Author: News Desk Benkiyabale

ಶಿರಾ:       ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದಿರುವುದರಿಂದ ಶಿರಾ ನಗರದ ಪಾರ್ಕ್ ಮೊಹಲಾ ನಾಲ್ಕನೇ ರಸ್ತೆಯನ್ನು ಸೀಲ್ ಡೌನ್ ಮಾಡಲು ತಾಲೂಕು ಅಡಳಿತ ನಿರ್ಧರಿಸಿದೆ.      ಕಳೆದ ರಾತ್ರಿಯೇ ಸುಮಾರು ಪೊಲೀಸರು ಆಗಮಿಸಿ ಕೊರೊನಾ ಸೋಂಕು ಇರುವ ವ್ಯಕ್ತಿಯನ್ನು ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಸುಮಾರು 9.30ರ ಸುಮಾರಿನಲ್ಲಿ ಸದರಿ ಪ್ರದೇಶಕ್ಕೆ ತೆರಳಿದ ಅಂಬುಲೆನ್ಸ್‍ಗಳು ಸೋಂಕಿತ ವ್ಯಕ್ತಿಯನ್ನು ವಾಹನದಲ್ಲಿ ಕರೆದುಕೊಂಡು ಹೋಗಿದ್ದು ಮತ್ತು ಅವರ ಕುಟುಂಬದ ಸದಸ್ಯರನ್ನು ಹೆಂಡತಿ ಮೂರು ಜನ ಮಕ್ಕಳು ಹಾಗೂ ಆತನ ತಮ್ಮನನ್ನು ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ.       ಸೋಂಕಿತ ವ್ಯಕ್ತಿಯ 40 ವರ್ಷ ತನ್ನ ಹೆಂಡತಿ ಮಕ್ಕಳನ್ನು ಹಿಂದುಪುರಕ್ಕೆ ಕರೆ ತರಲು ತೆರಳಿದ ಎಂದು ಹೇಳಲಾಗುತ್ತದೆ. ದಿನಾಂಕ 6 ರಂದು ಸ್ವಲ್ಪ ಜ್ವರ ಕೆಮ್ಮು ಬರುತ್ತದೆ ನಂತರ ಖಾಸಗಿ ವೈದ್ಯರ ಬಳಿ ಚಿಕಿತ್ಸೆಗೆ ತೆರಳಿದ ನಂತರ ಪರೀಕ್ಷೆ…

Read More

ಚಿಕ್ಕನಾಯಕನಹಳ್ಳಿ:       15ನೇ ಹಣಕಾಸು ಯೋಜನೆಯ 1.50ಕೋಟಿ ರೂ.ಗಳ ಅನುದಾನದ ಕ್ರಿಯಾಯೋಜನೆ ತಯಾರಿಸಲು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಸಮ್ಮತಿ ಸೂಚಿಸಲಾಯಿತು.       ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷಸಭೆಯು ಕೆ.ಆರ್. ಚೇತನಗಂಗಾಧರ್ ಅಧ್ಯಕ್ಷತೆ ನಡೆಯಿತು. 15 ನೇ ಹಣಕಾಸು ಯೋಜನೆಯಡಿ ಬಿಡುಗಡೆಗೊಂಡ ಅನುದಾನದ ಕ್ರಿಯಾಯೋಜನೆ ತಯಾರಿಸಲು ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಅತಿಕ್‍ಫಾಷಾ ಮಾಹಿತಿ ನೀಡಿ 15 ನೇ ಹಣಕಾಸು ಯೋಜನೆಯಡಿ ತಾಲ್ಲೂಕಿಗೆ ರೂ.1.50 ಕೋಟಿ ಅನುದಾನ ಬಿಡುಗಡೆಯಾಗಿದೆ         ಇದರಲ್ಲಿ ಶೇ50 ನಿರ್ಭಂದಿತ ಹಾಗೂ ಶೇ.50 ಅನಿರ್ಭಂದಿತ ಅನುದಾನ ದಂತೆ ವಿಂಗಡಿಸಲಾಗಿದೆ. ಅನಿರ್ಭಂದಿತ ಅನುದಾನದಲ್ಲಿ ತ್ಯಾಜ್ಯನಿರ್ವಹಣೆ, ಜೈವಿಕಗೊಬ್ಬರ, ಸ್ವಚ್ಚತೆ, ಯೋಜನೆಗಳಂತಹ ಕೆಲಸಗಳಿಗೆ ಬಳಸಬೇಕು, ನಿರ್ಭಂದಿತ ಅನುದಾನದಲ್ಲಿ ನೀರಿನ ನಿರ್ವಹಣೆ, ಅಂತರ್ಜಲ ಅಭಿವೃದ್ದಿ, ಮಳೆ ನೀರು ಸಂರಕ್ಷಣೆ, ಶಾಲಾ, ಅಂಗನವಾಡಿ, ಆರೋಗ್ಯ ಕೇಂದ್ರ, ಕೊಟ್ಟಿಗೆ ಮುಂತಾದವುಗಳಿಗೆ ಬಳಸಬಹುದಾಗಿದೆ.       ಈ ಅನುದಾನದಲ್ಲಿ ಗ್ರಾಮ ಪಂಚಾಯಿತಿಗೆ ಶೇ.85, ತಾಲ್ಲೂಕು ಪಂಚಾಯಿತಿಗೆ…

