Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಆಯುಧಪೂಜೆ ಹೆಸರಿನಲ್ಲಿ ವಸೂಲಿಗಿಳಿದ ಪೋಲೀಸರು : ಎಸ್ಪಿ ಆದೇಶಕ್ಕೆ ಮಾನ್ಯತೆ ನೀಡದ ಕ್ಯಾತ್ಸಂದ್ರ ಪಿಎಸ್‌ಐ ಚೇತನ್
  • ಸಾಲ – ಸಬ್ಸಿಡಿ ಅರ್ಜಿಗಳನ್ನು ಇತ್ಯರ್ಥಗೊಳಿಸಿ
  • ಮಹಾತ್ಮ ಗಾಂಧಿ ಕ್ರೀಡಾಂಗಣದ ನಿರ್ವಹಣೆಯ ಹೊಣೆ ವಹಿಸಿಕೊಳ್ಳಲು ಕ್ರೀಡಾ – ಯುವ ಸಬಲೀಕರಣ ಇಲಾಖೆಗೆ ಸೂಚನೆ
  • ಹಸಿದಾಗ ಅನ್ನ, ದಣಿದಾಗ ನೀರು : ಡಾ.ಜಪಾನಂದ ಜೀ
  • ಅ. ೨೧ ರಿಂದ ೨೪ರವರೆಗೆ ವಿವಿಧ ಸಾಂಸ್ಕೃತಿಕ – ಧಾರ್ಮಿಕ ಕಾರ್ಯಕ್ರಮ
  • ಕ್ರೀಡೆಯಲ್ಲಿ ಮಕ್ಕಳ ಉಜ್ವಲ ಭವಿಷ್ಯ ಅಡಗಿದೆ : ಶಾಸಕ ಜಿ.ಬಿ.ಜೋತಿಗಣೇಶ್
  • ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ : ಪ್ರತಿಭಟನೆ
  • ವಿಶ್ವದ ಶೇ. ೨ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿ.ವಿ.ಯ ಇಬ್ಬರು ಪ್ರಾಧ್ಯಾಪಕರು
Facebook Twitter Instagram YouTube RSS
Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Benkiyabale
Home » ಮಾಯಸಂದ್ರದ ಶಾಲೆ, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಜಿಲ್ಲಾಧಿಕರಿಗಳೊಂದಿಗೆ ಜಗ್ಗೇಶ್ ಚರ್ಚೆ
ಇತರೆ ಸುದ್ಧಿಗಳು

ಮಾಯಸಂದ್ರದ ಶಾಲೆ, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಜಿಲ್ಲಾಧಿಕರಿಗಳೊಂದಿಗೆ ಜಗ್ಗೇಶ್ ಚರ್ಚೆ

By News Desk BenkiyabaleUpdated:August 23, 2022 6:21 pm

ತುಮಕೂರು:

