾರದಾಂಬ ವೃದ್ಧಾಶ್ರಮಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಶಾರದಾಂಬ ವೃದ್ಧಾಶ್ರಮದ ಅಧ್ಯಕ್ಷೆ ಯಶೋಧ ಭೇಟಿ ನೀಡಿ ವೃದ್ಧೆಯನ್ನು ಉಪಹಾರ ನೀಡಿ ಸಂತೈಯಿಸಿ ವಿಚಾರಿಸಿದಾಗ ಸುಂಕದಕಟ್ಟೆ ಪಕ್ಕದ ಹೇರೋಹಳ್ಳಿ, ಬ್ಯಾಡರಹಳ್ಳಿ ಎಂದು ಕಣ್ಣಿರು ಹಾಕಿದ ವೃದ್ದೆಯು ಸೊಸೆ ಮತ್ತು ಮಗ ಹೊಡೆದು ಮನೆಯಿಂದ ಆಚೆ ದಬ್ಬಿದ್ದಾರೆ ನನಗೆ ಎಲ್ಲಾದರೂ ಇರಲು ಜಾಗ ಕೊಡಿ ಎಂದು ಅಲವತ್ತುಕೊಂಡಿದ್ದಾಳೆ. ತಕ್ಷಣ ಗ್ರಾಮಸ್ಥರು…
ತುರುವೇಕೆರೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿದೆಡೆ ಆಯುಧಪೂಜಾ ಹಾಗೂ ವಿಜಯ ದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಕಸಬಾದ ದುಂಡಾ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ವಿಜಯದಶಮಿಯ ಶಮೀಪೂಜಾ ಮಹೋತ್ಸವ ಮಂಗಳವಾರ ಬಹಳ ವಿಜೃಂಭಣೆಯಿಂದ ನೆರವೇರಿತು. ಶ್ರೀ ಆಂಜನೇಯ ಸ್ವಾಮಿ, ಗ್ರಾಮದೇವತೆ ಕೆಂಪಮ್ಮ ಹಾಗು ಶ್ರೀ ಬೊಮ್ಮಲಿಂಗೆಶ್ವರ ಸ್ವಾಮಿ ದೇವರುಗಳನ್ನು ಸೋಮನ ಕುಣಿತ, ನಗಾರಿವಾದ್ಯದೊಂದಿಗೆ ಮೆರವಣಿಗೆ ಹೊರಟು ಊರಾಚೆ ಇರುವ ಬನ್ನಿ ಮಂಟಪಕ್ಕೆ ತರಲಾಯಿತು. ಬನ್ನಿ ಮಂಟಪದಲ್ಲಿ ಎಲ್ಲಾ ದೇವರುಗಳನ್ನು ಕುಳ್ಳಿರಿಸಿ ವಿಶೇಷ ಪೂಜೆ ನಡೆಸಲಾಯಿತು.. ಬನ್ನಿ ಮಂಟಪದ ಎದುರಿಗೆ ನೆಟ್ಟಿದ್ದ ಬಾಳೆಕಂಬಕ್ಕೆ ಬನ್ನಿಪತ್ರೆ ಸಿಕ್ಕಿಸಿ ಶಮೀಪೂಜೆ ನಡೆಸಿದ ತರುವಾಯ ಊರಿನ ಪಟೇಲ ವಂಶಸ್ಥರು ಸಾಂಪ್ರದಾಯದಂತೆ ಕತ್ತಿಯಿಂದ ಬಾಳೆಕಂಬವನ್ನು ಕತ್ತರಿಸಿದರು. ಇದು ಗ್ರಾಮಕ್ಕೆ ಸಹಬಾಳ್ವೆಯ ಸಂಕೇತವಾಗಿದ್ದು ಬಾಳೆಕಂಬ ಕತ್ತರಿಸಿದ ಸಂಧರ್ಬದಲ್ಲಿ ಬಾಳೆ ಕಂಬಕ್ಕೆ ಸಿಕ್ಕಿಸಿ ಪೂಜಿಸಿದ್ದ ಬನ್ನಿಪತ್ರೆಗೆ ಜನ ಮುಗಿಬಿದ್ದರು. ಬನ್ನಿ ಪತ್ರೆಯನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದು ಮುಂಬಾಗಿಲಿಗೆ…
ತುಮಕೂರು: ದೃಢ ಮನಸ್ಸು ಇದ್ದವರು ಮಾತ್ರ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಸಮಿತಿ ವತಿಯಿಂದ ನಡೆದ ತುಮಕೂರು ದಸರಾ ಆಚರಣೆ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವರ್ಷದ 365 ದಿನದಲ್ಲಿ 9 ದಿನ ಬಿಡುವು ಮಾಡಿಕೊಂಡು ನವರಾತ್ರಿ ಹಬ್ಬದ ಆಚರಣೆಯಲ್ಲಿ ಎಲ್ಲರೂ ತೊಡಗಬೇಕು. ಈ 9 ದಿವಸ ಎಲ್ಲವನ್ನು ಮರೆತು ಇಡೀ ನಾಡು ಹಬ್ಬ ಆಚರಿಸಿ ಹರ್ಷವಾಗಲಿ ಬದುಕಲಿ ಎಂಬುದು ನವರಾತ್ರಿ ಆಚರಣೆಯ ಸಂಕೇತ ಮತ್ತು ಶ್ರೇಷ್ಠತೆ ಎಂದು ಅವರು ಹೇಳಿದರು. ದೃಢ ಮನಸ್ಸು ಹೊಂದಲು ಯೋಗ, ಧ್ಯಾನಗಳಿಂದ ಮಾತ್ರ ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಕೊಂಚ ಸಮಯ ನಮ್ಮನ್ನು ನಾವು ಮರೆತು ಸಾಧನೆ, ಯೋಗ, ಧ್ಯಾನ ಮಾಡುವ…