Read More

ಕೊರಟಗೆರೆ:       ಸಾವಿನ ದೃಶ್ಯ ಹಾಗೂ ಅನುಭವ ಪಡೆಯಲು ಯುವಕನೊಬ್ಬ ವಿಷ ಸೇವಿಸಿ ಸಾಯುವ ಮುನ್ನ ಟಿಕ್ ಟಾಕ್‍ನಲ್ಲಿ ವಿಡಿಯೋ ಮಾಡಿದ ಗೆಳೆಯರಿಗೆ ಕಳುಹಿಸಿ ಮೃತ ಪಟ್ಟ ಘಟನೆ ತಾಲೂಲೂಕಿನಲ್ಲಿ ನಡೆದಿದೆ.        ತಾಲೂಕಿನ ಗೌರಗಾನಹಳ್ಳಿ ಗ್ರಾಮದ ಧನಂಜಯ್ಯ(25) ಮೃತ ಪಟ್ಟ ಯುವಕನಾಗಿದ್ದು ಕಳೆದ ರಾತ್ರಿ ತಮ್ಮ ಜಮೀನಿನಲ್ಲಿ ಆತ್ಮಹತ್ಯೆ ಅನುಭವ ಪಡೆಯಲು ಪ್ರಯತ್ನಿಸುತ್ತಿದ್ದೆನೆ ಅದರ ಅನುಭವ ನನಗೆ ಬೇಕು ಅದನ್ನು ನೀವು ನೋಡಿ ಎಂದು ವಿಡಿಯೋ ಮಾಡಿದ ಯುವಕ ಆಹಾರ ಪದಾರ್ಥಗಳು ಕೆಡದಂತೆ ಇಡುವ ವಿಷಪೂರಿತ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಈ ವಿಡಿಯೋ ನೋಡಿದ ಗ್ರಾಮದ ಸ್ನೇಹಿತರು ತಕ್ಷಣ ಅವನನ್ನು ಚಿಕಿತ್ಸೆಗಾಗಿ ಕೊರಟಗೆರೆ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತ ಪಟ್ಟಿರುವ ಘಟನೆ ನಡೆದಿದೆ ಮೃತ ತಾಯಿಯೊಂದಿಗೆ ಇದ್ದು ಕಳೆದ 5 ತಿಂಗಳ ಹಿಂದೆ ವಿವಾಹವಾಗಿದ್ದ ಎನ್ನಲಾಗಿದೆ.