ತುರುವೇಕೆರೆ ತಾಲ್ಲೂಕು ಮಾಯಸಂದ್ರದಲ್ಲಿ ಮಾದರಿ
ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ
ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ರಾಜ್ಯಸಭಾ ಸದಸ್ಯರಾದ ಬಳಿಕ ತುಮಕೂರು ಜಿಲ್ಲೆಯನ್ನು ನೋಡಲ್
ಜಿಲ್ಲೆಯನ್ನಾಗಿಸಿಕೊಂಡಿರುವ ಜಗ್ಗೇಶ್ ಅವರು ನಗರದ ಜಿಲ್ಲಾಧಿಕಾರಿಗಳ
ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹಾಗೂ ಅಪರ ಜಿಲ್ಲಾಧಿಕಾರಿ
ಚನ್ನಬಸಪ್ಪ ಅವರೊಂದಿಗೆ ತುರುವೇಕೆರೆ ತಾಲ್ಲೂಕಿನಲ್ಲಿ ಸರ್ಕಾರಿ
ಶಾಲೆಗಳನ್ನು ಮಾದರಿ ಶಾಲೆಯನ್ನಾಗಿಸುವ ಸಂಬಂಧ ಚರ್ಚೆ ನಡೆಸಿದರು.
ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯಗಳ್ನಾಗಿಸಿದರೆ ಗ್ರಾಮೀಣ ಪ್ರದೇಶದ
ಮಕ್ಕಳು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾಗಲಿದೆ. ಹಾಗಾಗಿ
ಮಾಯಸಂದ್ರ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವ ಕುರಿತು
ಚರ್ಚೆ ನಡೆಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು
ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಹಾಗೆಯೇ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆಯೂ ಸಹ
ಚರ್ಚಿಸಲಾಗಿದೆ. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್ ಸಹ ಸರಿಯಾಗಿ
ಕಾರ್ಯನಿರ್ವಹಿಸದಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಹಾಗಾಗಿ ಡಯಾಲಿಸಿಸ್
ಕೇಂದ್ರವನ್ನು ಸಹ ಮೇಲ್ದರ್ಜೆಗೇರಿಸಲಾಗುವುದು ಎಂದರು.
ನಾನು ರಾಜ್ಯಸಭಾ ಸದಸ್ಯನಾದ ಬಳಿಕ ಯಾವುದಾದರು ಒಂದು ಜಿಲ್ಲೆಯನ್ನು
ನೋಡಲ್ ಜಿಲ್ಲೆಯನ್ನಾಗಿ ತೆಗೆದುಕೊಳ್ಳಬೇಕಾಗಿತ್ತು. ಹಾಗಾಗಿ ನನ್ನ ತವರು
ಜಿಲ್ಲೆಯನ್ನೆ ನೋಡಲ್ ಜಿಲ್ಲೆಯನ್ನಾಗಿ ತೆಗೆದುಕೊಂಡಿದ್ದೇನೆ ಎಂದು ಅವರು
ಹೇಳಿದರು.
ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತ
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ
ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿರುವುದು ಕಾಂಗ್ರೆಸ್ ಪಕ್ಷದ
ಕಾರ್ಯಕರ್ತನೆ ಎಂಬ ಮಾಹಿತಿ ಇದೆ. ಮೊಟ್ಟೆ ಎಸೆದಿರುವ ಕಾರ್ಯಕರ್ತನೆ
ಹೇಳಿರುವಂತೆ ಆತ ಜೆಡಿಎಸ್ ಪಕ್ಷದಲ್ಲಿದ್ದು, ನಂತರ ಕಾಂಗ್ರೆಸ್ ಬಂದು, ಕೆಲ
ವಿಚಾರಧಾರೆಗಳಿಂದ ಬೇಸತ್ತು ಹೀಗೆ ಮಾಡಿದ್ದಾನೆ ಎಂಬ ಮಾಹಿತಿ ಇದೆ ಎಂದರು.
ಮುಂದಿನ ವರ್ಷ ಜೂನ್ ತಿಂಗಳ ವರೆಗೆ ಕಾಂಗ್ರೆಸ್‍ನವರು ಹೋರಾಟ
ಮಾಡುತ್ತಾರೆ. ಆ ಜಾಗ ಹಿಡಿಯಬೇಕೆಂಬ ಹುಮ್ಮಸ್ಸಿನಿಂದ ಹೋರಾಟ ಮಾಡುತ್ತಾರೆ.
ಆದರೆ ಇವರ ಹೋರಾಟಕ್ಕೆ ಯಾವುದೇ ನಿರ್ಧಿಷ್ಟ ವಿಷಯಗಳಿಲ್ಲ. ಜೂನ್ ತಿಂಗಳ
ನಂತರ ಎಲ್ಲರೂ ತಣ್ಣಗಾಗುತ್ತಾರೆ. ಅದೇಕೆ ಎಂಬುದು ರಾಜ್ಯದ ಜನತೆಗೆ ತಿಳಿದಿದೆ
ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದವರಿಗೆ ಪ್ರತಿಭಟನೆ ಅವಕಾಶ ನೀಡದೆ ವಿರೋಧ ಪಕ್ಷವನ್ನು
ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಭಟನೆಗೆ
ಅವಕಾಶ ನೀಡಿದರೆ ಅದು ಮತ್ತೊಂದು ಗಲಾಟೆಗೆ ಕಾರಣವಾಗಿ ಹೆಣ ಬಿದ್ದು
ಇನ್ನೊಂದು ರೀತಿಯಲ್ಲಿ ಶಾಂತಿಗೆ ಭಂಗವಾಗಬಾರದು ಎಂಬ ಉದ್ದೇಶದಿಂದ
ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ ಎಂದರು.
ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ಅಧಿಕಾರ ನೀಡುವ ಕುರಿತು ಹೈಕೋರ್ಟ್
ನೀಡಿರುವ ತೀರ್ಪಿನ ವಿರುದ್ಧ ಸರ್ಕಾರದ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ
ಸಲ್ಲಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ಬಗ್ಗೆ ನನಗೆ
ಸಂಪೂರ್ಣ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡ ನಂತರವಷ್ಟೆ
ಮಾತನಾಡುತ್ತೇನೆ ಎಂದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಸಂಸದ ಹಾಗೂ ನಟ
ಜಗ್ಗೇಶ್ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್. ರವಿಶಂಕರ್ ಪುಷ್ಪಗುಚ್ಛ
ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಹನುಮಂತರಾಜು,
ರುದ್ರೇಶ್, ಮಲ್ಲಸಂದ್ರ ಶಿವಣ್ಣ, ಕೊಪ್ಪಲ್ ನಾಗರಾಜು, ಪ್ರತಾಪ್ ಹಾಗೂ

