Author: News Desk Benkiyabale

ಮಧುಗಿರಿ: ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನೆರೆಗಾ ಯೋಜನೆ ಅಡಿಯಲ್ಲಿ ಉತ್ತಮ ಕೆಲಸ ಆಗಿರುವ ಬಗ್ಗೆ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಪ್ರಶಂಸೆ ವ್ಯಕ್ತಪಡಿಸಿದ್ದರೆ. ನರೇಗಾ ಕಾಮಗಾರಿ ವೀಕ್ಷಿಸಲು ಕೇಂದ್ರದಿAದ ಆಗಮಿಸಿದ್ದ ತಂಡದೊAದಿಗೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಸಹಕಾರ ಸಚಿವರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚು ಶ್ರಮವಹಿಸಿ ರೈತರಿಗೆ ತಮ್ಮ ಜಮೀನಿನಲ್ಲಿ ಬದಾ ನಿರ್ಮಿಸಲು ತಿಳಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿದ್ದರಿಂದ ಕೂಲಿ ಕಾರ್ಮಿಕರು ವಲಸೆ ಹೋಗದಂತೆ ತಡೆದು ಜಿಲ್ಲೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರ ಹೆಚ್ಚು ಮಾನವ ದಿನಗಳ ಸೃಜನಯಾಗಿರುವುದಕ್ಕೆ ಅಧಿಕಾರಿಗಳನ್ನು ಅಭಿನಂದಿಸಿದ ಅವರು ನೆರೆಗಾ ಯೋಜನೆ ಅಡಿಯಲ್ಲಿ ಸಮುದಾಯ ಕಾಮಗಾರಿ ಶಾಲಾ ಕಾಂಪೌAಡ್ ಆಟದ ಮೈದಾನ ಶೌಚಾಲಯ ಕಾಮಗಾರಿ ಶೇಕಡ ೮೦% ಪೂರ್ಣಗೊಂಡಿರುವುದನ್ನು ತಿಳಿದು ಮಧುಗಿರಿ ಕ್ಷೇತ್ರ ನೆರಗ ಯೋಜನೆ ಅಡಿಯಲ್ಲಿ ಪ್ರಥಮ ಸ್ಥಾನ ಪಡೆಯಬೇಕಾಗಿದೆ ಇದಕ್ಕೆ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕು ಎಂದರು. ಮಧುಗಿರಿ ಕ್ಷೇತ್ರದಲ್ಲಿ ನರೇಗಾ ಯೋಜನೆ ಉತ್ತಮವಾಗಿ ನಡೆಯುತ್ತಿರುವುದಕ್ಕೆ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ಸಹಾಯಕ ನಿರ್ದೇಶಕರು ಗ್ರಾಮೀಣ…

Read More

ತಿಪಟೂರು: ವಿಶ್ವ ಆರೋಗ್ಯ ಸಂಸ್ಥೆ ೨೦೩೦ರ ವೇಳೆಗೆ ಎಚ್‌ಐವಿ ಮುಕ್ತ ಭಾರತ ಮಾಡುವ ಗುರಿ ಹೊಂದಿದೆ. ಈ ಎಚ್‌ಐವಿ ಯನ್ನು ಹೋಗಲಾಡಿಸಲು ಯುವಕರು ಸಂಕಲ್ಪ ಮಾಡಬೇಕೆಂದು ತಿಪಟೂರು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋ ಚಕರಾದ ಟಿ.ಎಸ್.ಉಮೇಶ್ ತಿಳಿಸಿದ್ದಾರೆ. ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಮತ್ತು ಎನ್‌ಎಸ್‌ಎಸ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ತಿಪಟೂರಿನ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಕಾಲೇಜಿನಲ್ಲಿ ಬುಧವಾರ ನಡೆದ ‘ಯುವ ಜನತೆಗೆ ಎಚ್‌ಐವಿ, ಏಡ್ಸ್ ಬಗ್ಗೆ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಚ್‌ಐವಿ ಪಾಸಿಟಿವ್ ಇರುವರ ಸಂಖ್ಯೆ ಇತ್ತೀಚೆಗೆ ಕಡಿಮೆ ಆಗುತ್ತಿದೆ. ಇದು ಶೂನ್ಯಕ್ಕೆ ಬಂದು ನಿಲ್ಲಬೇಕು. ಈ ರೋಗವನ್ನು ತಡೆಗಟ್ಟಲು ಯುವಕರ ಸಹಕಾರ ಹೆಚ್ಚು ಮುಖ್ಯ. ಈ ಮಾರಕ ರೋಗವನ್ನು ತಡೆಗಟ್ಟಲು ಕಾಲೇಜುಗಳಲ್ಲಿನ ರೆಡ್ ರಿಬ್ಬನ್ ಕ್ಲಬ್ ಸಂಚಾಲಕರುಗಳು ಸೈನಿಕ ರಂತೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಉಮೇಶ್ ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್. ಬಿ. ಕುಮಾ ರಸ್ವಾಮಿ…

