ಮಧುಗಿರಿ: ಶಿಕ್ಷಣ ಕ್ಷೇತ್ರವೂ ಇಂದು ಉದ್ಯಮ ಕ್ಷೇತ್ರವಾಗುತ್ತಿದ್ದು ಶಿಕ್ಷಣ ತಜ್ಞರ ಜಾಗವನ್ನು ಶಿಕ್ಷಣೋದ್ಯಮಿಗಳು ಅಕ್ರಮಿಸಿಕೊಂಡು ವ್ಯಾಪಾರ ಕ್ಷೇತ್ರವಾಗಿ ಶಿಕ್ಷಣದ ಸಂವೇದನೆ ಲಕ್ಷಣಗಳು ಗಣನೀಯವಾಗಿ ಕೆಳಹಂತಕ್ಕೆ ಇಳಿಯಲ್ಪಿಟ್ಟಿರುವುದು ಅಘಾತಕಾರಿ ಸಂಗತಿ ಎಂದು ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ನಮ್ಮ ಕನ್ನಡಿಗರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸಿಗಬೇಕಾದರೆ ಕನ್ನಡ ಭಾಷೆಯನ್ನೇ ಮುಖ್ಯವಾಗಿಸಿ ಉದ್ಯೋಗ ದೊರಕುವಂತೆ ಮಾಡುವ ಕೆಲಸವಾಗಬೇಕು ಕನ್ನಡ ದಿಂದ ಬದುಕು ಕಟ್ಟಿಕೊಳ್ಳಬಹುದೆಂಬ ದೃಢವಾದ ವಿಶ್ವಾಸವನ್ನ ಸರ್ಕಾರಗಳು ಕೈಗೆತ್ತಿಕೊಂಡು ಕನ್ನಡಿಗರಿಗೆ ನಂಬಿಕೆಯ ಶಕ್ತಿ ತುಂಬುವ ಅಗತ್ಯವಿದೆ,ನವೆಂಬರ್ ಕನ್ನಡ ನಾಯಕರು ನಮ್ಮಲ್ಲಿ ಹೆಚ್ಚಾಗುತ್ತಿದ್ದಾರೆ ನಮ್ಮ ಉಸಿರು ಇರುವವರೆಗೂ ಕನ್ನಡಕ್ಕಾಗಿ ದಿನನಿತ್ಯದ ನಾಯಕರಾಗಬೇಕು,ನಾಡಿನ ಜನಸಾಮಾನ್ಯರು ಕನ್ನಡ ಭಾಷೆಯನ್ನು ಬಳಸುತ್ತ ಉಳಿಸುತ್ತ ಬಂದಿದ್ದಾರೆ ಅವರಿಂದಲೇ ನಾಡು ನುಡಿ ಗಟ್ಟಿಯಾಗಿರುವುದು,ಕನ್ನಡ ಭಾಷೆಯ ಸಂವೇದನೆಯಲ್ಲಿ ಸಮಾನತೆ, ಸೌಹಾರ್ದತೆ,ಜಾತ್ಯಾತೀತತೆ ಎಲ್ಲವೂ ಇದೆ, ಸಾಂಸ್ಕೃತಿಕ ಸ್ಪರ್ಧೆಗಳಿಂದ…
Author: News Desk Benkiyabale
ತುಮಕೂರು: ಜಿಲ್ಲೆಯಲ್ಲಿ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಂಬ0ಧಿಸಿದ0ತೆ ಮತದಾರರ ಪಟ್ಟಿಗೆ ೨೩,೦೮೦ ಪುರುಷ ಹಾಗೂ ೧೬, ೯೭೧ ಮಹಿಳಾ ಪದವೀಧರರು ಸೇರಿ ಒಟ್ಟು ೪೦,೦೫೧ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪದವೀಧರ ಕ್ಷೇತ್ರದ ಚುನಾವಣೆ ಮತದಾರರ ಪಟ್ಟಿ ತಯಾರಿಕೆ ಹಾಗೂ ಇತರೆ ಚುನಾವಣಾ ಕುರಿತು ಮಾನ್ಯತೆ ಪಡೆದ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಆಗ್ನೇಯ ಪದವೀಧರರ ಕ್ಷೇತ್ರದ ಕರಡು ಮತದಾರರ ಪಟ್ಟಿ ಈಗಾಗಲೇ ಪ್ರಕಟಿಸಲಾಗಿದೆ ಎಂದರು. ಈ ಕರಡು ಪಟ್ಟಿಯಲ್ಲಿ ಸೇರ್ಪಡೆ ಹಾಗೂ ತಿರಸ್ಕೃತ ವಾಗಿರುವ ಪದವೀಧರರ ಅರ್ಜಿಗಳನ್ನು ಪುನಃ ಪರಿಶೀ ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಮಾಹಿತಿ ತಿದ್ದುಪಡಿ ಅಥವಾ ಪೂರಕ ದಾಖಲೆಗಳ ತಿದ್ದುಪಡಿ ಮಾಡಿ ಸಲು ಹಾಗೂ ಹೊಸದಾಗಿ ನೋಂದಾಯಿಸಿಕೊಳ್ಳಲು ಡಿ. ೧೦ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಪ್ರಭಾರ ಚುನಾವಣಾ ತಹಶೀಲ್ದಾರ್ …