Read More

ತುಮಕೂರು:       ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ನಗರದ ಎಸ್.ಪಿ ಕಛೇರಿ ಆವರಣದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗುತ್ತಿರುವ “ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್‍ಮೆಂಟ್ ಕಮಾಂಡ್ ಅಂಡ್ ಕಂಟ್ರೋಲ್ (Iಅಒಅಅ)ಸೆಂಟರ್”ನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.       ನಂತರ ಜಿಲ್ಲಾ ಎಸ್‍ಪಿ ಕಛೇರಿ ಸಭಾಂಗಣದಲ್ಲಿ ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಕಲ್ಪಿಸುವ “ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್” ತಂತ್ರಾಂಶಕ್ಕೆ ಚಾಲನೆ ನೀಡಿದರು.       ಐಸಿಎಂಸಿಸಿ ಸೆಂಟರ್ ಕಾರ್ಯಾಚರಣೆಯ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಈಗಾಗಲೇ 39.97 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಂಟ್ರೋಲ್ ಸೆಂಟರ್ ಕಾರ್ಯಾರಂಭ ಮಾಡಲಾಗಿದ್ದು, ನಗರದ ವಿವಿಧ ಕಡೆ 80 ಸಿಸಿ ಟಿವಿ ಅಳವಡಿಕೆ ಮತ್ತು ಸರ್ವೆಲೆನ್ಸ್, ವೇರಿಯಬಲ್ ಮೆಸೇಜಿಂಗ್ ಸಿಸ್ಟಂ, ಎನ್‍ವಿರಾನ್‍ಮೆಂಟ್ ಮಾನಿಟರಿಂಗ್, ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಂ ಮತ್ತು ತುಮಕೂರು ಒನ್ ಅಪ್ಲಿಕೇಷನ್…

Read More

ತುಮಕೂರು:       ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನವಾರುಗಳ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಇಂಜಿನಿಯರ್‍ಗಳನ್ನು ಅಮಾನತ್ತು ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲಾ ಪಂಚಾಯತ್ ಸಿಇಓ ಶುಭಾ ಕಲ್ಯಾಣ್ ಅವರಿಗೆ ಕಡಕ್ ನಿರ್ದೇಶನ ನೀಡಿದರು.       ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಜರುಗಿದ ಮುಂದುವರೆದ ಕೆಡಿಪಿ ಸಭೆ ಅಧ್ಯಕ್ಷತೆವಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ-206, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ, ಮೀನುಗಾರಿಕೆ, ಜವಳಿ ಮತ್ತು ಕೈಮಗ್ಗ, ರೇಷ್ಮೆ, ಕೃಷಿ ಮಾರುಕಟ್ಟೆ, ಡಿಸಿಸಿ ಬ್ಯಾಂಕ್, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳು, ಅಬಕಾರಿ, ಜಿಲ್ಲಾ ಉದ್ಯೋಗ ವಿನಿಮಯ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ, ಕಾರ್ಮಿಕ, ಕೆ.ಎಸ್.ಆರ್.ಟಿ.ಸಿ., ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇಂಜಿನಿಯರುಗಳು ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕೆಂದರಲ್ಲದೆ ಆ ಪ್ರದೇಶದಲ್ಲಿರುವ…