Read More

ಗುಬ್ಬಿ: ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ತಾಲ್ಲೂಕಿನ ಕಡಬದಿಂದ ಕಾಡಶೆಟ್ಟಿಹಳ್ಳಿಯವರೆಗೆ ರೈತ ಸಂಘದವರು ನೂರಾರು ರೈತರೊಂದಿಗೆ ಗುರುವಾರ ಬೈಕ್ರ‍್ಯಾಲಿ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕಡಬ ಹೋಬಳಿ ಗಂಗಸAದ್ರ, ಕಾಡಶೆಟ್ಟಿಹಳ್ಳಿ ಭಾಗದಲ್ಲಿ ಕಳೆದ ಮಂಗಳವಾರ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಪ್ರಾರಂಭಿಸಲು ಬಂದಿದ್ದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿ, ಕಾಮಗಾರಿ ತಡೆದಿದ್ದರು. ನೀರಾವರಿ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಸರ್ವೆಗೆ ಬರುವುದಾಗಿ ತಿಳಿಸಿ ಹೋಗಿದ್ದರು.ಗುರುವಾರ ಅಧಿಕಾರಿಗಳು ಬರುವರು ಎಂದು ಸ್ಥಳೀಯರು ರೈತಸಂಘದೊAದಿಗೆ ಪ್ಯಾಲಿ ನಡೆಸಿದರು.ರೈತ ಸಂಘದವರ ಜೊತೆ ಸುತ್ತಲಿನ ಗ್ರಾಮಗಳ ನೂರಾರು ರೈತರು ಹಾಗೂ ಮುಖಂಡರು ಸೇರಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಈಗಾಗಲೇ ನಿರ್ಮಿಸಿರುವ ಹೇಮಾವತಿ ಉಪ ನಾಲೆಯ ಕೆಳಭಾಗದಲ್ಲಿಯೇ ಪೈಪ್ ಅಳವಡಿಸಿ ನೀರು ತೆಗೆದುಕೊಂಡು ಹೋಗುತ್ತೇವೆ ಎಂದು ಅಧಿಕಾರಿಗಳು ಹೇಳುವುದು ಕಾನೂನುಬಾಹಿರ. ಈ ಹಿಂದೆ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು ಉಪನಾಲೆ ನಿರ್ಮಾಣಕ್ಕಾಗಿ ಮಾತ್ರ. ಇದು ರಾಜ್ಯಪತ್ರದಲ್ಲಿಯೂ…