ತುಮಕೂರು: ತುಮಕೂರು, ತಿಪಟೂರು ಮಾರ್ಗವಾಗಿ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಲು ಮೈಸೂರು ವಿಭಾಗದವರು ಒಪ್ಪಿಗೆ ಕೊಡಬೇಕಿದೆ. ಮಂಗಳೂರು-ಹಾಸನ-ಯಶವ0ತಪುರ ಮಾರ್ಗದಲ್ಲಿ ಸಾಗುವ ರೈಲುಗಳ ಒತ್ತಡದ ನಡುವೆ ತುಮಕೂರು ಮೂಲಕ ತೆರಳುವ ರೈಲಿಗೆ ಅನುವು ಮಾಡಿಕೊಡುವುದಾದರೆ ರೈಲು ಓಡಿಸಲು ಸಾಧ್ಯವಿದೆ ಎಂದು ನೈಋತ್ಯ ರೈಲ್ವೇ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳು ಭರವಸೆ ನೀಡಿದರು. ಬೆಂಗಳೂರಿನ ಡಿಆರ್ಎಂ ಕಚೇರಿಯಲ್ಲಿ ಬುಧವಾರ ನಡೆದ ನೈಋತ್ಯ ರೈಲ್ವೇ ಬೆಂಗಳೂರು ವಿಭಾಗದ ರೈಲು ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯ, ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್, ತುಮಕೂರು, ತಿಪಟೂರು ಮೂಲಕ ಮಂಗಳೂರಿಗೆ ತೆರಳಲು ಅನುಕೂಲವಾಗುವಂತೆ ಯಶವಂತಪುರ-ಹಾಸನ-ಮ0ಗಳೂರು ರೈಲಿಗೆ ಸಂಪರ್ಕ ಕಲ್ಪಿಸುವಂತೆ ತುಮಕೂರಿನಿಂದ ಹಾಸನಕ್ಕೆ ರೈಲು ಸಂಪರ್ಕ ಕಲ್ಪಿಸಬೇಕೆಂದು ಮಾಡಿದ ಮನವಿಗೆ ಅಧಿಕಾರಿಗಳು ಪ್ರತಿಕ್ರಿಯಿಸಿದರು. ಈ ವಿಷಯಕ್ಕೆ ಸ್ಪಂದಿಸಿದ ಸೀನಿಯರ್ ಡಿಓಎಂ ಪ್ರಿಯಾ ಅವರು, ಪ್ರಸ್ತುತ ಸಂಚರಿಸುತ್ತಿರುವ ಯಶವಂತಪುರ-ಹಾಸನ-ಮ0ಗಳೂರು ರೈಲಿಗೆ ಈಗಾಗಲೇ ಶೇ. ೧೫೦ರಷ್ಟು ಪ್ರಯಾಣಿಕರ ಒತ್ತಡವಿದ್ದು, ಅದೇ ರೈಲಿಗೆ ಸಂಪರ್ಕ ಕಲ್ಪಿಸಿದರೆ…
ಕುಣಿಗಲ್: ಹುಲಿಯೂರುದುರ್ಗ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಂದ ಒಕ್ಕಲೆಬ್ಬಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ನೂರಾರು ರೈತರು ಮಹಿಳೆಯರು ಪ್ರತಿಭಟನೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಹುಲಿಯೂರುದುರ್ಗ ಅರಣ್ಯ ಕಚೇರಿಯ ಮುಂಭಾಗ ನೂರಾರು ಮಹಿಳೆಯರು ರೈತ ಮುಖಂಡರು ಸೇರಿದಂತೆ ವಿವಿಧ ಪಕ್ಷ ಗಳು ಮತ್ತು ಸಂಘಟನೆಗಳ ಬೆಂಬಲದೊ0ದಿಗೆ ಅರಣ್ಯಾಧಿಕಾರಿಗಳ ಮತ್ತು ಕಂದಾಯ ಇಲಾಖೆಯವರ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಬಿ.ಆರ್. ಯೋಗೇಶ್ (ಕರಿಗೌಡ) ನೇತೃತ್ವದಲ್ಲಿ ಪ್ರತಿಭಟನೆ ಧರಣಿ ನಡೆಸಿ ಮಾತನಾಡುತ್ತ ಕಳೆದ ೬೦ ವರ್ಷಗಳಿಂದ ರೈತರು ತಾಲೂಕಿನ ಕಾಚಿಹಳ್ಳಿ ,ಎಲೆಕಡುಕುಲು, ಕೆ. ಬ್ಯಾಡರಹಳ್ಳಿ ೭೮ ಎಕರೆ ಸೌತ್ ಎಕ್ಸ್ಟೆಂಶನ್ ಎಂದು ಗುರುತಿಸಿದ್ದು ಕೆ ಹೆಚ್ ಹಳ್ಳಿ ೩೪ ಎಕರೆ, ರಾಜ್ಯ ಅರಣ್ಯ ಎಂದು ಗುರುತಿಸಲ್ಪಟ್ಟಿದ್ದು ಕಾಡುಬೋರನಹಳ್ಳಿ,ಹಿತ್ತಲಪುರ, ಉಜ್ಜಿನಿ ಸೇರಿದಂತೆ ತಾಲೂಕಿನ ಹಲವಾರು ಪ್ರದೇಶದಲ್ಲಿ ಈಗಾಗಲೇ ೬೦ ರಿಂದ ೭೦ ವರ್ಷಗಳಿಂದ ಈ ಪ್ರದೇಶಗಳಲ್ಲಿ ಜಮೀನುಗಳನ್ನ ಉಳಿಮೆ ಮಾಡಿಕೊಂಡು ಮನೆ ಕಟ್ಟಿ ತೋಟ ಮಾಡಿಕೊಂಡು ಜೀವನ ನಡೆಸುತ್ತಿರುವಾಗ…
ತುಮಕೂರು: ನಗರದ ಗಾಜಿನ ಮನೆಯಲ್ಲಿ ಡಿಸೆಂಬರ್ 29 ಹಾಗೂ 30ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನಾಧ್ಯಕ್ಷರನ್ನಾಗಿ ಲೇಖಕ ಡಾ: ಕರೀಗೌಡ ಬೀಚನಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಂಡು ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ನಿರ್ದೇಶಿಸಿದರು. ಸಮ್ಮೇಳನ ಅಂಗವಾಗಿ ಡಿಸೆಂಬರ್ ೨೯ರ ಬೆಳಿಗ್ಗೆ ೮ ಗಂಟೆಗೆ ನಗರದ ಮಹಾನಗರ ಪಾಲಿಕೆ ಮುಂಭಾಗದಿ0ದ ಎಂ.ಜಿ.ರಸ್ತೆ, ಗುಂಚಿ ಚೌಕ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಮಾರ್ಗವಾಗಿ ಗಾಜಿನ ಮನೆಯವರೆಗೂ ವಿವಿಧ ಕಲಾ ತಂಡಗಳೊ0ದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು. ಡಾ: ಕರೀಗೌಡ ಬೀಚನಹಳ್ಳಿ ಅವರು ಡಿಸೆಂಬರ್ ೨೯ರ ಬೆಳಿಗ್ಗೆ ೧೦ ಗಂಟೆಗೆ ಗಾಜಿನ ಮನೆಯಲ್ಲಿ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಚಿವರು, ಸಂಸದರು,…