Read More

ಮಧುಗಿರಿ:       ಚಿತ್ರನಟ ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿರುವುದಕ್ಕೆ ತಾಲೂಕಿನ ಜನತೆ ಕಂಬನಿ ಮಿಡಿದಿದ್ದಾರೆ. ಪ್ರತೀ ವರ್ಷವೂ ಜಾತ್ರೆ ಬರುತ್ತಿದ್ದರು : ಪ್ರತೀ ವರ್ಷ ಮಾರ್ಚ್ ಮಾಹೆಯಲ್ಲಿ ನಡೆಯುತ್ತಿದ್ದ ಜಾತ್ರಾ ಉತ್ಸವಕ್ಕೆ ಒಂದು ದಿನ ಮುಂಚಿತವಾಗಿ ಅರ್ಜುನ್ ಸರ್ಜಾ, ದೃವ ಸರ್ಜಾ ಕುಟುಂಬ ಸಮೇತ ಚಿರಂಜೀವಿ ಸರ್ಜಾ ಆಗಮಿಸಿ ಜಾತ್ರಾ ಉತ್ಸವಗಳಲ್ಲಿ ಭಾಗವಹಿಸುತ್ತಿದ್ದರು. ಈ ವರ್ಷವೂ ಮಾರ್ಚಿ. 9 ರಂದು ನಡೆದ ಜಾತ್ರಾ ಉತ್ಸವದಲ್ಲಿ ಪತ್ನಿ ಮೇಘನಾ ರಾಜ್ ರೊಂದಿಗೆ ಭಾಗವಹಿಸಿದ್ದರು. ಭಾವುಕರಾದ ಅಜ್ಜಿ :       ಜಕ್ಕೇನಹಳ್ಳಿ ದೇವಸ್ಥಾನ ನೇತೃತ್ವವನ್ನು ವಹಿಸಿ ಕೊಂಡಿರುವ ಚಿರಂಜೀವಿ ಸರ್ಜಾ ಅಜ್ಜಿ ಲಕ್ಷ್ಮೀ ದೇವಮ್ಮ ಜಕ್ಕೇನಹಳ್ಳಿಯಲ್ಲಿ ವಾಸವಾಗಿದ್ದು, ಮೊಮ್ಮೊಗನ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಇಷ್ಟು ದಿನ ಬೆಂಗಳೂರಿನಲ್ಲಿ ನೆಲೆಸಿದ್ದ ಇವರು ಜೂ. 8 ರಂದು ಸರ್ಕಾರ ದೇವಸ್ಥಾಗಳನ್ನು ತೆರೆಯಲು ಅನುಮತಿ ನೀಡಿರುವುದರಿಂದ ಭಾನುವಾರವಷ್ಟೇ ತಮ್ಮ ಸ್ವಗ್ರಾಮಕ್ಕೆ ವಾಪಾಸಾಗುತ್ತಿದ್ದರು.    …

Read More

ತುಮಕೂರು:       ಗುಲ್ಬರ್ಗಾ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು ೪೦೦೦ ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.        ಅವರು ಚಿತ್ರದುರ್ಗಕ್ಕೆ ತೆರಳುವ ಮಾರ್ಗ ಮಧ್ಯೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದಿಂದ ಹಂಚಿಕೆಯಾಗಿರುವ ಪಡಿತರ ಅಕ್ಕಿಯನ್ನು ಪಾಲಿಷ್ ಮಾಡಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳಿವೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಕಳೆದ ೨೦ ದಿನಗಳಲ್ಲಿ ಪೊಲೀಸ್, ಕಂದಾಯ ಹಾಗೂ ಆಹಾರ ಇಲಾಖೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ೪೦೦೦ ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಅಕ್ಕಿಯನ್ನು ಸಾಗಿಸಿದ ಲಾರಿಗಳನ್ನೂ ಸಹ ಸೀಜ಼್ ಮಾಡಲಾಗಿದೆ. ಯಾವುದೇ ಅಂಗಡಿಗಳಲ್ಲಿ ಸೂಕ್ತ ದಾಖಲೆ/ ರಸೀದಿ ಇಲ್ಲದೆ ಅಕ್ಕಿ ಹಾಗೂ…