(Visited 3 times, 1 visits today)
tumkur
Previous Articleಸಂಘಟನೆಗಳು ಹುಟ್ಟಿ ಬಹುಬೇಗನೆ ಕಾಣೆಯಾಗುತ್ತವೆ: ಹನುಮಂತರಾಯಪ್ಪ
Next Article ಮಕ್ಕಳ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ :ಪರಶಿವಮೂರ್ತಿ
News Desk Benkiyabale

Related Posts

ಆಯುಧಪೂಜೆ ಹೆಸರಿನಲ್ಲಿ ವಸೂಲಿಗಿಳಿದ ಪೋಲೀಸರು : ಎಸ್ಪಿ ಆದೇಶಕ್ಕೆ ಮಾನ್ಯತೆ ನೀಡದ ಕ್ಯಾತ್ಸಂದ್ರ ಪಿಎಸ್‌ಐ ಚೇತನ್

October 19, 2023 5:35 pm ತುಮಕೂರು

ಸಾಲ – ಸಬ್ಸಿಡಿ ಅರ್ಜಿಗಳನ್ನು ಇತ್ಯರ್ಥಗೊಳಿಸಿ

October 19, 2023 5:03 pm ತುಮಕೂರು

ಮಹಾತ್ಮ ಗಾಂಧಿ ಕ್ರೀಡಾಂಗಣದ ನಿರ್ವಹಣೆಯ ಹೊಣೆ ವಹಿಸಿಕೊಳ್ಳಲು ಕ್ರೀಡಾ – ಯುವ ಸಬಲೀಕರಣ ಇಲಾಖೆಗೆ ಸೂಚನೆ

October 19, 2023 4:59 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಆಯುಧಪೂಜೆ ಹೆಸರಿನಲ್ಲಿ ವಸೂಲಿಗಿಳಿದ ಪೋಲೀಸರು : ಎಸ್ಪಿ ಆದೇಶಕ್ಕೆ ಮಾನ್ಯತೆ ನೀಡದ ಕ್ಯಾತ್ಸಂದ್ರ ಪಿಎಸ್‌ಐ ಚೇತನ್

October 19, 2023 5:35 pm
ತುಮಕೂರು

ಸಾಲ – ಸಬ್ಸಿಡಿ ಅರ್ಜಿಗಳನ್ನು ಇತ್ಯರ್ಥಗೊಳಿಸಿ

October 19, 2023 5:03 pm
ತುಮಕೂರು

ಮಹಾತ್ಮ ಗಾಂಧಿ ಕ್ರೀಡಾಂಗಣದ ನಿರ್ವಹಣೆಯ ಹೊಣೆ ವಹಿಸಿಕೊಳ್ಳಲು ಕ್ರೀಡಾ – ಯುವ ಸಬಲೀಕರಣ ಇಲಾಖೆಗೆ ಸೂಚನೆ