Read More

ತುಮಕೂರು: ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ೩೯ ಮಂದಿ ರಾಜಸ್ವ ನಿರೀಕ್ಷಕರು ಹಾಗು ಗ್ರಾಮ ಲೆಕ್ಕಿಗರಿಗೆ ಉಚಿತವಾಗಿ ಲ್ಯಾಪ್ ಟಾಪ್, ಬುಕ್ಕಾಪಟ್ಟಣ ವ್ಯಾಪ್ತಿಯ ಹತ್ತು ಮಂದಿಗೆ ಸ್ಮಾರ್ಟ್ ಪೋನ್ ಗಳನ್ನು ವಿತರಿಸಿದರು. ತಾಲ್ಲೂಕು ಕಚೇರಿಯಲ್ಲಿರುವ ಶಾಸಕರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಪ್ರಪ್ರ ಥಮವಾಗಿ ಎಸ್.ಬಿ. ಚಾರಿಟಬಲ್ ಟ್ರಸ್ಟ್ ವತಿಯಿಂದ ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್ ಗಳನ್ನು ವಿತರಿಸಲಾಗುತ್ತಿದೆ. ಗ್ರಾಮ ಲೆಕ್ಕಿಗರು ತಮ್ಮ ಕಚೇರಿಯಲ್ಲೇ ಇದ್ದು ಎಲ್ಲಾ ಕೆಲಸಗಳನ್ನು ಮಾಡಲು ಮತ್ತು ಪ್ರತಿನಿತ್ಯ ತಾಲ್ಲೂಕು ಕಚೇರಿಗೆ ಹೋಗುವುದನ್ನು ತಪ್ಪಿಸಲು ಈ ಲ್ಯಾಪ್ ಟಾಪ್ ವಿತರಿಸಲಾಗಿದೆ. ಜನರಿಗೆ ಉತ್ತಮ ಸೇವೆ ನೀಡಲು ಲ್ಯಾಪ್ ಟಾಪ್ ಅನ್ನು ಬಳಸಿಕೊಳ್ಳಬೇಕು. ಗ್ರಾಮೀಣ ಜನರ ಜತೆ ನೇರ ಸಂಪರ್ಕ ಇರುವ, ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವತ್ತ ಕಂದಾ ಯ ಇಲಾಖೆಯು ತಂತ್ರಜ್ಞಾನವನ್ನು ಸಮ ರ್ಥವಾಗಿ ಬಳಸಿಕೊಳ್ಳುವ ಸಲುವಾಗಿ ಎಸ್. ಬಿ. ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು…

Read More

ತುಮಕೂರು: ಕೊರಟಗೆರೆ ತಾಲ್ಲೂಕಿನ ಎಲೆರಾಂಪು ರದಲ್ಲಿರುವ ಕುಂಚಿಟಿಗರ ಮಹಾ ಸಂಸ್ಥಾನ ಮಠದಲ್ಲಿ ೪ನೇ ವರ್ಷದ ೧೦ ದಿನಗಳ ಸಂಸ್ಕಾರ ಶಿಬಿರವನ್ನು ಆಯೋಜಿಸಲಾಗಿತ್ತು. ಬೆಂಗಳೂರು ಆಕ್ಸ್ಫರ್ಡ್ ಕಾಲೇಜು ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲರಾದ ಡಾ. ಎಂ.ದೇವೇAದ್ರ ಶ್ರೀಮಠದಲ್ಲಿ ಕಲಿತ ಪ್ರತಿಯೊಂದು ಜ್ಞಾನವನ್ನು ನಿಮ್ಮ ಭವಿಷ್ಯಕ್ಕೆ ದಾರಿದೀಪವಾಗಲಿದೆ ಎಂದು ಡಾ. ಎಂ.ದೇವೇAದ್ರ ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಣಿಗಲ್‌ನ ದೊಂಬರಹಟ್ಟಿಯಲ್ಲಿನ ಶ್ರೀ ಶನಿಮಹಾತ್ಮ ದೇವಸ್ಥಾನದ ಸ್ವಾಮೀಜಿಗಳಾದ ಆನಂದ್ ಗುರೂಜಿಯವರು ಮಾತ ನಾಡುತ್ತಾ, ಇಂತಹ ಶಿಬಿರಗಳ ಮೂಲಕ ಹಳ್ಳಿಗಾಡಿನ ಮಕ್ಕಳು ಭಗವದ್ಗೀತೆಯ ಪ್ರಾ ರ್ಥನಾ ಶ್ಲೋಕಗಳು, ಸಂಸ್ಕೃತ ಭಾಷೆಯು ಏಕಾಗ್ರತೆ ಮತ್ತು ಒಳ ಮನಸ್ಸಿನಿಂದ ಸ್ಪಷ್ಟವಾಗಿ ಉಚ್ಚರಿಸುತ್ತಿರುವುದನ್ನು ನೋಡಿದರೆ ಶ್ರೀಮ ಠವು ಸಂಸ್ಕೃತಿಯ ಕೇಂದ್ರ ಸ್ಥಾನವಾಗಿ ರೂಪ ಗೊಳ್ಳುತ್ತಿರುವುದು ಹರ್ಷದಾಯಕವಾಗಿದೆ. ಇಲ್ಲಿ ಕಲಿಯುವ ವಿಚಾರಗಳು ಜೀವನ ಪೂರ್ತಿಯಾಗಿ ಸ್ಮರಿಸಬೇಕು ಎಂದರು. ಶ್ರೀ ಮಠದಲ್ಲಿ ಕಲಿತ ಪ್ರತಿಯೊಂದು ಜ್ಞಾನವನ್ನು ನಿಮ್ಮ ಭವಿಷ್ಯಕ್ಕೆ ನಿಮ್ಮ ಜೀವನ ಬದಲಾಯಿಸುವಂತಹ ಶಕ್ತಿ ಇದೆ, ಅತ್ಯಂತ ಅಮೂಲ್ಯವಾದ ಜ್ಞಾನವನ್ನು ಸಂಪಾದನೆ…