Read More

ಚಿಕ್ಕನಾಯಕನಹಳ್ಳಿ:       ರಸ್ತೆ ಮಧ್ಯದಲ್ಲಿರುವ ವಿದ್ಯುತ್‍ಕಂಬ ತೆಗೆಸದೆ ಕಳಪೆ ಮತ್ತು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವ ಘಟನೆ ತಾಲ್ಲೂಕಿನ ನಿರುವಗಲ್ ಗ್ರಾಮದಲ್ಲಿ ನಡೆದಿದೆ.       ತಾಲ್ಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಪಂಚಾಯಿತಿ ನಿರುವಗಲ್ ಗ್ರಾಮದಲ್ಲಿ ಸರ್ಕಾರದ ಗ್ರಾಮವಿಕಾಸ ಯೋಜನೆಯಡಿ ರಸ್ತೆಕಾಮಗಾರಿ ನಡೆದಿದೆ. ಆದರೆ ಈ ರಸ್ತೆಕಾಮಗಾರಿ ಅತ್ಯಂತ ಕಳಪೆಮಟ್ಟದಲ್ಲಿ ಮಾಡಲಾಗುತ್ತಿದೆ. ಈ ಕಾಂಕ್ರೀಟ್ ರಸ್ತೆಗೆ ಸಿಮೆಂಟ್ ಬಣ್ಣದ ಜಲ್ಲಿಯ ಪುಡಿಯನ್ನು(ಎಂಸ್ಯಾಂಡ್) ಸಿಮೆಂಟ್‍ನೊಂದಿಗೆ ಹೆಚ್ಚು ಪ್ರಮಾಣದಲ್ಲಿ ಸೇರಿಸಿ ಮಾಡಲಾಗುತ್ತಿದೆ. ರಸ್ತೆಯ ನಡುಮಧ್ಯದಲ್ಲಿ ವಿದ್ಯತ್‍ಕಂಬವಿದ್ದರೂ ಅದನ್ನು ಸ್ಥಳಾಂತರಿಸದೆ ಅದನ್ನು ಹಾಗೆಯೇ ಉಳಿಸಿ ರಸ್ತೆ ಮಾಡುತ್ತಿದ್ದಾರೆ.       ಈ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರೂ ಸಂಬಧಿಸಿದ ಇಂಜಿನಿಯರ್ ನಿಲ್ರ್ಯಕ್ಷಧೋರಣೆ ತೋರಿದ್ದಾರೆ. ನಿರುವಗಲ್ ಗ್ರಾಮವು ಬಸ್‍ಸೌಕರ್ಯವಿಲ್ಲದ ಹಿಂದುಳಿದ ಕುಗ್ರಾಮವಾಗಿದ್ದು, ಸುಶಿಕ್ಷಿತ ಮಂದಿ ಇಂತಹ ಕಳಪೆ ಕಾಮಗಾರಿಗಳನ್ನು ನಿರಕ್ಷರಕುಕ್ಷಿಗಳಿರುವ ಕುಗ್ರಾಮದಲ್ಲಿ ನಿರ್ಭಯದಿಂದ ನಡೆಸಿ ಬಿಲ್ಲು ಪಡೆಯುವ ಧಾವಂತದಲ್ಲಿದ್ದಾರೆ.       ಗ್ರಾಮವಿಕಾಸ ಯೋಜನೆಯಲ್ಲಿ ಬರುವ ಇತರೆ ಕಾಮಗಾರಿಗಳನ್ನು ಈ ಗ್ರಾಮದಲ್ಲಿ…