ತುಮಕೂರು: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಶಾಲಾ ಆವರಣದಲ್ಲಿ ಕಂಡು ಬರುವಂತಹ ಅಪಾಯಕಾರಕ ವಿದ್ಯುತ್ ಲೈನ್, ಒಣಗಿದ ಮರ, ಮುಚ್ಚಿಲ್ಲದ ಕೊಳವೆ ಬಾವಿ, ಕೃಷಿ ಹೊಂಡಗಳು ಹಾಗೂ ಇತರ ಅಪಾಯ ಉಂಟು ಮಾಡಬಹುದಾದವುಗಳನ್ನು ತಕ್ಷಣ ಗುರುತಿಸಿ ತೆರವುಗೊಳಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ: ತಿಪ್ಪೇಸ್ವಾಮಿ ಕೆ.ಟಿ. ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುರುವಾರ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಹಂತದ ಅಧಿಕಾರಿಗಳೊಂದಿಗೆ ನಡೆದ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ೨೦೦೯ರ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಕ್ಕಳ ಶಿಕ್ಷಣದ ಹಕ್ಕನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿವಹಿಸಬೇಕು ಎಂದು ಸೂಚಿಸಿದರು. ಕೇವಲ ಪಠ್ಯದ ಶಿಕ್ಷಣ ನೀಡುವುದಲ್ಲದೆ, ಮಕ್ಕಳಿಗೆ ಕ್ರೀಡೆಗೂ ಮಹತ್ವ ನೀಡಬೇಕು…
ತುಮಕೂರು: ಪ್ರಸ್ತುತ ಯುವ ಪೀಳಿಗೆಯು ಸಂವಿಧಾನದ ಆಗುಹೋಗುಗಳ ಬಗ್ಗೆ ಅರಿವನ್ನು ಹೊಂದಿ ದೇಶವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿದಿರಬೇಕು. ಸಂವಿಧಾ ನದ ಭವಿಷ್ಯ ಯುವಪೀಳಿಗೆಯ ಕೈಯಲ್ಲಿದೆ ಎಂದು ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಉಪನ್ಯಾಸಕ ಡಾ. ಡಿ. ಜೆ ಶಶಿಕುಮಾರ್ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಸರ್. ಎಂ. ವಿಶ್ವೇಶ್ವ ರಯ್ಯ ಸಭಾಂಗಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ಬುಧವಾರ ಹಮ್ಮಿ ಕೊಳ್ಳಲಾಗಿದ್ದ ೭೬ನೇ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂವಿಧಾನವು ಸಂದರ್ಭ ಮತ್ತು ಸಮಯಕ್ಕೆ ಅನುಗುಣ ವಾಗಿ ಬದಲಾವಣೆಯನ್ನು ಹೊಂದಿರುತ್ತಿರುತ್ತದೆ. ಕಾರ್ಯಾಂ ಗ, ಶಾಸಕಾಂಗ, ಮತ್ತು ನ್ಯಾಯಾಂಗಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನಲ್ಲಿಯೂ ಇರಬೇಕು. ಸಂವಿಧಾನದ ಸವಾಲುಗಳನ್ನು ಹೇಗೆ ಎದುರಿಸಿ ಬದುಕಬೇಕು ಎಂಬುದನ್ನು ಯುವ ಪೀಳಿಗೆಗೆ ತಿಳಿದಿರಬೇಕು ಎಂದರು. ಕಾರ್ಯಕ್ರಮದ ಉದ್ಘಾಟಿಸಿದ…