Read More

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆ ಹೋಬಳಿಯ ಅಗಸರಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ-ಗಾಳಿಯಿಂದ ಸುದರ್ಶನ ಬಿನ್ ಕುಮಾರಸ್ವಾಮಿ ಅವರ ಸರ್ವೆ ಸಂಖ್ಯೆ ೪೧ರ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಮತ್ತು ತೆಂಗಿನ ಮರಗಳು ಹಾಳಾಗಿದ್ದು, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಸತಿ ನಿರ್ಮಾಣ ಪ್ರಗತಿ ಪರಿಶೀಲನೆ ನಂತರ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೈಗೊಂಡಿರುವ ವಸತಿ ನಿರ್ಮಾಣ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಯೋಜನೆಯಡಿ ಮಂಜೂರಾಗಿರುವ ೮೦೦ ಮನೆಗಳ ಪೈಕಿ ೪೩೬ ಮನೆಗಳನ್ನು ಪಟ್ಟಣದ ಕಸಬ ಸರ್ವೆ ನಂ. ೧೧೯ ಮತ್ತು ೧೨೧/೨ರ ೫ ಎಕರೆ ೩೫ ಗುಂಟೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ವಸತಿಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಪಾಡುವಂತೆ ಸೂಚನೆ ನೀಡಿದರಲ್ಲದೆ, ಫಲಾನುಭವಿಗಳು ಶೀಘ್ರದಲ್ಲಿ ಮನೆಗಳನ್ನು ಪಡೆಯಬಹುದೆಂಬ ನಂಬಿಕೆಯಿಟ್ಟುಕೊAಡಿದ್ದಾರೆ. ಆದ ಕಾರಣ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಸಬಾ…

Read More

ತುಮಕೂರು: ದಿ: ೨೩/೦೯/೨೦೨೨ ರಂದು ಹಾಸ್ಟೆಲ್ ವಾರ್ಡನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ತುಮಕೂರು ಮಹಿಳಾ ಪೊಲೀಸ್ ಠಾಣಾ ಮೊನಂ: ೧೨೪/೨೦೨೨ ಕಲಂ: ೩೭೭, ಐಪಿಸಿ ಮತ್ತು ಕಲಂ: ೦೪, ೫(m), ೦೬ ಪೋಕೋ ಆಕ್ಟ್ ಪ್ರಕರಣವನ್ನು ಪದ್ಮಾವತಿ ಪಿ.ಎಸ್.ಐ ರವರು ದಾಖಲಿಸಿರುತ್ತಾರೆ. ನಂತರ ಪೊಲಿಸ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಒ.ಃ ಮಹಿಳಾ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿಯಾದ ಬಸವರಾಜು ಬಿನ್ ಈರಣ್ಣ ೩೫ ವರ್ಷ ವಾಸ: ಗೊಲ್ಲಹಳ್ಳಿ ಪಟ್ಟನಾಯಕನಹಳ್ಳಿ ಹೋಬಳಿ ಸಿರಾ ತಾಲ್ಲೂಕ್ ರವರನ್ನು ದಸ್ತಗಿರಿ ಮಾಡಿ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತಾರೆ. ಸದರಿ ಪ್ರಕರಣವನ್ನು ಸ್ಪೆಷಲ್ ಸಿ.ಸಿ ನಂ: ೭೯೪/೨೦೨೨ ರಲ್ಲಿ ಮಾನ್ಯ ತುಮಕೂರು ಎಫ್.ಟಿ.ಎಸ್.ಸಿ -೧ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿ ಆರೋಪಿಯ ವಿರುದ್ಧ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ದಿ:೨೩/೦೪/೨೦೨೫ ರಂದು ಈ ಪ್ರಕರಣದ ಆರೋಪಿ ಬಸವರಾಜು ರವರಿಗೆ ಜೀವಾವಧಿ ಶಿಕ್ಷೆ ಮತ್ತು…

Read More

ತುಮಕೂರು: ವರನಟ, ನಟ ಸಾರ್ವಭೌಮ ಡಾ: ರಾಜ್ ಕುಮಾರ್ ಅವರು ತಮ್ಮ ಅಮೋಘ ನಟನೆ, ಗಾಯನದ ಮೂಲಕ ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿದ್ದರೆಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಬಣ್ಣಿಸಿದರು. ನಗರದ ಕನ್ನಡ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು,  ಡಾ:ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಡಾ: ರಾಜ್ ಕುಮಾರ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ “ರಾಜರಸ” ಸಂಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬAತೆ ಡಾ: ರಾಜ್ ಅವರು ಅಭಿನಯಿಸದ ಪಾತ್ರಗಳಿಲ್ಲ. ಕರ್ನಾಟಕದಲ್ಲಿ ಡಾ: ರಾಜ್‌ಕುಮಾರ್ ಎಂದರೆ ಅಣ್ಣಾವ್ರು ಎಂದೇ ಪ್ರಸಿದ್ಧಿ. ಅವರ ಚಿತ್ರಗಳು ಇಡೀ ಕುಟುಂಬ ಒಟ್ಟಿಗೇ ಕುಳಿತು ವೀಕ್ಷಿಸುವಂತಹದಾಗಿದ್ದವು.  ಅವರು ನಟಿಸಿರುವ ಚಿತ್ರದ ಗೀತೆಗಳ ಸಾಹಿತ್ಯ ಅರ್ಥಪೂರ್ಣವಾಗಿರುತ್ತಿದ್ದವು.  ಅಣ್ಣಾವ್ರ ನಟನೆ ಹಾಗೂ ಗಾಯನಕ್ಕೆ ಅವರೇ ಸಾಟಿಯಾಗಿದ್ದರು ಎಂದು ತಿಳಿಸಿದರು. ರಾಜ್‌ಕುಮಾರ್ ಅವರು ಗೋಕಾಕ್ ಚಳುವಳಿಯ ನೇತೃತ್ವವಹಿಸುವ…

Read More

ಗುಬ್ಬಿ: ತಾಲ್ಲುಕಿನ ಚೆಳೂರು ಹೋಬಳಿಯ ಸೊರೆಕಾಯಿಪೇಟೆ ಯ ಸರ್ವೆ ನಂ:೨೦ ಸಾಗುವಳಿ ಮಾಡುತ್ತಿದ್ದ ರೈತ ಮಹಿಳೆ ಮೇಲೆ ಏ. ೨೨ ರಂದು ಅನುಭವದಲ್ಲಿರುವ ಭೂಮಿಗೆ ಬಂದು ಗುಡಿಸಲುಗೆ ಬೆಂಕಿಹಚ್ಚಿರುವು ಸೇರಿದಂತೆ ಇತರೆ ಕೃಷಿ ಉಪಕರಣಗಳನ್ನು ಒಡೆದು ಹಾಕಿ ದಾಂದಲೆ ಮಾಡಿರುವ ಅರಣ್ಯ ಇಳಾಖೆಯ ಸಿಬ್ಬಂದಿಯನ್ನು ಅಮಾನತ್ತು ಮಾಡಲು ಮತ್ತು ಬಗೇರ್ ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಸಲ್ಲಿಸಿದ ಮನವಿ ಪತ್ರ. ಗುಬ್ಬಿ ತಾಲ್ಲುಕು ಅರಣ್ಯ ಭೂಮಿ ಒತ್ತುವರಿ ಮಾಡಿದ್ದೀರ ಎಂದು ಅರಣ್ಯ ಇಲಾಖೆ ಸಿಬ್ಬಂದಿ ದಿನಾಂಕ;೨೨-೦೪-೨೦೨೫ ರಂದು ಸುಮಾರು ೧೦.೩೦ ಗಂಟೆಯ ಸಮಯದಲ್ಲಿ ಗುಬ್ಬಿ ತಾಲ್ಲುಕು ಚೆಳೂರು ಹೋಬಳಿ ಯ ಕಾಡುಗೊಲ್ಲ ಬುಡಕಟ್ಟು ವಿಧವೆ ಯ ರೇಣುಕಮ್ಮ ಕೋಂ ಲೇಟ್,ಕೃಷ್ಣಮೂರ್ತಿ ಯವರು ಸೊರೆಕಾಯಿ ಪೇಟೆಯ ಸರ್ವೆ ನಂ:೨೦ ರಲ್ಲಿ ಸ್ವಾಧಿನದಲ್ಲಿರುವ ಭೂಮಿಯಲ್ಲಿ ಕಳೆದ ೨೦ ವರ್ಷಗಳಿಂದ ಉಳಿಮೆ ಮಾಡಿಕೊಂಡು ಅನುಭವನದಲ್ಲಿದ್ದಾರೆ. ಏಕಾಎಕಿ ಭೂಮಿಗೆ ನುಗ್ಗಿ ಆರಣ್ಯ ಇಲಾಖೆಯ ಸಿಬ್ಬಂದ್ದಿಗಳು ಗುಡಿಸಲಿಗೆ ಬೆಂಕಿ ಹಚ್ಚಿ ಗುಡಿಸಿಲಿನ ಒಳಗಿದ್ದ ದಿನಸಿ,ಬಟ್ಟೆ,ಬರೆ,ಹೂದಿಕೆ ಸುಟ್ಟು ಮತ್ತು…