Read More

ಮಧುಗಿರಿ:       ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿರಂತರ ಪ್ರಕೃತಿ ವಿಕೋಪಗಳು ಕಾಡುತ್ತಿದ್ದು, ಸಾರ್ವಜನಿಕ ಆಸ್ತಿ ಸೇರಿದಂತೆ ಸುಮಾರು 35 ಸಾವಿರ ಕೋಟಿ ನಷ್ಟವಾಗಿದ್ದು, ಇದರ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.        ಶುಕ್ರವಾರ ಪಾವಗಡಕ್ಕೆ ಹೋಗುವ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆರೆ ಹಾವಳಿಯಿಂದಾಗಿ ರಾಜ್ಯಕ್ಕೆ ಬಹಳಷ್ಟು ತೊಂದರೆಯುಂಟಾಗಿದ್ದು 2020-21 ನೇ ಸಾಲಿನಲ್ಲಿ ಬಜೆಟ್‍ನಲ್ಲಿ ಇವುಗಳ ದುರಸ್ತಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ ತುರ್ತು ದುರಸ್ಥಿಗಾಗಿ 750 ಕೋಟಿ ಬಿಡುಗಡೆ ಮಾಡಿ ಕೆಲಸ ಕೈಗೆತ್ತಿಕೊಂಡಿದ್ದು, ಬಜೆಟ್ ಅನುಮೋದನೆಗೆ ಹೋಗುವ ಸಮಯದಲ್ಲಿ ಮಾರ್ಚ್‍ನಲ್ಲಿ ಕರೊನಾ ಹಾವಳಿಯಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಸಮಸ್ಯೆಗೆ ಸಿಲುಕಿದ್ದರಿಂದ ಕಾಮಗಾರಿಗಳ ಪ್ರಗತಿಗೆ ಹಿನ್ನಡೆಯಾಗಿದೆ. ಲಾಕ್‍ಡೌನ್ ವೇಳೆಯಲ್ಲಿ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿರುವುದರಿಂದ ಹೊರ ರಾಜ್ಯದ ಕಾರ್ಮಿಕರ ಕೊರತೆಯೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಕಾರ್ಮಿಕರ ಲಭ್ಯತೆಯ ನಂತರ ಕಾಮಗಾರಿಗಳನ್ನು…

Read More

ಪಾವಗಡ:       ಸಮಾಜಕಲ್ಯಾಣ ಇಲಾಖೆಯಿಂದ ಒಟ್ಟು 88 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಅಂಬೇಡ್ಕರ್ ಭವನ, ಸರ್ಕಾರಿ ಬಾಲಕರ ವಸತಿ ನಿಲಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವ ಗೋವಿಂದ ಕಾರಜೋಳ ಹೇಳಿದರು.       ಶುಕ್ರವಾರ ಪಾವಗಡದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯವನ್ನು ನೆರವೇರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವರೂ ಅದ ಗೋವಿಂದ ಕಾರಜೋಳ ನಮ್ಮ ಬಿ.ಜೆ.ಪಿ. ಸರ್ಕಾರದ ಉದ್ದೇಶ ಮಕ್ಕಳಿಗೆ ಶಿಕ್ಷಣ ಕೊಡುವುದಾಗಿದೆ, ತಾಲ್ಲೂಕಿನಲ್ಲಿ ವಸತಿನಿಲಯಗಳು ಪ್ರಾರಂಭವಾಗಿದ್ದರಿಂದ 1600 ಮಕ್ಕಳಿಗೆ ಅನುಕೂಲವಾಗುತ್ತಿದೆ. ಸರ್ಕಾರದ ಮುಖ್ಯ ಆಧ್ಯತೆ ಶಿಕ್ಷಣ. ಬಜೆಟ್‍ನಲ್ಲಿ ಬಡವರ ಪರ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತಿದೆ. 559 ಕೋಟಿ ಅನುದಾನವನ್ನು ಎಸ್.ಸಿ/ಎಸ್.ಟಿ. ಜನಾಂಗದ ಅಭಿವೃದ್ಧಿಗಾಗಿ ಹಾಗೂ 25.388 ಕೋಟಿ ಖರ್ಚು ಮಾಡಲಾಗಿದೆ.       2019-20 ಸಾಲಿನಲ್ಲಿ ಕೊರೊನಾ ಲಾಕ್‍ಡೌನ್‍ನಿಂದ ಪ್ರಗತಿ ಕುಂಟಿತವಾಗಿದೆ. ಆದರೂ ಸಹ ನಮ್ಮ…

Read More