October 19, 2023 4:59 pm
ತುಮಕೂರು

ಹಸಿದಾಗ ಅನ್ನ, ದಣಿದಾಗ ನೀರು : ಡಾ.ಜಪಾನಂದ ಜೀ

October 19, 2023 4:58 pm
ಇತರೆ ಸುದ್ಧಿಗಳು

ಅ. ೨೧ ರಿಂದ ೨೪ರವರೆಗೆ ವಿವಿಧ ಸಾಂಸ್ಕೃತಿಕ – ಧಾರ್ಮಿಕ ಕಾರ್ಯಕ್ರಮ

October 19, 2023 4:55 pm
ತುಮಕೂರು

ಕ್ರೀಡೆಯಲ್ಲಿ ಮಕ್ಕಳ ಉಜ್ವಲ ಭವಿಷ್ಯ ಅಡಗಿದೆ : ಶಾಸಕ ಜಿ.ಬಿ.ಜೋತಿಗಣೇಶ್

October 10, 2023 5:10 pm
Our Youtube Channel
Our Picks

ಅ. ೨೧ ರಿಂದ ೨೪ರವರೆಗೆ ವಿವಿಧ ಸಾಂಸ್ಕೃತಿಕ – ಧಾರ್ಮಿಕ ಕಾರ್ಯಕ್ರಮ

October 19, 2023 4:55 pm

ನಗರದ ೧೦೦ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್‌ಗಳ ಸ್ವಚ್ಛತೆ – ಬಿ.ವಿ. ಅಶ್ವಿಜಾ

September 30, 2023 5:06 pm

ಸಾರ್ವಜನಿಕರಿಂದ ಸಲ್ಲಿಸಲ್ಪಡುವ ಅರ್ಜಿಗಳನ್ನು ತಿರಸ್ಕರಿಸಬಾರದು : ಡಾ: ಜಿ.ಪರಮೇಶ್ವರ್

September 25, 2023 5:06 pm

ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಲು ಸಿಪಿಐ(ಎಂ) ಅಗ್ರಹ

September 20, 2023 5:11 pm

ಮಾಹಿತಿ ಶಿಕ್ಷಣ ಸಂವಹನ ವಿಶೇಷ ಕಾರ್ಯಕ್ರಮ

August 22, 2023 5:18 pm
News Tags
Accident Ambedkar Araga jnanendra BJP Bommai Ceo Chikkanayakanahalli Congress corona Cpim crime DC Death dss gs basavaraju Gubbi jc madhuswamy Jds jyothiganesh Kn rajanna kodigenahalli Koratagere kumaraswamy kunigal madhugiri missing Mla Mla jyothiganesh mla shrinivas mlc r.rajendra Parameshwar pavagada Police police naveen Protest r.ashok R. Rajendra tumakur tumkur Tumkur dc yspatil Tumkur mahanagara palike tumur turuvekere University YSpatil
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm

ಯೌವನಕ್ಕೆ “ವಿವೇಕಾನಂದದೀಕ್ಷೆ’’ ಕೊಡಿ

September 19, 2020 6:23 pm
Don't Miss
ತುಮಕೂರು

ಆಯುಧಪೂಜೆ ಹೆಸರಿನಲ್ಲಿ ವಸೂಲಿಗಿಳಿದ ಪೋಲೀಸರು : ಎಸ್ಪಿ ಆದೇಶಕ್ಕೆ ಮಾನ್ಯತೆ ನೀಡದ ಕ್ಯಾತ್ಸಂದ್ರ ಪಿಎಸ್‌ಐ ಚೇತನ್

By News Desk BenkiyabaleOctober 19, 2023 5:35 pm

ತುಮಕೂರು ಜಿಲ್ಲೆಯಲ್ಲಿ ಆಯುಧ ಪೂಜೆಯ ನೆಪದಲ್ಲಿ ವಸೂಲಿಗಿಳಿದ ಪೋಲೀಸರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ, ಪೂಜೆಯ ಹೆಸರಿನಲ್ಲಿ ಲಕ್ಷಗಟ್ಟಲೆ ವಸೂಲಿಗಿಳಿದ…

ಸಾಲ – ಸಬ್ಸಿಡಿ ಅರ್ಜಿಗಳನ್ನು ಇತ್ಯರ್ಥಗೊಳಿಸಿ

October 19, 2023 5:03 pm

ಮಹಾತ್ಮ ಗಾಂಧಿ ಕ್ರೀಡಾಂಗಣದ ನಿರ್ವಹಣೆಯ ಹೊಣೆ ವಹಿಸಿಕೊಳ್ಳಲು ಕ್ರೀಡಾ – ಯುವ ಸಬಲೀಕರಣ ಇಲಾಖೆಗೆ ಸೂಚನೆ

October 19, 2023 4:59 pm

ಹಸಿದಾಗ ಅನ್ನ, ದಣಿದಾಗ ನೀರು : ಡಾ.ಜಪಾನಂದ ಜೀ

October 19, 2023 4:58 pm
News by Date
December 2023
M T W T F S S
 123
45678910
11121314151617
18192021222324
25262728293031
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2023 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.