Read More

ಶಿರಾ: ವೃದ್ಧರ ಕಣ್ಣುಗಳಿಗೆ ನವ ಚೈತನ್ಯದ ಬೆಳಕು ನೀಡುವುದೇ ನಮ್ಮ ಸಂಕಲ್ಪ, ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಗ್ರಾಮದಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ ಆಯೋಜನೆ ಮಾಡಿ ಬಡ ಕುಟುಂಬಗಳ ವೃದ್ಧರ ಕಣ್ಣಿಗೆ ಬೆಳಕನ್ನು ನೀಡುವ ಸೇವೆ ಹೆಚ್ಚು ಹರ್ಷ ನೀಡುತ್ತದೆ ಎಂದು ಜೆಡಿಎಸ್ ಹಿರಿಯ ಮುಖಂಡ ಆರ್.ಉಗ್ರೇಶ್ ಹೇಳಿದರು. ಶಿರಾ ತಾಲೂಕಿನ ಲಕ್ಕನಹಳ್ಳಿ ಅರುಣೋದಯ ವಿದ್ಯಾ ಸಂಸ್ಥೆ ಶಿರಾ ಲಯನ್ಸ್ ಕ್ಲಬ್ ಹಾಗೂ ಆರ್. ಉಗ್ರೇಶ್ ಅಭಿಮಾನಿ ಬಳಗ ಸಹಯೋಗದೊಂದಿಗೆ ಬುಧವಾರ ನಡೆದ ಉಚಿತ ಕಣ್ಣಿನ ತಪಾ ಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮತ್ತೊಬ್ಬರ ಕಣ್ಣಿನ ದೃಷ್ಟಿ ಪ್ರಜ್ವಲಿಸುವಂತೆ ಮಾಡಿ ಕಣ್ಣುಗಳನ್ನು ಕಾಣುವಂತೆ ಮಾಡುವುದು ಶ್ರೇಷ್ಠ ಸೇವೆ. ಶಿರಾ ತಾಲೂಕಿನ ಸಾವಿರಾರು ಜನರಿಗೆ ನೀಡುವ ಇಂತಹ ಸೇವೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿವೆ. ಕಣ್ಣಿಗೆ ಬೆಳಕು ನೀಡುವ ಸೇವೆ ನನಗೆ ಹೆಚ್ಚು ತೃಪ್ತಿ ನೀಡುತ್ತದೆ ಎಂದರು. ಅರುಣೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ. ಮಂಜುನಾಥ್ ಮಾತನಾಡಿ ಕಣ್ಣಿನ ಶಸ್ತ್ರಚಿಕಿತ್ಸೆ…

Read More