ಚಿಕ್ಕನಾಯಕನಹಳ್ಳಿ: ಧರ್ಮಸ್ಥಳದ ಹಲವು ಕಾರ್ಯಕ್ರಮಗಳು ಸರ್ಕಾರಕ್ಕೆ ಮಾದರಿಯಾಗಿದೆ ಎಂದು ಕುಪ್ಪೂರು ತಮಡಿಹಳ್ಳಿ ವಿರಕ್ತ ಮಠದ ಡಾಕ್ಟರ್ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಮಹಾ ಸ್ವಾಮೀಜಿಯವರು ಹೇಳಿದರು. ತಾಲೂಕಿನ ಕಂದಿಕೆರೆ ವಲಯದ ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹುಚ್ಚಣ್ಣ ಕಟ್ಟೆ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ಮಠದ ಶ್ರೀ ಗಳು ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮಗಳು ನಿತ್ಯ ನಿರಂತರೊ0ದಿಗೆ ಸ್ವಾವಲಂಬಿ ಬದುಕಿನ ದಾರಿ ದೀಪವಾಗಿದೆ ಹಾಗೂ ಪೂಜ್ಯರು ನಮ್ಮೆಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಪ್ರಕಾಶ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು. ಜನಜಾಗೃತಿ ವೇದಿಕೆ ಸದಸ್ಯರಾದ ಉಮೇಶ್ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮಾಡದ ಕಾರ್ಯಕ್ರಮವಿಲ್ಲ. ಸರಕಾರ ಮಾಡದಂತಹ ಕಾರ್ಯಕ್ರಮಗಳನ್ನು ಪೂಜ್ಯರು ಇಂತಹ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತೆ ಸಮಾಜಮುಖಿ ಕಾರ್ಯಕ್ರಮಗಳನ್ನ ಮಾಡುತ್ತಿದ್ದಾರೆ. ಹಾಗೂ ಶಾಲೆಗಳಿಗೆ ಶುದ್ಧ ನೀರಿನ ಘಟಕಗಳ…
ಚಿಕ್ಕನಾಯಕನಹಳ್ಳಿ: ವಾದ್ಯ ಘೋಷಗಳು, ಡೋಲು ಡಂಗೂರಗಳು, ೫೨ ಸ್ಥಬ್ದ ಚಿತ್ರಗಳು, ಚಿಟ್ಟಿಮೇಳ, ವೀರಗಾಸೆ ಕುಣಿತ ಇವೆಲ್ಲಾ ಸಂವಿಧಾನ ದಿನಕ್ಕಾಗಿ, ದಾರ್ಶನಿಕರ ಜಯಂ ತ್ಯೋತ್ಸವಕ್ಕಾಗಿ ೩ ಕಿಲೋ ಮೀಟರ್ ನಷ್ಟು ಉದ್ದದಲ್ಲಿ ನಡೆದ ಮೆರವಣಿಗೆಯ ಕಲಾಪ್ರಕಾರಗಳು ಅಲ್ಲದೆ ಸಂವಿಧಾನಕ್ಕಾಗಿ, ಅಂಬೇಡ್ಕರ್ ರವರಿಗೆ ಸಮರ್ಪಿಸಿದ ಗೌರವಗಳು, ಎಲ್ಲಾ ಸಮುದಾ ಯದ ದಾರ್ಶನಿಕರ ಜಯಂತ್ಯೋತ್ಸವದ ನೆನಪಿಗಾಗಿ ನಡೆದ ಸಂಭ್ರಮ. ಒAದು ಕಡೆ ತಾಲ್ಲೂಕು ಕಛೇರಿ ಮುಂಬಾಗ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಹಾಗೂ ಮಹಾತ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕಂಚಿನ ಪುತ್ಥಳಿ ಅನಾವ ರಣವಾಗುತ್ತಿದ್ದರೆ, ಮತ್ತೊಂದೆಡೆ ವಿವಿಧ ಸಮುದಾಯದ ಮುಖಂಡರು ತಮ್ಮ ತಮ್ಮ ಸಮುದಾಯದ ಮುಖಂಡರುಗಳನ್ನು ಮತ್ತೊಬ್ಬ ಸಮುದಾಯದ ಮುಖಂಡರಲ್ಲಿ ಪರಿಚಯಿಸುತ್ತಿದ್ದರು, ಈ ಪರಿಚಯ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿಗೆ ತಾಲ್ಲೂಕು ಕಛೇರಿ ಮುಂದೆ ಹಾಗೂ ಸರ್ಕಾರಿ ಪ್ರೌಢಶಾಲೆ ಆವರಣಲ್ಲಿ ನಡೆದ ಸಮಾರಂಭದಲ್ಲಿ ಸಾಕ್ಷಿಯಾಗಿ ಜನರ ಸಹಕಾರಕ್ಕೆ ನಾಣ್ಣುಡಿಯಂತಿತ್ತು. ಇಡೀ ದೇಶಕ್ಕೆ ಮಾದರಿಯಾಗಿ ಪ್ರಥಮವಾಗಿ ನಡೆಯುತ್ತಿರುವ ದಾರ್ಶನಿಕ ಜಯಂತ್ಯೋತ್ಸವ ಹೇಗಿರಲಿದೆ ಎಂದು ಹತ್ತಿರದಿಂದ ಗಮನಿಸಿದಾಗ,…
ತುಮಕೂರು: ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆಗೆ ಮತದಾರರ ನೊಂದಣಿಗೆ ನವೆಂಬರ್ ೨೫ ರಿಂದ ಡಿಸೆಂಬರ್ ೧೦ ರವರೆಗೆ ಅವಕಾಶ ನೀಡಿದ್ದು, ಮೊದಲನೇ ಹಂತದಲ್ಲಿ ಅರ್ಜಿ ಸಲ್ಲಿಸಿ ತಿರಸ್ಕೃತರಾದ ಪದವಿಧರರು ಮತ್ತು ಹೊಸದಾಗಿ ನೊಂದಾಯಿಸುವ ಅಭ್ಯರ್ಥಿಗಳಿಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳುವAತೆ ಆಗ್ನೇ ಯ ಪದವಿಧರರ ಕ್ಷೇತ್ರದ ಚುನಾವಣೆಯ ಎನ್.ಡಿ.ಎ ಪ್ರಭಲ ಆಕಾಂಕ್ಷಿ ಡಾ.ಕೆ.ನಾಗರಾಜು ಮನವಿ ಮಾಡಿದ್ದಾರೆ. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಜೆಡಿಯು ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು,ಆಗ್ನೇಯ ಪದವಿಧರರ ಕ್ಷೇತ್ರದ ವ್ಯಾಪ್ತಿಯ ೫ಜಿಲ್ಲೆಗಳಲ್ಲಿ ಎಲ್ಲಾ ಹೋಬಳಿ ಕೇಂದ್ರಗಳಲ್ಲಿಯೂ ಮೊದಲ ಹಂತದಲ್ಲಿ ನೊಂದಾಯಿಸಿದ ಮತದಾರರ ಆರ್ಹ ಮತದಾರರ ಕರಡು ಪ್ರತಿಯನ್ನು ಪ್ರದರ್ಶಿಸ ಲಾಗಿದೆ.ಮೊದಲ ಪಟ್ಟಿಯಲ್ಲಿ ಅವಕಾಶ ಸಿಗದ ಪದವಿಧರರ ಹಾಗೂ ಹೊಸದಾಗಿ ನೊಂದಾಯಿಸುವ ಪದವಿಧರರ ನವೆಂಬರ್ ೨೫ ರಿಂದ ಡಿಸೆಂಬರ್ ೧೦ರವರೆಗೆ ಎರಡನೇ ಹಂತದಲ್ಲಿ ನೊಂದಾಯಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.ಹಾಗಾಗಿ ಇದುವರೆಗೂ ನೊಂದಾವಣೆಯಾಗದ ಪದವಿಧರರ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ನೊಂದಾಯಿಸಿಕೊಳ್ಳಬೇಕೆ0ದರು. ಕೇ0ದ್ರದಲ್ಲಿ ಜೆಡಿಯು ಎನ್.ಡಿ.ಎ ಒಕ್ಕೂಟದ ಭಾಗವಾಗಿರುವ…











